Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ಅಳುವಿನಿಂದ ಜೀವನವೇ ಬದಲಾಗಬಹುದು-Weeping can change lives

ಒಬ್ಬ ಫಕೀರ ದರ್ವೇಶ್ ತನ್ನ ಮನೆಯಂಗಳದಲ್ಲಿ ಹಾದು ಹೋಗುವ ಪ್ರತಿಯೊಬ್ಬರಿಗೂ ಆಹಾರ ಧಾನ ವಾಗಿ ನೀಡುತ್ತಿದ್ದ ಜನರ ಅವಶ್ಯ ಗಳನ್ನು ಪೂರೈಸುತ್ತಿದ್ದ ಆದರೆ ಶ್ರೀಮಂತ ಆಗಿರಲಿಲ್ಲ ಕೆಲವೊಮ್ಮೆ ಸಾಲ ಮಾಡಿ ಜನರಿಗೆ ಉಟ ನೀಡುತ್ತದ್ದ ದರ್ವೇಶ್ ಗಳ ಒಂದು ಪ್ರತ್ಯೇಕತೆ ಅಂದರೆ ಅವರ ಆಶ್ರಮಕ್ಕೆ ಜನರು ಉಟ ಮಾಡಲೆಂದೇ ಬರುತ್ತಾರೆ ಒಂದು ಸಮಯ ಆ ದರ್ವೇಶ್ ಜನರ ಸೇವೆಗಾಗಿ ಮಾಡಿದ ಸಾಲವನ್ನು ಕೇಳಲು ಸಾಲಗಾರರು     ಅವರ ಮನೆಯತ್ತ ಧಾವಿಸಿದರು ಆವಾಗ ಒಬ್ಬ ಹುಡುಗ ಪಕ್ಕದಲ್ಲಿ  ಕೆಲವು ವಸ್ತುಗಳನ್ನು ಮಾರುತ್ತಿದ್ದನು ಆವಾಗ ಆ ದರ್ವೇಶ್ ಹುಡುಗನನ್ನು ಕರೆದು ಹೇಳಿದರು ನಿನ್ನ ಈ ಸರಕು ನನ್ನ ಜನರಿಗೆ ನೀಡು ಎಂದು ಹೇಳಿದಾಗ ಆ ಹುಡುಗ ತುಂಬಾ ಸಂತೋಷದಿಂದ ಆ ಸರಕು ಮಾರಲು ತಯಾರಾದನು ಎಲ್ಲಾ ಸರಕು ಅಲ್ಲಿ ನೆರೆದ ಜನರಿಗೆ ನೀಡಿ ದರ್ವೇಶ್ ಅವರಲ್ಲಿ ಅದರ ದುಡ್ಡು ಕೇಳಿದನು ಆವಾಗ ಅವರು ಹೇಳಿದರು ಕುಳಿತುಕೋ ನಿನ್ನ ಹಣ ನೀಡುವೆ ಎಂದು ಹತ್ತು ನಿಮಿಷ ಗಳ ನಂತರ ಎದ್ದು ಮತ್ತೆ ಕೇಳಿದಾಗ ದರ್ವೇಶ್ ಹೇಳಿದರು ಕುಳಿತುಕೊ ಅವರಿಗೆ ಹಣ ಸಿಕ್ಕರೆ ನಿನಗೆ ನೀಡುವೆ ಎಂದು  ಮತ್ತು ಕೆಲವು ನಿಮಿಷಗಳ ನಂತರ ಎದ್ದು ಕೇಳಿದ ಬಾಬಾ ಹಣ ಎಲ್ಲಿ ನನ್ನ ತಾಯಿ ನನ್ನ ಬರವನ್ನು