Skip to main content

Featured

ಹಜ್ಜ್ ಅಂದರೆ ಏನು ತಪ್ಪದೇ ಓದಿ

ಹಜ್ ಕರ್ಮ ಎಂಬುವುದು ಇಸ್ಲಾಮಿನ ಐದು ಆಧಾರ ಸ್ತಂಭ ಗಳಲ್ಲಿ ಒಂದಾಗಿದೆ  ಅದನ್ನು ತನು ಮನ ಧನ ಗಳಿಂದ ಸಾಮರ್ಥ್ಯವಿರುವವರಿಗೆ ಮಾತ್ರ  ನಿರ್ವಹಿಸುವುದು ಅನಿವಾರ್ಯವಾಗಿದೆ,  ನಬಿ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಒಮ್ಮೆ ಮಾತ್ರ ಹಜ್ ಮಾಡಿದ್ದು ಎಂಬ ವಿಷಯ ಸತ್ಯವಲ್ಲದಿರುವುದು ದೃಢವಾಗಿದೆ, ಹಜ್ ಬಗ್ಗೆ ನಬಿಯನ್ನು ಕುರಿತು ಹಲವು ಸರಿಯಾದ ಹದೀಥ್‌ಗಳನ್ನು ದಾಖಲಿಸಲಾಗಿದೆ, ಈ ಲೇಖನದಲ್ಲಿ ನಾವು ನಬಿಯವರಿಂದ ಸತ್ಯವೆಂದು ಹೇಳಲ್ಪಟ್ಟ ಹಜ್ ಕುರಿತು ಕೆಲವು ಹದೀಥ್‌ಗಳನ್ನು ಉಲ್ಲೇಖಿಸುತ್ತೇವೆ. ಹಜ್ ಎಂಬುವದು ಭಾಷೆಯಲ್ಲಿಚ್ಛೆಯನ್ನು ಸೂಚಿಸುವದ್ದಾಗಿ ವ್ಯಾಖ್ಯಾನಿಸಲಾಗಿದೆ, ಹಜ್ಜು, ಹಜ್ಜು ಮಾಡುವುದೇ ಎಂದರೆ ಅದನ್ನು ಆಶಿಸುವುದು, ಮತ್ತು ಯಾರನ್ನಾದರೂ ಹಜ್ಜು ಮಾಡಿದೆ ಎಂದರೆ ಅವನನ್ನು ಆಶಿಸಲಾಗಿದೆ ಎಂದು ಅರ್ಥ. ಮಹಜ್ಜೂಜ್ ವ್ಯಕ್ತಿ' ಎಂದರೆ  ಆಶಿಸಿದ ವ್ಯಕ್ತಿ, ಹಾಗೂ ಹಜ್ ಎಂದರೆ ಮಹತ್ತಾದ ಆಶೆ ಎಂದು ಹೇಳಲಾಗಿದೆ. ಶರಿಯಾ ದಲ್ಲಿ ಹಜ್ ಅನ್ನು ಹೀಗೆ ವ್ಯಾಖ್ಯಾನಿಸಲಾಗಿದೆ: ಮುಸ್ಲಿಂನು ಬೇರೆ ಬೇರೆ ಸ್ಥಳಗಳಿಗೆ, ವಿಶೇಷವಾಗಿ  (ಹರಾಮ್) ಮತ್ತು ಆರಫಾ ಕಡೆಗೆ, ನಿರ್ದಿಷ್ಟ ಸಮಯದಲ್ಲಿ ಹೋಗಿ ನಿರ್ದಿಷ್ಟ ಕೆಲಸಗಳನ್ನು ಮಾಡುವುದು; ಉದಾಹರಣೆಗೆ ಆರಫಾರಲ್ಲಿ ನಿಲ್ಲುವುದು, ತವಾಫ್ ಮತ್ತು ಸಾಮಾನ್ಯವಾಗಿ ಉಲಮಾ ಗಳ ಅಭಿಪ್ರಾಯದ ಪ್ರಕಾರ ಸೈ ಎಂಬ ಕ್ರಿಯೆಗಳನ್ನು(ಅಂದರೆ ಸಫಾ ಮತ್ತು ಮರ್ವಾ ಎಂಬ ಎರಡು ಪರ್ವತ ಗಳ ಮಧ್ಯೆ ನಡೆಯುವುದು)...

