Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ನಿನ್ನನ್ನು ಗೌರವಿಸ ಬೇಕು ಅದುವೇ ನಿಜವಾದ ಪ್ರೀತಿ

ಒಮ್ಮೆ  ಬಹುಮಾನ್ಯರಾದ  ಅಲಿ ರ .ಅ ರವರ ಹತ್ತಿರ ಒಬ್ಬ  ಪುರುಷ ಬಂದು ಕೇಳಿದರು ನಾನು ಯಾರನ್ನಾದ್ರು  ಒಬ್ಬರನ್ನು ನಿಜವಾದ ಪ್ರೀತಿ ಮಾಡಿದರೆ ನನಗೆ ಅದೂ ಸಾಕೇ ಎಂದು ಕೇಳಿದನು ಆವಾಗ  ಅಲಿ ರ.ಅ.ಹೇಳಿದರು ನೀನು ನಿನ್ನನ್ನು ಯಾರಿಗಾಗಿಯೂ ಒಗ್ಗಿಸಕೊಳ್ಳಬೇಡ ಯಾಕೆಂದರೆ ಮನುಷ್ಯ ಮೂಲಭೂತ ಸ್ವಾರ್ತಿ ಯಾಗಿದ್ದಾನೆ  ಅವನು  ಯಾರನ್ನಾದರು ಪ್ರೀತಿಸಿದರೆ ಅವನು  ಅವನ ತಪ್ಪುಗಳನ್ನು ಮರೆತು ಹೋಗುತ್ತಾನೆ ಮತ್ತು ಯಾರನ್ನಾದರು ದ್ವೇಶಿಸಲು ಪ್ರಾರಂಭಿಸಿದರೆ  ಅವರ ಒಳ್ಳೆಯತನ ವನ್ನು ಮರೆತು ಹೋಗುತ್ತಾನೆ ನೀನು ನಿಜವಾಗಿಯೂ  ಈ ಭೂಮಿಯಲ್ಲಿ ಸಂತೋಷವಾಗಿರಲು ಇಷ್ಟ ಪಡುಡುವುದಾದರೆ ಮನುಷ್ಯರನ್ನು ಗೌರವಿಸು ಆದರೆ ಪ್ರೀತಿ ಮಾಡುವುದಾದರೆ ಸತ್ಕರ್ಮದ ನಿಯ್ಯತ್ತಿನಲ್ಲಿ ಮಾಡು  ಭರವಸೆಯಿಂದಲ್ಲ  ಅವರಿಂದ ಪ್ರತೀಕಾರವಾಗಿ ಏನನ್ನೂ ಬಯಸಬೇಡ  ಆದರೆ ಈ ಲೋಕ ಪ್ರೀತಿ ಪ್ರೇಮ ಸಹಾನುಭೂತಿ ಯ ಬದಲಾಗಿ ನೋವು ಗಳೇ ಸಿಗುವುದು   ಒಮ್ಮೆ  ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಹೇಳಿದರು ಈ ಲೋಕದಲ್ಲಿ ಎರಡು ತರಹದ ಜನರಿದ್ದಾರೆ ಒಬ್ಬ ತನ್ಶ  ಲಾಬಕ್ಕಾಗಿ ಪ್ರೀತಿಸುವನು ಇನ್ನೊಬ್ಬ ತನ್ನ ಇಚ್ಛೆಗೆ ಅನುಸಾರವಾಗಿ ಪ್ರೀತಿಸುವನು ನಿನ್ನನ್ನು ಯಾರಾದರು ಪ್ರೀತಿಸಬೇಕೆಂದಿದ್ದರೆ ನೀನು ನಿನ್ನ ಬಯಕೆ ಗಳನ್ನು ತ್ಯಾಗಮಾಡಿ ನಿನ್ನ ಉದ್ದೇಶ ಗಳನ್ನು ಈಡೇರಿಸಲು ಪ್ರಯತ್ನ ಪಡು ಹಾಗೆ ಮಾಡಿದರೆ  ನಿನ್ನ ಉದ್ದೇಶ ಗಳೆಲ್ಲವೂ  ನಿನಗೆ ಸಿಗುವುದು ಲೋಕದ ಎಲ್ಲಾ ಸಂಪತ್ತು ನಿನ್ನ ಹಿಂದೆ ಬರುವುದು ನೀನು ನಿನ್ನ ಇಚ್ಚೆಗಳ ಹಿಂದೆ ಬಿದ್ದರೆ ಅದು ನಿನ್ನನ್ನು ಓಡಿಸುವ ಕಾರ್ಯ ಮಾಡುವುದು ಆವಾಗ ನಿನಗೆ ನಿನ್ನ ಪ್ರೀತಿ ಆಗಲಿ ಅಥವಾ ನಿನ್ನ ಜೀವನದ ಉದ್ದೇಶ ಸಿಗಲಾರದು ಓ ಮನುಷ್ಯ ಕೇಳು ಪ್ರೀತಿ ಮಾಡುವ ಉದ್ದೇಶ  ಅಂದರೆ  ನೀನು ಪ್ರೀತಿಸಿದವರು ನಿನ್ನ ಆಜ್ಞೆ ಯ ಪ್ರಕಾರ ತಲೆ ಬಾಗಿ ನಿಲ್ಲುವುದು ಅಂದರೆ ಪ್ರೀತಿಯ ಮಹತ್ತಾದ ಸಂತೋಷ ನೀನು ಪ್ರೀತಿಸಿದವರು ನಿನ್ನ ವ್ಯಕ್ತಿತ್ವ ನೋಡಿ ನಿನ್ನಲ್ಲಿ ಹೆಮ್ಮೆ ಪಡಬೇಕು ನಿನ್ನನ್ನು ಗೌರವಿಸ ಬೇಕು ಅದುವೇ ನಿಜವಾದ ಪ್ರೀತಿ
✒️MUSTHAFA HASAN ALIKHAN ALQADRI

Comments

Popular Posts