Skip to main content

Featured

ಕಾಸ್ಟಲ್ ಕರ್ನಾಟಕದ ಮುಸ್ಲಿಂ ಸಮುದಾಯದಲ್ಲಿನ ಆತ್ಮಹತ್ಯೆ: ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನ

ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಒಂದು ತೀವ್ರ ಸಾರ್ವಜನಿಕ ಆರೋಗ್ಯದ ಸಮಸ್ಯೆಯಾಗಿಬಿಟ್ಟಿದೆ, ದೈನಂದಿನ ಘಟನಗಳನ್ನು ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ವರದಿ ಮಾಡಲಾಗುತ್ತಿದೆ. ಈ ಸಮಸ್ಯೆ ಬೇರೆ ಬೇರೆ ಸಮುದಾಯಗಳ  ಮೇಲೆ ಪರಿಣಾಮ ಬೀರುತ್ತಿದ್ದರೂ, ಮುಸ್ಲಿಂ ಸಮುದಾಯದ ಒಳಗಿನ ಪರಿಣಾಮವನ್ನು ಅರ್ಥಮಾಡಿಕೊಳ್ಳಲು, ಈ ಪ್ರದೇಶದ ವಿಶಿಷ್ಟ ಸಾಮಾಜಿಕ ವಿನ್ಯಾಸ, ಆರ್ಥಿಕ ಒತ್ತಡಗಳು ಮತ್ತು ಸಾಂಸ್ಕೃತಿಕ ಗುಣಲಕ್ಷಣಗಳನ್ನು ಪರಿಶೀಲಿಸಬೇಕು. ಲಭ್ಯವಿರುವ ವರದಿ  ಪ್ರಕಾರ ಆತ್ಮಹತ್ಯೆ ಡೇಟಾವನ್ನು ವಿಭಜಿಸುತ್ತಿಲ್ಲ, ಆದರೆ ವಿಸ್ತೃತ ಪ್ರದೇಶೀಯ ಪ್ರವೃತ್ತಿಗಳು ಅಡಗಿರುವ ಕಾರಣಗಳನ್ನು ಬೆಳಕಿಗೆಡಿಸುತ್ತವೆ. ಪ್ರದೇಶೀಯ ಸ್ಥಿತಿ: ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣದ ಏರಿಕೆ ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ, ಪ್ರತಿದಿನ ಹಲವು ಘಟನಗಳನ್ನು ಜಿಲ್ಲೆಗಳಾದ್ಯಂತ ವರದಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹಣಕಾಸು ಚಿಂತೆ, ಕುಟುಂಬ ಕಲಹ, ಮಾನಸಿಕ ಆರೋಗ್ಯ ಹೋರಾಟಗಳು ಮತ್ತು ಸಾಮಾಜಿಕ ಕಲಹ ಎದುರಿಸುತ್ತಿರುವ ವ್ಯಕ್ತಿಗಳು ಸೇರಿದ್ದಾರೆ. ಹೆಚ್ಚಿನ ವಿವರಗಳಲ್ಲಿ ಧಾರ್ಮಿಕ ಗುರುತನ್ನು ಅಂದಾಜಿಸಲು ವರದಿಗಳು ನಿರ್ದೇಶಿಸುತ್ತಿಲ್ಲದಿದ್ದರೂ, ಈ ಪ್ರದೇಶದ ಮುಸ್ಲಿಂ ಕುಟುಂಬಗಳು ಒಂದು ಸಮಾನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಹಂಚಿಕೊಂಡಿವೆ—ಮೀನುಧಾನ್ಯ, ಚಿ...