ನೆರೆ ಮನೆಯವರ ಸಂಬಂಧಿಗಳ ಹಕ್ಕು ಬಾದ್ಯತೆ ಗಳನ್ನು ಮರೆಯದಿರಿ-The Rights of Relatives and Neighbors

ನಮ್ಮ ಸಮಾಜದಲ್ಲಿ ಕೆಲವರ ಅಭಿಪ್ರಾಯ ಹೀಗಿರುತ್ತದೆ  ನಾನು ಅಲ್ಲಾಹನ ಸ್ರಷ್ಟಿಗಳ ಸಹಾಯ ಮಾಡುತ್ತಿದ್ದೇನೆ ಅವರ ಕಷ್ಟ ಸುಖಗಳಲ್ಲಿ ನಾನು ಎಡೆ ಇಲ್ಲದೆ ಕಾರ್ಯ ನಿರತ ನಾಗಿದ್ದೇನೆ ನಾನು ಹಜ್ ಕರ್ಮ ಕೂಡ ನಿರ್ವಹಿಸಲಿಲ್ಲ ಅದರ ಹಣವನ್ನು ಬಡವರಿಗೆ ಧಾನ ಮಾಡಿದೆನು. ಜನರ ಮಧ್ಯೆ ಪ್ರಚಾರ ಮಾಡುತ್ತಾರೆ ಏನೆಂದರೆ ಕುರ್ಬಾನಿ ಮಾಡುವ ಹಣ ಕೂಡ ಬಡವರಿಗೆ ನೀಡಿದರೆ ಬಡವರಿಗೆ ನೆರವಾಗ ಬಹುದು ಅವರು ಜನರಿಗೆ ಸಹಾಯ ಮಾಡುವ ಭರದಲ್ಲಿ  ಇಸ್ಲಾಮಿನ ಸ್ಥಂಭ ಗಳನ್ನು   ಶರೀಅತಿನ ನಿಯಮ ವನ್ನು  ಅವಹೇಳಿ ಸುವರು. ಅಲ್ಲಾಹನ ಆರಾದನೆ ಯಲ್ಲಿ ತೊಡಗಿ ಕೊಂಡವರಿಗೆ ತನ್ನ ನೆರೆ ಹೊರೆಯವರನ್ನು ನೋಡುವ ಅವಕಾಶ ಕೂಡ ದೊರಕುವುದಿಲ್ಲ ನಿಮಗೆ ತಿಳಿದಿದೆಯೇ ಅಲ್ಲಾಹನು ಒಂದು ಗ್ರಾಮ  ವನ್ನು ನಾಶ ಮಾಡಲು ಇಚ್ಚಿಸಿದಾಗ ಆವಾಗ ಮಲಕ್ ಗಳೊಡನೆ  ಹೇಳಲಾಯಿತು ಈ ಗ್ರಾಮದಲ್ಲಿ ಒಬ್ಬ ನನ್ನ ಆರಾಧಕ ಇದ್ದಾನೆ ಪ್ರತಿ ಸಮಯದಲ್ಲಿಯೂ ಅವನು ನನಗೆ    ಸಾಷ್ಟಾಂಗ ದಲ್ಲಿ  ಕಳೆಯುವವನಾಗಿದ್ದಾನೆ ಅಲ್ಲಾಹು ಹೇಳುತ್ತಾನೆ  ಅವನ ನೆರೆ ಮನೆಯ ರಲ್ಲಿ  ನನ್ನ ದಾಸರು ಕಷ್ಟ ಗಳಿಂದ ಜೀವಿಸುತ್ತಿರುವಾಗ ಅವರ ಕಡೆ ತಿರುಗಿ ಕೂಡ ನೋಡದೆ ಇವನಿಗೆ ಕಿಂಚಿತ್ತೂ ಅವರ ಬಗ್ಗೆ ಕಾಳಜಿ ಇಲ್ಲದೇ ಬರೇ ಆರಾಧನೆ ಯಲ್ಲಿಯೇ ಜೀವಿಸುತ್ತಾನೆ ಆವಾಗ ಅಲ್ಲಾಹನು ಹೇಳುತ್ತಾನೆ  ಆ ಗ್ರಾಮ ಸಮೇತ ಇವನನ್ನು ಕೂಡ  ನಾಶ ಗೊಳಿಸಿರಿ ಎಂದು ಮಲಕ್ ಗಳಿಗೆ ಆಜ್ಞೆ ನೀಡುವನು ಅಲ್ಲಾಹನಿಗೆ ಆರಾಧನೆ ಯಲ್ಲಿ ಮಗ್ನರಾದರೆ ತನ್ನ ನೆರೆ ಮನೆಯವರನ್ನು ಕೂಡ ವಿಚಾರಿಸಿರಿ ಪ್ರವಾದಿ ಮುಹಮ್ಮದ್ ಮುಸ್ತಫಾ صلي