Skip to main content

Featured

ಹಜ್ಜ್ ಅಂದರೆ ಏನು ತಪ್ಪದೇ ಓದಿ

ಹಜ್ ಕರ್ಮ ಎಂಬುವುದು ಇಸ್ಲಾಮಿನ ಐದು ಆಧಾರ ಸ್ತಂಭ ಗಳಲ್ಲಿ ಒಂದಾಗಿದೆ  ಅದನ್ನು ತನು ಮನ ಧನ ಗಳಿಂದ ಸಾಮರ್ಥ್ಯವಿರುವವರಿಗೆ ಮಾತ್ರ  ನಿರ್ವಹಿಸುವುದು ಅನಿವಾರ್ಯವಾಗಿದೆ,  ನಬಿ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಒಮ್ಮೆ ಮಾತ್ರ ಹಜ್ ಮಾಡಿದ್ದು ಎಂಬ ವಿಷಯ ಸತ್ಯವಲ್ಲದಿರುವುದು ದೃಢವಾಗಿದೆ, ಹಜ್ ಬಗ್ಗೆ ನಬಿಯನ್ನು ಕುರಿತು ಹಲವು ಸರಿಯಾದ ಹದೀಥ್‌ಗಳನ್ನು ದಾಖಲಿಸಲಾಗಿದೆ, ಈ ಲೇಖನದಲ್ಲಿ ನಾವು ನಬಿಯವರಿಂದ ಸತ್ಯವೆಂದು ಹೇಳಲ್ಪಟ್ಟ ಹಜ್ ಕುರಿತು ಕೆಲವು ಹದೀಥ್‌ಗಳನ್ನು ಉಲ್ಲೇಖಿಸುತ್ತೇವೆ. ಹಜ್ ಎಂಬುವದು ಭಾಷೆಯಲ್ಲಿಚ್ಛೆಯನ್ನು ಸೂಚಿಸುವದ್ದಾಗಿ ವ್ಯಾಖ್ಯಾನಿಸಲಾಗಿದೆ, ಹಜ್ಜು, ಹಜ್ಜು ಮಾಡುವುದೇ ಎಂದರೆ ಅದನ್ನು ಆಶಿಸುವುದು, ಮತ್ತು ಯಾರನ್ನಾದರೂ ಹಜ್ಜು ಮಾಡಿದೆ ಎಂದರೆ ಅವನನ್ನು ಆಶಿಸಲಾಗಿದೆ ಎಂದು ಅರ್ಥ. ಮಹಜ್ಜೂಜ್ ವ್ಯಕ್ತಿ' ಎಂದರೆ  ಆಶಿಸಿದ ವ್ಯಕ್ತಿ, ಹಾಗೂ ಹಜ್ ಎಂದರೆ ಮಹತ್ತಾದ ಆಶೆ ಎಂದು ಹೇಳಲಾಗಿದೆ. ಶರಿಯಾ ದಲ್ಲಿ ಹಜ್ ಅನ್ನು ಹೀಗೆ ವ್ಯಾಖ್ಯಾನಿಸಲಾಗಿದೆ: ಮುಸ್ಲಿಂನು ಬೇರೆ ಬೇರೆ ಸ್ಥಳಗಳಿಗೆ, ವಿಶೇಷವಾಗಿ  (ಹರಾಮ್) ಮತ್ತು ಆರಫಾ ಕಡೆಗೆ, ನಿರ್ದಿಷ್ಟ ಸಮಯದಲ್ಲಿ ಹೋಗಿ ನಿರ್ದಿಷ್ಟ ಕೆಲಸಗಳನ್ನು ಮಾಡುವುದು; ಉದಾಹರಣೆಗೆ ಆರಫಾರಲ್ಲಿ ನಿಲ್ಲುವುದು, ತವಾಫ್ ಮತ್ತು ಸಾಮಾನ್ಯವಾಗಿ ಉಲಮಾ ಗಳ ಅಭಿಪ್ರಾಯದ ಪ್ರಕಾರ ಸೈ ಎಂಬ ಕ್ರಿಯೆಗಳನ್ನು(ಅಂದರೆ ಸಫಾ ಮತ್ತು ಮರ್ವಾ ಎಂಬ ಎರಡು ಪರ್ವತ ಗಳ ಮಧ್ಯೆ ನಡೆಯುವುದು)...