ಬರ್ಕತ್ ರಾತ್ರಿಗಳು


ರಂಜಾನ್ ತಿಂಗಳ ಪವಿತ್ರ ರಾತ್ರಿಗಳು ... ಜಗದೊಡೆಯನಾದ ಅಲ್ಲಾಹನಿಗೆ ಸರ್ವ ಸ್ತುತಿ. ಮಾನವರು ಸುದೀರ್ಘ ಹಾದಿಯಲ್ಲಿ ಸಂಚರಿಸುವ ಜೀವಿಗಳು ಪರಮಾತ್ಮನು ಅದರ ಕಾರಣದಿಂದಾಗಿ ದೊಡ್ಡ ಪ್ರತಿಫಲ ವನ್ನು. ಸಿದ್ದಪಡಿಸಿದ್ದಾನೆ. ಮತ್ತು ಆತ್ಮಗಳಲ್ಲಿ ತನ್ನದೇ ಆದ ಶ್ರೇಷ್ಠ ಮಾಸದ ರೂಹಾನಿ ವಾತಾವರಣ ವನ್ನು ಶ್ರಷ್ಟಿ ಮಾಡುತ್ತದೆ. ರಂಜಾನ್‌ನ ರಾತ್ರಿಗಳು ಉಳಿದ ದಿವಸಗಳ ರಾತ್ರಿಯಂತೆ ಅಲ್ಲ. ಬರಕತ್ತಿನ ರಾತ್ರಿ ಗಳು ಆಶೀರ್ವದಿಸಲ್ಪಡುತ್ತವೆ, ಕರುಣೆ ಮತ್ತು ಔದಾರ್ಯ ಗಳನ್ನು ಕರುಣಿಸುವ ರಾತ್ರಿ. ಮತ್ತು ಸ್ವರ್ಗದ ದ್ವಾರಗಳನ್ನು ತೆರೆಯುವ ರಾತ್ರಿ. ಇದರ ಪ್ರತಿ ರಾತ್ರಿಯಲ್ಲಿ ದೇವರು ಅವನ ದಾಸರಿಗೆ ಕ್ಷಮಿಸುವ ರಾತ್ರಿ . ನರಕ ದಿಂದ ವಿಮೋಚನೆ ಮಾಡುವ ರಾತ್ರಿ. ರಂಜಾನ್‌ನ ಮೊದಲ ರಾತ್ರಿಯಲ್ಲಿಯೇ ಸ್ವರ್ಗದ ಬಾಗಿಲು ತೆರೆಯಲ್ಪಡುತ್ತದೆ. ನರಕದ ಬಾಗಿಲು ಮುಚ್ಚಲ್ಪಡುತ್ತದೆ. ಮತ್ತು ಪಿಶಾಚಿಗಳನ್ನು ಸಂಕೋಲೆಗಳಿಂದ ಕಟ್ಟಿಹಾಕಲಾಗುತ್ತದೆ ರಂಜಾನ್‌ನ ಪ್ರತಿ ರಾತ್ರಿ ಕುರಾನ್ ಪಾರಾಯಣ ಮಾಡುವವರು ನೀತಿವಂತರು ತಮ್ಮ ಜಗದೊಡೆಯನ ಗ್ರಂತವನ್ನು ರಾತ್ರಿಯ ಸಮಯದಲ್ಲಿ ಮತ್ತು ದಿನದ ಅಂತ್ಯದಲ್ಲಿ ಪಠಿಸುತ್ತಿರುವವರು ಬಾಗ್ಯವಂತರು . ಪುನರುತ್ಥಾನದ ದಿನ, ಕುರಾನ್ ಹೇಳುತ್ತದೆ : ಓ ಕರ್ತನೇ, ಅವರು ಹಗಲಿನಲ್ಲಿ ಆಹಾರ ಮತ್ತು ಆಸೆಗಳನ್ನು ತಡೆದು ನನ್ನನ್ನು ಪಾರಾಯಣ.