ISLAMIC KANNADA
Translate
Wednesday, July 1, 2020
ಅಳುವಿನಿಂದ ಜೀವನವೇ ಬದಲಾಗಬಹುದು-Weeping can change lives
ಒಬ್ಬ ಫಕೀರ ದರ್ವೇಶ್ ತನ್ನ ಮನೆಯಂಗಳದಲ್ಲಿ ಹಾದು ಹೋಗುವ ಪ್ರತಿಯೊಬ್ಬರಿಗೂ ಆಹಾರ ಧಾನ ವಾಗಿ ನೀಡುತ್ತಿದ್ದ ಜನರ ಅವಶ್ಯ ಗಳನ್ನು ಪೂರೈಸುತ್ತಿದ್ದ ಆದರೆ ಶ್ರೀಮಂತ ಆಗಿರಲಿಲ್ಲ ಕೆಲವೊಮ್ಮೆ ಸಾಲ ಮಾಡಿ ಜನರಿಗೆ ಉಟ ನೀಡುತ್ತದ್ದ ದರ್ವೇಶ್ ಗಳ ಒಂದು ಪ್ರತ್ಯೇಕತೆ ಅಂದರೆ ಅವರ ಆಶ್ರಮಕ್ಕೆ ಜನರು ಉಟ ಮಾಡಲೆಂದೇ ಬರುತ್ತಾರೆ ಒಂದು ಸಮಯ ಆ ದರ್ವೇಶ್ ಜನರ ಸೇವೆಗಾಗಿ ಮಾಡಿದ ಸಾಲವನ್ನು ಕೇಳಲು ಸಾಲಗಾರರು ಅವರ ಮನೆಯತ್ತ ಧಾವಿಸಿದರು ಆವಾಗ ಒಬ್ಬ ಹುಡುಗ ಪಕ್ಕದಲ್ಲಿ ಕೆಲವು ವಸ್ತುಗಳನ್ನು ಮಾರುತ್ತಿದ್ದನು ಆವಾಗ ಆ ದರ್ವೇಶ್ ಹುಡುಗನನ್ನು ಕರೆದು ಹೇಳಿದರು ನಿನ್ನ ಈ ಸರಕು ನನ್ನ ಜನರಿಗೆ ನೀಡು ಎಂದು ಹೇಳಿದಾಗ ಆ ಹುಡುಗ ತುಂಬಾ ಸಂತೋಷದಿಂದ ಆ ಸರಕು ಮಾರಲು ತಯಾರಾದನು ಎಲ್ಲಾ ಸರಕು ಅಲ್ಲಿ ನೆರೆದ ಜನರಿಗೆ ನೀಡಿ ದರ್ವೇಶ್ ಅವರಲ್ಲಿ ಅದರ ದುಡ್ಡು ಕೇಳಿದನು ಆವಾಗ ಅವರು ಹೇಳಿದರು ಕುಳಿತುಕೋ ನಿನ್ನ ಹಣ ನೀಡುವೆ ಎಂದು ಹತ್ತು ನಿಮಿಷ ಗಳ ನಂತರ ಎದ್ದು ಮತ್ತೆ ಕೇಳಿದಾಗ ದರ್ವೇಶ್ ಹೇಳಿದರು ಕುಳಿತುಕೊ ಅವರಿಗೆ ಹಣ ಸಿಕ್ಕರೆ ನಿನಗೆ ನೀಡುವೆ ಎಂದು ಮತ್ತು ಕೆಲವು ನಿಮಿಷಗಳ ನಂತರ ಎದ್ದು ಕೇಳಿದ ಬಾಬಾ ಹಣ ಎಲ್ಲಿ ನನ್ನ ತಾಯಿ ನನ್ನ ಬರವನ್ನು ಕಾಯುತ್ತಿದ್ದಾರೆ ನನಗೆ ಮನೆಗೆ ಹೋಗಬೇಕು ಆಹಾರ ತಯಾರು ಮಾಡಬೇಕು ನೀವು ನೀಡುವ ಹಣದಿಂದ ಮನೆಯಲ್ಲಿ ಉಟ ತಯಾರಾಗುತ್ತದೆ ಬಾಬಾ ಹಣ ಎಲ್ಲಿ ಎಂದು ಮತ್ತೊಮ್ಮೆ ಕೇಳಿದನು