Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ಇಡೀ ಕುಟುಂಬ ದವರನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ

ಗದೊಡೆಯನಾದ  ಅಲ್ಲಾಹನು ಒಂದು ಚಿಕ್ಕ ನಿಸಾರವಾದ  ನೊಣವನ್ಶು ಯಾಕಾಗಿ  ಸ್ರಷ್ಟಿಸಿದನು ನಾವೆಲ್ಲರೂ ತಿಳಿಯಲೇ ಬೇಕಾದ ವಿಷಯ  ಒಮ್ಮೆ ಅಲಿ ರ.ಅ ರವರ ಹತ್ತಿರ ಒಬ್ಬರು ಬಂದು ಕೇಳಿದರು ಓ ಅಲಿ ಅವರೇ ಅಲ್ಲಾಹು ಎಲ್ಲಾ ಸ್ರಷ್ಟಿ ಗಳನ್ನು ಒಂದಲ್ಲಾ ಒಂದು ಕಾರಣಾಂತರಗಳಿಂದ ಸ್ಲಷ್ಟಿಸಿದ್ದಾನೆ  ಆದರೆ ನೊಣವನ್ನು ಯಾತಕ್ಕಾಗಿ  ಸ್ಲಷ್ಟಿಸಲಾಯಿತು    ಎಂದು ಕೇಳಿದಾಗ ಅಲಿ ರ.ಅ.  ರವರು ಮರುತ್ತರ ನೀಡುತ್ತಾ ಹೇಳಿದರು ಓ ಮನುಷ್ಯ ಅಲ್ಲಾಹನು ಅವನ  ಈ ಲೋಕದಲ್ಲಿ ಸ್ರಷ್ಟಿಸಿದ  ಎಲ್ಲಾ ವಸ್ತುಗಳಲ್ಲಿ ಮಾನವ ನಿಗೆ ಕೆಲವು ಸೂತ್ರ ಗಳನ್ನು ಮರೆಮಾಡಲಾಗಿವೆ  ಏಕೆಂದರೆ ಮನುಷ್ಯನು ತನ್ನ ಸ್ಥಿತಿಯನ್ನು ಅರಿಯಲು ಹಾಗೂ  ತನ್ನ  ಸತ್ಯ  ಸ್ರಷ್ಟಿ ಕರ್ತಾವು ವನ್ನು ಗುತಿಸಲಿಕ್ಕಾಗಿದೆ ಆದರೆ  ವಿಪರ್ಯಾಸ ಇಡೀ     ಮಾನವ ಸಮೂಹ ನಷ್ಟದಲ್ಲಿದೆ ಆದಿಪಿತ ಆದಿಮಾನವ  ಆದಮ್ ನಬಿ ಅ.ಸ.ಅವರ ಮಗ ಕಿಯಾಮ್  ಅತೀ ಗಾಂಭೀರ್ಯ ಉಳ್ಳ  ತನ್ನ ಇಡೀ ಕುಟುಂಬ ದವರನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಆಗಿದ್ದನು  ಎಲ್ಲರಿಗೂ ಸಹಾಯ ಮಾಡಲು ಮುಂದಾಗುವ ತನ್ನೆಲ್ಲರನ್ನು  ಸಮಾನ ವಾಗಿ ಕಾಣುವ ಒಬ್ಬ ಉತ್ತಮ ವ್ಯಕ್ತಿ ಆದರೆ  ಕೆಲವು ಸಮಯ ಗಳ ನಂತರ ಅವನಲ್ಲಿ ಅಹಂಕಾರ ಜನ್ಮ ನೀಡಿತು ತನ್ನನ್ನು ತಾನು ಶ್ರೇಷ್ಟ ಹಾಗೂ ಉನ್ನತಿ ಎಂಬ ಅಹಂಕಾರದ ಭಾವನೆಗಳು ಮನಸ್ಸಿನಲ್ಲಿ    ಮೂಡಿ  ಬರಲಾರಂಭಿಸಿದವು ನಾನು ಯಾವ ವಸ್ತುವನ್ನು ಕೂಡ  ತುಂಡರಿಸಿ ಬಿಡುವೆನು ನೆಲದಿಂದ ಕಿತ್ತೆಸೆಯಲು ನನ್ನಿಂದ ಸಾಧ್ಯ ನನ್ನಷ್ಟು ಬಲಶಾಲಿ ಈ ಭೂಮಿಯಲ್ಲಿ ಯಾರೂ ಇಲ್ಲ


