Skip to main content

Featured

ಕಾಸ್ಟಲ್ ಕರ್ನಾಟಕದ ಮುಸ್ಲಿಂ ಸಮುದಾಯದಲ್ಲಿನ ಆತ್ಮಹತ್ಯೆ: ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನ

ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಒಂದು ತೀವ್ರ ಸಾರ್ವಜನಿಕ ಆರೋಗ್ಯದ ಸಮಸ್ಯೆಯಾಗಿಬಿಟ್ಟಿದೆ, ದೈನಂದಿನ ಘಟನಗಳನ್ನು ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ವರದಿ ಮಾಡಲಾಗುತ್ತಿದೆ. ಈ ಸಮಸ್ಯೆ ಬೇರೆ ಬೇರೆ ಸಮುದಾಯಗಳ  ಮೇಲೆ ಪರಿಣಾಮ ಬೀರುತ್ತಿದ್ದರೂ, ಮುಸ್ಲಿಂ ಸಮುದಾಯದ ಒಳಗಿನ ಪರಿಣಾಮವನ್ನು ಅರ್ಥಮಾಡಿಕೊಳ್ಳಲು, ಈ ಪ್ರದೇಶದ ವಿಶಿಷ್ಟ ಸಾಮಾಜಿಕ ವಿನ್ಯಾಸ, ಆರ್ಥಿಕ ಒತ್ತಡಗಳು ಮತ್ತು ಸಾಂಸ್ಕೃತಿಕ ಗುಣಲಕ್ಷಣಗಳನ್ನು ಪರಿಶೀಲಿಸಬೇಕು. ಲಭ್ಯವಿರುವ ವರದಿ  ಪ್ರಕಾರ ಆತ್ಮಹತ್ಯೆ ಡೇಟಾವನ್ನು ವಿಭಜಿಸುತ್ತಿಲ್ಲ, ಆದರೆ ವಿಸ್ತೃತ ಪ್ರದೇಶೀಯ ಪ್ರವೃತ್ತಿಗಳು ಅಡಗಿರುವ ಕಾರಣಗಳನ್ನು ಬೆಳಕಿಗೆಡಿಸುತ್ತವೆ. ಪ್ರದೇಶೀಯ ಸ್ಥಿತಿ: ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣದ ಏರಿಕೆ ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ, ಪ್ರತಿದಿನ ಹಲವು ಘಟನಗಳನ್ನು ಜಿಲ್ಲೆಗಳಾದ್ಯಂತ ವರದಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹಣಕಾಸು ಚಿಂತೆ, ಕುಟುಂಬ ಕಲಹ, ಮಾನಸಿಕ ಆರೋಗ್ಯ ಹೋರಾಟಗಳು ಮತ್ತು ಸಾಮಾಜಿಕ ಕಲಹ ಎದುರಿಸುತ್ತಿರುವ ವ್ಯಕ್ತಿಗಳು ಸೇರಿದ್ದಾರೆ. ಹೆಚ್ಚಿನ ವಿವರಗಳಲ್ಲಿ ಧಾರ್ಮಿಕ ಗುರುತನ್ನು ಅಂದಾಜಿಸಲು ವರದಿಗಳು ನಿರ್ದೇಶಿಸುತ್ತಿಲ್ಲದಿದ್ದರೂ, ಈ ಪ್ರದೇಶದ ಮುಸ್ಲಿಂ ಕುಟುಂಬಗಳು ಒಂದು ಸಮಾನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಹಂಚಿಕೊಂಡಿವೆ—ಮೀನುಧಾನ್ಯ, ಚಿ...

ಸ್ವರ್ಗೀಯ ಪ್ರೋಟೋಕೂಲ್ ಕಾರ್ಪೆಟ್ ನಲ್ಲಿ ನಡೆಯಬೇಕೆ-Whether to walk on the heavenly carpet