ಆವಾಗ ದರ್ವೇಶ್ ಅದೇ ಉತ್ತರ ನೀಡಿದರು ಆ ಹುಡುಗ ಒಬ್ಬ ಯತೀಮ್ ಆಗಿದ್ದನು ಅಳಲು ಪ್ರಾರಂಬಿಸಿದನು ಆ ಹುಡುಗ ಅಳುವಾಗ ಅಲ್ಲಾಹನ ಅನುಗ್ರಹ ಗಳು ಸುರಿದವು ಅಂದರೆ ಒಬ್ಬ ದಾರಿಯಲ್ಲಿ ಹೋಗುವವರು ಬಂಗಾರದ ನಾಣ್ಯಗಳ ಚೀಲವನ್ನು ಆ ದರ್ವೇಶ್ ರವರಿಗೆ ನೀಡಿದನು ಆ ನಾಣ್ಯಗಳನ್ನು ಅಲ್ಲಿ ನೆರೆದ ಜನರಿಗೂ ಸಾಲಗಾರಿಗೂ ಆ ಹುಡುಗನಿಗೂ ನೀಡಿ ಹೇಳಿದರು ಹೋಗಿ ನಿಮ್ಮ ಮನೆಗೆ ತೆರಳಿರಿ ನೀವೆಲ್ಲರೂ ಎಂದರು ಆವಾಗ ಆ ಸಾಲಗಾರರು ಕೇಳಿದರು ಓ ಬಾಬ ರವರೆ ನಾವು ಬೆಳಿಗ್ಗೆ ಯಿಂದ ಇಲ್ಲಿ ಕುಳಿತಿದ್ದೇವೆ ಯಾರು ಬರಲಿಲ್ಲ ಈವಾಗ ಹೇಗೆ ಬಂದರು ಆವಾಗ ಆ ಬಾಬ ದರ್ವೇಶ್ ಹೇಳಿದ ಮಾತು ನಿಜಕ್ಕೂ ಆಲೋಚಿಸುವಂತಹದು ಹೇಳಿದರು ಬೆಳಿಗ್ಗೆ ಯಿಂದ ಅಳುವ ಯಾರೂ ಇಲ್ಲಿ ಇರಲಿಲ್ಲ ಎಂದು. ಸಮೂಹಿಕ ವಾಗಿ ಒಬ್ಬ ಹುಡುಗ ಅಳುವ ಕಾರಣ ದಿಂದ ಎಲ್ಲರ ಅವಶ್ಯ ಗಳು ಪೂರ್ತಿಯಾದವು ಕೆಲವೊಮ್ಮೆ ಒಬ್ಬರ ಪಶ್ಚಾತ್ತಾಪ ದಿಂದ ಎಲ್ಲರ ಪಾಪವೂ ಮನ್ನಿಸಲಾಗುವುದು ಇವತ್ತು ನಾವು ಸಾಮೂಹಿಕವಾಗಿ ಅಲ್ಲಾಹನ ಸನ್ನಿದಿಯಲ್ಲಿ ನಮ್ಮ ಪಾಪಗಳನ್ನು ಅವನ ಮುಂದೆ ಇಟ್ಟು ಅವನಲ್ಲಿ ಬರವಸೆ ಇಡುತ್ತೇವೆ ಒಬ್ಬನ ಕಾರಣ ವಾಗಿಯಾದರು ನಿನ್ನ ಅನುಗ್ರಹ ಗಳ ಸುರಿಮಳೆ ನೀನು ವಿತರಿಸು ಯಾ ಅಲ್ಲಾಹ್ ಅವರ ಕಾರಣ ದಿಂದ ನಮ್ಮ ಪಾಪವನ್ನು ಮನ್ನಿಸು ಪ್ರಬುವೇ ಎಂದಾಗಿರುತ್ತದೆ ನಮ್ಮೆಲ್ಲರ ಪ್ರಾರ್ಥನೆ ಒಬ್ಬ ಅಳುವವನ ಕಾರಣದಿಂದ ನನ್ನ ಪಾಪ ಮನ್ನಿಸು ಅಲ್ಲಾಹುವೆ ಎಂದು ಸದಾ ಪ್ರಾರ್ತಿಸಬೇಕು ನಾವು ಜೀವನದಲ್ಲಿ ತುಂಬಾ ಪಾಪಗಳನ್ನು ಮಾಡಿದ್ದೇವೆ ತುಂಬಾ ಸಮಯ ಜೀವಿಸಿದ್ದೇವೆ ನಾನು ಒಮ್ಮೆ ನನ್ನ ಅಂತರಾಳ ವನ್ನು