Skip to main content

Featured

ಹಜ್ಜ್ ಅಂದರೆ ಏನು ತಪ್ಪದೇ ಓದಿ

ಹಜ್ ಕರ್ಮ ಎಂಬುವುದು ಇಸ್ಲಾಮಿನ ಐದು ಆಧಾರ ಸ್ತಂಭ ಗಳಲ್ಲಿ ಒಂದಾಗಿದೆ  ಅದನ್ನು ತನು ಮನ ಧನ ಗಳಿಂದ ಸಾಮರ್ಥ್ಯವಿರುವವರಿಗೆ ಮಾತ್ರ  ನಿರ್ವಹಿಸುವುದು ಅನಿವಾರ್ಯವಾಗಿದೆ,  ನಬಿ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಒಮ್ಮೆ ಮಾತ್ರ ಹಜ್ ಮಾಡಿದ್ದು ಎಂಬ ವಿಷಯ ಸತ್ಯವಲ್ಲದಿರುವುದು ದೃಢವಾಗಿದೆ, ಹಜ್ ಬಗ್ಗೆ ನಬಿಯನ್ನು ಕುರಿತು ಹಲವು ಸರಿಯಾದ ಹದೀಥ್‌ಗಳನ್ನು ದಾಖಲಿಸಲಾಗಿದೆ, ಈ ಲೇಖನದಲ್ಲಿ ನಾವು ನಬಿಯವರಿಂದ ಸತ್ಯವೆಂದು ಹೇಳಲ್ಪಟ್ಟ ಹಜ್ ಕುರಿತು ಕೆಲವು ಹದೀಥ್‌ಗಳನ್ನು ಉಲ್ಲೇಖಿಸುತ್ತೇವೆ. ಹಜ್ ಎಂಬುವದು ಭಾಷೆಯಲ್ಲಿಚ್ಛೆಯನ್ನು ಸೂಚಿಸುವದ್ದಾಗಿ ವ್ಯಾಖ್ಯಾನಿಸಲಾಗಿದೆ, ಹಜ್ಜು, ಹಜ್ಜು ಮಾಡುವುದೇ ಎಂದರೆ ಅದನ್ನು ಆಶಿಸುವುದು, ಮತ್ತು ಯಾರನ್ನಾದರೂ ಹಜ್ಜು ಮಾಡಿದೆ ಎಂದರೆ ಅವನನ್ನು ಆಶಿಸಲಾಗಿದೆ ಎಂದು ಅರ್ಥ. ಮಹಜ್ಜೂಜ್ ವ್ಯಕ್ತಿ' ಎಂದರೆ  ಆಶಿಸಿದ ವ್ಯಕ್ತಿ, ಹಾಗೂ ಹಜ್ ಎಂದರೆ ಮಹತ್ತಾದ ಆಶೆ ಎಂದು ಹೇಳಲಾಗಿದೆ. ಶರಿಯಾ ದಲ್ಲಿ ಹಜ್ ಅನ್ನು ಹೀಗೆ ವ್ಯಾಖ್ಯಾನಿಸಲಾಗಿದೆ: ಮುಸ್ಲಿಂನು ಬೇರೆ ಬೇರೆ ಸ್ಥಳಗಳಿಗೆ, ವಿಶೇಷವಾಗಿ  (ಹರಾಮ್) ಮತ್ತು ಆರಫಾ ಕಡೆಗೆ, ನಿರ್ದಿಷ್ಟ ಸಮಯದಲ್ಲಿ ಹೋಗಿ ನಿರ್ದಿಷ್ಟ ಕೆಲಸಗಳನ್ನು ಮಾಡುವುದು; ಉದಾಹರಣೆಗೆ ಆರಫಾರಲ್ಲಿ ನಿಲ್ಲುವುದು, ತವಾಫ್ ಮತ್ತು ಸಾಮಾನ್ಯವಾಗಿ ಉಲಮಾ ಗಳ ಅಭಿಪ್ರಾಯದ ಪ್ರಕಾರ ಸೈ ಎಂಬ ಕ್ರಿಯೆಗಳನ್ನು(ಅಂದರೆ ಸಫಾ ಮತ್ತು ಮರ್ವಾ ಎಂಬ ಎರಡು ಪರ್ವತ ಗಳ ಮಧ್ಯೆ ನಡೆಯುವುದು)...

ಕಳ್ಳ ತ್ವರೀಕತ್ ನವರಿಂದ ಸತ್ಯದ ನಿಷೇಧವೆ?

