Skip to main content

Featured

ಹಜ್ಜ್ ಅಂದರೆ ಏನು ತಪ್ಪದೇ ಓದಿ

ಹಜ್ ಕರ್ಮ ಎಂಬುವುದು ಇಸ್ಲಾಮಿನ ಐದು ಆಧಾರ ಸ್ತಂಭ ಗಳಲ್ಲಿ ಒಂದಾಗಿದೆ  ಅದನ್ನು ತನು ಮನ ಧನ ಗಳಿಂದ ಸಾಮರ್ಥ್ಯವಿರುವವರಿಗೆ ಮಾತ್ರ  ನಿರ್ವಹಿಸುವುದು ಅನಿವಾರ್ಯವಾಗಿದೆ,  ನಬಿ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಒಮ್ಮೆ ಮಾತ್ರ ಹಜ್ ಮಾಡಿದ್ದು ಎಂಬ ವಿಷಯ ಸತ್ಯವಲ್ಲದಿರುವುದು ದೃಢವಾಗಿದೆ, ಹಜ್ ಬಗ್ಗೆ ನಬಿಯನ್ನು ಕುರಿತು ಹಲವು ಸರಿಯಾದ ಹದೀಥ್‌ಗಳನ್ನು ದಾಖಲಿಸಲಾಗಿದೆ, ಈ ಲೇಖನದಲ್ಲಿ ನಾವು ನಬಿಯವರಿಂದ ಸತ್ಯವೆಂದು ಹೇಳಲ್ಪಟ್ಟ ಹಜ್ ಕುರಿತು ಕೆಲವು ಹದೀಥ್‌ಗಳನ್ನು ಉಲ್ಲೇಖಿಸುತ್ತೇವೆ. ಹಜ್ ಎಂಬುವದು ಭಾಷೆಯಲ್ಲಿಚ್ಛೆಯನ್ನು ಸೂಚಿಸುವದ್ದಾಗಿ ವ್ಯಾಖ್ಯಾನಿಸಲಾಗಿದೆ, ಹಜ್ಜು, ಹಜ್ಜು ಮಾಡುವುದೇ ಎಂದರೆ ಅದನ್ನು ಆಶಿಸುವುದು, ಮತ್ತು ಯಾರನ್ನಾದರೂ ಹಜ್ಜು ಮಾಡಿದೆ ಎಂದರೆ ಅವನನ್ನು ಆಶಿಸಲಾಗಿದೆ ಎಂದು ಅರ್ಥ. ಮಹಜ್ಜೂಜ್ ವ್ಯಕ್ತಿ' ಎಂದರೆ  ಆಶಿಸಿದ ವ್ಯಕ್ತಿ, ಹಾಗೂ ಹಜ್ ಎಂದರೆ ಮಹತ್ತಾದ ಆಶೆ ಎಂದು ಹೇಳಲಾಗಿದೆ. ಶರಿಯಾ ದಲ್ಲಿ ಹಜ್ ಅನ್ನು ಹೀಗೆ ವ್ಯಾಖ್ಯಾನಿಸಲಾಗಿದೆ: ಮುಸ್ಲಿಂನು ಬೇರೆ ಬೇರೆ ಸ್ಥಳಗಳಿಗೆ, ವಿಶೇಷವಾಗಿ  (ಹರಾಮ್) ಮತ್ತು ಆರಫಾ ಕಡೆಗೆ, ನಿರ್ದಿಷ್ಟ ಸಮಯದಲ್ಲಿ ಹೋಗಿ ನಿರ್ದಿಷ್ಟ ಕೆಲಸಗಳನ್ನು ಮಾಡುವುದು; ಉದಾಹರಣೆಗೆ ಆರಫಾರಲ್ಲಿ ನಿಲ್ಲುವುದು, ತವಾಫ್ ಮತ್ತು ಸಾಮಾನ್ಯವಾಗಿ ಉಲಮಾ ಗಳ ಅಭಿಪ್ರಾಯದ ಪ್ರಕಾರ ಸೈ ಎಂಬ ಕ್ರಿಯೆಗಳನ್ನು(ಅಂದರೆ ಸಫಾ ಮತ್ತು ಮರ್ವಾ ಎಂಬ ಎರಡು ಪರ್ವತ ಗಳ ಮಧ್ಯೆ ನಡೆಯುವುದು)...

