Skip to main content

Featured

ಹಜ್ಜ್ ಅಂದರೆ ಏನು ತಪ್ಪದೇ ಓದಿ

ಹಜ್ ಕರ್ಮ ಎಂಬುವುದು ಇಸ್ಲಾಮಿನ ಐದು ಆಧಾರ ಸ್ತಂಭ ಗಳಲ್ಲಿ ಒಂದಾಗಿದೆ  ಅದನ್ನು ತನು ಮನ ಧನ ಗಳಿಂದ ಸಾಮರ್ಥ್ಯವಿರುವವರಿಗೆ ಮಾತ್ರ  ನಿರ್ವಹಿಸುವುದು ಅನಿವಾರ್ಯವಾಗಿದೆ,  ನಬಿ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಒಮ್ಮೆ ಮಾತ್ರ ಹಜ್ ಮಾಡಿದ್ದು ಎಂಬ ವಿಷಯ ಸತ್ಯವಲ್ಲದಿರುವುದು ದೃಢವಾಗಿದೆ, ಹಜ್ ಬಗ್ಗೆ ನಬಿಯನ್ನು ಕುರಿತು ಹಲವು ಸರಿಯಾದ ಹದೀಥ್‌ಗಳನ್ನು ದಾಖಲಿಸಲಾಗಿದೆ, ಈ ಲೇಖನದಲ್ಲಿ ನಾವು ನಬಿಯವರಿಂದ ಸತ್ಯವೆಂದು ಹೇಳಲ್ಪಟ್ಟ ಹಜ್ ಕುರಿತು ಕೆಲವು ಹದೀಥ್‌ಗಳನ್ನು ಉಲ್ಲೇಖಿಸುತ್ತೇವೆ. ಹಜ್ ಎಂಬುವದು ಭಾಷೆಯಲ್ಲಿಚ್ಛೆಯನ್ನು ಸೂಚಿಸುವದ್ದಾಗಿ ವ್ಯಾಖ್ಯಾನಿಸಲಾಗಿದೆ, ಹಜ್ಜು, ಹಜ್ಜು ಮಾಡುವುದೇ ಎಂದರೆ ಅದನ್ನು ಆಶಿಸುವುದು, ಮತ್ತು ಯಾರನ್ನಾದರೂ ಹಜ್ಜು ಮಾಡಿದೆ ಎಂದರೆ ಅವನನ್ನು ಆಶಿಸಲಾಗಿದೆ ಎಂದು ಅರ್ಥ. ಮಹಜ್ಜೂಜ್ ವ್ಯಕ್ತಿ' ಎಂದರೆ  ಆಶಿಸಿದ ವ್ಯಕ್ತಿ, ಹಾಗೂ ಹಜ್ ಎಂದರೆ ಮಹತ್ತಾದ ಆಶೆ ಎಂದು ಹೇಳಲಾಗಿದೆ. ಶರಿಯಾ ದಲ್ಲಿ ಹಜ್ ಅನ್ನು ಹೀಗೆ ವ್ಯಾಖ್ಯಾನಿಸಲಾಗಿದೆ: ಮುಸ್ಲಿಂನು ಬೇರೆ ಬೇರೆ ಸ್ಥಳಗಳಿಗೆ, ವಿಶೇಷವಾಗಿ  (ಹರಾಮ್) ಮತ್ತು ಆರಫಾ ಕಡೆಗೆ, ನಿರ್ದಿಷ್ಟ ಸಮಯದಲ್ಲಿ ಹೋಗಿ ನಿರ್ದಿಷ್ಟ ಕೆಲಸಗಳನ್ನು ಮಾಡುವುದು; ಉದಾಹರಣೆಗೆ ಆರಫಾರಲ್ಲಿ ನಿಲ್ಲುವುದು, ತವಾಫ್ ಮತ್ತು ಸಾಮಾನ್ಯವಾಗಿ ಉಲಮಾ ಗಳ ಅಭಿಪ್ರಾಯದ ಪ್ರಕಾರ ಸೈ ಎಂಬ ಕ್ರಿಯೆಗಳನ್ನು(ಅಂದರೆ ಸಫಾ ಮತ್ತು ಮರ್ವಾ ಎಂಬ ಎರಡು ಪರ್ವತ ಗಳ ಮಧ್ಯೆ ನಡೆಯುವುದು)...

