MUSTHAFA HASAN ALQADRI OFFICIAL : 08/15/20

Translate

Saturday, August 15, 2020

ಇವರನ್ನು ಅವಮಾನಿಸಿದರೆ ಮಾನವ ಸಮೂಹ ಕ್ಷಮಿಸದು-Humans are not forgiven if they are insulted



✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ

1957ರಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಅಣ್ಣಾ ದೊರೈ ಯವರು ಒಂದು ದೀರ್ಘ ಭಾಷಣ ಮಾಡುತ್ತಾ ಪೈಗಂಬರ್ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಬಗ್ಗೆ ಸವಿಸ್ತಾರವಾಗಿ ಮಾತನಾಡುತ್ತಾರೆ.
ಚರಿತ್ರೆಯಲ್ಲಿ ಪೈಗಂಬರರು ಯಾಕೆ ಸರಿಸಾಟಿಯಿಲ್ಲದ ಮೇರು ವ್ಯಕ್ತಿಯಾಗಿ ಗೋಚರಿಸುತ್ತಾರೆ ಎಂದು ವಿವರಿಸುತ್ತಾ ಪೈಗಂಬರರ ತತ್ವ ಸಿದ್ದಾಂತಗಳು ಆರನೇ ಶತಮಾನದಲ್ಲಿ ಯಾವ ರೀತಿ ಪ್ರಸ್ತುತವಾಗಿತ್ತೋ ಅದೇ ರೀತಿ ಹತ್ತೊಂಬತ್ತನೇ ಶತಮಾನದಲ್ಲಿ ಕೂಡಾ ಪ್ರಸ್ತುತ.
ಅನೇಕ ವಿಷಯಗಳಲ್ಲಿ ಅನೇಕ ನಿರ್ಧಾರಗಳನ್ನು ತೆಗೆಯುವಲ್ಲಿ ಜಗತ್ತು ಎಡವುತ್ತಿರುವ ಇಂದಿನ ಯುಗದಲ್ಲಿ
ಆರನೇ ಶತಮಾನದಲ್ಲಿ ಪೈಗಂಬರರು ತೆಗೆದು ಕೊಳ್ಳುತ್ತಿದ್ದ ಹಲವು ನಿರ್ಧಾರಗಳು ಇದಕ್ಕೆಲ್ಲಾ ಪರಿಹಾರವಾಗಿ ಕಂಡು ಬರುತ್ತವೆ.
ಮಾತ್ರವಲ್ಲ ಕತ್ತಲ ಯುಗವೆಂದು ಇತಿಹಾಸಕಾರರಿಂದ ವಿಷ್ಲೇಸಿಸಲ್ಪಟ್ಟ ಯುಗದಲ್ಲಿ ಪೈಗಂಬರ್ ರವರು ತನ್ನ ಮೌನಕ್ರಾಂತಿಯ ಮೂಲಕ ಕೇವಲ 23 ವರ್ಷಗಳ ಅವಧಿಯಲ್ಲಿ ಒಂದು ಉದಾತ್ತ ಸಮೂಹವನ್ನು ಕಟ್ಟಿ ಬೆಳೆಸಿರುವುದು ಚರಿತ್ರೆಯಲ್ಲಿ ಸರಿಸಾಟಿಯಿಲ್ಲದ ಸಂಭವವಾಗಿದೆ.ಅಣ್ಣಾ ದೊರೈಯವರು ಇನ್ನೂ ಅನೇಕ ವಿಚಾರಗಳನ್ನು ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕುರಿತು ತನ್ನ ಭಾಷಣದಲ್ಲಿ ಪ್ರಸ್ತಾಪಿಸಿರುತ್ತಾರೆ.

