Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ತಂದೆ ತಾಯಿಯ ಸೇವೆ ಯಲ್ಲಿ ಜಗತ್ಪ್ರಸಿದ್ದ ರಾದ ಮಹಾನ್-:

ಪ್ರವಾದಿ ಮುಹಮ್ಮದ್ ಮುಸ್ತಫಾ صلي الله عليه وسلم 
ರವರ ಬಳಿ ಒಬ್ಬರು ಬಂದು ಹೇಳಿದರು ರಸೂಲರೆ ನಾನು ಜಿಹಾದ್ ಮಾಡಲು ಹೊರಡ ಬೇಕೆಂದಿದ್ದೇನೆ ತಾವು ನನಗೆ ಅನುಮತಿ ನೀಡಿ ಎಂದರು ಆವಾಗ ಪ್ರವಾದಿ ಯವರು ಕೇಳಿದರು ನಿನ್ನ ತಂದೆ ತಾಯಿ ಜೀವಂತವಾಗಿ ಇದ್ದಾರೆಯೇ ಎಂದು ಕೇಳಿದಾಗ ಆ ಮನುಷ್ಯ ಹೌದು ಎಂದು ಉತ್ತರಿಸಿದರು ಆವಾಗ ಪ್ರವಾದಿ ಯವರು ಹೇಳಿದರು  ففيهنا فجاهد 
ಅವರಿಬ್ಫರ ಸೇವೆ ಮಾಡು ಅದು ನಿನ್ನ ಜಿಹಾದ್ ಆಗಿದೆ ಎಂದರು ತಂದೆ ತಾಯಿ ಯವರು ಕಷ್ಟ ದಿಂದಿರುವಾಗ ಅವರಿಗೆ ಸಹಾಯಿ ಆಗ ಬೇಕಾದವನು ದೀನಿ ಬೋಧನೆ ಅಥವಾ ಅವುಲಿಯಾ ಗಳ ಸನ್ನಿದಿಯಲ್ಲಿ ನೀನು ಕಾಲ ಕಳೆದರೆ ಅಲ್ಲಾಹನು ಯಾವಾಗಲೂ ತ್ರಪ್ತಿ ಪಡಲಾರನು ಪ್ರವಾದಿ ಯವರು  ಶ್ರೇಷ್ಠವಾದ  ಅಲ್ಲಾಹನ ದಾಸ ಆಗಿದ್ದಾರೆ ಅವರಲ್ಲದೆ  ಈ ಲೋಕದಲ್ಲಿ ಬೇರೆ ಯಾರಿದ್ದಾರೆ ಆದರೆ ಯಮನ್ ನಲ್ಲಿರುವ ಉವೈಸ್ ಕರ್ನಿ ಅಲ್ಲಾಹನ ರಸೂಲರ ಬಳಿ ಬರಲಿಲ್ಲ ಪ್ರವಾದಿ ಯವರು ತನ್ನ ಉಡುಪಿನ ಮೊದಲ ಬಟನ್ ಅನ್ನು ತೆರೆದಿಟ್ಟು ಹೇಳುತ್ತಾರೆ ಯಮನ್ ಕಡೆ ತನ್ನ ಮುಖವನ್ನು ತಿರುಗಿಸಿ ನೀಳವಾದ ಸ್ವಾಸವನ್ನು ಎಳೆದು ಹೇಳಿದರು ನಾನು ರಹ್ಭಾನ್ ನ ಸುಗಂಧ ಅಸ್ವಾದಿಸುತ್ತಿದ್ದೇನೆ  ಒಮ್ಮೆ ಪ್ರವಾದಿ ಯವರ ಅನುಯಾಯಿ ಗಳು ಕೇಳಿದರು ತಾವು ಯಾವಾಗಲೂ ಆ ಸುಗಂಧ ಗಾಳಿ ಅಸ್ವಾದಿಸುತ್ತೀರಿ ಆ ಮನುಷ್ಯನು ಕೂಡ ನಿಮ್ಮನ್ನು ತುಂಬಾ ಪ್ರೀತಿಸ ಬಹುದಲ್ಲವೆ ಎಂದು