Dowry-free marriages- ವರದಕ್ಷಿಣೆ

كَلَّا ۖ بَلْ لَا تُكْرِمُونَ الْيَتِيمَ

(ಹಾಗಲ್ಲ, ನಿಜವಾಗಿ ನೀವು ಅನಾಥನನ್ನು ಗೌರವಿಸುವುದಿಲ್ಲ.)
ಇಂದು ನಾಲ್ಕು ಹೆಣ್ಣು ಹೆತ್ತವರ     ತಂದೆ ತಾಯಿಯ ನಿದ್ರೆ ಮಾಯವಾಗಿದೆ ಒಳ್ಳೆಯ ಸಂಬಂಧಗಳನ್ನು ಕಂಡು ಹಿಡಿಯುವುದು  ಅಸಾಧ್ಯ  ವಾಗಿದೆ  ಗಂಡಿನ ಕಡೆಯವರ ಉದ್ದದ ವಿನಂತಿ ಗಳು ಆದರೆ ಮಾತಿನಲ್ಲಿ ಹೇಳದೆ ಇದ್ದರು ಸೂಚನೆ ಗಳಿಂದ ಪೂರ್ತಿಗೊಳಿಸುವ ಸಲಹೆ ಗಳನ್ನು  ನೀಡಿ ಪೀಡಿಸುವ ಸಂಪ್ರದಾಯಕ್ಕೆ ಕೊನೆ ಇಲ್ಲವೇ   ಹೆಣ್ಣು ಪತಿಯ ಮನೆಯಲ್ಲಿ ಸುಖವಾದ ಸಂಸಾರ ಮಾಡಲಾರಳು
ಸಮಾಜದಲ್ಲಿ ಅತೀ ಹೆಚ್ಚು ನೀಚನಾದವನು ಅಂದರೆ ಒಂದು ತಂದೆಯ ಮಗಳನ್ನು ವರದಕ್ಷಿಣೆ ಗಾಗಿ ಪೀಡಿಸುವವನು ಆಗಿದ್ದಾನೆ  ಇಸ್ಲಾಮಿಯ ಶರೀಅತ್ ನಲ್ಲಿ (ನಿಕಾಹ್)ಮದುವೆ ಯನ್ನು   ಸುಲಭ ವಾಗಿ ನಡೆಸಲು ಕಲ್ಪಿಸಲಾಗಿದೆ   ಸಾವಿರಾರು ಜನರನ್ನು ಒಟ್ಟು ಗೂಡಿಸಿ ಹೆಣ್ಣಿನ ಮನೆಗೆ ದಾವಿಸುವ  ಸಂಪ್ರದಾಯ ಅನಿಸ್ಲಾಮಿಕ ವಾಗಿದೆ ಪ್ರಾರ್ಥನಾ(ಮಸೀದಿ) ಕೇಂದ್ರ ಗಳಲ್ಲಿ ನಿಕಾಹ್ ಮಾಡಿಸಿದರೆ ನಮ್ಮ ಸಮಾಜ ಉತ್ತಮ ಸಮಾಜ ವಾಗುವುದರಲ್ಲಿ ಎರಡು ಮಾತಿಲ್ಲ ಇಂತಹಾ ನೀಚ ಕ್ರತ್ಯಗಳಿಂದ ಬಡವರಿಗೆ ತೊಂದರೆ ಯಾಗುವುದು ಶ್ರೀಮಂತರು ಕೂಡ ಸುಖವಾಗಿಲ್ಲ    ಇಂದು ಕೋಟಿಗಟ್ಟಲೆ ಹಣ ಮದುವೆಗೆ ಕರ್ಚುಮಾಡಲಾಗುತ್ತದೆ ಬಡ ಹೆಣ್ಣು ಸುಂದರಿಯೂ ಸುಶಿಲೆಯೂ ವಿಧ್ಯಾವಂತಳಾಗಿಯೂ ಮನೆಯ ನಾಲ್ಕು ಗೋಡೆಯ ಒಳಗೆ ಯಾಕಾಗಿ ಕೂತು ಬಿಟ್ಟಳು ಅಂದರೆ ಅವರಲ್ಲಿ ಗಂಡಿನ ಕಡೆಯವರಿಗೆ ನೀಡಲು ವರದಕ್ಷಿಣೆ ಯ ಕೊರತೆ ಇದೆ ಆದರೆ ಇಂದು ನಮ್ಮಲ್ಲಿ ಕೆಲವು ಸಂಘಟನೆಗಳು ಹುಟ್ಟಿ ಕೊಂಡವು ಇದರಿಂದ ಸ್ವಲ್ಪ ಮಟ್ಟಿಗೆ ಶಾಂತಿಯ ಸಮಾಜ ವಾಗಿ ಮುಂದುವರಿಯುತ್ತಿದೆ ಮನುಷ್ಯನ ಜೀವನ ದಲ್ಲಿ ಮೂರು ಸಮಯ  ಅತೀ ಮುಖ್ಯ ವಾಗಿ  ಬರುತ್ತದೆ    ಒಂದು ಅವನು ಇನ್ನೊಬ್ಬರ  ಪ್ರತ್ಯೇಕ ವಾದ ಅತಿಥಿ ಯಾಗುವುದು ಎಲ್ಲರ ಗಮನ  ಅವನ ಕಡೆ ಯಾಗಿರುತ್ತದೆ ಇನ್ನೊಂದು ಅವನ ಜನನ ಸಮಯ ಅವನ ಸೌಂದರ್ಯ ಹೇಗಿದ್ದರೂ ಊರಿನವರೆಲ್ಲ ನೋಡಲು ಬಂದೇ ಬರುತ್ತಾರೆ ಆ ಜನಿಸಿದ ಮಗು ಕಪ್ಪಾಗಿದ್ದರೂ ಜನರು ಚಂದ್ರನ ತುಂಡು ಎಂದು ಕರೆಯುತ್ತಾರೆ ಮೂರನೆಯ  ಸಮಯ ಅಂದರೆ ಅವನು ಮದುವೆಯ ದಿವಸ  ಮದುಮಗನಾಗುವ ಸಮಯ ಆ ದಿವಸ ಎಲ್ಲರೂ ಅವನನ್ನೇ ನೋಡುವುದು ಅವನು  ಪ್ರತ್ಯೇಕ  ಅತಿಥಿ ಆಗಿರುತ್ತಾನೆ  ಅಂದರೆ ಅವನು ಸುಂದರ ವಾದ ಬೆಲೆ ಬಾಳುವ ವಸ್ತ್ರ ದರಿಸುವನು ಜನರು ಅವನ ಕಡೆ ಗಮನ ಬೀರುವರು ಆದರೆ    ಬಡವರಿಂದ ಅವರ ಈ ಹಕ್ಕನ್ನು ಕೂಡ ನೀನು ಕಬಳಿಸಿ ಕೊಂಡೆ ಮನುಜ  ಇಂದು ಬಡವರನ್ನು ಜನರ ಮುಂದೆ ತಂದು ಅವರನ್ನು ಅವಹೇಳನ ಮಾಡುವುದಕ್ಕಿಂತ ರಾತ್ರಿಯ ಕತ್ತಲೆಯಲ್ಲಿ ಬಡವರಿಗೆ ಏನಾದರೂ ನೀಡುತ್ತಿದ್ದರೆ  ಆಕಾಶ ದಲ್ಲಿ ರುವ ಅಲ್ಲಾಹು ನಿನ್ನಿಂದ ತ್ರಪ್ತಿ ಪಡುತ್ತಿದ್ದನು  ಆದರೆ   ಇಂದು ಬಡವರು ಕ್ಯಾಮೆರ ಗಳ ಮುಂದೆ ನಿಂತು ಸಹಾಯ ಪಡೆಯುವ ದ್ರಷ್ಯಗಳು ನಾವು ಕಾಣುತ್ತಿರಲಿಲ್ಲ ಇಲ್ಲಿ ಯಾರು ಏನೇ ನೀಡಿದರೂ  ಅವನ ಹೆಸರಿಗಾಗಿ ಅಥವಾ ಜನರ ಮುಂದೆ ಹೆಸರು ಗಿಟ್ಟಿಸುವ ಬರದದಲ್ಲಿ ಬಡವನ ಮಾನ ಹರಾಜು  ಆಗುತ್ತಲೇ  ಇದೆ ಪ್ರವಾದಿ  صلي الله عليه وسلم    ಯವರು ತಿಳಿಸುತ್ತಾರೆ ನೀನು ಬಡವರಿಗೆ  ಬಲ ಕೈಯಿಂದ   ನೀಡಿದ ಹಣ 
ಎಡ ಕೈ ಗೆ ತಿಳಿಯಕೂಡದು ಎಂದು ಆ ಮಾತಿಗೆ ಬೆಲೆ ಎಷ್ಟು ಜನರು ನೀಡುತ್ತಿದ್ದಾರೆ ಒಮ್ಮೆ ಮನಸ್ಸು ಮುಟ್ಟೆ ಕೇಳಿ  ಇಂದು ಬಡವರ  ಹೆಣ್ಣು  ಪ್ರದರ್ಶನದ ವಸ್ತು ಆಗಿ ಮಾರ್ಪಟ್ಟಿದ್ದಾಳೆ  ಪ್ರದರ್ಶನ ಮಾಡಿ ಬಡವರ ಅವಹೇಳನ ಮಾಡುವ ಪದ್ಧತಿ ಪ್ರತಿಯೊಬ್ಬರೂ ನಿಷೇಧಿಸ ಬೇಕು 
كَلَّا ۖ بَل لَّا تُكْرِمُونَ الْيَتِيمَ
ಧಾನ ನೀಡಿ ಅಲ್ಲಾಹನ ಸಂತ್ರಪ್ತಿಗಾಗಿ ಪ್ರಚಾರಕ್ಕಾಗಿ ಅಲ್ಲ 
ವರದಕ್ಷಿಣೆ ನಿಲ್ಲಿಸಿ ಬಡವರನ್ನು ಗೌರವಿಸಿ
MUSTHAFA HASAN ALIKHAN ALQADRI

Comments

Popular Posts