ಮಾಡಿದವರು. ಆದ್ದರಿಂದ ನಾನು ಅವರನ್ನು ಇಂದು ಶಿಫಾರಸು ಮಾಡುವೆನು ಎಂದು ಹೇಳುತ್ತದೆ ಕುರಾನ್. ಯಾರು ರಂಜಾನ್ ಅನ್ನು ನಂಬಿಕೆಯಿಂದ ಮತ್ತು ಶಿಷ್ಟಾಚಾರದಿಂದ ನಿರ್ವಹಿಸುತ್ತಾರೋ, ಅವರು ಮಾಡಿದ ಪಾಪಗಳಿಗೆ ಅಲ್ಲಾಹು ಕ್ಷಮಿಸುವನು.. ರಂಜಾನ್ ನ ರಾತ್ರಿಗಳಲ್ಲಿ ಅಲ್ಲಾಹನು ಸರ್ವಶಕ್ತನು ಹೀಗೆ ಹೇಳುತ್ತಾನೆ: ನನ್ನ ದಾಸರು ನನ್ನ ಬಗ್ಗೆ ನನ್ನನ್ನು ಕೇಳಿದಾಗ, ಅವರು ನನ್ನನ್ನು ಪ್ರಾರ್ತಿಸಿದಾಗ ನಾನು ಅವರ ಕರೆಗೆ ಹತ್ತಿರವಾಗಿದ್ದೇನೆ ಅವರು ಯಾವಾಗಲೆಲ್ಲ ಕರೆಯುತ್ತಾರೆಯೋ ! ರಂಜಾನ್‌ನ ರಾತ್ರಿಗಳು ವರ್ಷದ ಅತ್ಯುತ್ತಮ ರಾತ್ರಿಗಳಲ್ಲಿ ಒಂದಾಗಿದೆ. ಅಲ್ಲಾಹು ಹೇಳುತ್ತಾನೆ ಸಾವಿರ ತಿಂಗಳುಗಳಿಗಿಂತ ಉತ್ತಮವಾದ ಒಂದು ರಾತ್ರಿ ಈ ಮಾಸದಲ್ಲಿದೆ. “ಯಾರು ಈ ರಾತ್ರಿಯನ್ನು ನಂಬಿಕೆಯಿಂದ ಮತ್ತು ಶಿಷ್ಟಾಚಾರದಿಂದ ಆಚರಿಸುತ್ತಾರೋ, ಅವನ ಪಾಪಗಳನ್ನು ಕ್ಷಮಿಸಲ್ಪಡುವುದು.ರಂಜಾನ್ ರಾತ್ರಿಗಳು ಕೆಲವೇ ಗಂಟೆಗಳು, ಅವುಗಳಲ್ಲಿ ಅತ್ಯುತ್ತಮ ಮತ್ತು ಅತ್ಯಂತ ಶ್ರೇಷ್ಟಕರ, ಸಮಯದಲ್ಲಿ. ದೇವರು ತನ್ನ ನೀತಿವಂತ ದಾಸರನ್ನು ಸ್ತುತಿಸಲು ಹೇಳಿದ ಈ ಗೌರವಾನ್ವಿತ ಬರಕತ್ತಾದ ಸಮಯ ಈ ಬರಕತ್ತಾದ ಅನುಗ್ರಹಿತ ತಿಂಗಳ ಉಳಿದ ರಾತ್ರಿಗಳ ಬಗ್ಗೆ ನಾವು ಕಾಳಜಿ ವಹಿಸೋಣ, ನಾವು ಶ್ರದ್ಧೆ ಮತ್ತು ವಿಧೇಯತೆಯನ್ನು ತೋರುವ ಮೂಲಕ ಅಲ್ಲಾಹನನ್ನು ಅತ್ಯುತ್ತಮವಾಗಿ ಅರಿಯುವ. ಮತ್ತು ಈ ಸಮಯವನ್ನು ತಪ್ಪಿಸಿಕೊಳ್ಳಬಾರದು, ಆದ್ದರಿಂದ ಈ ಅನುಗ್ರಹಿತ ರಾತ್ರಿಗಳಿಂದ ನಿಷೇಧಿಸಲ್ಪಟ್ಟ ಕಾರ್ಯಗಳಿಂದ ದೂರವಿದ್ದು , ಅದರ ಸಂಪೂರ್ಣ ಪ್ರತಿಫಲ ದೊರೆಯಲು ಸದಾ ಪ್ರಾರ್ತಿಸಿ
✒️MUSTHAFA HASAN ALIKHAN ALQADRI

Comments