Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ಜೇನಿನಲ್ಲಿಲ್ಲದ ಸಿಹಿ ಸ್ವಲಾತಿನ ಕಣಗಳಲ್ಲಿದೆ

ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم 
ರವರು ಹೇಳುತ್ತಾರೆ( ಕಯಾಮತ್)ಅಂತ್ಯ ದಿವಸದಲ್ಲಿ ನನಗೆ ಅತೀ ಹತ್ತಿರದ ಮನುಷ್ಯ. ಅವನು ನನಗೆ ಅಧಿಕವಾಗಿ ನನ್ನ ಮೇಲೆ (ಸ್ವಲಾತ್)  ಹೇಳುವವನಾಗಿದ್ದಾನೆ. ಇದು ಪ್ರವಾದಿ ಯವರ ಸಾಮಿಪ್ಯದ ಖಾತರಿ  ಯಾಗಿದೆ ಸ್ವಲಾತ್.  ಇದರಿಂದ ತಮ್ಮ ಮಕ್ಕಳಿಗೆ ಪ್ರವಾದಿ ಯವರ ಮೇಲೆ ಸ್ವಲಾತ್ ಹೇಳಲು ಪ್ರೇರಿಸಿ. ಬಾಲ್ಯದಲ್ಲಿಯೇ ತಮ್ಮ ತಮ್ಮ ಮನೆಗಳಲ್ಲಿ ಸ್ವಲಾತ್ ಮಜ್ಲಿಸ್ ಸಂಗಡಿಸಿ. ಪ್ರತೀ ದಿವಸ ವಾದರೆ ಉತ್ತಮ ಇಲ್ಲದಿದ್ದರೆ ಪ್ರತೀ ವಾರಕ್ಕೊಮ್ಮೆ ಒಂದು ದಿವಸ ನಿಗದಿ ಪಡಿಸಿ. ಆ ದಿವಸ ಸ್ವಲಾತ್ ಗಾಗಿ ಮೀಸಲಿಡಿ. ಶುಕ್ರವಾರ ದಂದು
ಅಧಿಕ ವಾಗಿ ಸ್ವಲಾತ್ ಹೇಳಲು ನಮಗೆ ಕಲ್ಪಿಸಲಾಗಿದೆ. ಪ್ರವಾದಿ ಯವರು ಹೇಳುತ್ತಾರೆ ಆ ದಿವಸ ಮಲಕ್ ಗಳು ಪ್ರತ್ಯಕ್ಷ ಪಡುವರು. ಬಹು ಮಾನ್ಯರಾದ ಅಬೂ ದರ್ದಾಹ್ رضي الله عنه ಹೇಳುತ್ತಾರೆ ಯಾ ರಸೂಲಲ್ಲಾಹ್. ನಿಮ್ಮ ಜೀವಂತ ಕಾಲದಲ್ಲಿ ಮಾಡಬಹುದು ಆದರೆ ತಮ್ಮ ಜೀವನದ ನಂತರ ಈ ಪ್ರವರ್ತಿ ಜಾರಿಗೊಳಿಸ ಬೇಕೇ.  ಎಂದು ಕೇಳಿದಾಗ (ಇಬ್ನೇ ಮಾಜಾ ದಲ್ಲಿ ಇದನ್ನು ಉಲ್ಲೇಕಿಸಲಾಗಿದೆ )ಪ್ರವಾದಿ ಯವರು ಹೇಳಿದರು ಹೌದು ನನ್ನ ಮರಣದ ನಂತರವೂ ಈ ಕಾರ್ಯವನ್ನು ಜಾರಿಗೊಳಿಸಿರಿ. ಮತ್ತು ಹೇಳಿದರು 
ان الله حرم علي الارض ان تاكل أجساد الانبياء فنبي الله حي يرزق 
ಅಲ್ಲಾಹನು ಪ್ರವಾದಿ ಗಳ ಶರೀ