ಇಣುಕಿ ನೋಡಿದರೆ ಅನೇಕ ಪಾಪ ಗಳು ಕಾಣ ಸಿಗುವುದು ಜೀವನ ವೇಗವಾಗಿ ಮುನ್ನಡೆಯುತ್ತಿದೆ ನಮ್ಮ ನಲವತ್ತು ವರ್ಷಗಳು ಒಂದು ಕಣ್ಣು ಮುಚ್ಚಿ ತೆಗೆಯುವುದರೊಳಗೆ ಕಳೆದು ಹೋದವು ಇನ್ನು ಒಂದ ನಿಮಿಷ ನಾವು ಬದುಕುತ್ತೇವೆ ಎಂದು ಹೇಳಲು ನಮ್ಮಿಂದ ಸಾಧ್ಯವೇ? ಫಜರ್ ನಮಾಝ್ ಮಾಡಿ ಲುಹರ್ ಮಾಡಲು ಸಾಧ್ಯವೆ ಗೊತ್ತಿಲ್ಲ ಮರಣ ಯಾವಾಗಲೂ ಸಂಭವಿಸಬಹುದು ಮರಣ ನಮ್ಮ ತುಂಬಾ ಸಮೀಪ ಇದೆ ಬನ್ನಿ ನನ್ನ ಸಹೋದರರೆ ನಮ್ಮ ಜೀವನವನ್ನು ಅಲ್ಲಾಹು ಹಾಗು ಅವನ ರಸೂಲರ ಪಾಲನೆಯಲ್ಲಿ ನಮ್ಮನ್ನು ನಾವು ತೊಡಗಿ ಕೊಳ್ಳುವ ಇವತ್ತು ಸಮಯ ಇದೆ ಇವತ್ತು ಪಶ್ಚಾತ್ತಾಪದ ಬಾಗಿಲು ತೆರೆದಿದೆ ಇವತ್ತು ಅಲ್ಲಾಹನ ಅನುಗ್ರಹ ಗಳು ನಮ್ಮನ್ನು ಕರೆದು ಹೇಳುತ್ತಿದೆ ಬನ್ನಿ ಅಲ್ಲಾಹನ ಕಡೆಗೆ ಆದರೆ ನಾವೂ ಇನ್ನೂ ಮಲಗಿದ್ದೇವೆ....ಅಲ್ಲಾಹನ ಕಡೆಗೆ ಧಾವಿಸಿ ನಾಳೆ ಯಾರೂ ನೋಡಲಿಲ್ಲ!!!ನಾಳೆಯ ಪರಲೋಕದ ಸುಂದರ ಜೀವನಕ್ಕೆ ಇಂದು ಸ್ವಲ್ಪ ಪ್ರಯತ್ನ ಪಡಬೇಕಾಗಿದೆ...ಅದುವೇ ಜೀವನ.

Subscribe to:
Post Comments (Atom)
ಈ ವರ್ಷದ ಹಬ್ಬ ಹೇಗೆ ಆಚರಿಸುತ್ತೀರ
ಸರ್ವಶಕ್ತನಾದ ಅಲ್ಲಹನು ವರ್ಷದ ನಿರ್ದಿಷ್ಟ ದಿನಗಳನ್ನು ದಾಸರಿಗಾಗಿ ನಿಶ್ಚಯಿಸಿದ್ದಾನೆ; ಜೀವನದಲ್ಲಿ ಸಂತೋಷ ಮತ್ತು ಇಸ್ಲಾಮಿಕ್ ಆಚರಣೆಗಳನ್ನು ತೋರಿಸಲು ಆಗಿದೆ ಇಸ್ಲಾಂ...
-
*ಆ ಜ್ಯೋತಿ ಎಂದೂ ನಂದದು ನಂದಿಸಲೂ ಆಗದು* ✍️ *ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ* ************************************ ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ...
