Skip to main content

Featured

ಕಾಸ್ಟಲ್ ಕರ್ನಾಟಕದ ಮುಸ್ಲಿಂ ಸಮುದಾಯದಲ್ಲಿನ ಆತ್ಮಹತ್ಯೆ: ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನ

ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಒಂದು ತೀವ್ರ ಸಾರ್ವಜನಿಕ ಆರೋಗ್ಯದ ಸಮಸ್ಯೆಯಾಗಿಬಿಟ್ಟಿದೆ, ದೈನಂದಿನ ಘಟನಗಳನ್ನು ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ವರದಿ ಮಾಡಲಾಗುತ್ತಿದೆ. ಈ ಸಮಸ್ಯೆ ಬೇರೆ ಬೇರೆ ಸಮುದಾಯಗಳ  ಮೇಲೆ ಪರಿಣಾಮ ಬೀರುತ್ತಿದ್ದರೂ, ಮುಸ್ಲಿಂ ಸಮುದಾಯದ ಒಳಗಿನ ಪರಿಣಾಮವನ್ನು ಅರ್ಥಮಾಡಿಕೊಳ್ಳಲು, ಈ ಪ್ರದೇಶದ ವಿಶಿಷ್ಟ ಸಾಮಾಜಿಕ ವಿನ್ಯಾಸ, ಆರ್ಥಿಕ ಒತ್ತಡಗಳು ಮತ್ತು ಸಾಂಸ್ಕೃತಿಕ ಗುಣಲಕ್ಷಣಗಳನ್ನು ಪರಿಶೀಲಿಸಬೇಕು. ಲಭ್ಯವಿರುವ ವರದಿ  ಪ್ರಕಾರ ಆತ್ಮಹತ್ಯೆ ಡೇಟಾವನ್ನು ವಿಭಜಿಸುತ್ತಿಲ್ಲ, ಆದರೆ ವಿಸ್ತೃತ ಪ್ರದೇಶೀಯ ಪ್ರವೃತ್ತಿಗಳು ಅಡಗಿರುವ ಕಾರಣಗಳನ್ನು ಬೆಳಕಿಗೆಡಿಸುತ್ತವೆ. ಪ್ರದೇಶೀಯ ಸ್ಥಿತಿ: ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣದ ಏರಿಕೆ ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ, ಪ್ರತಿದಿನ ಹಲವು ಘಟನಗಳನ್ನು ಜಿಲ್ಲೆಗಳಾದ್ಯಂತ ವರದಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹಣಕಾಸು ಚಿಂತೆ, ಕುಟುಂಬ ಕಲಹ, ಮಾನಸಿಕ ಆರೋಗ್ಯ ಹೋರಾಟಗಳು ಮತ್ತು ಸಾಮಾಜಿಕ ಕಲಹ ಎದುರಿಸುತ್ತಿರುವ ವ್ಯಕ್ತಿಗಳು ಸೇರಿದ್ದಾರೆ. ಹೆಚ್ಚಿನ ವಿವರಗಳಲ್ಲಿ ಧಾರ್ಮಿಕ ಗುರುತನ್ನು ಅಂದಾಜಿಸಲು ವರದಿಗಳು ನಿರ್ದೇಶಿಸುತ್ತಿಲ್ಲದಿದ್ದರೂ, ಈ ಪ್ರದೇಶದ ಮುಸ್ಲಿಂ ಕುಟುಂಬಗಳು ಒಂದು ಸಮಾನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಹಂಚಿಕೊಂಡಿವೆ—ಮೀನುಧಾನ್ಯ, ಚಿ...

