Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ನೆರೆ ಮನೆಯವರ ಸಂಬಂಧಿಗಳ ಹಕ್ಕು ಬಾದ್ಯತೆ ಗಳನ್ನು ಮರೆಯದಿರಿ-The Rights of Relatives and Neighbors

ನಮ್ಮ ಸಮಾಜದಲ್ಲಿ ಕೆಲವರ ಅಭಿಪ್ರಾಯ ಹೀಗಿರುತ್ತದೆ  ನಾನು ಅಲ್ಲಾಹನ ಸ್ರಷ್ಟಿಗಳ ಸಹಾಯ ಮಾಡುತ್ತಿದ್ದೇನೆ ಅವರ ಕಷ್ಟ ಸುಖಗಳಲ್ಲಿ ನಾನು ಎಡೆ ಇಲ್ಲದೆ ಕಾರ್ಯ ನಿರತ ನಾಗಿದ್ದೇನೆ ನಾನು ಹಜ್ ಕರ್ಮ ಕೂಡ ನಿರ್ವಹಿಸಲಿಲ್ಲ ಅದರ ಹಣವನ್ನು ಬಡವರಿಗೆ ಧಾನ ಮಾಡಿದೆನು. ಜನರ ಮಧ್ಯೆ ಪ್ರಚಾರ ಮಾಡುತ್ತಾರೆ ಏನೆಂದರೆ ಕುರ್ಬಾನಿ ಮಾಡುವ ಹಣ ಕೂಡ ಬಡವರಿಗೆ ನೀಡಿದರೆ ಬಡವರಿಗೆ ನೆರವಾಗ ಬಹುದು ಅವರು ಜನರಿಗೆ ಸಹಾಯ ಮಾಡುವ ಭರದಲ್ಲಿ  ಇಸ್ಲಾಮಿನ ಸ್ಥಂಭ ಗಳನ್ನು   ಶರೀಅತಿನ ನಿಯಮ ವನ್ನು  ಅವಹೇಳಿ ಸುವರು. ಅಲ್ಲಾಹನ ಆರಾದನೆ ಯಲ್ಲಿ ತೊಡಗಿ ಕೊಂಡವರಿಗೆ ತನ್ನ ನೆರೆ ಹೊರೆಯವರನ್ನು ನೋಡುವ ಅವಕಾಶ ಕೂಡ ದೊರಕುವುದಿಲ್ಲ ನಿಮಗೆ ತಿಳಿದಿದೆಯೇ ಅಲ್ಲಾಹನು ಒಂದು ಗ್ರಾಮ  ವನ್ನು ನಾಶ ಮಾಡಲು ಇಚ್ಚಿಸಿದಾಗ ಆವಾಗ ಮಲಕ್ ಗಳೊಡನೆ  ಹೇಳಲಾಯಿತು ಈ ಗ್ರಾಮದಲ್ಲಿ ಒಬ್ಬ ನನ್ನ ಆರಾಧಕ ಇದ್ದಾನೆ ಪ್ರತಿ ಸಮಯದಲ್ಲಿಯೂ ಅವನು ನನಗೆ    ಸಾಷ್ಟಾಂಗ ದಲ್ಲಿ  ಕಳೆಯುವವನಾಗಿದ್ದಾನೆ ಅಲ್ಲಾಹು ಹೇಳುತ್ತಾನೆ  ಅವನ ನೆರೆ ಮನೆಯ ರಲ್ಲಿ  ನನ್ನ ದಾಸರು ಕಷ್ಟ ಗಳಿಂದ ಜೀವಿಸುತ್ತಿರುವಾಗ ಅವರ ಕಡೆ ತಿರುಗಿ ಕೂಡ ನೋಡದೆ ಇವನಿಗೆ ಕಿಂಚಿತ್ತೂ ಅವರ ಬಗ್ಗೆ ಕಾಳಜಿ ಇಲ್ಲದೇ ಬರೇ ಆರಾಧನೆ ಯಲ್ಲಿಯೇ ಜೀವಿಸುತ್ತಾನೆ ಆವಾಗ ಅಲ್ಲಾಹನು ಹೇಳುತ್ತಾನೆ  ಆ ಗ್ರಾಮ ಸಮೇತ ಇವನನ್ನು ಕೂಡ  ನಾಶ ಗೊಳಿಸಿರಿ ಎಂದು ಮಲಕ್ ಗಳಿಗೆ ಆಜ್ಞೆ ನೀಡುವನು ಅಲ್ಲಾಹನಿಗೆ ಆರಾಧನೆ ಯಲ್ಲಿ ಮಗ್ನರಾದರೆ ತನ್ನ ನೆರೆ ಮನೆಯವರನ್ನು ಕೂಡ ವಿಚಾರಿಸಿರಿ ಪ್ರವಾದಿ ಮುಹಮ್ಮದ್ ಮುಸ್ತಫಾ صلي الله عليه وسلم  ರವರ ಪ್ರೀತಿಯಲ್ಲಿ ಅವರ ಅನುಯಾಯಿಗಳು ಹಲವು ತರಹದ ಪ್ರೀತಿಯನ್ನು ಪ್ರಕಟಿಸುತ್ತಿದ್ದರು ಅವರು ವುಲೂ (ಅಂಗಶುದ್ದಿ)ಮಾಡಿದ ನೀರನ್ನು ಕೂಡ ಬರ್ಕತ್ ಗಾಗಿ ಸೂಕ್ಷಿಸುತ್ತಿದ್ದರು ಆವಾಗ ಪ್ರವಾದಿ ಕೇಳಿದರು ನಿಮಗೆ ಹೀಗೆ ಮಾಡಲು ಯಾರು ಕಲ್ಪಿಸಿದರು ಆವಾಗ ಅನುಯಾಯಿಗಳು ಹೇಳುವರು ಓ ಪ್ರವಾದಿ ಯವರೆ  ಇದು ನಮ್ಮ ನಿಮ್ಮ ಮೇಲಿರುವ ಪ್ರೀತಿಯ ಸಂಕೇತ ವಾಗಿದೆ ಎಂದು. ಆದರೆ ಪ್ರವಾದಿ ಯವರು ಅದನ್ನು ನಿಶೇದಿಸಲಿಲ್ಲ      ಆವಾಗ ಪ್ರವಾದಿ ಯವರು ಹೇಳುತ್ತಾರೆ ನಿಮ್ಮಲ್ಲಿ ಯಾರಾದರೂ ಅಲ್ಲಾಹು ಮತ್ತು ಅವನ ರಸೂಲರನ್ನು ಪ್ರೀತಿಸಲು ಯೋಚಿಸಿದರೆ ಮತ್ತು ಅಲ್ಲಾಹು ಹಾಗು ಅವನ ರಸೂಲ್ ಅವರನ್ನು ಪ್ರೀತಿಸ ಬೇಕೆಂದರೆ ನೆರೆ ಮನೆಯವರ ಹಕ್ಕು ಬಾದ್ಯತೆ ಗಳನ್ನು ಪೂರೈಸಿರಿ ನಿಮ್ಮ ಮನೆಯಲ್ಲಿ ಪ್ರವಾದಿ ಯವರ ಗುಣಗಾನ ನಡೆಸಲಾಗುತ್ತದೆ ಆದರೆ ನೆರೆ   ಮನೆಯವನ ಮನೆಯಲ್ಲಿ ಕತ್ತಲೆ ಯಾಗಿದ್ದರೆ ನೀವು ಈ ವರ್ಷ ಸಮಾರಂಭ ಮಾಡಲಾಗದೆ ನೆರೆ ಮನೆಯವರ ವಿದ್ಯುತ್ ಬಿಲ್ ನೀವು ಪಾವತಿಸಿದರೆ ರಸೂಲರು ನಿಮ್ಮಿಂದ ಬಹಳ ಸಂತೋಷ ಪಡುವರು  ಆದರಿಂದ ಜೀವನದ   ಎರಡೂ   ಬಾಗ ವನ್ನು ಸಮಾನ ವಾಗಿರಿಸಿ ಬರೇ ಆರಾಧನೆಯ ನೆಪದಲ್ಲಿ ನೀವು ನೆರೆ ಮನೆಯವರ ಸಂಬಂಧಿಗಳ ಹಕ್ಕು ಬಾದ್ಯತೆ ಗಳನ್ನು ಮರೆಯದಿರಿ ಅಥವಾ ಜನರ ಸಹಾಯದ ಹೆಸರಿನಲ್ಲಿ ಶರೀಅತಿನ ನಿಯಮ ಗಳನ್ನು ಹಿಯಾಳಿಸಿರಿ )

وَكَذَٰلِكَ جَعَلْنَاكُمْ أُمَّةً وَسَطًا 
ನಿಮ್ಮನ್ನು ನಾವು ಒಂದು ಮಧ್ಯಮ ಸಮುದಾಯವಾಗಿಸಿದ್ದೇವೆ)
ನೀವು ನಿಮ್ಮ ಜೀವನವನ್ನು ಮಧ್ಯಮ ವರ್ಗದಲ್ಲಿಡಿ 
ನಿಮ್ಮ ಜೀವನದಲ್ಲಿ ಬರುವ ಕಷ್ಟಗಳಿಗೆ ಅಲ್ಲಾಹು ಸ್ಪಂದಿಸುವನ
ISLAMIC KANNADA

Comments

Popular Posts