ಜೇನಿನಲ್ಲಿಲ್ಲದ ಸಿಹಿ ಸ್ವಲಾತಿನ ಕಣಗಳಲ್ಲಿದೆ

ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم 
ರವರು ಹೇಳುತ್ತಾರೆ( ಕಯಾಮತ್)ಅಂತ್ಯ ದಿವಸದಲ್ಲಿ ನನಗೆ ಅತೀ ಹತ್ತಿರದ ಮನುಷ್ಯ. ಅವನು ನನಗೆ ಅಧಿಕವಾಗಿ ನನ್ನ ಮೇಲೆ (ಸ್ವಲಾತ್)  ಹೇಳುವವನಾಗಿದ್ದಾನೆ. ಇದು ಪ್ರವಾದಿ ಯವರ ಸಾಮಿಪ್ಯದ ಖಾತರಿ  ಯಾಗಿದೆ ಸ್ವಲಾತ್.  ಇದರಿಂದ ತಮ್ಮ ಮಕ್ಕಳಿಗೆ ಪ್ರವಾದಿ ಯವರ ಮೇಲೆ ಸ್ವಲಾತ್ ಹೇಳಲು ಪ್ರೇರಿಸಿ. ಬಾಲ್ಯದಲ್ಲಿಯೇ ತಮ್ಮ ತಮ್ಮ ಮನೆಗಳಲ್ಲಿ ಸ್ವಲಾತ್ ಮಜ್ಲಿಸ್ ಸಂಗಡಿಸಿ. ಪ್ರತೀ ದಿವಸ ವಾದರೆ ಉತ್ತಮ ಇಲ್ಲದಿದ್ದರೆ ಪ್ರತೀ ವಾರಕ್ಕೊಮ್ಮೆ ಒಂದು ದಿವಸ ನಿಗದಿ ಪಡಿಸಿ. ಆ ದಿವಸ ಸ್ವಲಾತ್ ಗಾಗಿ ಮೀಸಲಿಡಿ. ಶುಕ್ರವಾರ ದಂದು
ಅಧಿಕ ವಾಗಿ ಸ್ವಲಾತ್ ಹೇಳಲು ನಮಗೆ ಕಲ್ಪಿಸಲಾಗಿದೆ. ಪ್ರವಾದಿ ಯವರು ಹೇಳುತ್ತಾರೆ ಆ ದಿವಸ ಮಲಕ್ ಗಳು ಪ್ರತ್ಯಕ್ಷ ಪಡುವರು. ಬಹು ಮಾನ್ಯರಾದ ಅಬೂ ದರ್ದಾಹ್ رضي الله عنه ಹೇಳುತ್ತಾರೆ ಯಾ ರಸೂಲಲ್ಲಾಹ್. ನಿಮ್ಮ ಜೀವಂತ ಕಾಲದಲ್ಲಿ ಮಾಡಬಹುದು ಆದರೆ ತಮ್ಮ ಜೀವನದ ನಂತರ ಈ ಪ್ರವರ್ತಿ ಜಾರಿಗೊಳಿಸ ಬೇಕೇ.  ಎಂದು ಕೇಳಿದಾಗ (ಇಬ್ನೇ ಮಾಜಾ ದಲ್ಲಿ ಇದನ್ನು ಉಲ್ಲೇಕಿಸಲಾಗಿದೆ )ಪ್ರವಾದಿ ಯವರು ಹೇಳಿದರು ಹೌದು ನನ್ನ ಮರಣದ ನಂತರವೂ ಈ ಕಾರ್ಯವನ್ನು ಜಾರಿಗೊಳಿಸಿರಿ. ಮತ್ತು ಹೇಳಿದರು 
ان الله حرم علي الارض ان تاكل أجساد الانبياء فنبي الله حي يرزق 
ಅಲ್ಲಾಹನು ಪ್ರವಾದಿ ಗಳ ಶರೀ
ರವನ್ನು ತಿನ್ನಲು ಮಣ್ಣಿಗೆ ಹರಾಮ್ ಮಾಡಿದ್ದಾನೆ. ಅವರು ಕಬರಿನಲ್ಲಿ ಜೀವಂತ ವಾಗಿರುತ್ತಾರೆ. ಅವರಿಗೆ ಆಹಾರ ನೀಡಲಾಗುತ್ತದೆ. ಪ್ರವಾದಿ ಯವರು ಹೇಳುತ್ತಾರೆ ನನ್ನ ಮರಣದ ನಂತರವೂ ನೀವು ಸ್ವಲಾತ್ ಕಾರ್ಯಗಳನ್ನು ಜಾರಿ ಗೊಳಿಸಿ. ಒಬ್ಬ ಸತ್ಯ ವಿಶ್ವಾಸಿ ಸ್ವಲಾತ್ ನೊಂದಿಗೆ ಸದಾ ಸಂಪರ್ಕ ದಲ್ಲಿರುತ್ತಾನೆ. ಸ್ವಲಾತ್ ಇಲ್ಲದೇ ಅವನ ದಿವಸ ಪೂರ್ತಿ ಆಗಲಾರದು. ನಮಾಝಿನಲ್ಲಾದರೂ ಓದಲೇ ಬೇಕು ಸ್ವಲಾತ್ ಇಬ್ರಾಹೀಮಿಗೆ ನಮಾಝಿನ ಅಂಗ ವಾಗಿ ಕಲ್ಪಿಸಲಾಗಿದೆ.  