-
ಆಪತ್ಭಾಂದವರು ಅಪನಂಬಿಗಸ್ತರಾದರೇ ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************ ವಯಸ್ಸು ನೂರು ದಾಟಿದ ವಯೋವೃದ್ಧನೇ ಆಗಿರಬಹುದು. ಅಥವಾ ಮರಣ ಶೈಯ್ಯೆಯ ಕೊನೆಯುಸಿ...
-
ಮೃತ ಶರೀರಗಳೊಂದಿಗೆ ಯಾಕೆ ಈ ಅನ್ಯಾಯ? ************* ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************* ಮರಣ ಹೊಂದಿದ ವಿವರ ಲಭಿಸಿದರೆ ಮನುಷ್ಯತ್ವ ಇರುವ ಯಾವುದೇ ...
-
ವಿಷ ಕಾರುವ ತೇಜಸ್ವಿ ಸೂರ್ಯ ತನ್ನನ್ನು ತಾನು ಸತ್ಯ ಹರಿಶ್ಚಂದ್ರ ವೆಂಬಂತೆ ಬಿಂಬಿಸಿ ಅನ್ಯ ದರ್ಮೀಯರನ್ನು ಅವಹೇಳನ ಮಾಡುವ ಕ್ರತ್ಯ ಸುಲಭವಾಗಿ ಕಲಿತ ಯುವ ಸಂಸದ! ತನ್ನವರ...
-
ಮಹಾಮಾರಿ ಬಂದಿದ್ದರಲ್ಲಿ ಅಲ್ಲ ಬಾರದೇ ಇದ್ದರೆ ಅದ್ಭುತ ************ ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************ ಮೊನ್ನೆ ಒಬ್ಬ ಒಂದು ಬೆಕ್ಕನ್ನು ಹ...
-
ನಮಾಝ್ ಅಲ್ಲಾಹು ಅಕ್ಬರ್ ಎಂಬ ತಕ್ಬೀರ್ನೊಂದಿಗೆ ಪ್ರಾರಂಭವಾಗಿ ಸಲಾಮಿನೊಂದಿಗೆ ಮುಕ್ತಾಯಗೊಳ್ಳುವ ಶಾರೀರಿಕವಾದ ಪ್ರಾರ್ಥನೆ ಗಳಲ್ಲಿ ಶ್ರೇಷ್ಠ ವಾದ ಇಸ್ಲಾಮಿನ ಎರ...
-
ಕುಂಬಳಕಾಯಿ ಕಳ್ಳನೆಂದಾಗ ಹೆಗಲು ಮುಟ್ಟಿ ನೋಡಬೇಡಿ ************* ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************* ಮೊನ್ನೆ ಒಂದು ಬರಹವನ್ನು ಕಾಣಲು ಸಾಧ್ಯವಾಯ್ತ...
-
ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم ರವರು ಹೇಳುತ್ತಾರೆ( ಕಯಾಮತ್)ಅಂತ್ಯ ದಿವಸದಲ್ಲಿ ನನಗೆ ಅತೀ ಹತ್ತಿರದ ಮನುಷ್ಯ. ಅವನು ನನಗೆ ಅಧಿಕವಾಗಿ ನನ್ನ ಮೇಲೆ (...
-
ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ಸುಮಾರು 28 ವರ್ಷಗಳ ಹಿಂದೆ ಮರ್ಕಝ್ ಎಂಬ ಜ್ಞಾನ ಕೇಂದ್ರದಿಂದ ಬಿರುದು ಪಡೆದು ಮುದರ್ರಿಸಾಗಿ ಸೇವೆಗೆ ಸೇರಿದ ಪ್ರಾರಂಭದ ವರ್ಷಗಳ ಅನು...
-
*ಶಿಹಾಬ್ರನ್ನು ಸ್ವಾಗತಿಸುವ ಮೊದಲು..* ಕಾಲ್ನಡಿಗೆಯ ಮೂಲಕ ಹಜ್ ಕರ್ಮಕ್ಕೆ ಹೊರಟ ಕೇರಳದ ಶಿಹಾಬ್ ಈಗಾಗಲೇ ಕರ್ನಾಟಕದ ಗಡಿ ದಾಟಲಿದ್ದಾರೆ. ಕೇರಳಿಗರು ಈ ಮೂವತ್ತರ ತರುಣನ...
No comments:
Post a Comment