Skip to main content

Featured

ಕಾಸ್ಟಲ್ ಕರ್ನಾಟಕದ ಮುಸ್ಲಿಂ ಸಮುದಾಯದಲ್ಲಿನ ಆತ್ಮಹತ್ಯೆ: ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನ

ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಒಂದು ತೀವ್ರ ಸಾರ್ವಜನಿಕ ಆರೋಗ್ಯದ ಸಮಸ್ಯೆಯಾಗಿಬಿಟ್ಟಿದೆ, ದೈನಂದಿನ ಘಟನಗಳನ್ನು ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ವರದಿ ಮಾಡಲಾಗುತ್ತಿದೆ. ಈ ಸಮಸ್ಯೆ ಬೇರೆ ಬೇರೆ ಸಮುದಾಯಗಳ  ಮೇಲೆ ಪರಿಣಾಮ ಬೀರುತ್ತಿದ್ದರೂ, ಮುಸ್ಲಿಂ ಸಮುದಾಯದ ಒಳಗಿನ ಪರಿಣಾಮವನ್ನು ಅರ್ಥಮಾಡಿಕೊಳ್ಳಲು, ಈ ಪ್ರದೇಶದ ವಿಶಿಷ್ಟ ಸಾಮಾಜಿಕ ವಿನ್ಯಾಸ, ಆರ್ಥಿಕ ಒತ್ತಡಗಳು ಮತ್ತು ಸಾಂಸ್ಕೃತಿಕ ಗುಣಲಕ್ಷಣಗಳನ್ನು ಪರಿಶೀಲಿಸಬೇಕು. ಲಭ್ಯವಿರುವ ವರದಿ  ಪ್ರಕಾರ ಆತ್ಮಹತ್ಯೆ ಡೇಟಾವನ್ನು ವಿಭಜಿಸುತ್ತಿಲ್ಲ, ಆದರೆ ವಿಸ್ತೃತ ಪ್ರದೇಶೀಯ ಪ್ರವೃತ್ತಿಗಳು ಅಡಗಿರುವ ಕಾರಣಗಳನ್ನು ಬೆಳಕಿಗೆಡಿಸುತ್ತವೆ. ಪ್ರದೇಶೀಯ ಸ್ಥಿತಿ: ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣದ ಏರಿಕೆ ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ, ಪ್ರತಿದಿನ ಹಲವು ಘಟನಗಳನ್ನು ಜಿಲ್ಲೆಗಳಾದ್ಯಂತ ವರದಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹಣಕಾಸು ಚಿಂತೆ, ಕುಟುಂಬ ಕಲಹ, ಮಾನಸಿಕ ಆರೋಗ್ಯ ಹೋರಾಟಗಳು ಮತ್ತು ಸಾಮಾಜಿಕ ಕಲಹ ಎದುರಿಸುತ್ತಿರುವ ವ್ಯಕ್ತಿಗಳು ಸೇರಿದ್ದಾರೆ. ಹೆಚ್ಚಿನ ವಿವರಗಳಲ್ಲಿ ಧಾರ್ಮಿಕ ಗುರುತನ್ನು ಅಂದಾಜಿಸಲು ವರದಿಗಳು ನಿರ್ದೇಶಿಸುತ್ತಿಲ್ಲದಿದ್ದರೂ, ಈ ಪ್ರದೇಶದ ಮುಸ್ಲಿಂ ಕುಟುಂಬಗಳು ಒಂದು ಸಮಾನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಹಂಚಿಕೊಂಡಿವೆ—ಮೀನುಧಾನ್ಯ, ಚಿ...