ಸ್ವಲಾತ್ ಒಂದೇ ವಿಭಿನ್ನ ಪ್ರವರ್ತಿ ಯಾಗಿದೆ. ನೀವು ನಿಮ್ಮ ಜೀವನದಲ್ಲಿ ಎಷ್ಟು ಬೇಕಾದರೂ ಮಾಡಬಹುದು. ಸ್ವಲಾತ್ ಹೇಳುವುದರಿಂದ ಮಕ್ಕಳಲ್ಲಿ  ಪಾವಿತ್ರ್ಯತೆ  ಉಂಟಾಗುತ್ತದೆ. ಮಕ್ಕಳು ಶುದ್ಧ ಹಾಗು ಉತ್ತಮ ಮಕ್ಕಳಾಗುವರು. ಪ್ರತಿಯೊಬ್ಬ ತಂದೆ ತಾಯಿಯೂ ತಮ್ಮ ಮಕ್ಕಳು ಗುಣವಂತರಾಗಲು ಬಯಸುತ್ತಾರೆ. ಇಂದು ಲೋಕದಲ್ಲಿ ಸ್ತಿರವಾಗಿ ನಿಂತ ಫಿತ್ನಗಳ ಮದ್ಯೆ ಮಕ್ಕಳು ಪಾವಿತ್ರ್ಯ ವಾಗಿ ಇರುವುದು ಆಲೋಚಿಸುವಂತಹ ವಿಷಯ ವಾಗಿದೆ. ಅವರಿಗೆ ಸ್ವಲಾತ್ ನ ಮಹಿಮೆ ತಿಳಿಸಿ ಅದರ ಪರಿಣಾಮ ದಿಂದ ಅವರಲ್ಲಿ ಪಾವಿತ್ರ್ಯ ಉಂಟಾಗುತ್ತದೆ. ಸ್ವಲಾತ್ ಹೇಳುವ ಮಕ್ಕಳು ಮತ್ತು ಹೇಳದೆ ಇರುವ ಮಕ್ಕಳ ಅಭ್ಯಾಸ ಗಳಲ್ಲಿ ವ್ಯತ್ಯಾಸ ಇರುತ್ತದೆ. ಸ್ವಲಾತ್ ಹೇಳುವವರಲ್ಲಿ ಪ್ರೀತಿ ಪ್ರೇಮ ಸೌಹಾರ್ದ ಸಜ್ಜನಶೀಲ ಮತ್ತು ಅನುಕಂಪ ಗಳ ಸರಮಾಲೆ ಅಧಿಕ ವಾಗಿ ಇರುತ್ತದೆ. ಇದು ಸ್ವಲಾತಿನ ಮಹಿಮೆ ಯಾಗಿದೆ ಕೆಲವರಿಗೆ ಮಕ್ಕಳ ಕೆಟ್ಟ  ವರ್ತನೆಯ ಬಗ್ಗೆ  ತುಂಬಾ ಮನಸ್ತಾಪ ಗಳಿರುತ್ತದೆ. ಅದರ ಶಮನ ಸ್ವಲಾತ್ ಮಾತ್ರ ವಾಗಿದೆ ಮಕ್ಕಳಲ್ಲಿ ಸ್ವಲಾತಿನ ಬಗ್ಗೆ ಒಳ್ಳೆಯ ಧಾರಣೆ ಪ್ರೇರೇಪಿಸಿ.  ಸ್ವಲಾತ್ ನಮ್ಮ ಅಹಂಕಾರ ವನ್ನು ಮುರಿಯುತ್ತದೆ ಮುಹಮ್ಮದ್ ಅರಬೀ صلي الله عليه وسلم ರವರ ಹೆಸರಿನ ಸಿಹಿ ಉಂಟಾಗಿಸುತ್ತದೆ. ಪ್ರವಾದಿ ಯವರ ಹೆಸರು ಅದು ಜೇನಿಗಿಂತ ಸಿಹಿಯಾಗಿದೆ ಸಕ್ಕರೆ ಹಾಗು ಜೇನಿನಲ್ಲಿಲ್ಲದ ಸಿಹಿ ಪ್ರವಾದಿ ಯವರ ಹೆಸರಿನಲ್ಲಿದೆ .
اللهم صلي علي سيدنا محمد
ISLAMIC KANNADA

Comments

Popular Posts