ಇಡೀ ಕುಟುಂಬ ದವರನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ

ಗದೊಡೆಯನಾದ  ಅಲ್ಲಾಹನು ಒಂದು ಚಿಕ್ಕ ನಿಸಾರವಾದ  ನೊಣವನ್ಶು ಯಾಕಾಗಿ  ಸ್ರಷ್ಟಿಸಿದನು ನಾವೆಲ್ಲರೂ ತಿಳಿಯಲೇ ಬೇಕಾದ ವಿಷಯ  ಒಮ್ಮೆ ಅಲಿ ರ.ಅ ರವರ ಹತ್ತಿರ ಒಬ್ಬರು ಬಂದು ಕೇಳಿದರು ಓ ಅಲಿ ಅವರೇ ಅಲ್ಲಾಹು ಎಲ್ಲಾ ಸ್ರಷ್ಟಿ ಗಳನ್ನು ಒಂದಲ್ಲಾ ಒಂದು ಕಾರಣಾಂತರಗಳಿಂದ ಸ್ಲಷ್ಟಿಸಿದ್ದಾನೆ  ಆದರೆ ನೊಣವನ್ನು ಯಾತಕ್ಕಾಗಿ  ಸ್ಲಷ್ಟಿಸಲಾಯಿತು    ಎಂದು ಕೇಳಿದಾಗ ಅಲಿ ರ.ಅ.  ರವರು ಮರುತ್ತರ ನೀಡುತ್ತಾ ಹೇಳಿದರು ಓ ಮನುಷ್ಯ ಅಲ್ಲಾಹನು ಅವನ  ಈ ಲೋಕದಲ್ಲಿ ಸ್ರಷ್ಟಿಸಿದ  ಎಲ್ಲಾ ವಸ್ತುಗಳಲ್ಲಿ ಮಾನವ ನಿಗೆ ಕೆಲವು ಸೂತ್ರ ಗಳನ್ನು ಮರೆಮಾಡಲಾಗಿವೆ  ಏಕೆಂದರೆ ಮನುಷ್ಯನು ತನ್ನ ಸ್ಥಿತಿಯನ್ನು ಅರಿಯಲು ಹಾಗೂ  ತನ್ನ  ಸತ್ಯ  ಸ್ರಷ್ಟಿ ಕರ್ತಾವು ವನ್ನು ಗುತಿಸಲಿಕ್ಕಾಗಿದೆ ಆದರೆ  ವಿಪರ್ಯಾಸ ಇಡೀ     ಮಾನವ ಸಮೂಹ ನಷ್ಟದಲ್ಲಿದೆ ಆದಿಪಿತ ಆದಿಮಾನವ  ಆದಮ್ ನಬಿ ಅ.ಸ.ಅವರ ಮಗ ಕಿಯಾಮ್  ಅತೀ ಗಾಂಭೀರ್ಯ ಉಳ್ಳ  ತನ್ನ ಇಡೀ ಕುಟುಂಬ ದವರನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಆಗಿದ್ದನು  ಎಲ್ಲರಿಗೂ ಸಹಾಯ ಮಾಡಲು ಮುಂದಾಗುವ ತನ್ನೆಲ್ಲರನ್ನು  ಸಮಾನ ವಾಗಿ ಕಾಣುವ ಒಬ್ಬ ಉತ್ತಮ ವ್ಯಕ್ತಿ ಆದರೆ  ಕೆಲವು ಸಮಯ ಗಳ ನಂತರ ಅವನಲ್ಲಿ ಅಹಂಕಾರ ಜನ್ಮ ನೀಡಿತು ತನ್ನನ್ನು ತಾನು ಶ್ರೇಷ್ಟ ಹಾಗೂ ಉನ್ನತಿ ಎಂಬ ಅಹಂಕಾರದ ಭಾವನೆಗಳು ಮನಸ್ಸಿನಲ್ಲಿ    ಮೂಡಿ  ಬರಲಾರಂಭಿಸಿದವು ನಾನು ಯಾವ ವಸ್ತುವನ್ನು ಕೂಡ  ತುಂಡರಿಸಿ ಬಿಡುವೆನು ನೆಲದಿಂದ ಕಿತ್ತೆಸೆಯಲು ನನ್ನಿಂದ ಸಾಧ್ಯ ನನ್ನಷ್ಟು ಬಲಶಾಲಿ ಈ ಭೂಮಿಯಲ್ಲಿ ಯಾರೂ ಇಲ್ಲ


