Skip to main content

Featured

ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ,

ಉತ್ಪನ್ನ ನವೀಕರಣಗಳು ಆಂಡ್ರಾಯ್ಡ್, ಕ್ರೋಮ್ ಮತ್ತು ಪ್ಲೇ ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ, ಬಳಕೆದಾರರಿಗೆ ಸರಳ ಮತ್ತು ಸುರಕ್ಷಿತ ಪಾವತಿಗಳನ್ನು ಸಕ್ರಿಯಗೊಳಿಸುತ್ತದೆ 15 ಸೆಪ್ಟೆಂಬರ್, 2025 ಸೌದಿ ಪ್ರೇರಿತ ದೃಶ್ಯಗಳೊಂದಿಗೆ Google Pay ಲೋಗೋ ಇಂದು, ನಾವು ಸೌದಿ ಅರೇಬಿಯಾದಲ್ಲಿ Google Pay ಮತ್ತು Google Wallet ಅನ್ನು ಅಧಿಕೃತವಾಗಿ ಪ್ರಾರಂಭಿಸುವುದಾಗಿ ಘೋಷಿಸಿದ್ದೇವೆ, ಬಳಕೆದಾರರು ತಮ್ಮ Android ಫೋನ್‌ಗಳೊಂದಿಗೆ ವೇಗವಾಗಿ, ಸರಳವಾಗಿ ಮತ್ತು ಸುರಕ್ಷಿತವಾಗಿ ಪಾವತಿಸಲು ಸಹಾಯ ಮಾಡುತ್ತದೆ. ಸೌದಿ ಅರೇಬಿಯಾದಲ್ಲಿ ರಾಷ್ಟ್ರೀಯ ಪಾವತಿ ವ್ಯವಸ್ಥೆ (MADA) ನಿಂದ ಸಕ್ರಿಯಗೊಳಿಸಲಾದ ಸೇವೆಯು ಮುಂಬರುವ ವಾರಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತದೆ. Google Pay ಬಳಕೆದಾರರು ಅಂಗಡಿಗಳಲ್ಲಿ ಮತ್ತು ಶೀಘ್ರದಲ್ಲೇ ಅಪ್ಲಿಕೇಶನ್‌ಗಳಲ್ಲಿ ಮತ್ತು ವೆಬ್‌ನಲ್ಲಿ ಸರಾಗ ಪಾವತಿಗಳಿಗಾಗಿ 'ಟ್ಯಾಪ್ ಟು ಪೇ' ಬಳಸಿ ಸುರಕ್ಷಿತ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. ಇದು Google Wallet ಅಪ್ಲಿಕೇಶನ್‌ನಲ್ಲಿ ತಮ್ಮ mada ಕಾರ್ಡ್‌ಗಳು ಮತ್ತು Visa ಮತ್ತು Mastercard ನಂತಹ ಕ್ರೆಡಿಟ್ ಕಾರ್ಡ್‌ಗಳನ್ನು ಸುಲಭವಾಗಿ ಸೇರಿಸಲು ಮತ್ತು ನಿರ್ವಹಿಸಲು ಸಹ ಅವರಿಗೆ ಅನುವು ಮಾಡಿಕೊಡುತ್ತದೆ. Google Pay ನೊಂದಿಗೆ, ಬಳಕೆದಾರರು ಬಹು ಪದರಗಳ ಭದ್ರತೆಯೊಂದಿಗೆ ಸುರಕ್ಷಿತ ಪಾವತಿಗಳನ್ನು ಮಾಡಬಹುದು.  ಇದರಲ್ಲಿ ಉದ್ಯಮ-...