ಇನ್ನು ಪ್ರಸಿದ್ಧ ಚಿಂತಕ ಡಾ ಮೈಕೆಲ್ ಹೆಚ್ ಹಾರ್ಟ್ ಇತಿಹಾಸದಲ್ಲಿ ಸರಿಸಾಟಿಯಿಲ್ಲದ ನೂರು ಪ್ರಭಾವೀ ನಾಯಕರ ಕುರಿತು ಬರೆದ ದ ಹನ್ಡ್ರಡ್ ಎಂಬ ಪುಸ್ತಕದಲ್ಲಿ ತನ್ನ ನಾಯಕ ಯೇಸು ಕ್ರಿಸ್ತರಿಗಿಂತ ನೂರರಲ್ಲಿ ಮೊದಲ ಸ್ಥಾನ ಪೈಗಂಬರ್ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ನೀಡಿರುತ್ತಾರೆ.
ಮುಂದುವರಿದು ಅವರು ಹೇಳುತ್ತಾರೆ. ಇಲ್ಲಿ ಯೇಸು ಕ್ರಿಸ್ತರಿಗಿಂತ ಪೈಗಂಬರರಿಗೆ ಮೊದಲ ಸ್ಥಾನವನ್ನು ನೀಡಿರುವುದು ಆಶ್ಚರ್ಯಗೊಳಿಸಬಹುದು. ಆದರೆ ನಾನು ಆಯ್ಕೆ ಮಾಡಿದ ನೂರು ನಾಯಕರಲ್ಲಿ ನನಗೆ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ಎದ್ದು ಕಾಣುವುದು ಪೈಗಂಬರ್ ರಾಗಿರುತ್ತಾರೆ.ಯಾಕೆಂದರೆ ಪೈಗಂಬರರ ಕ್ರಾಂತಿಯ ಮುಂದೆ ಯಾವುದೇ ನಾಯಕನ ಕ್ರಾಂತಿಯು ಸರಿಸಮಾನವಾಗಿ ಗೋಚರಿಸುವುದೇ ಇಲ್ಲ.

he list of the world's most influential persons may surprise some readers and may be questioned by others, but he was the only man in history who was supremely successful on both the religious and secular level.
Michael H. Hart, The 100: A Ranking of the Most Influential Persons in History

