Skip to main content

Featured

ಕಾಸ್ಟಲ್ ಕರ್ನಾಟಕದ ಮುಸ್ಲಿಂ ಸಮುದಾಯದಲ್ಲಿನ ಆತ್ಮಹತ್ಯೆ: ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನ

ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಒಂದು ತೀವ್ರ ಸಾರ್ವಜನಿಕ ಆರೋಗ್ಯದ ಸಮಸ್ಯೆಯಾಗಿಬಿಟ್ಟಿದೆ, ದೈನಂದಿನ ಘಟನಗಳನ್ನು ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ವರದಿ ಮಾಡಲಾಗುತ್ತಿದೆ. ಈ ಸಮಸ್ಯೆ ಬೇರೆ ಬೇರೆ ಸಮುದಾಯಗಳ  ಮೇಲೆ ಪರಿಣಾಮ ಬೀರುತ್ತಿದ್ದರೂ, ಮುಸ್ಲಿಂ ಸಮುದಾಯದ ಒಳಗಿನ ಪರಿಣಾಮವನ್ನು ಅರ್ಥಮಾಡಿಕೊಳ್ಳಲು, ಈ ಪ್ರದೇಶದ ವಿಶಿಷ್ಟ ಸಾಮಾಜಿಕ ವಿನ್ಯಾಸ, ಆರ್ಥಿಕ ಒತ್ತಡಗಳು ಮತ್ತು ಸಾಂಸ್ಕೃತಿಕ ಗುಣಲಕ್ಷಣಗಳನ್ನು ಪರಿಶೀಲಿಸಬೇಕು. ಲಭ್ಯವಿರುವ ವರದಿ  ಪ್ರಕಾರ ಆತ್ಮಹತ್ಯೆ ಡೇಟಾವನ್ನು ವಿಭಜಿಸುತ್ತಿಲ್ಲ, ಆದರೆ ವಿಸ್ತೃತ ಪ್ರದೇಶೀಯ ಪ್ರವೃತ್ತಿಗಳು ಅಡಗಿರುವ ಕಾರಣಗಳನ್ನು ಬೆಳಕಿಗೆಡಿಸುತ್ತವೆ. ಪ್ರದೇಶೀಯ ಸ್ಥಿತಿ: ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣದ ಏರಿಕೆ ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ, ಪ್ರತಿದಿನ ಹಲವು ಘಟನಗಳನ್ನು ಜಿಲ್ಲೆಗಳಾದ್ಯಂತ ವರದಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹಣಕಾಸು ಚಿಂತೆ, ಕುಟುಂಬ ಕಲಹ, ಮಾನಸಿಕ ಆರೋಗ್ಯ ಹೋರಾಟಗಳು ಮತ್ತು ಸಾಮಾಜಿಕ ಕಲಹ ಎದುರಿಸುತ್ತಿರುವ ವ್ಯಕ್ತಿಗಳು ಸೇರಿದ್ದಾರೆ. ಹೆಚ್ಚಿನ ವಿವರಗಳಲ್ಲಿ ಧಾರ್ಮಿಕ ಗುರುತನ್ನು ಅಂದಾಜಿಸಲು ವರದಿಗಳು ನಿರ್ದೇಶಿಸುತ್ತಿಲ್ಲದಿದ್ದರೂ, ಈ ಪ್ರದೇಶದ ಮುಸ್ಲಿಂ ಕುಟುಂಬಗಳು ಒಂದು ಸಮಾನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಹಂಚಿಕೊಂಡಿವೆ—ಮೀನುಧಾನ್ಯ, ಚಿ...

ಶಿಹಾಬ್‌ರನ್ನು ಸ್ವಾಗತಿಸುವ ಮೊದಲು.