ಕೇಳಿದಾಗ ಪ್ರವಾದಿ ಯವರು ಹೇಳಿದರು ಹೌದು ನನ್ನನ್ನು  ತುಂಬಾ ಷ್ರೀತಿಸುತ್ತಾರೆ ಎಂದರು ಆವಾಗ ಅನುಯಾಯಿಗಳು ಹೇಳುತ್ತಾರೆ ರಸೂಲರೆ ನಿಮ್ಮ ಪ್ರೀತಿಯಲ್ಲಿ   ಬಿಲಾಲ್ ಆಫ್ರಿಕದ ಹಬಷಾ ದಿಂದ ಬಂದರು ಸಲ್ಮಾನ್  ಫಾರಿಸ್ ನಿಂದ ಬಂದರು ಶುಹೈಬ್ ರೋಮನ್ ನಿಂದ ಬಂದರು ಇವರು ಯಮನ್ ನಿಂದ ಬರಲು ಸಾದ್ಯ ವಾಗಲಿಲ್ಲವೇ ಆವಾಗ ಪ್ರವಾದಿ ಯವರು ಹೇಳಿದರು ಉವೈಸ್ ಗೆ ವಯಸ್ಸಾದ ಕುರುಡಿಯೂ ಆದ ಒಬ್ಬ ತಾಯಿ ಇದ್ದಾರೆ ಅವರ ಸೇವೆ ಅವರನ್ನು ಇಲ್ಲಿಗೆ ಬರುವುದನ್ನು ತಡೆಯುತ್ತದೆ ಎಂದರು ಉವೈಸ್ ಕರ್ನಿ   رضي الله عنه 
ಪ್ರವಾದಿ ಯವರನ್ನು ಕಾಣಲಾಗಲಿಲ್ಲ ಆದರೆ ಖೈರು ತಾಬಿಯೀನ್ ಎಂದೇ ಹೆಸರು ವಾಸಿ ಯಾದರು ಅವರು ಬರಲಿಲ್ಲ ಆದರೆ ಪ್ರವಾದಿ ಯವರು ಅವರ ನೆನಪಿನಲ್ಲಿ ದುಖಿತರಾಗಿದ್ದಾರೆ ಪ್ರವಾದಿ ಯವರು ಹೇಳುತ್ತಾರೆ ಯಾರಾದರು ಹೋಗಿ ಉವೈಸ್ ನನ್ನ ಭೇಟಿಯಾಗಿ ಈ ಉಮ್ಮತ್ತಿನ ಪಾಪ ವಿಮೋಚನೆ ಗಾಗಿ ಪ್ರಾರ್ತಿಸಲು  ತಿಳಿಸಿ ಎಂದರು ತಂದೆ ತಾಯಿಯ ಸೇವೆ ಯಲ್ಲಿ ತನ್ನನ್ನು ತಾನು ಪೂರ್ಣ ವಾಗಿ ಅರ್ಪಿತನಾದವನ ಪ್ರಾರ್ಥನೆಗೆ ಉತ್ತರ ಸಿಗುತ್ತದೆ ಎಂದು ಇದರಿಂದ ಕಚಿತ ವಾಯಿತು  ಒಂದು ರಿಪೋರ್ಟಿನ ಪ್ರಕಾರ ಒಬ್ಬ ಪ್ರತೀದಿನ ತನ್ನ ತಂದೆ ತಾಯಿಯವರಿಗಾಗಿ ಪ್ರಾರ್ಥಿಸಿದರೆ ಜೀವಂತ ವಾಗಿದ್ದರೂ ಮರಣ ಹೊಂದಿದರೂ ಈ ಕೆಲಸ ವನ್ನು ರೂಡಿಯಾಗಿಸಿದರೆ ಅವನ ರಿಝ್ಕ್ ನಲ್ಲಿ ಯಾವಾಗಲು ಬರ್ಕತ್ ಇರುತ್ತದೆ ಸದಾ  ತಂದೆ ತಾಯಿಯವರಿಗೆ ಪ್ರಾರ್ಥಿಸದವನು ಅಲ್ಲಾಹನ ಅನುಗ್ರಹ ಗಳಿಂದ ವಂಚಿತ ನಾಗುತ್ತಾನೆ
ISLAMIC KANNADA

Comments

Popular Posts