Dowry-free marriages- ವರದಕ್ಷಿಣೆ

كَلَّا ۖ بَلْ لَا تُكْرِمُونَ الْيَتِيمَ

(ಹಾಗಲ್ಲ, ನಿಜವಾಗಿ ನೀವು ಅನಾಥನನ್ನು ಗೌರವಿಸುವುದಿಲ್ಲ.)
ಇಂದು ನಾಲ್ಕು ಹೆಣ್ಣು ಹೆತ್ತವರ     ತಂದೆ ತಾಯಿಯ ನಿದ್ರೆ ಮಾಯವಾಗಿದೆ ಒಳ್ಳೆಯ ಸಂಬಂಧಗಳನ್ನು ಕಂಡು ಹಿಡಿಯುವುದು  ಅಸಾಧ್ಯ  ವಾಗಿದೆ  ಗಂಡಿನ ಕಡೆಯವರ ಉದ್ದದ ವಿನಂತಿ ಗಳು ಆದರೆ ಮಾತಿನಲ್ಲಿ ಹೇಳದೆ ಇದ್ದರು ಸೂಚನೆ ಗಳಿಂದ ಪೂರ್ತಿಗೊಳಿಸುವ ಸಲಹೆ ಗಳನ್ನು  ನೀಡಿ ಪೀಡಿಸುವ ಸಂಪ್ರದಾಯಕ್ಕೆ ಕೊನೆ ಇಲ್ಲವೇ   ಹೆಣ್ಣು ಪತಿಯ ಮನೆಯಲ್ಲಿ ಸುಖವಾದ ಸಂಸಾರ ಮಾಡಲಾರಳು
ಸಮಾಜದಲ್ಲಿ ಅತೀ ಹೆಚ್ಚು ನೀಚನಾದವನು ಅಂದರೆ ಒಂದು ತಂದೆಯ ಮಗಳನ್ನು ವರದಕ್ಷಿಣೆ ಗಾಗಿ ಪೀಡಿಸುವವನು ಆಗಿದ್ದಾನೆ  ಇಸ್ಲಾಮಿಯ ಶರೀಅತ್ ನಲ್ಲಿ (ನಿಕಾಹ್)ಮದುವೆ ಯನ್ನು   ಸುಲಭ ವಾಗಿ ನಡೆಸಲು ಕಲ್ಪಿಸಲಾಗಿದೆ   ಸಾವಿರಾರು ಜನರನ್ನು ಒಟ್ಟು ಗೂಡಿಸಿ ಹೆಣ್ಣಿನ ಮನೆಗೆ ದಾವಿಸುವ  ಸಂಪ್ರದಾಯ ಅನಿಸ್ಲಾಮಿಕ ವಾಗಿದೆ ಪ್ರಾರ್ಥನಾ(ಮಸೀದಿ) ಕೇಂದ್ರ ಗಳಲ್ಲಿ ನಿಕಾಹ್ ಮಾಡಿಸಿದರೆ ನಮ್ಮ ಸಮಾಜ ಉತ್ತಮ ಸಮಾಜ ವಾಗುವುದರಲ್ಲಿ ಎರಡು ಮಾತಿಲ್ಲ ಇಂತಹಾ ನೀಚ ಕ್ರತ್ಯಗಳಿಂದ ಬಡವರಿಗೆ ತೊಂದರೆ ಯಾಗುವುದು ಶ್ರೀಮಂತರು ಕೂಡ ಸುಖವಾಗಿಲ್ಲ    ಇಂದು ಕೋಟಿಗಟ್ಟಲೆ ಹಣ ಮದುವೆಗೆ ಕರ್ಚುಮಾಡಲಾಗುತ್ತದೆ ಬಡ ಹೆಣ್ಣು ಸುಂದರಿಯೂ ಸುಶಿಲೆಯೂ ವಿಧ್ಯಾವಂತಳಾಗಿಯೂ ಮನೆಯ ನಾಲ್ಕು ಗೋಡೆಯ ಒಳಗೆ ಯಾಕಾಗಿ ಕೂತು ಬಿಟ್ಟಳು ಅಂದರೆ ಅವರಲ್ಲಿ ಗಂಡಿನ ಕಡೆಯವರಿಗೆ ನೀಡಲು ವರದಕ್ಷಿಣೆ ಯ ಕೊರತೆ ಇದೆ ಆದರೆ ಇಂದು ನಮ್ಮಲ್ಲಿ ಕೆಲವು ಸಂಘಟನೆಗಳು ಹುಟ್ಟಿ ಕೊಂಡವು ಇದರಿಂದ ಸ್ವಲ್ಪ ಮಟ್ಟಿಗೆ ಶಾಂತಿಯ ಸಮಾಜ ವಾಗಿ ಮುಂದುವರಿಯುತ್ತಿದೆ ಮನುಷ್ಯನ ಜೀವನ ದಲ್ಲಿ ಮೂರು ಸಮಯ  ಅತೀ ಮುಖ್ಯ ವಾಗಿ  ಬರುತ್ತದೆ    ಒಂದು ಅವನು ಇನ್ನೊಬ್ಬರ  ಪ್ರತ್ಯೇಕ ವಾದ ಅತಿಥಿ ಯಾಗುವುದು ಎಲ್ಲರ ಗಮನ  ಅವನ ಕಡೆ ಯಾಗಿರುತ್ತದೆ ಇನ್ನೊಂದು ಅವನ ಜನನ ಸಮಯ ಅವನ ಸೌಂದರ್ಯ ಹೇಗಿದ್ದರೂ ಊರಿನವರೆಲ್ಲ ನೋಡಲು ಬಂದೇ ಬರುತ್ತಾರೆ ಆ ಜನಿಸಿದ ಮಗು ಕಪ್ಪಾಗಿದ್ದರೂ ಜನರು ಚಂದ್ರನ ತುಂಡು ಎಂದು ಕರೆಯುತ್ತಾರೆ ಮೂರನೆಯ  ಸಮಯ ಅಂದರೆ ಅವನು ಮದುವೆಯ ದಿವಸ  ಮದುಮಗನಾಗುವ ಸಮಯ ಆ ದಿವಸ ಎಲ್ಲರೂ ಅವನನ್ನೇ ನೋಡುವುದು ಅವನು  ಪ್ರತ್ಯೇಕ  ಅತಿಥಿ ಆಗಿರುತ್ತಾನೆ  ಅಂದರೆ ಅವನು ಸುಂದರ ವಾದ ಬೆಲೆ ಬಾಳುವ ವಸ್ತ್ರ ದರಿಸುವನು ಜನರು ಅವನ ಕಡೆ ಗಮನ ಬೀರುವರು ಆದರೆ    ಬಡವರಿಂದ ಅವರ ಈ ಹಕ್ಕನ್ನು ಕೂಡ ನೀನು ಕಬಳಿಸಿ ಕೊಂಡೆ ಮನುಜ  ಇಂದು ಬಡವರನ್ನು ಜನರ ಮುಂದೆ ತಂದು ಅವರನ್ನು ಅವಹೇಳನ ಮಾಡುವುದಕ್ಕಿಂತ ರಾತ್ರಿಯ ಕತ್ತಲೆಯಲ್ಲಿ ಬಡವರಿಗೆ ಏನಾದರೂ ನೀಡುತ್ತಿದ್ದರೆ  ಆಕಾಶ ದಲ್ಲಿ ರುವ ಅಲ್ಲಾಹು ನಿನ್ನಿಂದ ತ್ರಪ್ತಿ ಪಡುತ್ತಿದ್ದನು  ಆದರೆ   ಇಂದು ಬಡವರು ಕ್ಯಾಮೆರ ಗಳ ಮುಂದೆ ನಿಂತು ಸಹಾಯ ಪಡೆಯುವ ದ್ರಷ್ಯಗಳು ನಾವು ಕಾಣುತ್ತಿರಲಿಲ್ಲ ಇಲ್ಲಿ ಯಾರು ಏನೇ ನೀಡಿದರೂ  ಅವನ ಹೆಸರಿಗಾಗಿ ಅಥವಾ ಜನರ ಮುಂದೆ ಹೆಸರು ಗಿಟ್ಟಿಸುವ ಬರದದಲ್ಲಿ ಬಡವನ ಮಾನ ಹರಾಜು  ಆಗುತ್ತಲೇ  ಇದೆ ಪ್ರವಾದಿ  صلي الله عليه وسلم    ಯವರು ತಿಳಿಸುತ್ತಾರೆ ನೀನು ಬಡವರಿಗೆ  ಬಲ ಕೈಯಿಂದ   ನೀಡಿದ ಹಣ 
ಎಡ ಕೈ ಗೆ ತಿಳಿಯಕೂಡದು ಎಂದು ಆ ಮಾತಿಗೆ ಬೆಲೆ ಎಷ್ಟು ಜನರು ನೀಡುತ್ತಿದ್ದಾರೆ ಒಮ್ಮೆ ಮನಸ್ಸು ಮುಟ್ಟೆ ಕೇಳಿ  ಇಂದು ಬಡವರ  ಹೆಣ್ಣು  ಪ್ರದರ್ಶನದ ವಸ್ತು ಆಗಿ ಮಾರ್ಪಟ್ಟಿದ್ದಾಳೆ  ಪ್ರದರ್ಶನ ಮಾಡಿ ಬಡವರ ಅವಹೇಳನ ಮಾಡುವ ಪದ್ಧತಿ ಪ್ರತಿಯೊಬ್ಬರೂ ನಿಷೇಧಿಸ ಬೇಕು 
كَلَّا ۖ بَل لَّا تُكْرِمُونَ الْيَتِيمَ
ಧಾನ ನೀಡಿ ಅಲ್ಲಾಹನ ಸಂತ್ರಪ್ತಿಗಾಗಿ ಪ್ರಚಾರಕ್ಕಾಗಿ ಅಲ್ಲ 
ವರದಕ್ಷಿಣೆ ನಿಲ್ಲಿಸಿ ಬಡವರನ್ನು ಗೌರವಿಸಿ
MUSTHAFA HASAN ALIKHAN ALQADRI

Comments

Popular Posts