ರವನ್ನು ತಿನ್ನಲು ಮಣ್ಣಿಗೆ ಹರಾಮ್ ಮಾಡಿದ್ದಾನೆ. ಅವರು ಕಬರಿನಲ್ಲಿ ಜೀವಂತ ವಾಗಿರುತ್ತಾರೆ. ಅವರಿಗೆ ಆಹಾರ ನೀಡಲಾಗುತ್ತದೆ. ಪ್ರವಾದಿ ಯವರು ಹೇಳುತ್ತಾರೆ ನನ್ನ ಮರಣದ ನಂತರವೂ ನೀವು ಸ್ವಲಾತ್ ಕಾರ್ಯಗಳನ್ನು ಜಾರಿ ಗೊಳಿಸಿ. ಒಬ್ಬ ಸತ್ಯ ವಿಶ್ವಾಸಿ ಸ್ವಲಾತ್ ನೊಂದಿಗೆ ಸದಾ ಸಂಪರ್ಕ ದಲ್ಲಿರುತ್ತಾನೆ. ಸ್ವಲಾತ್ ಇಲ್ಲದೇ ಅವನ ದಿವಸ ಪೂರ್ತಿ ಆಗಲಾರದು. ನಮಾಝಿನಲ್ಲಾದರೂ ಓದಲೇ ಬೇಕು ಸ್ವಲಾತ್ ಇಬ್ರಾಹೀಮಿಗೆ ನಮಾಝಿನ ಅಂಗ ವಾಗಿ ಕಲ್ಪಿಸಲಾಗಿದೆ.  ಸ್ವಲಾತ್ ಒಂದೇ ವಿಭಿನ್ನ ಪ್ರವರ್ತಿ ಯಾಗಿದೆ. ನೀವು ನಿಮ್ಮ ಜೀವನದಲ್ಲಿ ಎಷ್ಟು ಬೇಕಾದರೂ ಮಾಡಬಹುದು. ಸ್ವಲಾತ್ ಹೇಳುವುದರಿಂದ ಮಕ್ಕಳಲ್ಲಿ  ಪಾವಿತ್ರ್ಯತೆ  ಉಂಟಾಗುತ್ತದೆ. ಮಕ್ಕಳು ಶುದ್ಧ ಹಾಗು ಉತ್ತಮ ಮಕ್ಕಳಾಗುವರು. ಪ್ರತಿಯೊಬ್ಬ ತಂದೆ ತಾಯಿಯೂ ತಮ್ಮ ಮಕ್ಕಳು ಗುಣವಂತರಾಗಲು ಬಯಸುತ್ತಾರೆ. ಇಂದು ಲೋಕದಲ್ಲಿ ಸ್ತಿರವಾಗಿ ನಿಂತ ಫಿತ್ನಗಳ ಮದ್ಯೆ ಮಕ್ಕಳು ಪಾವಿತ್ರ್ಯ ವಾಗಿ ಇರುವುದು ಆಲೋಚಿಸುವಂತಹ ವಿಷಯ ವಾಗಿದೆ. ಅವರಿಗೆ ಸ್ವಲಾತ್ ನ ಮಹಿಮೆ ತಿಳಿಸಿ ಅದರ ಪರಿಣಾಮ ದಿಂದ ಅವರಲ್ಲಿ ಪಾವಿತ್ರ್ಯ ಉಂಟಾಗುತ್ತದೆ. ಸ್ವಲಾತ್ ಹೇಳುವ ಮಕ್ಕಳು ಮತ್ತು ಹೇಳದೆ ಇರುವ ಮಕ್ಕಳ ಅಭ್ಯಾಸ ಗಳಲ್ಲಿ ವ್ಯತ್ಯಾಸ ಇರುತ್ತದೆ. ಸ್ವಲಾತ್ ಹೇಳುವವರಲ್ಲಿ ಪ್ರೀತಿ ಪ್ರೇಮ ಸೌಹಾರ್ದ ಸಜ್ಜನಶೀಲ ಮತ್ತು ಅನುಕಂಪ ಗಳ ಸರಮಾಲೆ ಅಧಿಕ ವಾಗಿ ಇರುತ್ತದೆ. ಇದು ಸ್ವಲಾತಿನ ಮಹಿಮೆ ಯಾಗಿದೆ ಕೆಲವರಿಗೆ ಮಕ್ಕಳ ಕೆಟ್ಟ  ವರ್ತನೆಯ ಬಗ್ಗೆ  ತುಂಬಾ ಮನಸ್ತಾಪ ಗಳಿರುತ್ತದೆ. ಅದರ ಶಮನ ಸ್ವಲಾತ್ ಮಾತ್ರ ವಾಗಿದೆ ಮಕ್ಕಳಲ್ಲಿ ಸ್ವಲಾತಿನ ಬಗ್ಗೆ ಒಳ್ಳೆಯ ಧಾರಣೆ ಪ್ರೇರೇಪಿಸಿ.  ಸ್ವಲಾತ್ ನಮ್ಮ ಅಹಂಕಾರ ವನ್ನು ಮುರಿಯುತ್ತದೆ ಮುಹಮ್ಮದ್ ಅರಬೀ صلي الله عليه وسلم ರವರ ಹೆಸರಿನ ಸಿಹಿ ಉಂಟಾಗಿಸುತ್ತದೆ. ಪ್ರವಾದಿ ಯವರ ಹೆಸರು ಅದು ಜೇನಿಗಿಂತ ಸಿಹಿಯಾಗಿದೆ ಸಕ್ಕರೆ ಹಾಗು ಜೇನಿನಲ್ಲಿಲ್ಲದ ಸಿಹಿ ಪ್ರವಾದಿ ಯವರ ಹೆಸರಿನಲ್ಲಿದೆ .
اللهم صلي علي سيدنا محمد
ISLAMIC KANNADA

Comments

Popular Posts