Marital Satisfaction-ಪತಿಯ ತ್ರಪ್ತಿ

ಒಬ್ಬ ಮಹಿಳೆಗೆ  ಸುನ್ನತ್ತಾದ   ಉಪವಾಸ ಅನುಷ್ಟಿಸಲು ಅವಳಿಗೆ ತನ್ನ   ಪತಿಯ ಸಮ್ಮತಿ ಮುಖ್ಯ ವಾಗಿದೆ ಅವಳು   ಪತಿಯ  ಸಮ್ಮತಿ ಇಲ್ಲದೆ ಉಪವಾಸ ಅನುಷ್ವಿಸುವ  ಹಾಗಿಲ್ಲ ಯಾಕೆಂದರೆ ಪತಿಯ ತ್ರಪ್ತಿ ಯನ್ನು ಪಡೆದು ಕೊಳ್ಳುವುದು ಒಂದು ಹೆಣ್ಣಿಗೆ ಉತ್ತಮ  ಇಬಾದತ್ ಆಗಿದೆ ಆದರಿಂದ ಪತಿಯ ಸಮ್ಮತಿಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ  ಪತಿಯ ಸಮ್ಮತಿ  ಇಲ್ಲ ವಾದರೆ ಉಪವಾಸ ಹಿಡಿಯುವ ಹಾಗಿಲ್ಲ ಪ್ರವಾದಿ صلي الله عليه وسلم 
ರವರು ಹೇಳಿದರು ಒಬ್ಬ ಮಹಿಳೆಯ ಪತಿ  ಅವನ   ಮನೆಯಲ್ಲಿ ಅವನು ಯಾರನ್ನು ಇಷ್ಟ ಪಡುವುದಿಲ್ಲವೋ ಅವರನ್ನು ಮನೆಗೆ ಪ್ರವೇಶಿಸಬೇಡಿ ಒಂದು ಹದೀಸ್ ನಲ್ಲಿ ಈ ತರಹ ಉಲ್ಲೇಖ ಇದೆ ಗಂಡನು ಯಾವ ಹಾಸಿಗೆ ಯಲ್ಲಿ  ನಿದ್ರೆ ಮಾಡುತ್ತಾನೋ ಅಲ್ಲಿ ಇನ್ನೊಬ್ಬರನ್ನು ಕುಳಿತು ಕೊಳ್ಳಲು ಅನುಮತಿಸಬೇಡಿ 
ಅಬೂ  ಸುಫ್ಯಾನ್  ರವರ ಮಗಳು ಉಮ್ಭು ಹಬೀಬ ರ.ಅ. ರವರ  ಚರಿತ್ರೆಯನ್ನು  ನಮ್ಮ  ಜೀವನದಲ್ಲಿ ಅನೇಕ ಪಾಠ ಕಲಿಸಿ ಕೊಡಲಾಗುತ್ತದೆ   ನಾವು ಕಾಣಬಹುದು ಉಮ್ಮು ಹಬೀಬ ರ.ಅ. ಹಾಗು ಅವರ ಪತಿ   ಪ್ರವಾದಿ صلي الله عليه وسلم 
ರವರ  ಮೇಲೇ  ಈಮಾನ್ ತಂದ ನಂತರ ಇಸ್ಲಾಮ್ ಗೆ ಪ್ರವೇಶಿಸಿದ ನಂತರ    ಇಬ್ಬರೂ ಹಬಷಾ ದೇಶದಲ್ಲಿ ನೆಲಸಿ ಕೆಲವು ಸಮಯ ಅಲ್ಲಿ ವಾಸಿಸಿದರು     ಅವರು  ಅಲ್ಲಿ  ಕೆಲವು ಸಮಯದ ನಂತರ  ಒಂದು ದಿವಸ ಉಮ್ಮು ಹಬೀಬ ನಿದ್ರೆ ಯಲ್ಲಿ ಇದ್ದಾಗ ಕನಸಿನಲ್ಲಿ ಅವರ ಪತಿಯನ್ನು ನೋಡುತ್ತಾರೆ ವಿಕ್ರತ  ವಾಗಿ ಅವರ  ಮುಕ ಬದಲಾಗಿರುವುದನ್ನು ಕಂಡರು ಕನಸಿನಿಂದ  ಎಚ್ಚೆತ್ತುಕೊಂಡರು    ತುಂಬಾ ಆತಂಕಕ್ಕೆ ಒಳಪಟ್ಟರು  ಬೆಳಿಗ್ಗೆ ಎದ್ದು ನೋಡುವಾಗ  ಅವರ  ಪತಿ ಈಸಾಯಿ  ಯಾಗಿದ್ದರು ತನ್ನ ಧರ್ಮ ಬದಲಾಯಿಸಿದ್ದರು ನಂತರ ಉಮ್ಮು ಹಬೀಬ ರವರು ಗಂಡನಿಂದ   ಬೇರ್ಪಟ್ಟು ಒಂಟಿಯಾಗಿ ಜೀವಿಸ ತೊಡಗಿದ್ದರು   ಕೆಲವು ಕಾಲ ಗಳ ನಂತರ ಪತಿಯೂ ತೀರಿಹೋದರು
ಎಲ್ಲರನ್ನೂ ಬಿಟ್ಟು ದೂರ ಇದ್ದವರು ಒಂಟಿಯಾಗಿ ತುಂಬಾ ಚಿಂತಾಜನಕ   ದಿಂದ  ಜೀವನ ನಡೆಸುತ್ತಾ ...   ಆವಾಗ ಪ್ರವಾದಿ ಯವರು   ಹಬಷಿನ ರಾಜನಾದ ನಜಾಷಿ ಮುಖಾಂತರ ಉಮ್ಮು ಹಬೀಬ ರವರ ಮದುವೆಯ ಆಮಂತ್ರಣ ಕಳುಹಿಸಿದರು ಆವಾಗ ನಜಾಷಿ ಯವರು ಒಬ್ಬ ಮಹಿಳೆ ಯನ್ನು ಕರೆಸಿ ಹೇಳಿದರು ಉಮ್ಮು ಹಬೀಬರ ಹತ್ತಿರ ತಿಳಿಸಿ ಪ್ರವಾದಿ ಯವರು ನಿಮ್ಮನ್ನು ನಿಕಾಹ್ ಮಾಡಲು ಇಚ್ಚಿಸಿದ್ದಾರೆ  ಈ ವಿಷಯ ವನ್ನು ತಿಳಿಸಲು ಆ ಮಹಿಳೆ  ಅಲ್ಲಿಂದ ಹೊರಟು    ಉಮ್ಮು ಹಬೀಬರ ಮನೆ ತಲುಪಿದಾಗ  ಆವಾಗ ಉಮ್ಮು ಹಬೀಬ ಹೇಳಿದರು ನಾನು ಮನೆಯ ಹೊರಗೆ ಕುಳಿತಿರುವಾಗ ಹೊರಗಿನಿಂದ ಯಾರೋ ಕರೆಯುವುದನ್ನು ಕೇಳಿದೆ  ಬಾಗಿಲು ತೆರೆದು ನೋಡುವಾಗ ಒಬ್ಬ ಮಹಿಳೆ ಯನ್ನು ನೋಡಿದೆ ಅವರನ್ನು ಕುರಿಸಿ ಕೇಳಿದೆ ಆವಾಗ ಆ ಮಹಿಳೆ ಎಲ್ಲಾ ವಿಷಯ ಗಳನ್ನು   ವಿವರವಾಗಿ  ತಿಳಿಸಿದರು ಆವಾಗ ಉಮ್ಮು ಹಬೀಬರು ಹೇಳಿದರು ಒಮ್ಮೆ ನಾನೂ ಅದ್ಭುತ ಪಟ್ಟೆ  ತದನಂತರ ನನ್ನ ಸತೋಷದ ಮಿತಿ ಜಾಸ್ತಿಯಾದವು  ಆ ಸಂತೋಷದಿಂದ ನನ್ನ ಮನೆಯಲ್ಲಿದ್ದ ಪ್ರತಿಯೊಂದು ವಸ್ತು ವನ್ನು ಆ ಮಹಿಳೆ ಗೆ ಉಡುಗೊರೆ ಯಾಗಿ   ನೀಡಿದೆ ನಂತರ ಪ್ರವಾದಿ ಯವರು ಅವರನ್ನು ನಿಖಾಹ್ ಮಾಡಿಕೊಂಡರು  ಅವರು ಮದೀನ ತಲುಪಿದರು   ಹಾಗೆ  ಕೆಲವು ಸಮಯದ ನಂತರ ತಂದೆ ಯಾದವರು  ಅಬೂಸುಫ್ಯಾನ್  ಅವರನ್ನು ಸಂದರ್ಶಿಸಲು ಮದೀನ ಬಂದರು ಪ್ರವಾದಿ ಯವರ ಮನೆಯಲ್ಲಿ ಚಾಪೆಯ  ಮೇಲೆ ಕುಳಿತು ಕೊಳ್ಳಲು  ಹೊರಟಾಗ       ತನ್ನ ಮಗಳಾದ  ಉಮ್ಮು  ಹಬೀಬ ಅವರು ಚಾಪೆ ಯನ್ನು  ಎಳೆದರು     ಆವಾಗ ಅಬೂ  ಸುಫ್ಯಾನ್   ಹೇಳಿದರು ರಮ್ಲಾ    ನಿನಗೇನಾಯೀತು ನಾನು ಈ  ಚಾಪೆಯಲ್ಲಿ ಕಳಿತು ಕೊಳ್ಳಲು ಅರ್ಹನಲ್ಲವೇ     ಎಂದು ಕೇಳಿದಾಗ ಉಮ್ಮು     ಹಭೀಭ ವಿವರಿಸುತ್ತಾರೆ ಈ ಚಾಪೆ ನನ್ನ  ಪತಿಯಾದ  ಅಲ್ಲಾಹನ ರಸೂಲರದ್ದು ಇದರ ಮೇಲೆ  ಒಬ್ಬ ಮುಶ್ರಿಕ್ ಕುಳಿತು ಕೊಳ್ಳಲು ನಾನು ಇಷ್ಟ ಪಡುವುದಿಲ್ಲ ಆವಾಗ ಅಬೂ  ಸುಫ್ಯಾನ್ ಹೇಳಿದರು ನೀನು ತುಂಬಾ ಬದಲಾಗಿದ್ದಿಯ ಮಗಳೇ ಕೆಲವು ಕಾಲ ಗಳ    ನಂತರ ಅವರೂ ಇಸ್ಲಾಮಿಗೆ ಪ್ರವೇಶಿಸಿದರು ಇದಾಗಿದೆ     ಒಂದು ಹೆಣ್ಣು ತನ್ನ ಗಂಡನ ಚಾಪೆಯಲ್ಲಿ ಯೂ  ಅನ್ಯ ಪುರುಷರಿಗೆ  ಕುಳಿತು ಕೊಳ್ಳಲು ಅವಕಾಶ ಕೊಡಬಾರದು ಪ್ರವಾದಿ ಯವರು ಹೇಳಿದರು ಒಂದು ಮಹಿಳೆ ಮ್ರತಪಟ್ಟು ಅವಳ ಗಂಡ ಅವಳಿಂದ ತ್ರಪ್ತಿ  ಯಾದಲ್ಲಿ ಅವಳು ಸ್ವರ್ಗ ಪ್ರವೇಶಿಸುವಳು  ಗಂಡನ ತ್ರಪ್ತಿಗಾಗಿ ಎಲ್ಲವನ್ನೂ ತ್ಯಾಗ ಮಾಡುವವಳು ಧನ್ಯಳು,,,
✒️MUSTHAFA HASAN ALIKHAN ALQADRI

Comments

Popular Posts