Skip to main content

Featured

ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ,

ಉತ್ಪನ್ನ ನವೀಕರಣಗಳು ಆಂಡ್ರಾಯ್ಡ್, ಕ್ರೋಮ್ ಮತ್ತು ಪ್ಲೇ ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ, ಬಳಕೆದಾರರಿಗೆ ಸರಳ ಮತ್ತು ಸುರಕ್ಷಿತ ಪಾವತಿಗಳನ್ನು ಸಕ್ರಿಯಗೊಳಿಸುತ್ತದೆ 15 ಸೆಪ್ಟೆಂಬರ್, 2025 ಸೌದಿ ಪ್ರೇರಿತ ದೃಶ್ಯಗಳೊಂದಿಗೆ Google Pay ಲೋಗೋ ಇಂದು, ನಾವು ಸೌದಿ ಅರೇಬಿಯಾದಲ್ಲಿ Google Pay ಮತ್ತು Google Wallet ಅನ್ನು ಅಧಿಕೃತವಾಗಿ ಪ್ರಾರಂಭಿಸುವುದಾಗಿ ಘೋಷಿಸಿದ್ದೇವೆ, ಬಳಕೆದಾರರು ತಮ್ಮ Android ಫೋನ್‌ಗಳೊಂದಿಗೆ ವೇಗವಾಗಿ, ಸರಳವಾಗಿ ಮತ್ತು ಸುರಕ್ಷಿತವಾಗಿ ಪಾವತಿಸಲು ಸಹಾಯ ಮಾಡುತ್ತದೆ. ಸೌದಿ ಅರೇಬಿಯಾದಲ್ಲಿ ರಾಷ್ಟ್ರೀಯ ಪಾವತಿ ವ್ಯವಸ್ಥೆ (MADA) ನಿಂದ ಸಕ್ರಿಯಗೊಳಿಸಲಾದ ಸೇವೆಯು ಮುಂಬರುವ ವಾರಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತದೆ. Google Pay ಬಳಕೆದಾರರು ಅಂಗಡಿಗಳಲ್ಲಿ ಮತ್ತು ಶೀಘ್ರದಲ್ಲೇ ಅಪ್ಲಿಕೇಶನ್‌ಗಳಲ್ಲಿ ಮತ್ತು ವೆಬ್‌ನಲ್ಲಿ ಸರಾಗ ಪಾವತಿಗಳಿಗಾಗಿ 'ಟ್ಯಾಪ್ ಟು ಪೇ' ಬಳಸಿ ಸುರಕ್ಷಿತ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. ಇದು Google Wallet ಅಪ್ಲಿಕೇಶನ್‌ನಲ್ಲಿ ತಮ್ಮ mada ಕಾರ್ಡ್‌ಗಳು ಮತ್ತು Visa ಮತ್ತು Mastercard ನಂತಹ ಕ್ರೆಡಿಟ್ ಕಾರ್ಡ್‌ಗಳನ್ನು ಸುಲಭವಾಗಿ ಸೇರಿಸಲು ಮತ್ತು ನಿರ್ವಹಿಸಲು ಸಹ ಅವರಿಗೆ ಅನುವು ಮಾಡಿಕೊಡುತ್ತದೆ. Google Pay ನೊಂದಿಗೆ, ಬಳಕೆದಾರರು ಬಹು ಪದರಗಳ ಭದ್ರತೆಯೊಂದಿಗೆ ಸುರಕ್ಷಿತ ಪಾವತಿಗಳನ್ನು ಮಾಡಬಹುದು.  ಇದರಲ್ಲಿ ಉದ್ಯಮ-...