ಒಂದು ವಿಷಯ ನೆನಪಿನಲ್ಲಿಡಬೇಕಾಗಿದೆ ಏನೆಂದರೆ ಅಲ್ಲಾಹು ಎಲ್ಲಾ ಕಾಲ ಘಟ್ಟಗಳಲ್ಲಿ ಪ್ರವಾದಿ ಗಳ ಶುದ್ಧ ಅಸ್ತಿತ್ವ ವನ್ನು ಹಾಗೂ ಅಲ್ಲಾಹನ ಇಷ್ಟ ದಾಸರಾದ ವಲಿಯ್ ಗಳ ಅಸ್ತಿತ್ವವನ್ನು ಕೂಡ ಸ್ರಷ್ಟಿಸಿದ್ದಾನೆ ಲೋಕ ಮಾನವರ ಸನ್ಮಾರ್ಗ ಕ್ಕಾಗಿ ಹಾಗೂ ಮಾರ್ಗದರ್ಶನ ಕ್ಕಾಗಿ ... ಪ್ರತೀ  ಕಾಲಘಟ್ಟಗಳಲ್ಲಿ ಸಜ್ಜನರು  ಅಲ್ಲಾಹನಇಷ್ಟ ದಾಸರಾಗಿ ಜನರ ಹಿತವನ್ನು ಬಯಸುವ ಜನರಿಗೆ ಸತ್ಯ ದರ್ಮದ ಕಡೆಗೆ ಸಂದೇಶ ನೀಡುವ ಜನರು ಹುಟ್ಟಿ ಬರುತ್ತಾ ಇದ್ದಾರೆ ಒಂದು ವಸ್ತುವನ್ನು ಮಳಿಗೆ ಯಲ್ಲಿ ತುಂಬಾ ಬೇಡಿಕೆ  ಇದ್ದರೆ  ಅದರ ನಕಲಿ  ಕೂಡ ಮಾರಾಟ ವಾಗಲು ತಯಾರಾಗುತ್ತಿದೆ ಇದರಿಂದ ಸತ್ಯ ವನ್ನು ನಿಷೇಧಿಸುವ  ಹಾಗಿಲ್ಲ ಇಂದು ಲೋಕದಲ್ಲಿ ಜನರು ತುಂಬಾ ಧೈರ್ಯದಿಂದ ಅವಲಿಯಾಗಳನ್ನು ನಿಷೇದಿಸುತ್ತಾರೆ ಅದರ ಉದಾಹರಣೆ ಯನ್ನು  ಸುಳ್ಳು  ತರೀಕತ್ ನ ಹೆಸರಿನಲ್ಲಿ ಒಂದು ವ್ಯಾಪಾರ ವನ್ನು ಕಾರ್ಯ ನಿರ್ವಹಿಸುತ್ತಿರುವ ಕಪಟ ವಿಶ್ವಾಸಿಗಳನ್ನು ತೋರಿಸಿ ಸತ್ಯ ವಲಿಯ್ ಯನ್ನು ನಿಷೇಧಿಸುವ  ತಂತ್ರ ಮುಗ್ಧ ಜನರ ಮುಂದೆ ಪ್ರಕಟಿಸುತ್ತಾರೆ ಕುತಂತ್ರ  ಕ್ವಾಕರಿ ಅಸ್ತವ್ಯಸ್ತತೆ ವಂಚನೆ ಯಿಂದ ಜನರ ಭಾವನೆಗಳಿಂದ ಆಟ ಆಡುವ ಜನರು ಈ ಕಾಲಘಟ್ಟದಲ್ಲಿಯೂ ಇದ್ದಾರೆ ಎಂದರೆ ಅದರರ್ಥ ಸತ್ಯ ವನ್ನು ನಿಷೇದಿಸುವುದು ಅಲ್ಲ. ಕಳ್ಳ ಪ್ರವಾದಿತ್ವವನ್ವು ವಾದಿಸುವವರು ಮುಂದಿನಿಂದಲೂ ಪ್ರಕಟವಾಗಿದ್ದಾರೆ ಎಂದಾದರೆ ಪ್ರವಾದಿತ್ವದ ಸತ್ಯತೆಯನ್ನು ನಿಷೇದಿಸಬೇಕೆ ಕಳ್ಳ ಪ್ರವಾದಿತ್ವ ವನ್ನು ವಾದಿಸುವವರಿಂದ ಪ್ರವಾದಿತ್ವ ವನ್ನು ನಿಷೇಧಿಸುವ ಹಾಗಿಲ್ಲ ಅದೇ ತರಹ ಕಳ್ಳ ತ್ವರೀಕತ್ ಗಳ ಕುತಂತ್ರದಿಂದ ಸತ್ಯ ವನ್ನು ಮರೆಮಾಚಲು ಸಾಧ್ಯವಿಲ್ಲ..