ಮೊತಾ ಇಮಾಮ್ ಮಾಲಿಕ್ رضي الله عنه 
ರವರ ಹೆಸರು ದೇಶದಲ್ಲಿ ವ್ಯಾಪಕ ವಾಗುತ್ತಿದ್ದಂತೆ ಬಗ್ದಾದ್ ನಿಂದ ಹಾರೂನ್ ರಷೀದ್ ರವರು ಕಾಗದ ಬರೆದರು ಇಮಾಮ್ ಮಾಲಿಕ್ ರವರಿಗೆ ನಾನು ನಿಮ್ಮಿಂದ  ಹದೀಸ್ ಗಳನ್ನು ಕಲಿಯಲು ಇಚ್ಚಿಸುತ್ತಿದ್ದೇನೆ ನಾನು ಬಗ್ದಾದ್ ನಲ್ಲಿ ಇದ್ದೇನೆ ನನಗೆ ನಿಮ್ಮಲ್ಲಿ ಬರಲು ಅನಾನುಕೂಲ ವಾದರಿಂದ ತಾವು ನನ್ನ ಬಳಿ ಬರಬಹುದೇ ಎಂದು ಕೇಳಿದರು ನಾನು ನನ್ನ ರಾಜ ಮಹಲ್ ನಲ್ಲಿ ನಿಮಗೆ ಹಾಗೂ ನಿಮ್ಮ ಶಿಷ್ಯರಿಗೆ ಉತ್ತಮ ವ್ಯವಸ್ಥೆಯನ್ನು ಮಾಡಿಸುತ್ತೇನೆ ಇಲ್ಲಿ ನಿಮ್ಮ ಶಿಷ್ಯರೊಂದಿಗೆ ನಾನೂ ನಿಮ್ಮ ಬಳಿ ಕಲಿಯಲು ಪ್ರಾರಂಬಿಸುವೆ ಎಂದರು ಆ ಕಾಗದ ಬಂದು ಇಮಾಮ್ ಮಾಲಿಕ್ ರವರಿಗೆ ತಲುಪಿದಾಗ ಅದನ್ನು ತೆರೆದ ನೋಡುವಾಗ ಅವರ ಮುಖವು ಕೆಂಡಾಮಂಡಲ ವಾಯಿತು ಇಮಾಮ್ ಮಾಲಿಕ್   ಹೇಳಿದರು ನಿನಗೆ ಗೊತ್ತಿಲ್ಲವೇ ನಾನು ರಸೂಲರಾದ  ಮುಸ್ತಫಾ صلي الله عليه وسلم 
ರವರ ಗುಲಾಮನೆಂದು ನಾನು ನಿನ್ನ ಬಳಿ ಬರಲಾರೆನು ನಿನಗೆ ಪ್ರವಾದಿ ಯವರ ಹದೀಸ್ ಕಲಿಯಬೇಕೆಂದರೆ ಮದೀನ ಬರಬೇಕಾಗಿದೆ ಪ್ರವಾದಿ ಯವರ ಹದೀಸ್ ಹಿಡಿದು ನಿನ್ನ ಬಳಿ ಬರುವ ಯಾವ ಉದ್ದೇಶವೂ ಇಲ್ಲ ಅಂದರು ಅಲ್ಲಾಹು ಅಕ್ಬರ್ ಎಂಥಹಾ ಕಾಲ ಅದು. ಕಲಿಯುವವರಿಗೆ ಯಾವ ಸಮಯದ ಗೋಡೆಯನ್ನು ನಿಗದಿ ಪಡಿಸಲಾಗುವುದಿಲ್ಲ ನಾವು ವಾರಕ್ಕೊಮ್ಮೆ ನಮ್ಮ ಗುರುಗಳಿಂದ ಕೆಲವೊಂದು (ಇಲ್ಮ್)  ಜ್ನಾನ ಕಲಿತರೆ ಅದೇ ಉತ್ತಮ ನಾವು ವಯಸ್ಸಾದರೂ ಕಲಿಯುವ ತವಕ ಬಿಡಬಾರದು ಪ್ರವಾದಿ ಯವರು ಹೇಳುತ್ತಾರೆ ಇಲ್ಮಿನ ಪ್ರಯಾಣ ಬೆಳೆಸಿದವನು ಇನ್ನು ಪೂರ್ತಿಯಾಗದೆ ಮರಣ ಹೊಂದಿದರೆ ನಾಳೆ ಅಂತ್ಯ ದಿವಸದಲ್ಲಿ ಪ್ರವಾದಿ ಗಳ ಮತ್ತು ಅವನ ಮದ್ಯೆ  ಬರೇ   ಒಂದು ಮೆಟ್ಟಲಿನ ವ್ಯತ್ಯಾಸ ಇರುವುದು ಅಷ್ಟು ಎತ್ತರಕ್ಕೆ ಏರುವನು ಅವನು ಅಂದರೆ ದೀನ್ ಕಲಿಯಲು ತನ್ನ ಜೀವನವನ್ನು ಮುಡಿಪಾಗಿಸಿದವನು ಇಲ್ಮ್ ಕಲಿಯಲು ಮನೆಯಿಂದ ಹೊರಡುವವನಿಗೆ ಅಲ್ಲಾಹನ ದೂತರು  (ಮಲಕ್ ಗಳು)ಅವನ ಕಾಲಡಿಯಲ್ಲಿ ತನ್ನ ರೆಕ್ಕೆಗಳನ್ನು ಬಿಡಿಸಿ ಕೊಡುವರು ಇಂದಿನ ಕಾಲದಲ್ಲಿ ರಾಜರಿಗೆ ಅಥವಾ ರಾಜಕೀಯ ವ್ಯಕ್ತಿ ಗಳಿಗೆ ಪ್ರೋಟೋಕೂಲ್ ನ ಅಂಗವಾಗಿ ರೆಡ್ ಕಾರ್ಪೆಟ್ ಬಿಡಿಸಲಾಗುವುದು ಈ ತರ ನಮ್ಮನ್ನು ಯಾರಾದರೂ ರೆಡ್ ಕಾರ್ಪೆಟ್ ನಲ್ಲಿ ಸ್ವಾಗತಿಸಿದರೆ ಎಷ್ಟೊಂದು ಸಂತೋಷ ಪಡುತ್ತೇವೆ  ಬ್ರಿಟಾನಿಯ ದಲ್ಲಿ ಇದು ರಾಜ ಪರಂಪರೆ ಯಾಗಿದೆ ತಮ್ಮ ಅತಿಥಿಗಳಿಗೆ ನೀಡಲಾಗುವ ಒಂದು ಪ್ರಯೋಗ ರೆಡ್ ಕಾರ್ಪೆಟ್. ಈ ಲೋಕದ ಕಾರ್ಪೆಟ್ ಎಷ್ಟು ದೊಡ್ಡದು ಹಾಗೂ ಎಷ್ಟು ಸಮಯ ಇರಬಹುದು ಆದರೆ ಅಲ್ಲಾಹನ ಮಲಕ್ ಗಳು ಒಬ್ಬ ಇಲ್ಮ್ ಕಲಿಯುವ ವಿದ್ಯಾರ್ಥಿಗಾಗಿ ನೀಡುವ ಕಾರ್ಪೆಟ್ ಅದು ಹೇಗಿರಬಹುದು ಒಮ್ಮೆ ಯೋಚಿಸಿ  
ದೀನಿ ವಿದ್ಯಾರ್ಥಿಗಳಿಗೆ ಸಿಗುವ ಪ್ರತಿಫಲ ಬೇರೆ ಯಾರಿಗೂ ಸಿಗಲಾರವು ಎಲ್ಲಕ್ಕಿಂತ ವಿಷೇಷ ವಾದದ್ದು ಪ್ರವಾದಿ ಯವರು ಉಲಮಾಗಳಿಗೆ ತನ್ನ ವಾರಿಸು ದಾರರಾಗಿ ನೇಮಿಸಿದ್ದಾರೆ ಪ್ರವಾದಿ ಯವರ ವಾರಿಸು ಹಣ ಸಂಪತ್ತು ಅಲ್ಲವೇ ಅಲ್ಲ ಆದರಿಂದ ಜ್ನಾನ ಹುಡುಕುವ ಆದೇಶ ನಮಗೆ ನೀಡಲಾಗಿದೆ ಅದು ಬಾನೆತ್ತರದ ಪರ್ವತದ ಮೇಲೆ ಇದ್ದರೂ  ನದಿ ಸರೋವರ ಗಳನ್ನು ದಾಟ ಬೇಕಾದರೂ   ಚೀನಾ ದೇಶಕ್ಕೆ ಹೋಗಬೇಕಾದರೂ    ಸರಿ ದಾರ್ಮಿಕ ವಿಧ್ಯೆ ಕಡ್ಡಾಯವಾಗಿ ಕಲಿಯಬೇಕು ಅಲ್ಲಾಹು ನಮಗೆ ಕಲಿಯಲು ಅನುಗ್ರಹಿಸಲಿ ಆಮೀನ್!

Comments

Popular Posts