Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ಸ್ವರ್ಗೀಯ ಪ್ರೋಟೋಕೂಲ್ ಕಾರ್ಪೆಟ್ ನಲ್ಲಿ ನಡೆಯಬೇಕೆ-Whether to walk on the heavenly carpet

ಮೊತಾ ಇಮಾಮ್ ಮಾಲಿಕ್ رضي الله عنه 
ರವರ ಹೆಸರು ದೇಶದಲ್ಲಿ ವ್ಯಾಪಕ ವಾಗುತ್ತಿದ್ದಂತೆ ಬಗ್ದಾದ್ ನಿಂದ ಹಾರೂನ್ ರಷೀದ್ ರವರು ಕಾಗದ ಬರೆದರು ಇಮಾಮ್ ಮಾಲಿಕ್ ರವರಿಗೆ ನಾನು ನಿಮ್ಮಿಂದ  ಹದೀಸ್ ಗಳನ್ನು ಕಲಿಯಲು ಇಚ್ಚಿಸುತ್ತಿದ್ದೇನೆ ನಾನು ಬಗ್ದಾದ್ ನಲ್ಲಿ ಇದ್ದೇನೆ ನನಗೆ ನಿಮ್ಮಲ್ಲಿ ಬರಲು ಅನಾನುಕೂಲ ವಾದರಿಂದ ತಾವು ನನ್ನ ಬಳಿ ಬರಬಹುದೇ ಎಂದು ಕೇಳಿದರು ನಾನು ನನ್ನ ರಾಜ ಮಹಲ್ ನಲ್ಲಿ ನಿಮಗೆ ಹಾಗೂ ನಿಮ್ಮ ಶಿಷ್ಯರಿಗೆ ಉತ್ತಮ ವ್ಯವಸ್ಥೆಯನ್ನು ಮಾಡಿಸುತ್ತೇನೆ ಇಲ್ಲಿ ನಿಮ್ಮ ಶಿಷ್ಯರೊಂದಿಗೆ ನಾನೂ ನಿಮ್ಮ ಬಳಿ ಕಲಿಯಲು ಪ್ರಾರಂಬಿಸುವೆ ಎಂದರು ಆ ಕಾಗದ ಬಂದು ಇಮಾಮ್ ಮಾಲಿಕ್ ರವರಿಗೆ ತಲುಪಿದಾಗ ಅದನ್ನು ತೆರೆದ ನೋಡುವಾಗ ಅವರ ಮುಖವು ಕೆಂಡಾಮಂಡಲ ವಾಯಿತು ಇಮಾಮ್ ಮಾಲಿಕ್   ಹೇಳಿದರು ನಿನಗೆ ಗೊತ್ತಿಲ್ಲವೇ ನಾನು ರಸೂಲರಾದ  ಮುಸ್ತಫಾ صلي الله عليه وسلم 
ರವರ ಗುಲಾಮನೆಂದು ನಾನು ನಿನ್ನ ಬಳಿ ಬರಲಾರೆನು ನಿನಗೆ ಪ್ರವಾದಿ ಯವರ ಹದೀಸ್ ಕಲಿಯಬೇಕೆಂದರೆ ಮದೀನ ಬರಬೇಕಾಗಿದೆ ಪ್ರವಾದಿ ಯವರ ಹದೀಸ್ ಹಿಡಿದು ನಿನ್ನ ಬಳಿ ಬರುವ ಯಾವ ಉದ್ದೇಶವೂ ಇಲ್ಲ ಅಂದರು ಅಲ್ಲಾಹು ಅಕ್ಬರ್ ಎಂಥಹಾ ಕಾಲ ಅದು. ಕಲಿಯುವವರಿಗೆ ಯಾವ ಸಮಯದ ಗೋಡೆಯನ್ನು ನಿಗದಿ ಪಡಿಸಲಾಗುವುದಿಲ್ಲ ನಾವು ವಾರಕ್ಕೊಮ್ಮೆ ನಮ್ಮ ಗುರುಗಳಿಂದ ಕೆಲವೊಂದು (ಇಲ್ಮ್)  ಜ್ನಾನ ಕಲಿತರೆ ಅದೇ ಉತ್ತಮ ನಾವು ವಯಸ್ಸಾದರೂ ಕಲಿಯುವ ತವಕ ಬಿಡಬಾರದು ಪ್ರವಾದಿ ಯವರು ಹೇಳುತ್ತಾರೆ ಇಲ್ಮಿನ ಪ್ರಯಾಣ ಬೆಳೆಸಿದವನು