Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ಮನಸ್ಸಿನ ಸಂತೃಪ್ತ್ತಿ

ಈ ಮಾರಣಾಂತಿಕ ಜಗತ್ತಿನಲ್ಲಿ, ಹಲವಾರು  ಬದಲಾವಣೆಗಳು ಯಾವುದೇ ಪರಿಸ್ಥಿತಿಯಲ್ಲಿ, ಹಗಲು, ರಾತ್ರಿ, ಸಂಜೆ, ಬೆಳದಿಂಗಳ ರಾತ್ರಿಗಳು,  ಎಂಬ ವ್ಯತ್ಯಾಸಗಳಿಲ್ಲದೆ  ನಮ್ಮ ಮುಂದೆ ಮರಣದ ಹಾಗೆ  ಪ್ರತ್ಯಕ್ಷ ವಾಗುತ್ತಾ ಇದೆ  ಸಂತೋಷದ ಕ್ಷಣಗಳು ಬಹಳ ವಿರಳ   ಇಲ್ಲಿ ಯಾರಿಗೂ ತನ್ನದೇ ಆದ ಯಾವ 
ಆಯ್ಕೆಗಳಿಲ್ಲ.  ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಹಾದುಹೋಗಿರುವ ಎಲ್ಲಾ ಮಹಾನ್ ಕ್ರಾಂತಿಕಾರಿ ಅವಧಿಗಳನ್ನು ಒಳಗೊಳ್ಳುವುದು ಕಷ್ಟ.  ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ  ಇಂತಹ ಸಂದರ್ಭಗಳನ್ನು  ಎದುರಿಸಿರುತ್ತಾನೆ  ಅವನ ಸಂತೋಷ,   ಅಲ್ಲಿಗೆ ಮುಗಿಯುವುದಿಲ್ಲ. ಆ ಸಮಯದಲ್ಲಿ ಅವನು ಮರೆತಿದ್ದರೂ ಸಹ, ಈ ಪ್ರಸ್ತುತ ಸ್ಥಿತಿಯು ದುಃಖ ಮತ್ತು ತೊಂದರೆಯೊಂದಿಗೆ ಬದಲಾಗಬಹುದು ಎಂದು ಅವನು ಊಹಿಸಲು ಅಸಾಧ್ಯ .  ಅದೇ ರೀತಿ ಇಲ್ಲಿ  ಯಾರೂ ಪರಿಪೂರ್ಣರಲ್ಲ     ಮತ್ತು ಅವರು ಅವರಿಗೆ ದೊರೆತ  ಪ್ರಪಂಚದ ಎಲ್ಲಾ ಸಂತೋಷಗಳನ್ನು ಮರೆತು ಅವರಿಗೆ ಲಬಿಸಿದ  ದುಃಖಕ್ಕೆಯಾವುದೇ ಪರಿಹಾರವಿಲ್ಲ ಎಂದು ಭಾವಿಸುತ್ತಾರೆ, ವಾಸ್ತವವೆಂದರೆ   ಅಲ್ಲಾಹನು ಕುರ್‌ಆನ್‌ನಲ್ಲಿ ಹೇಳಿದ್ದಾನೆ:  ತೊಂದರೆಗಳು ಮತ್ತು ದುಃಖಗಳು ಜೀವನದಲ್ಲಿ ಉಂಟಾಗುವುದು ಸಹಜ  ಬಡವರು   ಮತ್ತು ಅಸಹಾಯಕ  ಜನರಿಗೆ ಮಾತ್ರವಲ್ಲ, ಜಗತ್ತಿನ ಪ್ರತಿಯೊಬ್ಬ ಮನುಷ್ಯರೂ ಅದರಿಂದ ಬಳಲುತ್ತಿದ್ದಾರೆ.  ಹಣಿಬರಹ ತಕ್ದೀರ್  ನ ಬರಹಗಾರ ದೇವರು  ಮಾತ್ರ  .  ದುಃಖ ಮತ್ತು ತೊಂದರೆ ಸಂಭವಿಸುವ ಮೊದಲು ಮತ್ತು ನಂತರ ಮನುಷ್ಯನು ಏನು ಮಾಡಬೇಕು?  ಮಹಾನ್ ವಿದ್ವಾಂಸರು ಮತ್ತು ಬುದ್ಧಿಜೀವಿಗಳು ಇದನ್ನು ಕಂಡು ಆಶ್ಚರ್ಯಚಕಿತರಾಗುತ್ತಾರೆ ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲವೆಂದು ತೋರುತ್ತದೆ.  ಆದರೆ  ಇಂದು      ಮನುಷ್ಯನು ಅಂತಹ ಉನ್ನತ ಮತ್ತು ಸುರಕ್ಷಿತ ಸ್ಥಳಕ್ಕೆ ತಲುಪಿದ್ದಾನೆ ಅಂದರೆ   ಯಾವ  ತೊಂದರೆ   ಮತ್ತು ಸಂಕಟಗಳು ಅವನ ಹತ್ತಿರ ಬರಲು ಸಾಧ್ಯವಿಲ್ಲ.   ಎಂದು ಹೇಳಬಹುದು.  ಇತ್ತೀಚಿನ ದಿನಗಳಲ್ಲಿ  ಎಲ್ಲೆಡೆ ನೋಡಿದರೂ    ಮನುಷ್ಯರು  ಇಂತಹ ಪ್ರಲೋಭನೆಗಳು,  ಮತ್ತು ವಿಪತ್ತುಗಳ  ಕಾಲಿನಡಿ ಸಿಲುಕಿ    ತೊಂದರೆಗಳನ್ನು ಎದುರಿಸುತ್ತಿದ್ದಾರೆ  ಒಂದು ರೀತಿಯ ತೊಂದರೆ ಮತ್ತು ಸಂಕಟಗಳಿಂದ ಬಳಲುತ್ತಿರುವ   ಜನರ ಮುಂದೆ ದೇವರ ಸ್ಮರಣೆಗೆ ಅತೀ ಪ್ರಾಮುಖ್ಯತೆ ನೀಡ ಬೇಕಾಗಿದೆ   
ಮಾನವ ಲೋಕದ ಶಾಂತಿಯ ಸಮಾಧಾನದ ಮಾರ್ಗ ಅದು ದೇವರ ಸ್ಮರಣೆಯಿಂದ ಮಾತ್ರ ಸಾಧ್ಯ  

 أَلَا بِذِكْرِ اللَّهِ تَطْمَئِنُّ الْقُلُوبُ

ನಿಮಗೆ ತಿಳಿದಿರಲಿ ಮನಸ್ಸಿನ ಸಂತೃಪ್ತ್ತಿಯು ಅಲ್ಲಾಹನನ್ನು ನೆನಪಿಸುವುದರಲ್ಲೇ ಇದೆ.
✒️MUSTHAFA HASAN ALIKHAN ALQADRI

Comments

Popular Posts