ಎಂಬ ಜಂಭದ  ಮನ ಸ್ಥಿತಿ  ಇತ್ತು    ತಂದೆಯಾದ ಆದಮ್ ರವರು ಅವನ ಈ ಮಾತುಗಳನ್ನು ಆಲಿಸುತ್ತಾ ಅಲ್ಲಾಹನಲ್ಲಿ ಪ್ರಾರ್ತಿಸಿದರು ಓ ಅಲ್ಲಾಹುವೇ ನನ್ನ ಪ್ರತೀ ಪ್ರಾರ್ತನೆಯ ಫಲವಾಗಿ  ನನಗೆ ನೀನು  ಶಕ್ತಿಶಾಲಿ ಮಗನನ್ನು ಕೊಟ್ಟಿದ್ದಿಯ ಆದರೆ ಅವನು  ಆಹಂಕಾರಿ  ಯಾಗಿದ್ದಾನೆ ಓ ಅಲ್ಲಾಹು ಏನಾದರು ಒಂದು ಸ್ರಷ್ಟಿಯನ್ನು ಸ್ರಷ್ಟಿಸು ಯಾಕೆಂದರೆ ಅವನ ಸ್ಥಿತಿ ಸ್ಥಾನಮಾನ ಈ ಲೋಕದಲ್ಲಿ ಏನೂ ಅಲ್ಲ  ಎಂದರಿಯಬೇಕು     ಎಂದು ಪ್ರಾರ್ತಿಸಿದಾಗ ಅಲ್ಲಾಹನು ಅವರ ಪ್ರಾರ್ಥನೆ ಸ್ವೀಕರಿಸಿದನು ಆವಾಗ ಅಲ್ಲಾಹು ನೊಣವನ್ನು ಸ್ರಷ್ಟಿಸಿದನು ಕಿಯಾಮ್  ನಿದ್ರೆಗೆ ಜಾರಿದಾಗ ಆ ನೊಣವು ಅವನ ಮುಖದಲ್ಲಿ ಕುಳಿತು ಅವನನ್ನು ಹಿಂಸಿಸಲು ತೊಡಗಿತು ಅವನನ್ನು ಕಚ್ಚಲು ತೊಡಗಿದಾಗ ಅವನು ತನ್ನ ಎರಡು ಕೈ ಗಳನ್ನು ಮುಖದ ಮೇಲೇ ಬೀಸುತ್ತಾ ತುಂಬಾ ಹಿಂಸೆ ಪಡುತ್ತಿದ್ದನು ಆವಾಗ ತಂದೆ ಆದಮರು ತನ್ನ ಮಗನನ್ನು ಉದ್ದೇಶಿಸಿ ಹೇಳಿದರು ಓ ಕಿಯಾಮ್ ನೀನು ಇಷ್ಟು ಬಲಶಾಲಿಯಾಗಿಯೂ ಈ ನೊಣದ ಮೇಲೆಯೂ ತನ್ನ ಇಚ್ಚೆಯನ್ನು ತೋರಿಸಲಾರೆನು ಒಮ್ಮೆ ಯೋಚಿಸು ಇಷ್ಟ ದೊಡ್ಡ ಲೋಕವನ್ನು ಸ್ರಷ್ಟಿಸಿದವನು ಎಷ್ಟು ಬಲಶಾಲಿಯಾಗಿದ್ದಾನೆ ಈ ಮಾತನ್ನು ಕೇಳಿದ ಕಿಯಾಮ್ ಅಹಂಕಾರದಿಂದ ಪಶ್ಚಾತ್ತಾಪ ಪಟ್ಟನು ಸಹೋದರರೇ ಅಹಂಕಾರದಿಂದ ಏನನ್ನೂ ಸಾದಿಸಲಾರೆವು ಪ್ರೀತಿಯಿಂದ ಎಲ್ಲವನ್ನೂ ಪಡೆಯಬಹುದು
✒️MUSTHAFA HASAN ALIKHAN ALQADRI

Comments

Popular Posts