ಇನ್ನು ಪೂರ್ತಿಯಾಗದೆ ಮರಣ ಹೊಂದಿದರೆ ನಾಳೆ ಅಂತ್ಯ ದಿವಸದಲ್ಲಿ ಪ್ರವಾದಿ ಗಳ ಮತ್ತು ಅವನ ಮದ್ಯೆ  ಬರೇ   ಒಂದು ಮೆಟ್ಟಲಿನ ವ್ಯತ್ಯಾಸ ಇರುವುದು ಅಷ್ಟು ಎತ್ತರಕ್ಕೆ ಏರುವನು ಅವನು ಅಂದರೆ ದೀನ್ ಕಲಿಯಲು ತನ್ನ ಜೀವನವನ್ನು ಮುಡಿಪಾಗಿಸಿದವನು ಇಲ್ಮ್ ಕಲಿಯಲು ಮನೆಯಿಂದ ಹೊರಡುವವನಿಗೆ ಅಲ್ಲಾಹನ ದೂತರು  (ಮಲಕ್ ಗಳು)ಅವನ ಕಾಲಡಿಯಲ್ಲಿ ತನ್ನ ರೆಕ್ಕೆಗಳನ್ನು ಬಿಡಿಸಿ ಕೊಡುವರು ಇಂದಿನ ಕಾಲದಲ್ಲಿ ರಾಜರಿಗೆ ಅಥವಾ ರಾಜಕೀಯ ವ್ಯಕ್ತಿ ಗಳಿಗೆ ಪ್ರೋಟೋಕೂಲ್ ನ ಅಂಗವಾಗಿ ರೆಡ್ ಕಾರ್ಪೆಟ್ ಬಿಡಿಸಲಾಗುವುದು ಈ ತರ ನಮ್ಮನ್ನು ಯಾರಾದರೂ ರೆಡ್ ಕಾರ್ಪೆಟ್ ನಲ್ಲಿ ಸ್ವಾಗತಿಸಿದರೆ ಎಷ್ಟೊಂದು ಸಂತೋಷ ಪಡುತ್ತೇವೆ  ಬ್ರಿಟಾನಿಯ ದಲ್ಲಿ ಇದು ರಾಜ ಪರಂಪರೆ ಯಾಗಿದೆ ತಮ್ಮ ಅತಿಥಿಗಳಿಗೆ ನೀಡಲಾಗುವ ಒಂದು ಪ್ರಯೋಗ ರೆಡ್ ಕಾರ್ಪೆಟ್. ಈ ಲೋಕದ ಕಾರ್ಪೆಟ್ ಎಷ್ಟು ದೊಡ್ಡದು ಹಾಗೂ ಎಷ್ಟು ಸಮಯ ಇರಬಹುದು ಆದರೆ ಅಲ್ಲಾಹನ ಮಲಕ್ ಗಳು ಒಬ್ಬ ಇಲ್ಮ್ ಕಲಿಯುವ ವಿದ್ಯಾರ್ಥಿಗಾಗಿ ನೀಡುವ ಕಾರ್ಪೆಟ್ ಅದು ಹೇಗಿರಬಹುದು ಒಮ್ಮೆ ಯೋಚಿಸಿ  
ದೀನಿ ವಿದ್ಯಾರ್ಥಿಗಳಿಗೆ ಸಿಗುವ ಪ್ರತಿಫಲ ಬೇರೆ ಯಾರಿಗೂ ಸಿಗಲಾರವು ಎಲ್ಲಕ್ಕಿಂತ ವಿಷೇಷ ವಾದದ್ದು ಪ್ರವಾದಿ ಯವರು ಉಲಮಾಗಳಿಗೆ ತನ್ನ ವಾರಿಸು ದಾರರಾಗಿ ನೇಮಿಸಿದ್ದಾರೆ ಪ್ರವಾದಿ ಯವರ ವಾರಿಸು ಹಣ ಸಂಪತ್ತು ಅಲ್ಲವೇ ಅಲ್ಲ ಆದರಿಂದ ಜ್ನಾನ ಹುಡುಕುವ ಆದೇಶ ನಮಗೆ ನೀಡಲಾಗಿದೆ ಅದು ಬಾನೆತ್ತರದ ಪರ್ವತದ ಮೇಲೆ ಇದ್ದರೂ  ನದಿ ಸರೋವರ ಗಳನ್ನು ದಾಟ ಬೇಕಾದರೂ   ಚೀನಾ ದೇಶಕ್ಕೆ ಹೋಗಬೇಕಾದರೂ    ಸರಿ ದಾರ್ಮಿಕ ವಿಧ್ಯೆ ಕಡ್ಡಾಯವಾಗಿ ಕಲಿಯಬೇಕು ಅಲ್ಲಾಹು ನಮಗೆ ಕಲಿಯಲು ಅನುಗ್ರಹಿಸಲಿ ಆಮೀನ್!

Comments

Popular Posts