Skip to main content

Featured

ಹಜ್ಜ್ ಅಂದರೆ ಏನು ತಪ್ಪದೇ ಓದಿ

ಹಜ್ ಕರ್ಮ ಎಂಬುವುದು ಇಸ್ಲಾಮಿನ ಐದು ಆಧಾರ ಸ್ತಂಭ ಗಳಲ್ಲಿ ಒಂದಾಗಿದೆ  ಅದನ್ನು ತನು ಮನ ಧನ ಗಳಿಂದ ಸಾಮರ್ಥ್ಯವಿರುವವರಿಗೆ ಮಾತ್ರ  ನಿರ್ವಹಿಸುವುದು ಅನಿವಾರ್ಯವಾಗಿದೆ,  ನಬಿ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಒಮ್ಮೆ ಮಾತ್ರ ಹಜ್ ಮಾಡಿದ್ದು ಎಂಬ ವಿಷಯ ಸತ್ಯವಲ್ಲದಿರುವುದು ದೃಢವಾಗಿದೆ, ಹಜ್ ಬಗ್ಗೆ ನಬಿಯನ್ನು ಕುರಿತು ಹಲವು ಸರಿಯಾದ ಹದೀಥ್‌ಗಳನ್ನು ದಾಖಲಿಸಲಾಗಿದೆ, ಈ ಲೇಖನದಲ್ಲಿ ನಾವು ನಬಿಯವರಿಂದ ಸತ್ಯವೆಂದು ಹೇಳಲ್ಪಟ್ಟ ಹಜ್ ಕುರಿತು ಕೆಲವು ಹದೀಥ್‌ಗಳನ್ನು ಉಲ್ಲೇಖಿಸುತ್ತೇವೆ. ಹಜ್ ಎಂಬುವದು ಭಾಷೆಯಲ್ಲಿಚ್ಛೆಯನ್ನು ಸೂಚಿಸುವದ್ದಾಗಿ ವ್ಯಾಖ್ಯಾನಿಸಲಾಗಿದೆ, ಹಜ್ಜು, ಹಜ್ಜು ಮಾಡುವುದೇ ಎಂದರೆ ಅದನ್ನು ಆಶಿಸುವುದು, ಮತ್ತು ಯಾರನ್ನಾದರೂ ಹಜ್ಜು ಮಾಡಿದೆ ಎಂದರೆ ಅವನನ್ನು ಆಶಿಸಲಾಗಿದೆ ಎಂದು ಅರ್ಥ. ಮಹಜ್ಜೂಜ್ ವ್ಯಕ್ತಿ' ಎಂದರೆ  ಆಶಿಸಿದ ವ್ಯಕ್ತಿ, ಹಾಗೂ ಹಜ್ ಎಂದರೆ ಮಹತ್ತಾದ ಆಶೆ ಎಂದು ಹೇಳಲಾಗಿದೆ. ಶರಿಯಾ ದಲ್ಲಿ ಹಜ್ ಅನ್ನು ಹೀಗೆ ವ್ಯಾಖ್ಯಾನಿಸಲಾಗಿದೆ: ಮುಸ್ಲಿಂನು ಬೇರೆ ಬೇರೆ ಸ್ಥಳಗಳಿಗೆ, ವಿಶೇಷವಾಗಿ  (ಹರಾಮ್) ಮತ್ತು ಆರಫಾ ಕಡೆಗೆ, ನಿರ್ದಿಷ್ಟ ಸಮಯದಲ್ಲಿ ಹೋಗಿ ನಿರ್ದಿಷ್ಟ ಕೆಲಸಗಳನ್ನು ಮಾಡುವುದು; ಉದಾಹರಣೆಗೆ ಆರಫಾರಲ್ಲಿ ನಿಲ್ಲುವುದು, ತವಾಫ್ ಮತ್ತು ಸಾಮಾನ್ಯವಾಗಿ ಉಲಮಾ ಗಳ ಅಭಿಪ್ರಾಯದ ಪ್ರಕಾರ ಸೈ ಎಂಬ ಕ್ರಿಯೆಗಳನ್ನು(ಅಂದರೆ ಸಫಾ ಮತ್ತು ಮರ್ವಾ ಎಂಬ ಎರಡು ಪರ್ವತ ಗಳ ಮಧ್ಯೆ ನಡೆಯುವುದು)...