ಸೌಂದರ್ಯ ಭರಿತ ಮೀನುಗಳ ಒಡನಾಟ



ಕನಸು ಯಾರು ಬೇಕಾದರೂ ಕಾಣ ಬಹುದು ನೀಲಿ ಬಾನಿನಲ್ಲಿ ಚಿಲಿಪಿಲಿ ಗುಟ್ಟುವ ಹಕ್ಕಿಗಳ ರಂಗು ರಂಗಿನ ರೆಕ್ಕೆ ಯನ್ನು ಚಡಪಡಿಸುತ್ತಾ ತೇಲಾಡುವ ಆ ಸುಂದರ ಮೈಮೆರಸುವ ದ್ರಷ್ಯ ಕಂಡು ತಾನೂ ಕೂಡ ಹಾರಬೇಕೆನಿಸಬಹುದು
ನದಿ ಸರೋವರ ಗಳ ಅಂಗಳದಲ್ಲಿ ಕಣ್ಣಿಗೆ ತಂಪು ನೀಡುವ ಸೌಂದರ್ಯ ಭರಿತ ಮೀನುಗಳ ಒಡನಾಟದಲ್ಲಿ ಮಗ್ನರಾಗಿ ತಾನೂ ಈಜ ಬೇಕೆನಿಸಬಹುದು ಸಾಯಂಕಾಲದ ಸಮಯದಲ್ಲಿ ಮಧುರ ಕಂಠ ಕೋಗಿಲೆಯ ಆ ಕೂಗುವ ಕುಹು ಕುಹು ಕೇಳಿ ತಾನೂ ಹಾಡ ಬೇಕೆನಿಸಬಹುದು ಆದರೆ ಇಂದು ಮನುಜ ಇವೆಲ್ಲಕ್ಕಿಂತ ಮಿಗಿಲಾಗಿ ಬಾನಿನಲಿ ತೇಲುತ್ತಾ ದೇಶ ವಿದೇಶದ ಪಯಣ ಕೆಲವು ಗಂಟೆ ಗಳಲ್ಲಿ ಸಾದಿಸಿಯಾನು ಆಧುನಿಕತೆಯ ಉಪಕರಣ ಬಳಸಿ ಸಮುದ್ರದ ತಳಬಾಗಕ್ಕೂ ತಲುಪಿದನು ಮೈ ಕೆರಳಿಸುವ    ಇಂಪಾದ  ಹಾಡುಗಳನ್ನು ಹಾಡಲು ಪ್ರಾರಂಬಿಸಿದನು
ಮನುಷ್ಯನು ಜೀವನದಲ್ಲಿ ಎಲ್ಲವನ್ನೂ ತನ್ನಿಚ್ಚೆಯಾನುಸಾರವಾಗಿ ಪಡ   ಕೊಂಡನು ಆದರೆ ಮನಸ್ಸಿನ ಶಾಂತಿಗಾಗಿ ಇನ್ನೂ ಕೂಡ ಅಧ್ಯಾಯನ ಮಾಡುತ್ತಲೇ ಇದ್ದಾನೆ
ಭೂಮಿಯ ಮೇಲೆ  ಇರುವವರಿಗೆ ಕರುಣೆ  ತೋರಿದರೆ  ಆಕಾಶದಲ್ಲಿ  ಇರುವವನು ನಿಮಗೆ ಕರುಣೆ ತೋರುವನು  ಎಂಬ ಪ್ರವಾದಿ   ನುಡಿಯ ನಾವು ಕಡೆಗಣಿಸದೇ ಇದ್ದಿದ್ದರೆ  ಇಂದು ನಾವು  ಶಾಂತಿ ಯನ್ನು ಹುಡುಕುತ್ತಾ ಹೋಗಲಾರೆವು  ನಾವು ಯಾವಾಗ ಅನ್ಯರ ಸುಖ ದುಖ ಗಳಲ್ಲಿ ಪಾಲ್ಗೊಂಡು ಅವರಿಗೆ ಸಹಾಯ ಹಸ್ತ ಚಾಚುತ್ತೇವೆ  ಅಲ್ಲೇ ನಮ್ಮ ಮನಶಾಂತಿಯ ರಹಸ್ಯಗಳು ಅಡಗಿಕೊಂಡಿವೆ