ಇದೇ ರೀತಿ ಮುಹಮ್ಮದ್ ಎಂಬ ತನ್ನ ಹೆಸರೇ ಸೂಚಿಸುವಂತೆ ಸರ್ವರಿಂದಲೂ ಪ್ರಶಂಸಿಸಲ್ಪಟ್ಟ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮಹಾಮಾನವತಾವಾದಿ ಯಾಗಿದ್ದರೆಂಬುದಕ್ಕೆ ಹೆಚ್ಚು ಪುರಾವೆಗಳ ಅಗತ್ಯವಿದೆಯೆಂದು ತೊಚುವುದಿಲ್ಲ.
ಸತ್ಯವನ್ನು ಹೇಳಿದನೆಂಬ ಏಕೈಕ ಕಾರಣಕ್ಕೆ ತನ್ನನ್ನು ಅತಿಯಾಗಿ ವಿರೋಧಿಸಿ ನೀಡಬಾರದ ಎಲ್ಲಾ ಕಿರುಕುಳವನ್ನು ನೀಡಿ ತನ್ನ ಶರೀರದಿಂದ ರಕ್ತ ದಾರೆದಾರೆಯಾಗಿ ಸುರಿಯುತ್ತಿರುವಾಗಲೂ ದೇವದೂತರು ಬಂದು ಕೇಳಿದರು.ಆ ಕಾಣುವ ಪರ್ವತಗಳನ್ನು ಆ ಅಕ್ರಮಿಗಳ ಮೇಲೆ ಸರಿಸಿ ಅವರನ್ನು ನಾಶ ಮಾಡಲಿಯಾ.
ಪ್ರವಾದಿವರ್ಯರಿಂದ ಬಂದ ಉತ್ತರ. ಬೇಡ. ನನಗೆ ಬೇಕಾಗಿರುವುದು ನನ್ನ ಮೇಲೆ ನಡೆದ ಹಿಂಸೆಗೆ ಪ್ರತಿ ಹಿಂಸೆಯಲ್ಲ.ಅಕ್ರಮಗಳಿಗೆ ಪ್ರತೀಕಾರವೂ ಅಲ್ಲ.
ನನಗೆ ಬೇಕಾಗಿರುವುದು ಈ ಮನುಷ್ಯರೆಲ್ಲಾ ಸನ್ಮಾರ್ಗಿಗಳಾಗಿ ತೀರಬೇಕೆಂಬುದು ಮಾತ್ರವಾಗಿದೆ.
ಮನುಷ್ಯ ಕುಲದ ಒಳಿತನ್ನು ಮಾತ್ರ ಸದಾ ಬಯಸಿದ ಅದಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಮಹಾ ಮಾನವ ಪ್ರೇಮಿ ಮಾತ್ರವಲ್ಲ. ಮನುಷ್ಯನಿರಲಿ ಒಂದು ಇರುವೆಯನ್ನೂ ಸಹ ನೋಯಿಸದ ನಿಷ್ಕಳಂಕ ಮನಸ್ಸಿನ ವಕ್ತಾರರಾದ ಈ ಪ್ರವಾದಿವರ್ಯರನ್ನು ನಿಂದಿಸಿದರೆ ನಿಷ್ಪಕ್ಷ ಮನಸ್ಸಿನ ಮಾನವ ಸಮೂಹ ಕ್ಷಮಿಸಲು ಸಾಧ್ಯವಿಲ್ಲ ಖಂಡಿತ.
ಪ್ರವಾದಿಯವರ ಜೀವನ ಚರಿತ್ರೆಯು ತೆರೆದಿಟ್ಟ ಪುಸ್ತಕದಂತೆ ಯಾರಿಗೂ ಯಾವಾಗಲೂ ಅರಿತು ಕೊಳ್ಳಬಹುದು.ಜೀವನದಲ್ಲಿ ಒಂದು ಸುಳ್ಳಲ್ಲ ಸುಳ್ಳು ಎಂದು ಅನುಮಾನ ಬರುವಂತಹ ಮಾತೂ ಆಡದ ಸಂಶುದ್ಧ ಜೀವನವನ್ನು ಸಾಗಿಸಿದ ಮಹತ್ವ್ಯಕ್ತಿತ್ವದ ವಕ್ತಾರರಾಗಿರುತ್ತಾರೆಂದು ಅವರ ಜೀವನ ಚರಿತ್ರೆಗಳನ್ನು ದರ್ಶಿಸುವ ಎಲ್ಲರಿಗೂ ಮನದಟ್ಟಾಗುವ ವಿಷಯವಾಗಿದೆ.
ಆದರೆ ಇದನ್ನೆಲ್ಲಾ ದರ್ಶಿಸಲು ನಿಷ್ಪಕ್ಷಪಾತ ಕಣ್ಣೂ ಮನಸ್ಸೂ ಇರಬೇಕು ತಾನೇ.