ಅಸೂಯೆಯಿಂದ ಬಸ್ಮವಾಗ ಬೇಡ ಮನುಜ-Don't be jealous

ದ್ವೇಷ ಅಹಂಕಾರ ಅಸೂಯೆ  ಯಿಂದ ನಮ್ಮ ಹ್ರದಯ ಶುದ್ಧ ವಾದರೆ ಈ ಹ್ರದಯದಲ್ಲಿ ಸಾಹೋದರ್ಯದ ಸೌಂದರ್ಯ ಕಾಣುತ್ತದೆ ಆದರೆ ನಾವು ಹ್ರದಯದ ಕಣ್ಣನ್ನು ಹಾಳುಮಾಡಿದೆವು ಬೆಳಗ್ಗಿನಿಂದ ಸಂಜೆಯವರೆಗೆ ಎಂತಹಾ ಅಸೂಯೆ ಗಳನ್ನು ಹೊತ್ತು ತಿರುಗಾಡುತ್ತೇವೆ ನಮ್ಮ ಶಿಷ್ಟಾಚಾರ ವಿಭಿನ್ನ ನಮ್ಮ ಕುಟುಂಬ ವಿಭಿನ್ನ ಜನರೊಂದಿಗೆ ದ್ವೇಷದ ಲೋಕವನ್ನು ಸ್ರಷ್ಟಿಸಿ ಜೀವಿಸುತ್ತಿದ್ದೇವೆ ನಾವು ನಮ್ಮ  ಜೀವನದಲ್ಲಿ ಕಹಿ ಯನ್ನು ಧಾರಾಳವಾಗಿ ಶೇಕರಿಸಿ ಇಟ್ಟಿದ್ದೇವೆ ಆ ಕಹಿ ಮೊದಲು ನಮ್ಮ ಜೀವನ ವನ್ನೇ ನಾಶ ಮಾಡುತ್ತದೆ ನಮ್ಮ ಜೀವನ ಸುಖವಾಗಿ ಬಾಳಬೇಕೆಂದರೆ ಯಾವ ಸಮಸ್ಯೆಗಳಿಗೆ ಅವಕಾಶ ಇರಬಾರದು ಎಂದಾದರೆ ಮೊಟ್ಟ ಮೊದಲಿಗೆ ನಮ್ಮ ಹ್ರದಯವನ್ನು ಅಸೂಯೆ ಗಳಿಂದ ಶುದ್ದಿ ಕರಿಸ ಬೇಕು ಹ್ರದಯದ ಕನ್ನಡಿಯನ್ನು ಶುದ್ಧ ಮಾಡಬೇಕು ನಮ್ಮ ಆಂತರಿಕ ಲೋಕವನ್ನು ಉತ್ತಮ ಮಾಡಬೇಕು ಮನೆಯಲ್ಲಿ ಶುಚಿತ್ವ ವನ್ನು ಕಾಪಾಡುತ್ತೇವೆ ಆದರೆ ಹ್ರದಯದಲ್ಲಿ ಮಸಿ ಉಳಿಯಲು ಸ್ವೀಕಾರವೇ ಒಬ್ಬ ಸತ್ಯ ವಿಶ್ವಾಸಿಗೆ ನಿಮ್ಮ ಹ್ರದಯದಲ್ಲಿ ಅನುಕಂಪ ಉಂಟಾದರೆ ನೋಡಿ ಅಲ್ಲಾಹನು ನಿಮ್ಮ ಮೇಲೆ ಎಷ್ಟು ಕರುಣಿಯ ನೋಟ ಬೀರುವನು ಹೇಳತೀರದು 
ارحم من في الارض يرحمك من في السماء   