 *ಶಿಹಾಬ್‌ರನ್ನು ಸ್ವಾಗತಿಸುವ ಮೊದಲು..*



ಕಾಲ್ನಡಿಗೆಯ ಮೂಲಕ ಹಜ್‌ ಕರ್ಮಕ್ಕೆ ಹೊರಟ ಕೇರಳದ ಶಿಹಾಬ್ ಈಗಾಗಲೇ ಕರ್ನಾಟಕದ ಗಡಿ ದಾಟಲಿದ್ದಾರೆ. ಕೇರಳಿಗರು ಈ ಮೂವತ್ತರ ತರುಣನ ಸಾಹಸಿಕ ಯಾತ್ರೆಗೆ ನೀಡಿದ್ದು ಭವ್ಯ ಸ್ವಾಗತ, ಹೃದ್ಯ ಬೀಳ್ಕೊಡುಗೆ. ಅಲ್ಲಿ ಧರ್ಮ, ಪಕ್ಷಗಳನ್ನು ಮೀರಿ ದಾರಿಯುದ್ದಕ್ಕೂ ಶಿಹಾಬ್ ಸ್ವೀಕರಿಸಲ್ಪಟ್ಟಿದ್ದಾನೆ. ಆದರೆ ಕರ್ನಾಟಕದ ವಿಚಾರಕ್ಕೆ ಬಂದರೆ ಇಲ್ಲಿನ ಸನ್ನಿವೇಶಕ್ಕೆ ಮತೀಯ, ರಾಜಕೀಯ ಚಹರೆಯಿದೆ. ಅದರಲ್ಲೂ ಕರಾವಳಿ ಕೋಮು ಸೂಕ್ಷ್ಮ ಪ್ರದೇಶ. ಮಾಧ್ಯಮಗಳ ಅತ್ಯಾಚಾರದಿಂದ ಇಲ್ಲಿನ ಮತೀಯ ವಾತಾವರಣ ಈಗಾಗಲೇ ಮಲಿನವಾಗಿ ಬಿಟ್ಟಿದೆ. ಹಾಗಿರುವಾಗ ಕೇರಳದ ಭವ್ಯ ಬೀಳ್ಕೊಡುಗೆಗೂ ಕರ್ನಾಕಟದ ಬೀಳ್ಕೊಡುಗೆಗೂ ಅನೇಕ ಭಿನ್ನತೆಗಳಿವೆ. ಅಲ್ಲಿ ಆತನನ್ನು ತಕ್ಬೀರ್‌, ತಲ್ಬಿಯತ್, ಸ್ವಲಾತ್‌ಗಳಿಂದ ಬರಮಾಡಿಕೊಂಡಿದ್ದಾರೆ. ಆದರೆ ಇಲ್ಲಿ ಪುಂಡರ ಮುಂದೆ ತಕ್ಬೀರ್ ಕರೆದ ಹುಡುಗಿಯೊಬ್ಬಳು ಈಗಲೂ ಮಾಧ್ಯಮಗಳ ಶೋಷಣೆಗೆ ಒಳಗಾಗುತ್ತಿದ್ದಾಳೆ. ಹೀಗಿರುವಾಗ ನಾವು ಆತನನ್ನು ಸ್ವೀಕರಿಸಬೇಕಾದ ರೀತಿ ಹೇಗಿರಬೇಕೆಂಬುದು ಪ್ರತಿಯೊಬ್ಬನಿಗೂ ತಿಳಿದಿರಬೇಕು. ಅತಿಥಿ ಸ್ವೀಕಾರ ಮತ್ತು ಸತ್ಕಾರದಲ್ಲಿ ಕರಾವಳಿಗರಾದ ನಾವು ಒಂದು ಹೆಜ್ಜೆ ಮುಂದೆಯೇ. ಆದರೆ ಶಿಹಾಬ್ ವಿಚಾರದಲ್ಲಿ ನಮ್ಮ ಆತಿಥ್ಯ ಅತಿರೇಕವಾದರೆ ಆಪತ್ತಿಗೆ ದಾರಿಯಾಗಲಿದೆ. ಮಾಧ್ಯಮಕ್ಕೆ, ಸಂಘಪರಿವಾರದ ಐಟಿ ಪಡೆಗೆ ಆಹಾರವಾಗಲಿದೆ. ಅರೆಕ್ಷಣದ ಆವೇಶ ನಮ್ಮ ಅನೇಕ ಯುವಕರನ್ನು ಪರಿಸರ ಪ್ರಜ್ಞೆ ತಪ್ಪುವಂತೆ ಮಾಡುತ್ತದೆ. ಅಪದ್ಧ ಘೋಷಣೆ, ಜೈಕಾರಗಳಿಂದ ಸಾರ್ವಜನಿಕರಿಗೆ ತೊಂದರೆಯೇ ಹೆಚ್ಚು. ಶಿಹಾಬ್ ಆಗಮನದ ವೇಳೆ ಹಾಗೊಂಥರ ಅತಿರೇಕ ಸಂಭವಿಸಿ, ಮಾಧ್ಯಮಗಳ ಹಾಗೂ ಸೋಶಿಯಲ್ ಮೀಡಿಯಾದ ಪುಂಡರ ಬಾಯಿಗೆ ಆಹಾರವಾದರೆ ಆ ಯುವಕನ ನಿಯ್ಯತ್ತು, ನಿಷ್ಟೆಗೆ ನಾವು ದ್ರೋಹ ಬಗೆದಂತಾಗುತ್ತೇವೆ. ಆತನ ಮುಂದಿನ ದಾರಿಯ ಮುಳ್ಳಾಗಿ, ಮುಳುವಾಗುತ್ತೇವೆ. ಆದ್ದರಿಂದ ಕನಿಷ್ಠ ಸಾರ್ವಜನಿಕ ಸ್ವಾಸ್ಥ್ಯ ಹಾಳಾಗದಂತೆ, ರಸ್ತೆ ಅಡಚಣೆಯಾಗದಂತೆ, ಮಾಧ್ಯಮಗಳ ಕಣ್ಣಿಗೆ ಹುಳುಕು ಹುಡಕಲು ಅತಿರೇಕ ಸಂಭವಿಸದಂತೆ ತಮ್ಮನ್ನು ನಿಯಂತ್ರಿಸಿಕೊಳ್ಳುವಷ್ಟು ಪ್ರಾಪ್ತಿ, ಪರಿಸರ ಪ್ರಜ್ಞೆ ಇರುವವರಿಗೆ ಮಾತ್ರ ಶಿಹಾಬ್‌ರನ್ನು ಸ್ವಾಗತಿಸುವ ಅರ್ಹತೆಯಿದೆ.


  ~ಟಿ.ಎಂ ಸ‌ಅದಿ ತಂಬಿನಮಕ್ಕಿ

Comments

Popular Posts