ಎಂಬ ಜಂಭದ  ಮನ ಸ್ಥಿತಿ  ಇತ್ತು    ತಂದೆಯಾದ ಆದಮ್ ರವರು ಅವನ ಈ ಮಾತುಗಳನ್ನು ಆಲಿಸುತ್ತಾ ಅಲ್ಲಾಹನಲ್ಲಿ ಪ್ರಾರ್ತಿಸಿದರು ಓ ಅಲ್ಲಾಹುವೇ ನನ್ನ ಪ್ರತೀ ಪ್ರಾರ್ತನೆಯ ಫಲವಾಗಿ  ನನಗೆ ನೀನು  ಶಕ್ತಿಶಾಲಿ ಮಗನನ್ನು ಕೊಟ್ಟಿದ್ದಿಯ ಆದರೆ ಅವನು  ಆಹಂಕಾರಿ  ಯಾಗಿದ್ದಾನೆ ಓ ಅಲ್ಲಾಹು ಏನಾದರು ಒಂದು ಸ್ರಷ್ಟಿಯನ್ನು ಸ್ರಷ್ಟಿಸು ಯಾಕೆಂದರೆ ಅವನ ಸ್ಥಿತಿ ಸ್ಥಾನಮಾನ ಈ ಲೋಕದಲ್ಲಿ ಏನೂ ಅಲ್ಲ  ಎಂದರಿಯಬೇಕು     ಎಂದು ಪ್ರಾರ್ತಿಸಿದಾಗ ಅಲ್ಲಾಹನು ಅವರ ಪ್ರಾರ್ಥನೆ ಸ್ವೀಕರಿಸಿದನು ಆವಾಗ ಅಲ್ಲಾಹು ನೊಣವನ್ನು ಸ್ರಷ್ಟಿಸಿದನು ಕಿಯಾಮ್  ನಿದ್ರೆಗೆ ಜಾರಿದಾಗ ಆ ನೊಣವು ಅವನ ಮುಖದಲ್ಲಿ ಕುಳಿತು ಅವನನ್ನು ಹಿಂಸಿಸಲು ತೊಡಗಿತು ಅವನನ್ನು ಕಚ್ಚಲು ತೊಡಗಿದಾಗ ಅವನು ತನ್ನ ಎರಡು ಕೈ ಗಳನ್ನು ಮುಖದ ಮೇಲೇ ಬೀಸುತ್ತಾ ತುಂಬಾ ಹಿಂಸೆ ಪಡುತ್ತಿದ್ದನು ಆವಾಗ ತಂದೆ ಆದಮರು ತನ್ನ ಮಗನನ್ನು ಉದ್ದೇಶಿಸಿ ಹೇಳಿದರು ಓ ಕಿಯಾಮ್ ನೀನು ಇಷ್ಟು ಬಲಶಾಲಿಯಾಗಿಯೂ ಈ ನೊಣದ ಮೇಲೆಯೂ ತನ್ನ ಇಚ್ಚೆಯನ್ನು ತೋರಿಸಲಾರೆನು ಒಮ್ಮೆ ಯೋಚಿಸು ಇಷ್ಟ ದೊಡ್ಡ ಲೋಕವನ್ನು ಸ್ರಷ್ಟಿಸಿದವನು ಎಷ್ಟು ಬಲಶಾಲಿಯಾಗಿದ್ದಾನೆ ಈ ಮಾತನ್ನು ಕೇಳಿದ ಕಿಯಾಮ್ ಅಹಂಕಾರದಿಂದ ಪಶ್ಚಾತ್ತಾಪ ಪಟ್ಟನು ಸಹೋದರರೇ ಅಹಂಕಾರದಿಂದ ಏನನ್ನೂ ಸಾದಿಸಲಾರೆವು ಪ್ರೀತಿಯಿಂದ ಎಲ್ಲವನ್ನೂ ಪಡೆಯಬಹುದು
✒️MUSTHAFA HASAN ALIKHAN ALQADRI

Comments

Popular Posts