ಕಾಯುತ್ತಿದ್ದಾರೆ ನನಗೆ ಮನೆಗೆ ಹೋಗಬೇಕು ಆಹಾರ ತಯಾರು ಮಾಡಬೇಕು ನೀವು ನೀಡುವ ಹಣದಿಂದ ಮನೆಯಲ್ಲಿ  ಉಟ ತಯಾರಾಗುತ್ತದೆ  ಬಾಬಾ ಹಣ ಎಲ್ಲಿ ಎಂದು ಮತ್ತೊಮ್ಮೆ ಕೇಳಿದನು ಆವಾಗ ದರ್ವೇಶ್ ಅದೇ ಉತ್ತರ ನೀಡಿದರು ಆ ಹುಡುಗ ಒಬ್ಬ ಯತೀಮ್ ಆಗಿದ್ದನು ಅಳಲು ಪ್ರಾರಂಬಿಸಿದನು ಆ ಹುಡುಗ ಅಳುವಾಗ ಅಲ್ಲಾಹನ ಅನುಗ್ರಹ ಗಳು ಸುರಿದವು ಅಂದರೆ ಒಬ್ಬ ದಾರಿಯಲ್ಲಿ ಹೋಗುವವರು ಬಂಗಾರದ ನಾಣ್ಯಗಳ ಚೀಲವನ್ನು ಆ ದರ್ವೇಶ್ ರವರಿಗೆ ನೀಡಿದನು  ಆ ನಾಣ್ಯಗಳನ್ನು ಅಲ್ಲಿ ನೆರೆದ ಜನರಿಗೂ ಸಾಲಗಾರಿಗೂ ಆ ಹುಡುಗನಿಗೂ ನೀಡಿ ಹೇಳಿದರು ಹೋಗಿ ನಿಮ್ಮ ಮನೆಗೆ ತೆರಳಿರಿ ನೀವೆಲ್ಲರೂ ಎಂದರು ಆವಾಗ ಆ ಸಾಲಗಾರರು ಕೇಳಿದರು ಓ ಬಾಬ ರವರೆ ನಾವು ಬೆಳಿಗ್ಗೆ ಯಿಂದ ಇಲ್ಲಿ ಕುಳಿತಿದ್ದೇವೆ ಯಾರು ಬರಲಿಲ್ಲ ಈವಾಗ ಹೇಗೆ ಬಂದರು ಆವಾಗ ಆ  ಬಾಬ ದರ್ವೇಶ್ ಹೇಳಿದ ಮಾತು ನಿಜಕ್ಕೂ ಆಲೋಚಿಸುವಂತಹದು ಹೇಳಿದರು ಬೆಳಿಗ್ಗೆ ಯಿಂದ ಅಳುವ ಯಾರೂ ಇಲ್ಲಿ ಇರಲಿಲ್ಲ ಎಂದು. ಸಮೂಹಿಕ ವಾಗಿ ಒಬ್ಬ ಹುಡುಗ ಅಳುವ ಕಾರಣ ದಿಂದ ಎಲ್ಲರ ಅವಶ್ಯ ಗಳು ಪೂರ್ತಿಯಾದವು ಕೆಲವೊಮ್ಮೆ ಒಬ್ಬರ ಪಶ್ಚಾತ್ತಾಪ ದಿಂದ ಎಲ್ಲರ ಪಾಪವೂ ಮನ್ನಿಸಲಾಗುವುದು ಇವತ್ತು ನಾವು ಸಾಮೂಹಿಕವಾಗಿ ಅಲ್ಲಾಹನ ಸನ್ನಿದಿಯಲ್ಲಿ ನಮ್ಮ ಪಾಪಗಳನ್ನು ಅವನ ಮುಂದೆ ಇಟ್ಟು ಅವನಲ್ಲಿ ಬರವಸೆ ಇಡುತ್ತೇವೆ ಒಬ್ಬನ ಕಾರಣ ವಾಗಿಯಾದರು ನಿನ್ನ ಅನುಗ್ರಹ ಗಳ ಸುರಿಮಳೆ ನೀನು ವಿತರಿಸು  ಯಾ ಅಲ್ಲಾಹ್ ಅವರ ಕಾರಣ ದಿಂದ ನಮ್ಮ ಪಾಪವನ್ನು ಮನ್ನಿಸು ಪ್ರಬುವೇ ಎಂದಾಗಿರುತ್ತದೆ ನಮ್ಮೆಲ್ಲರ ಪ್ರಾರ್ಥನೆ ಒಬ್ಬ ಅಳುವವನ ಕಾರಣದಿಂದ ನನ್ನ ಪಾಪ ಮನ್ನಿಸು ಅಲ್ಲಾಹುವೆ  ಎಂದು ಸದಾ ಪ್ರಾರ್ತಿಸಬೇಕು ನಾವು ಜೀವನದಲ್ಲಿ ತುಂಬಾ ಪಾಪಗಳನ್ನು ಮಾಡಿದ್ದೇವೆ ತುಂಬಾ ಸಮಯ ಜೀವಿಸಿದ್ದೇವೆ ನಾನು ಒಮ್ಮೆ ನನ್ನ ಅಂತರಾಳ ವನ್ನು ಇಣುಕಿ ನೋಡಿದರೆ ಅನೇಕ ಪಾಪ ಗಳು ಕಾಣ ಸಿಗುವುದು ಜೀವನ ವೇಗವಾಗಿ ಮುನ್ನಡೆಯುತ್ತಿದೆ ನಮ್ಮ ನಲವತ್ತು ವರ್ಷಗಳು ಒಂದು ಕಣ್ಣು ಮುಚ್ಚಿ ತೆಗೆಯುವುದರೊಳಗೆ ಕಳೆದು ಹೋದವು ಇನ್ನು ಒಂದ ನಿಮಿಷ ನಾವು ಬದುಕುತ್ತೇವೆ ಎಂದು ಹೇಳಲು ನಮ್ಮಿಂದ ಸಾಧ್ಯವೇ? ಫಜರ್ ನಮಾಝ್ ಮಾಡಿ ಲುಹರ್ ಮಾಡಲು ಸಾಧ್ಯವೆ ಗೊತ್ತಿಲ್ಲ  ಮರಣ ಯಾವಾಗಲೂ ಸಂಭವಿಸಬಹುದು ಮರಣ ನಮ್ಮ ತುಂಬಾ ಸಮೀಪ ಇದೆ ಬನ್ನಿ ನನ್ನ ಸಹೋದರರೆ ನಮ್ಮ ಜೀವನವನ್ನು ಅಲ್ಲಾಹು ಹಾಗು ಅವನ ರಸೂಲರ ಪಾಲನೆಯಲ್ಲಿ ನಮ್ಮನ್ನು ನಾವು ತೊಡಗಿ ಕೊಳ್ಳುವ ಇವತ್ತು ಸಮಯ ಇದೆ ಇವತ್ತು ಪಶ್ಚಾತ್ತಾಪದ ಬಾಗಿಲು ತೆರೆದಿದೆ ಇವತ್ತು ಅಲ್ಲಾಹನ ಅನುಗ್ರಹ ಗಳು ನಮ್ಮನ್ನು ಕರೆದು ಹೇಳುತ್ತಿದೆ ಬನ್ನಿ ಅಲ್ಲಾಹನ ಕಡೆಗೆ ಆದರೆ ನಾವೂ ಇನ್ನೂ ಮಲಗಿದ್ದೇವೆ....ಅಲ್ಲಾಹನ ಕಡೆಗೆ ಧಾವಿಸಿ ನಾಳೆ ಯಾರೂ ನೋಡಲಿಲ್ಲ!!!ನಾಳೆಯ ಪರಲೋಕದ ಸುಂದರ ಜೀವನಕ್ಕೆ ಇಂದು ಸ್ವಲ್ಪ ಪ್ರಯತ್ನ ಪಡಬೇಕಾಗಿದೆ...ಅದುವೇ ಜೀವನ.
ISLAMIC KANNADA

Comments

Popular Posts