ಯಾಕೆಂದರೆ ಪ್ರವಾದಿ ಗಳ ಅಸ್ತಿತ್ವ ಕಾಲ ಕಾಲಗಳಲ್ಲಿ ಜನರ ಸನ್ಮಾನ ಕ್ಕಾಗಿ ಉಪಯುಕ್ತ ವಾಗಿತ್ತು ವಿಭಿನ್ನ ಕಾಲಘಟ್ಟದಲ್ಲಿ ಪ್ರವಾದಿ ಯವರು ಬರುತ್ತಿದ್ದರು ಕೊನೆಯದಾಗಿ ನಮ್ಮ ಹಬೀಬರಾದ ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم 
ಬಂದರು ಅವರ ನಂತರ ಯಾವ ಪ್ರವಾದಿಯೂ ಬರುವ ಹಾಗಿಲ್ಲ 
ನಮ್ಮ ಪ್ರವಾದಿಯ ನಂತರ ಪ್ರವಾದಿತ್ವದ ಬಾಗಿಲು ಮುಚ್ಟಿದವು ಆದರೆ ವಲಿಯ್ ಗಳ ಆಗಮನ ಸಜೀವ ವಾಗಿದೆ ಎಲ್ಲಿಯ ವರೆಗೆ ಅಂದರೆ ಇಮಾಮ್ ಮಹ್ದಿ ಯವರ ಆಗಮನದ ವರೆಗೆ ಚಾಲನೆ ಯಲ್ಲಿರುತ್ತದೆ ಮತ್ತು ಅವರ ನಂತರ ಲೋಕದ ಎಲ್ಲಾ ಕಡೆ ಅಪನಂಬಿಕೆ ವ್ಯಾಪಕವಾಗಿ ಹರಡುತ್ತದೆ ಈ ವಲಿಯ್ ರವರ ಆಗಮನದ ಬಾಗಿಲು ಮುಚ್ಚಲ್ಪಡುತ್ತದೆ ಆದರೆ ಅವುಲಿಯಾ ಗಳು ವಿಭಿನ್ನ ಸಮಯ ಗಳಲ್ಲಿ ಜೀವಂತ ವಾಗಿದ್ದರು ಅದರ ಸಾಧ್ಯತೆಯೂ ಇದೆ ಇಂದು ಯಾವ ಕಾರ್ಯಗಳ ಸಾದ್ಯತೆ ಇರುತ್ತದೆ ಅದರ ನಕಲಿ  ಬರುವ ಸಾಧ್ಯತೆ ಜಾಸ್ತಿ ಇರುತ್ತದೆ ಪ್ರವಾದಿತ್ವದ ಬಾಗಿಲು ಮುಚ್ಚಿದರೂ ಪ್ರವಾದಿತ್ವ ವನ್ನು ವಾದಿಸುವವರೂ ಇಂದೂ ಇದ್ದಾರೆ ಅಂದರೆ ಅವುಲಿಯಾಗಳ ಆಗಮನದ ಬಾಗಿಲು ತೆರೆದಿರುವಾಗ ಅವರನ್ನು ವಾದಿಸುವವರು ಕಳ್ಳರು ಇದ್ದಾರೆ ಇದೊಂದು ಅವಸ್ಥೆ ಗಳನ್ನು ಎದುರಿಸುವುದಲ್ಲದೇ ಸತ್ಯ ಮತ್ತು ಅಸತ್ಯ ವನ್ನು ಮನದಟ್ಟು ಮಾಡಬೇಕಾಗಿದೆ ನಮಗೆ ರೋಗ ಬಾದಿಸಿದಾಗ ಅದರ ಔಷಧಿ ಯನ್ನು ತೆಗೆದು ಕೊಳ್ಳಲು ನಾವು ಅಂಗಡಿಗೆ ಹೋಗುತ್ತೇವೆ ಅಲ್ಲಿ ಅಸಲಿ ನಕಲಿ ಔಷದಿ ಹೆಚ್ಚಿನ ಪ್ರಮಾಣದಲ್ಲಿ ಇದ್ದರೂ ನಾವು ಅಸಲಿ ಔಷದಿಯನ್ನೇ ಆಯ್ಕೆ ಮಾಡುತ್ತೇವೆ ಅದಲ್ಲದೆ ಬೇರೆ ಏನು ಪಡೆಯಲಾರೆವು ಎಂದಾದರೆ ಧರ್ಮದ ವಿಷಯದಲ್ಲಿಯೂ ಸತ್ಯ ವನ್ನು  ಅರಿತುಕೊಂಡು ಜೀವಿಸುವುದು ಮುಖ್ಯ ವಾಗಿದೆ.
ISLAMIC INFO

Comments

Popular Posts