ಭೂಮಿಯಲ್ಲಿ ಇರುವವರಿಗೆ ಕರುಣೆ  ತೋರಿಸಿ ಆಕಾಶದಲ್ಲಿ ಇರುವವರು ನಿಮಗೆ ಕರುಣೆ ತೋರುವನು ಎಂಬ ಮಾತಿಗೆ ನಾವೆಷ್ಟು ಬೆಲೆ ನೀಡುತ್ತಿದ್ದೇವೆ. 
ಮೊಟ್ಟ ಮೊದಲಿಗೆ ನಾವು ನಮ್ಮ ಹ್ರದಯದ ಮನಸ್ಸಿನ ಶುದ್ಧಿಯ ಕೆಲಸ ನಿರ್ವಹಿಸಬೇಕಾಗಿದೆ ನಮ್ಮ ಮನಸ್ಸು ಹ್ರದಯ ಅಸೂಯೆ ಯಿಂದ ಶುದ್ಧವಾದರೆ ನಮ್ಮ ಶರೀರವೂ ಶುದ್ಧ ವಾಗುತ್ತದೆ ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم 
ಹೇಳಿದರು ನಮ್ಮ ಶರೀರದಲ್ಲಿ ಮಾಂಸದ ಒಂದು ತುಂಡು ಇದೆ ಅದು ಸರಿಯಾದರೆ ಎಲ್ಲವೂ ಸರಿಯಾಗುವುದು ಅದು ಹಾಳಾದರೆ ಪೂರ್ಣ ಶರೀರ ಹಾಳಾಗುತ್ತದೆ ಆವಾಗ ಪ್ರವಾದಿ ಯವರು ಹೇಳಿದರು ಕೇಳಿರಿ ಅದು ಹ್ರದಯ ವಾಗಿದೆ ಹ್ರದಯದ ತಿದ್ದುಪಡಿ ಅದು ಶರೀರದ ತಿದ್ದುಪಡಿ ಯಾಗಿದೆ ಹ್ರದಯದ ತಿದ್ದುಪಡಿ ಯಿಂದ ಒಬ್ಬನ ತಿದ್ದುಪಡಿ
ಒಬ್ಬನ ತಿದ್ದುಪಡಿ ಯಿಂದ ಸಮಾಜದ ತಿದ್ದುಪಡಿ ಸಮಾಜದ ತಿದ್ದುಪಡಿ ಯಿಂದ ಒಂದು ಸುಂದರ ವಾದ ಜೀವನದ ಚಿತ್ರಗಳು ಉಕ್ಕಿ ಬರುತ್ತದೆ ಅದೇ ನಮ್ಮ ಉದ್ದೇಶ ವಾಗಿದೆ ಆದರೆ ನಾವು ನಮ್ಮ ಹ್ರದಯವನ್ನು ಅಸೂಯೆಯಿಂದ ಗಟ್ಟಿ ಯಾಗಿಸಿದ್ದೇವೆ ಯಾರಿಗಾದರು ಅಲ್ಲಾಹು ಸಂಪತ್ತು ಗೌರವ ಮತ್ತು ಅಧಿಕಾರ ಅಥವಾ ಒಳ್ಳೆಯ ಸಾಮರ್ಥ್ಯ ನೀಡಿದರೆ ನಾವು ಸುಮ್ಮನೆ ಅವರಿಂದ ಅಸೂಯೆಯ ಬೆಂಕಿಯಲ್ಲಿ ಬಸ್ಮವಾಗುತ್ತೇವೆ. ಆದರಿಂದ ಹ್ರದಯದಲ್ಲಿ ಶುಚಿತ್ವ ವನ್ನು ಕಾಪಾಡಲು ಇಸ್ಲಾಮ್ ನಮಗೆ ಆದೇಶ ನೀಡಿದೆ .
ISLAMIC KANNADA

Comments

Popular Posts