Skip to main content

Featured

ಕಾಸ್ಟಲ್ ಕರ್ನಾಟಕದ ಮುಸ್ಲಿಂ ಸಮುದಾಯದಲ್ಲಿನ ಆತ್ಮಹತ್ಯೆ: ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನ

ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಒಂದು ತೀವ್ರ ಸಾರ್ವಜನಿಕ ಆರೋಗ್ಯದ ಸಮಸ್ಯೆಯಾಗಿಬಿಟ್ಟಿದೆ, ದೈನಂದಿನ ಘಟನಗಳನ್ನು ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ವರದಿ ಮಾಡಲಾಗುತ್ತಿದೆ. ಈ ಸಮಸ್ಯೆ ಬೇರೆ ಬೇರೆ ಸಮುದಾಯಗಳ  ಮೇಲೆ ಪರಿಣಾಮ ಬೀರುತ್ತಿದ್ದರೂ, ಮುಸ್ಲಿಂ ಸಮುದಾಯದ ಒಳಗಿನ ಪರಿಣಾಮವನ್ನು ಅರ್ಥಮಾಡಿಕೊಳ್ಳಲು, ಈ ಪ್ರದೇಶದ ವಿಶಿಷ್ಟ ಸಾಮಾಜಿಕ ವಿನ್ಯಾಸ, ಆರ್ಥಿಕ ಒತ್ತಡಗಳು ಮತ್ತು ಸಾಂಸ್ಕೃತಿಕ ಗುಣಲಕ್ಷಣಗಳನ್ನು ಪರಿಶೀಲಿಸಬೇಕು. ಲಭ್ಯವಿರುವ ವರದಿ  ಪ್ರಕಾರ ಆತ್ಮಹತ್ಯೆ ಡೇಟಾವನ್ನು ವಿಭಜಿಸುತ್ತಿಲ್ಲ, ಆದರೆ ವಿಸ್ತೃತ ಪ್ರದೇಶೀಯ ಪ್ರವೃತ್ತಿಗಳು ಅಡಗಿರುವ ಕಾರಣಗಳನ್ನು ಬೆಳಕಿಗೆಡಿಸುತ್ತವೆ. ಪ್ರದೇಶೀಯ ಸ್ಥಿತಿ: ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣದ ಏರಿಕೆ ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ, ಪ್ರತಿದಿನ ಹಲವು ಘಟನಗಳನ್ನು ಜಿಲ್ಲೆಗಳಾದ್ಯಂತ ವರದಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹಣಕಾಸು ಚಿಂತೆ, ಕುಟುಂಬ ಕಲಹ, ಮಾನಸಿಕ ಆರೋಗ್ಯ ಹೋರಾಟಗಳು ಮತ್ತು ಸಾಮಾಜಿಕ ಕಲಹ ಎದುರಿಸುತ್ತಿರುವ ವ್ಯಕ್ತಿಗಳು ಸೇರಿದ್ದಾರೆ. ಹೆಚ್ಚಿನ ವಿವರಗಳಲ್ಲಿ ಧಾರ್ಮಿಕ ಗುರುತನ್ನು ಅಂದಾಜಿಸಲು ವರದಿಗಳು ನಿರ್ದೇಶಿಸುತ್ತಿಲ್ಲದಿದ್ದರೂ, ಈ ಪ್ರದೇಶದ ಮುಸ್ಲಿಂ ಕುಟುಂಬಗಳು ಒಂದು ಸಮಾನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಹಂಚಿಕೊಂಡಿವೆ—ಮೀನುಧಾನ್ಯ, ಚಿ...

ಅಸೂಯೆಯಿಂದ ಬಸ್ಮವಾಗ ಬೇಡ ಮನುಜ-Don't be jealous

ದ್ವೇಷ ಅಹಂಕಾರ ಅಸೂಯೆ  ಯಿಂದ ನಮ್ಮ ಹ್ರದಯ ಶುದ್ಧ ವಾದರೆ ಈ ಹ್ರದಯದಲ್ಲಿ ಸಾಹೋದರ್ಯದ ಸೌಂದರ್ಯ ಕಾಣುತ್ತದೆ ಆದರೆ ನಾವು ಹ್ರದಯದ ಕಣ್ಣನ್ನು ಹಾಳುಮಾಡಿದೆವು ಬೆಳಗ್ಗಿನಿಂದ ಸಂಜೆಯವರೆಗೆ ಎಂತಹಾ ಅಸೂಯೆ ಗಳನ್ನು ಹೊತ್ತು ತಿರುಗಾಡುತ್ತೇವೆ ನಮ್ಮ ಶಿಷ್ಟಾಚಾರ ವಿಭಿನ್ನ ನಮ್ಮ ಕುಟುಂಬ ವಿಭಿನ್ನ ಜನರೊಂದಿಗೆ ದ್ವೇಷದ ಲೋಕವನ್ನು ಸ್ರಷ್ಟಿಸಿ ಜೀವಿಸುತ್ತಿದ್ದೇವೆ ನಾವು ನಮ್ಮ  ಜೀವನದಲ್ಲಿ ಕಹಿ ಯನ್ನು ಧಾರಾಳವಾಗಿ ಶೇಕರಿಸಿ ಇಟ್ಟಿದ್ದೇವೆ ಆ ಕಹಿ ಮೊದಲು ನಮ್ಮ ಜೀವನ ವನ್ನೇ ನಾಶ ಮಾಡುತ್ತದೆ ನಮ್ಮ ಜೀವನ ಸುಖವಾಗಿ ಬಾಳಬೇಕೆಂದರೆ ಯಾವ ಸಮಸ್ಯೆಗಳಿಗೆ ಅವಕಾಶ ಇರಬಾರದು ಎಂದಾದರೆ ಮೊಟ್ಟ ಮೊದಲಿಗೆ ನಮ್ಮ ಹ್ರದಯವನ್ನು ಅಸೂಯೆ ಗಳಿಂದ ಶುದ್ದಿ ಕರಿಸ ಬೇಕು ಹ್ರದಯದ ಕನ್ನಡಿಯನ್ನು ಶುದ್ಧ ಮಾಡಬೇಕು ನಮ್ಮ ಆಂತರಿಕ ಲೋಕವನ್ನು ಉತ್ತಮ ಮಾಡಬೇಕು ಮನೆಯಲ್ಲಿ ಶುಚಿತ್ವ ವನ್ನು ಕಾಪಾಡುತ್ತೇವೆ ಆದರೆ ಹ್ರದಯದಲ್ಲಿ ಮಸಿ ಉಳಿಯಲು ಸ್ವೀಕಾರವೇ ಒಬ್ಬ ಸತ್ಯ ವಿಶ್ವಾಸಿಗೆ ನಿಮ್ಮ ಹ್ರದಯದಲ್ಲಿ ಅನುಕಂಪ ಉಂಟಾದರೆ ನೋಡಿ ಅಲ್ಲಾಹನು ನಿಮ್ಮ ಮೇಲೆ ಎಷ್ಟು ಕರುಣಿಯ ನೋಟ ಬೀರುವನು ಹೇಳತೀರದು 
ارحم من في الارض يرحمك من في السماء   
ಭೂಮಿಯಲ್ಲಿ ಇರುವವರಿಗೆ ಕರುಣೆ  ತೋರಿಸಿ ಆಕಾಶದಲ್ಲಿ ಇರುವವರು ನಿಮಗೆ ಕರುಣೆ ತೋರುವನು ಎಂಬ ಮಾತಿಗೆ ನಾವೆಷ್ಟು ಬೆಲೆ ನೀಡುತ್ತಿದ್ದೇವೆ. 
ಮೊಟ್ಟ ಮೊದಲಿಗೆ ನಾವು ನಮ್ಮ ಹ್ರದಯದ ಮನಸ್ಸಿನ ಶುದ್ಧಿಯ ಕೆಲಸ ನಿರ್ವಹಿಸಬೇಕಾಗಿದೆ ನಮ್ಮ ಮನಸ್ಸು ಹ್ರದಯ ಅಸೂಯೆ ಯಿಂದ ಶುದ್ಧವಾದರೆ ನಮ್ಮ ಶರೀರವೂ ಶುದ್ಧ ವಾಗುತ್ತದೆ ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم 
ಹೇಳಿದರು ನಮ್ಮ ಶರೀರದಲ್ಲಿ ಮಾಂಸದ ಒಂದು ತುಂಡು ಇದೆ ಅದು ಸರಿಯಾದರೆ ಎಲ್ಲವೂ ಸರಿಯಾಗುವುದು ಅದು ಹಾಳಾದರೆ ಪೂರ್ಣ ಶರೀರ ಹಾಳಾಗುತ್ತದೆ ಆವಾಗ ಪ್ರವಾದಿ ಯವರು ಹೇಳಿದರು ಕೇಳಿರಿ ಅದು ಹ್ರದಯ ವಾಗಿದೆ ಹ್ರದಯದ ತಿದ್ದುಪಡಿ ಅದು ಶರೀರದ ತಿದ್ದುಪಡಿ ಯಾಗಿದೆ ಹ್ರದಯದ ತಿದ್ದುಪಡಿ ಯಿಂದ ಒಬ್ಬನ ತಿದ್ದುಪಡಿ
ಒಬ್ಬನ ತಿದ್ದುಪಡಿ ಯಿಂದ ಸಮಾಜದ ತಿದ್ದುಪಡಿ ಸಮಾಜದ ತಿದ್ದುಪಡಿ ಯಿಂದ ಒಂದು ಸುಂದರ ವಾದ ಜೀವನದ ಚಿತ್ರಗಳು ಉಕ್ಕಿ ಬರುತ್ತದೆ ಅದೇ ನಮ್ಮ ಉದ್ದೇಶ ವಾಗಿದೆ ಆದರೆ ನಾವು ನಮ್ಮ ಹ್ರದಯವನ್ನು ಅಸೂಯೆಯಿಂದ ಗಟ್ಟಿ ಯಾಗಿಸಿದ್ದೇವೆ ಯಾರಿಗಾದರು ಅಲ್ಲಾಹು ಸಂಪತ್ತು ಗೌರವ ಮತ್ತು ಅಧಿಕಾರ ಅಥವಾ ಒಳ್ಳೆಯ ಸಾಮರ್ಥ್ಯ ನೀಡಿದರೆ ನಾವು ಸುಮ್ಮನೆ ಅವರಿಂದ ಅಸೂಯೆಯ ಬೆಂಕಿಯಲ್ಲಿ ಬಸ್ಮವಾಗುತ್ತೇವೆ. ಆದರಿಂದ ಹ್ರದಯದಲ್ಲಿ ಶುಚಿತ್ವ ವನ್ನು ಕಾಪಾಡಲು ಇಸ್ಲಾಮ್ ನಮಗೆ ಆದೇಶ ನೀಡಿದೆ .
ISLAMIC KANNADA

Comments

Popular Posts