لَقَدْ خَلَقْنَا الْإِنْسَانَ فِي كَبَدٍ
ನಾವು ಮನುಷ್ಯನನ್ನು ಇಕ್ಕಟ್ಟಿನಲ್ಲಿರುವವನಾಗಿ ಸೃಷ್ಟಿಸಿದ್ದೇವೆ.ಎಂದು ಪರಮಾತ್ಮನು  ಆಣೆ ಹಿಡಿದು ಹೇಳುತ್ತಾನೆ ಅಂದರೆ ಮನುಷ್ಯನ ಜೀವನದಲ್ಲಿ ಕಷ್ಟ ಗಳು ನೋವು ಸಂಕಷ್ಟಗಳು ಬರುವುದು ಅದು ಜೀವನದ ಒಂದು ಭಾಗವಾಗಿದೆ ನಾವು ನಮ್ಮ ಜೀವನಕ್ಕೆ  ಒಂದು ಹೊಸ ರೂಪವನ್ನು ಕೊಟ್ಟು ಮುಂದೆ ಸಾಗಿದೆವು ಅದರಲ್ಲಿ  ವಿಜಯಿಯಾದರೆ ಧನ್ಯನು ಪರಾಜಯ ನಾದರೆ ಹಿಂದೆ ಸರಿಯುವನು ಒಂದು ಉನ್ನತ ಸ್ಥಾನ ವನ್ನು ತಲುಪಲು ಕಷ್ಟ ಗಳ ದಾರಿಯನ್ನು ಹಿಂಬಾಲಿಸಬೇಕು 
ಜೀವನ ಕಷ್ಟ ಗಳ ರೇಖೆಗಳಲ್ಲಿ ಮಂದೆ ಸಾಗುವ ಹೆಸರು ಆಗಿದೆ ತದನಂತರ ತನ್ನ ಗುರಿ ಮಟ್ಟಲಾಗುವುದು ದ್ವೇಷ ಅಹಂಕಾರ ವ್ಯಾಮೋಹ ಇದೆಲ್ಲಾ ಬದಿಗಿಟ್ಟು ವಿಜಯಿ ಯಾಗುವ ಲೋಕದ ಕಡೆಗೆ ಮುನ್ನುಗ್ಗಿರಿ ಓ ಮನುಷ್ಯ ನಿನ್ನ ಜೀವನದಲ್ಲಿ ಒಂದು ಸಮಯ ಬರಲಿದೆ ಆವಾಗ ನಿನ್ನ ಶ್ವಾಸವು ಚಡಪಡಿಸಲಿದೆ ವೈದ್ಯರು ಅಸಹಾಯಕರಾಗುವ ಸಮಯ ಬರಲಿದೆ ಶವಾಗ್ರಹದಲ್ಲಿ ಅಸಹಾಯಕನಾಗಿ ಮೂಕ ಪ್ರೇತನಾಗಿ ನಿನಗೆ ಮಯ್ಯತ್ ಅಥವಾ ಶವ ಎಂದು ಹೇಳುವ ಸಮಯ ಕೂಡ ಬರಲಿದೆ     ಹಲಾಲ್  ಹರಾಮ್  ಲೆಕ್ಕಿಸದೆ ಸಂಪತ್ತು ಗಳನ್ನು ಕ್ರೂಡಿಗರಿಸಲು  ಓಡಿದ ಆ ಓಟವು ನಿಲ್ಲುವ ಸಮಯ ಬರಲಿದೆ  ಸುಂದರ ವಾದ ಕಟ್ಟಿ ನಿಲ್ಲಿಸಿದ ತನ್ನ  ಬಂಗಲೆ ಯಲ್ಲಿ ಒಂದು ದಿವಸ ಕೂಡ ನಿನ್ನನ್ನು ಇಡಲು ಒಪ್ಪದ ನಿನ್ನ ಬಂದು ಬಳಗದವರ ಮುಂದೆ ಅಸಹಾಯಕನಾಗಿ  ಮೂಕ ಪ್ರಾಣಿಯಾಗಿ ನಿಲ್ಲುವ  ಆ ಸಮಯವೂ ಬರಲಿದೆ  ಓ ನಿನ್ನ ಸೌಂದರ್ಯವೇ ನಿನ್ನ ತುಟಿಯ
ಗುಲಾಬಿಯೇ  ಆ ನಿನ್ನ ಕಪ್ಪು ರೆಕ್ಕೆಯ ಕಣ್ಣುಗಳೇ ಆ ನಿನ್ನ ರೇಷ್ಮೆಯಂತ ಕೂದಲೇ ನಿನ್ನ ನಡತೆ ನೋಡಿದರೆ ಕಯಾಮತ್ ನಡೆಯುತಿದೆ ಎಂದು ಭಾಸವಾಗುತ್ತಿತ್ತು   ಇಷ್ಟು ಸುಂದರ ವಾದ ನಿನ್ನ  ಶರೀರವನ್ನು ತಾಯಿಯ ಗರ್ಭದಲ್ಲಿ ಸ್ರಷಿಸಿದವನಿಗೆ ನಿನ್ನನ್ನು ಮತ್ತೋಮ್ಮೆ ಸ್ರಷ್ಟಿಸಲು ಅಸಾಧ್ಯನೇ ನೀನು ಪುನರ್ಜನ್ಮ ಪಡೆದು ಜಗದೊಡೆಯನ ಮುಂದೆ ನಿಲ್ಲುವ ಆ ಸಮಯ ಯೋಚಿಸು ಮನುಜ ನಿನ್ನಲ್ಲಿ ಕೇಳಲ್ಪಡುವುದು   ನಿನ್ನ ವಯಸ್ಸು ಎಲ್ಲಿ ವ್ಯರ್ಥ ಮಾಡಿದಿಯಾ ನಾವೆಲ್ಲರೂ ಒಂದು ಗೂಡುವ ಸಮಯ ಬರಲಿದೆ..
ನನ್ನ ಈ ಲೇಖನ ಓದಿ ಇಷ್ಟ ವಾದರೆ ಕಮಂಟ್ ಬಾಕ್ಸ್ ನಲ್ಲಿ ಅಭಿಪ್ರಾಯ ತಿಳಿಸಿ!!!
✒️MUSTHAFA HASAN ALIKHAN ALQADRI

Comments

Popular Posts