ಮನಸ್ಸಿನ ಸಂತೃಪ್ತ್ತಿ

ಈ ಮಾರಣಾಂತಿಕ ಜಗತ್ತಿನಲ್ಲಿ, ಹಲವಾರು  ಬದಲಾವಣೆಗಳು ಯಾವುದೇ ಪರಿಸ್ಥಿತಿಯಲ್ಲಿ, ಹಗಲು, ರಾತ್ರಿ, ಸಂಜೆ, ಬೆಳದಿಂಗಳ ರಾತ್ರಿಗಳು,  ಎಂಬ ವ್ಯತ್ಯಾಸಗಳಿಲ್ಲದೆ  ನಮ್ಮ ಮುಂದೆ ಮರಣದ ಹಾಗೆ  ಪ್ರತ್ಯಕ್ಷ ವಾಗುತ್ತಾ ಇದೆ  ಸಂತೋಷದ ಕ್ಷಣಗಳು ಬಹಳ ವಿರಳ   ಇಲ್ಲಿ ಯಾರಿಗೂ ತನ್ನದೇ ಆದ ಯಾವ 
ಆಯ್ಕೆಗಳಿಲ್ಲ.  ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಹಾದುಹೋಗಿರುವ ಎಲ್ಲಾ ಮಹಾನ್ ಕ್ರಾಂತಿಕಾರಿ ಅವಧಿಗಳನ್ನು ಒಳಗೊಳ್ಳುವುದು ಕಷ್ಟ.  ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ  ಇಂತಹ ಸಂದರ್ಭಗಳನ್ನು  ಎದುರಿಸಿರುತ್ತಾನೆ  ಅವನ ಸಂತೋಷ,   ಅಲ್ಲಿಗೆ ಮುಗಿಯುವುದಿಲ್ಲ. ಆ ಸಮಯದಲ್ಲಿ ಅವನು ಮರೆತಿದ್ದರೂ ಸಹ, ಈ ಪ್ರಸ್ತುತ ಸ್ಥಿತಿಯು ದುಃಖ ಮತ್ತು ತೊಂದರೆಯೊಂದಿಗೆ ಬದಲಾಗಬಹುದು ಎಂದು ಅವನು ಊಹಿಸಲು ಅಸಾಧ್ಯ .  ಅದೇ ರೀತಿ ಇಲ್ಲಿ  ಯಾರೂ ಪರಿಪೂರ್ಣರಲ್ಲ     ಮತ್ತು ಅವರು ಅವರಿಗೆ ದೊರೆತ  ಪ್ರಪಂಚದ ಎಲ್ಲಾ ಸಂತೋಷಗಳನ್ನು ಮರೆತು ಅವರಿಗೆ ಲಬಿಸಿದ  ದುಃಖಕ್ಕೆಯಾವುದೇ ಪರಿಹಾರವಿಲ್ಲ ಎಂದು ಭಾವಿಸುತ್ತಾರೆ, ವಾಸ್ತವವೆಂದರೆ   ಅಲ್ಲಾಹನು ಕುರ್‌ಆನ್‌ನಲ್ಲಿ ಹೇಳಿದ್ದಾನೆ:  ತೊಂದರೆಗಳು ಮತ್ತು ದುಃಖಗಳು ಜೀವನದಲ್ಲಿ ಉಂಟಾಗುವುದು ಸಹಜ  ಬಡವರು   ಮತ್ತು ಅಸಹಾಯಕ  ಜನರಿಗೆ ಮಾತ್ರವಲ್ಲ, ಜಗತ್ತಿನ ಪ್ರತಿಯೊಬ್ಬ ಮನುಷ್ಯರೂ ಅದರಿಂದ ಬಳಲುತ್ತಿದ್ದಾರೆ.  ಹಣಿಬರಹ ತಕ್ದೀರ್  ನ ಬರಹಗಾರ ದೇವರು  ಮಾತ್ರ  .  ದುಃಖ ಮತ್ತು ತೊಂದರೆ ಸಂಭವಿಸುವ ಮೊದಲು ಮತ್ತು ನಂತರ ಮನುಷ್ಯನು ಏನು ಮಾಡಬೇಕು?  ಮಹಾನ್ ವಿದ್ವಾಂಸರು ಮತ್ತು ಬುದ್ಧಿಜೀವಿಗಳು ಇದನ್ನು ಕಂಡು ಆಶ್ಚರ್ಯಚಕಿತರಾಗುತ್ತಾರೆ ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲವೆಂದು ತೋರುತ್ತದೆ.  ಆದರೆ  ಇಂದು      ಮನುಷ್ಯನು ಅಂತಹ ಉನ್ನತ ಮತ್ತು ಸುರಕ್ಷಿತ ಸ್ಥಳಕ್ಕೆ ತಲುಪಿದ್ದಾನೆ ಅಂದರೆ   ಯಾವ  ತೊಂದರೆ   ಮತ್ತು ಸಂಕಟಗಳು ಅವನ ಹತ್ತಿರ ಬರಲು ಸಾಧ್ಯವಿಲ್ಲ.   ಎಂದು ಹೇಳಬಹುದು.  ಇತ್ತೀಚಿನ ದಿನಗಳಲ್ಲಿ  ಎಲ್ಲೆಡೆ ನೋಡಿದರೂ    ಮನುಷ್ಯರು  ಇಂತಹ ಪ್ರಲೋಭನೆಗಳು,  ಮತ್ತು ವಿಪತ್ತುಗಳ  ಕಾಲಿನಡಿ ಸಿಲುಕಿ    ತೊಂದರೆಗಳನ್ನು ಎದುರಿಸುತ್ತಿದ್ದಾರೆ  ಒಂದು ರೀತಿಯ ತೊಂದರೆ ಮತ್ತು ಸಂಕಟಗಳಿಂದ ಬಳಲುತ್ತಿರುವ   ಜನರ ಮುಂದೆ ದೇವರ ಸ್ಮರಣೆಗೆ ಅತೀ ಪ್ರಾಮುಖ್ಯತೆ ನೀಡ ಬೇಕಾಗಿದೆ   
ಮಾನವ ಲೋಕದ ಶಾಂತಿಯ ಸಮಾಧಾನದ ಮಾರ್ಗ ಅದು ದೇವರ ಸ್ಮರಣೆಯಿಂದ ಮಾತ್ರ ಸಾಧ್ಯ  

 أَلَا بِذِكْرِ اللَّهِ تَطْمَئِنُّ الْقُلُوبُ

ನಿಮಗೆ ತಿಳಿದಿರಲಿ ಮನಸ್ಸಿನ ಸಂತೃಪ್ತ್ತಿಯು ಅಲ್ಲಾಹನನ್ನು ನೆನಪಿಸುವುದರಲ್ಲೇ ಇದೆ.
✒️MUSTHAFA HASAN ALIKHAN ALQADRI

Comments

Popular Posts