الله عليه وسلم  ರವರ ಪ್ರೀತಿಯಲ್ಲಿ ಅವರ ಅನುಯಾಯಿಗಳು ಹಲವು ತರಹದ ಪ್ರೀತಿಯನ್ನು ಪ್ರಕಟಿಸುತ್ತಿದ್ದರು ಅವರು ವುಲೂ (ಅಂಗಶುದ್ದಿ)ಮಾಡಿದ ನೀರನ್ನು ಕೂಡ ಬರ್ಕತ್ ಗಾಗಿ ಸೂಕ್ಷಿಸುತ್ತಿದ್ದರು ಆವಾಗ ಪ್ರವಾದಿ ಕೇಳಿದರು ನಿಮಗೆ ಹೀಗೆ ಮಾಡಲು ಯಾರು ಕಲ್ಪಿಸಿದರು ಆವಾಗ ಅನುಯಾಯಿಗಳು ಹೇಳುವರು ಓ ಪ್ರವಾದಿ ಯವರೆ  ಇದು ನಮ್ಮ ನಿಮ್ಮ ಮೇಲಿರುವ ಪ್ರೀತಿಯ ಸಂಕೇತ ವಾಗಿದೆ ಎಂದು. ಆದರೆ ಪ್ರವಾದಿ ಯವರು ಅದನ್ನು ನಿಶೇದಿಸಲಿಲ್ಲ      ಆವಾಗ ಪ್ರವಾದಿ ಯವರು ಹೇಳುತ್ತಾರೆ ನಿಮ್ಮಲ್ಲಿ ಯಾರಾದರೂ ಅಲ್ಲಾಹು ಮತ್ತು ಅವನ ರಸೂಲರನ್ನು ಪ್ರೀತಿಸಲು ಯೋಚಿಸಿದರೆ ಮತ್ತು ಅಲ್ಲಾಹು ಹಾಗು ಅವನ ರಸೂಲ್ ಅವರನ್ನು ಪ್ರೀತಿಸ ಬೇಕೆಂದರೆ ನೆರೆ ಮನೆಯವರ ಹಕ್ಕು ಬಾದ್ಯತೆ ಗಳನ್ನು ಪೂರೈಸಿರಿ ನಿಮ್ಮ ಮನೆಯಲ್ಲಿ ಪ್ರವಾದಿ ಯವರ ಗುಣಗಾನ ನಡೆಸಲಾಗುತ್ತದೆ ಆದರೆ ನೆರೆ   ಮನೆಯವನ ಮನೆಯಲ್ಲಿ ಕತ್ತಲೆ ಯಾಗಿದ್ದರೆ ನೀವು ಈ ವರ್ಷ ಸಮಾರಂಭ ಮಾಡಲಾಗದೆ ನೆರೆ ಮನೆಯವರ ವಿದ್ಯುತ್ ಬಿಲ್ ನೀವು ಪಾವತಿಸಿದರೆ ರಸೂಲರು ನಿಮ್ಮಿಂದ ಬಹಳ ಸಂತೋಷ ಪಡುವರು  ಆದರಿಂದ ಜೀವನದ   ಎರಡೂ   ಬಾಗ ವನ್ನು ಸಮಾನ ವಾಗಿರಿಸಿ ಬರೇ ಆರಾಧನೆಯ ನೆಪದಲ್ಲಿ ನೀವು ನೆರೆ ಮನೆಯವರ ಸಂಬಂಧಿಗಳ ಹಕ್ಕು ಬಾದ್ಯತೆ ಗಳನ್ನು ಮರೆಯದಿರಿ ಅಥವಾ ಜನರ ಸಹಾಯದ ಹೆಸರಿನಲ್ಲಿ ಶರೀಅತಿನ ನಿಯಮ ಗಳನ್ನು ಹಿಯಾಳಿಸಿರಿ )

وَكَذَٰلِكَ جَعَلْنَاكُمْ أُمَّةً وَسَطًا 
ನಿಮ್ಮನ್ನು ನಾವು ಒಂದು ಮಧ್ಯಮ ಸಮುದಾಯವಾಗಿಸಿದ್ದೇವೆ)
ನೀವು ನಿಮ್ಮ ಜೀವನವನ್ನು ಮಧ್ಯಮ ವರ್ಗದಲ್ಲಿಡಿ 
ನಿಮ್ಮ ಜೀವನದಲ್ಲಿ ಬರುವ ಕಷ್ಟಗಳಿಗೆ ಅಲ್ಲಾಹು ಸ್ಪಂದಿಸುವನ
ISLAMIC KANNADA

Comments

Popular Posts