ಮೊನ್ನೆ ಡಿ.ಜೆ.ಹಳ್ಳಿಯಲ್ಲಿ ಒಮ್ಮೆಯೂ ನಡೆಯಬಾರದ ಘಟನೆಗಳು ನಡೆದು ಎಲ್ಲರೂ ತಲೆತಗ್ಗಿಸುವಂತೆ ಮಾಡಿದಾಗ ಇದೆಲ್ಲಾ ಬರೆಯಬೇಕೆಂದೆನಿಸಿತು.
ಇದೆಲ್ಲಾ ಯಾವ ಪುರುಷಾರ್ಥ ಸಾಧನೆಗಾಗಿ ನಡೆಯಿತು.ಇದರಲ್ಲಿರುವ ಷಡ್ಯಂತ್ರಗಳೇನಿರ ಬಹುದು.ಯಾವುದೂ ಅರ್ಥವಾಗದ ರಹಸ್ಯಗಳು.
ಡಿ.ಜೆ ಹಳ್ಳಿಯಲ್ಲಿ ನಡೆದ ಅಕ್ರಮ ಚಟುವಟಿಕೆಗಳು ಒಮ್ಮೆಯೂ ಸಮರ್ಥನೀಯವಲ್ಲವಾದರೂ 
ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಆಲೈಹಿ ವಸಲ್ಲಮರಂತಹ ಮಹತ್ವ್ಯಕ್ತಿತ್ವವನ್ನು ಟೀಕಿಸುವವನು ಮುಸಲ್ಮಾನನಾಗಲು ಸಾಧ್ಯವಿಲ್ಲ ತಾನೆ.
ಅದೇ ರೀತಿ ನಿಜವಾದ ಹಿಂದುವೋ ಕ್ರೈಸ್ತನೋ ಇನ್ಯಾವುದೋ ಧರ್ಮದ ಅನುಯಾಯಿಯಾಗಲೂ ಸಾಧ್ಯವಿಲ್ಲ.
ಯಾಕೆಂದರೆ ವ್ಯಾಸ ಮಹರ್ಷಿಗಳ ಭವಿಷ್ಯತ್ ಪುರಾಣ ಸೇರಿದಂತೆ ಹಿಂದೂ ಪುರಾಣಗಳು ಹಾಗೂ 
ಇತರೆಲ್ಲಾ ಧರ್ಮ ಗ್ರಂಥಗಳು,ಧರ್ಮಾಚಾರ್ಯರು ಈ ಮಹಾನು ಭಾವರನ್ನು ಹಾಡಿ ಹೊಗಳಿದ್ದಾರೆ.
ಹೀಗಿರುವಾಗ ಇವರನ್ನು ನಿಂದಿಸುವವನು ಯಾವುದೇ ಧರ್ಮದ ನೈಜ ಅನುಯಾಯಿಯಾಗಿರಲು ಸಾಧ್ಯವೇ ಇಲ್ಲ.

ಆದ್ದರಿಂದಲೇ ಈ ಪ್ರವಾದಿ ವರ್ಯರನ್ನು ಇಡೀ ಮಾನವ ಕುಲವೇ ಗೌರವಿಸುತ್ತದೆ.ಪ್ರೀತಿಸುತ್ತದೆ.

ಅದರಲ್ಲೂ ಮುಸ್ಲಿಮರು ಅವರ ತಂದೆತಾಯಿ,ಸಂತಾನ, ಬಂಧುಬಳಗ ಎಲ್ಲಕ್ಕಿಂತಲೂ ಮಿಗಿಲಾಗಿ ಪ್ರೀತಿಸುತ್ತಾರೆ.
ಪ್ರೀತಿಸಲೇ ಬೇಕು.ಇಲ್ಲ ಪ್ರೀತಿಸದೆ ವಿಶ್ವಾಸ ಪೂರ್ಣವೇ ಅಲ್ಲ.

ಮಾತ್ರವಲ್ಲ ಅವರ ಅವಮಾನವನ್ನು ಮುಸ್ಲಿಮ್ ಮನಸ್ಸುಗಳು ಸಹಿಸಲು ಸಾಧ್ಯವೇ ಇಲ್ಲ.
ಹೀಗಿರುವಾಗ ಮುಸ್ಲಿಮರನ್ನು ಕೆರಳಿಸಲೆಂದೇ ಕೆಲವು ವಿಕೃತ ಮನಸ್ಸಿನ ಮನುಷ್ಯರು ಶ್ರಮಿಸುವಾಗ ಮನುಷ್ಯನ ನೆಮ್ಮದಿ ಕೆಡದಿರಲು, ಅನಿಷ್ಟಗಳು ಸಂಭವಿಸದಿರಲು ಸಂಭಂದಪಟ್ಟ ಅಧಿಕಾರಿಗಳು,ಸರಕಾರಗಳು ಬಹಳ ಎಚ್ಚರಿಕೆಯಿಂದ ಇರುವುದು ಒಳಿತು.ಇದಕ್ಕೆ ಸಂಬಂಧ ಪಟ್ಟ ಎಲ್ಲಾ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಂಡರೆ ಅನಾಹುತಗಳನ್ನು ತಪ್ಪಿಸಬಹುದು.

ಒಂದು ವಿಚಾರವನ್ನು ಎಲ್ಲರೂ ಅರ್ಥೈಸಿ ಕೊಳ್ಳಬೇಕು.ಅದೇನೆಂದರೆ ಇಡೀ ಜಗತ್ತೇ ಅತ್ಯಂತ ಗೌರವದಿಂದ ಕಾಣುವ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಅವಮಾನಿಸಿ ಅದರಿಂದ ಏನಾದರೂ ಲಾಭ ಪಡೆಯ ಬೇಕೆಂದು ಕನಸು ಕಾಣುತ್ತಿದ್ದರೆ ಅದು ಬರೀ ಕನಸಾಗಿಯೇ ಉಳಿಯಲಿದೆಯೇ ಹೊರತು ಪ್ರವಾದಿಯವರ ಕೀರ್ತಿ ದೈನಂದಿನ ಬಾನೆತ್ತರಕ್ಕೆ ಏರುತ್ತಲೇ ಇರುತ್ತದೆ.ಚೆಂಡು ಎಷ್ಟು ಬಲವಾಗಿ ಹೊಡೆಯುತ್ತದೋ ಅಷ್ಟೇ ವೇಗದಲ್ಲಿ ಅದು ಮೇಲೆಕ್ಕೇರುತ್ತದೆ.
ಇತಿಹಾಸದಲ್ಲಿ ಹಿಂದೆಯೂ ಅನೇಕರು ಈ ಚೆಂಡನ್ನು ಹೊಡೆದು ನೋಡಿರುತ್ತಾರೆ.ಆದರೆ ಅವರ ಕೈಗಳು ಸಸ್ತಾಗಿದೆಯೇ ಪ್ರವಾದಿ ವರ್ಯರಿಗೆ ಏನೇನೂ ಸಂಬವಿಸಿಲ್ಲ.ಸಂಭವಿಸುವುದೂ ಇಲ್ಲ.
ಇಂತಹ ಸಂದರ್ಭಗಳಲ್ಲಿ ಮುಸ್ಲಿಮ್ ಸಮಾಜ ಯಾವುದೇ ಕ್ಷಣಿಕ ಉದ್ವೇಗಗಳಿಗೆ ಒಳಗಾಗದೆ ಸ್ವಯಂ ನಿಯಂತ್ರಕರಾಗಿ ಪ್ರಬುದ್ಧತೆಯನ್ನು ಮೆರೆಯಬೇಕು.ಕಾನೂನಿನಲ್ಲಿ ಹೋರಾಟಕ್ಕೆ ಬೇಕಾದಷ್ಟು ದಾರಿಗಳಿವೆ.ಅದನ್ನೆಲ್ಲಾ ಉಪಯೋಗಿಸಿ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಕೊಡಿಸುವ ಅವಕಾಶಗಳಿರುವಾಗ ಕಾನೂನು  ಕೈಗೆತ್ತಿಕೊಂಡು ಇಂತಹ ವರ್ತನೆಗಳು ಯಾವತ್ತೂ ಸಂಭವಿಸದಂತೆ ಅತ್ಯಂತ ಜಾಗೃತೆಯಿಂದ ಹೆಜ್ಜೆಯಿಡ ಬೇಕಾಗಿದೆ.

ಇನ್ನು ಸರ್ಕಾರಗಳಿಗೆ ಇಲ್ಲಿನ ಶಾಂತಿ ಸಮಾಧಾನ ಬಯಸುವ ನಿಷ್ಕಳಂಕ ಕಾಳಜಿಯಿರುವುದಾದರೆ ಇಂತಹ ವಿಷಯಗಳಲ್ಲಿ ಬಹಳ ಮುನ್ನೆಚ್ಚರಿಕೆ ವಹಿಸಲೇ ಬೇಕು.
ವಿವಿಧ ಸಂಸ್ಕೃತಿಯ ಬೀಡಾಗಿರುವ ಈ ನಾಡಿನಲ್ಲಿ ಯಾರೂ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲೇಬೇಕು.
ಇದು ಸ್ವಸ್ತ ನಾಡಿನ ನಿರ್ಮಾಣಕ್ಕೆ ಅನಿವಾರ್ಯವಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...