Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ಕೆಟ್ಟ ಗೆಳೆಯನ ಸಹವಾಸ ವಿಷಕಾರಿ ಹಾವಿಗಿಂತ ಕ್ರೂರ-A bad friend's companion is brutal than a poisonous snake

ಮಕ್ಕಳ ಪಾಲನೆಯ ಮಟ್ಟ ಗಳನ್ನು ತಜ್ಞರು ಮೂರು ವಿಧಗಳಾಗಿ ವಿಂಗಡಿಸಿದ್ದಾರೆ   ಮೊದಲ   ಏಳು ವರ್ಷ ಮಕ್ಕಳನ್ನು ತಾಯಿ ತನ್ನ ಮಡಿಲಲ್ಲಿ ರಕ್ಷಣೆ ನೀಡುವಳು ಎರಡನೆಯ ಏಳು ವರ್ಷಗಳಲ್ಲಿ ಮಕ್ಕಳನ್ನು ಗುಲಾಮರಾಗಿ ಸಾಕುವಳು  ಮೂರನೆಯ ಏಳು ವರ್ಷಗಳಲ್ಲಿ ಮಕ್ಕಳನ್ನು ಸಹೋದರ ರಾಗಿ ಸಾಕಬೇಕಾಗಿದೆ ಮೊದಲನೆಯ ಏಳು ವರ್ಷದಲ್ಲಿ ಮಡಿಲಲ್ಲಿ ಸಾಕುವ ಉದ್ದೇಶ ಮಗು ನಮ್ಮಿಂದ ಕಲಿಯುವವ ರಾಗಬೇಕು
ಇಂದಿನ ಯುಗದಲ್ಲಿ ಮೂರು ವರ್ಷಗಳ ಮಕ್ಕಳನ್ನು ಶಾಲೆಗೆ ಕಳಿಸುತ್ತೇವೆ ತುಂಬಾ ಅಹಿತಕರ ಘಟನೆ ಇದು ತಾಯಿ ಮಗುವಿನಿಂದ ತನ್ನನ್ನು ತಾನು ಸ್ವಾತಂತ್ರ್ಯ ರಾಗಲು ಬಯಸುತ್ತಾಳೆ  ತಾಯಿಯಿಂದ ಕಲಿಯ ಬೇಕಾದ ಸಮಯದಲ್ಲಿ ಆ ಸಮಯವೂ ನಷ್ಟ ಪಡುತ್ತದೆ ಈ ಸಮಯ ಮನೆಯಲ್ಲಿ ಪಾಲನೆಯ ಸಮಯ ವಾಗಿದೆ ಒಬ್ಬ ತಂದೆ ಮಕ್ಕಳನ್ನು ಗಮನಿಸದಿದ್ದರೆ ತಾಯಿಯು ಪರಿಪೂರ್ಣ ವಾಗಿ ಗಮನ ಹರಿಸಬೇಕು ಎರಡನೆಯ ಏಳು ವರ್ಷಗಳಲ್ಲಿ ಮಕ್ಕಳನ್ನು ಗುಲಾಮರಾಗಿಸುವ ಉದ್ದೇಶ ಅವರು ತಾನಾಗಿ ಯಾವ ಕಾರ್ಯಗಳನ್ನು ನಿರ್ಧರಿಸುವ ಸಾಮರ್ಥ್ಯ ಇರುವುದಿಲ್ಲ ವಾದರಿಂದ ತಂದೆ ತಾಯಿ ಯರಿಗೆ ಮಕ್ಕಳ ನಿರ್ದಾರ ಗಳನ್ನು ಕೈಗೊಳ್ಳಬೇಕು ಮೂರನೆಯ ಏಳು ವರ್ಷಗಳಲ್ಲಿ ಅವರನ್ನು ಸಹೋದರರ ಹಾಗೆ ಕಾಣುವ ಉದ್ದೇಶ ಅಂದರೆ ವಿಶ್ವಾಸಿಗ  ರಾದ  ಮಕ್ಕಳು   ಹದಿನಾಲ್ಕರಿಂದ ಇಪ್ಪತ್ತೊಂದು ವರ್ಷಗಳ ವರೆಗೆ  ಸಹೋದರರಿಂದ ಹಲವು ಕಡೆಗಳಿಂದ  ಕಲಿಯುತ್ತಾರೆ ಆ  ಸಮಯ ಗಳಲ್ಲಿ ತಂದೆ ತಾಯಂದಿರು ಬುದ್ಧಿವಂತಿಕೆ ಯಿಂದ ಮಕ್ಕಳನ್ನು ಗಮನ ಇಡಬೇಕಾಗಿದೆ ಯಾಕೆಂದರೆ ಮಕ್ಕಳ ಸಹವಾಸ ಕೆಟ್ಟ ಸ್ವಬಾವದ ಮಕ್ಕಳೊಂದಿಗೆ ಆಗದಿರಲು.ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم 
ಹೇಳಿದರು 
المرء علي دين خليله فالينظر أحدكم من يخالل 
ಪ್ರತಿಯೊಬ್ಬರೂ ಅವನ ಗೆಳೆಯನ  ದರ್ಮದಲ್ಲಾಗಿರುತ್ತಾನೆ  ನಮಗೆ ಇಲ್ಲಿ ನೋಡ ಬೇಕಾಗಿರೋದು   ನಾವು ಯಾರನ್ನು ಗೆಳೆಯರಾಗಿ
ಸಹೋದರರಾಗಿ ಸ್ವೀಕರಿಸುತ್ತೇವೆ ನಮ್ಮ ಗೆಳೆಯರೋಬ್ಬರ ದೀನ್ ದರ್ಮ ಹಾಳಾದರೆ ಅದರ ವರ್ಣ ಅದರ ಪರಿಣಾಮ ನಮ್ಮ ಮೇಲೆ ಬೀಳುತ್ತವೆ ಆದರಿಂದ ನಮಗೆ ಸಜ್ಜನರ ಸಹವಾಸ ಮಾಡಲು  ಕಲ್ಪಿಸಲಾಗಿದೆ  ಕೆಟ್ಟ ಗೆಳೆಯ  ಕೆಟ್ಟ ಹಾವಿಗಿಂತ ವಿಷಕಾರಿ ಯಾಗಿರುತ್ತಾರೆ ಯಾಕೆಂದರೆ ಹಾವು ನಮ್ಮೊಂದಿಗೆ ಜಗಳ ಮಾಡಿದರೆ ನಮ್ಮ ಜೀವ ಹೋಗ ಬಹುದು ಆದರೆ ಕೆಟ್ಟ ಗೆಳೆಯ ಜಗಳ ಆಡಿದರೆ ನಮ್ಮ( ಈಮಾನ್ ) ವಿಶ್ವಾಸ ನಷ್ಟ ಹೊಂದುವುದು ಇದರಿಂದ ಸಜ್ಜನರ ಸಹವಾಸ ನಿನಗೆ ಸಜ್ಜನನಾಗಿಸುತ್ತದೆ ಕೆಟ್ಟ ವರ ಸಹವಾಸ ನಿನ್ನನ್ನು ಕೆಟ್ಟವನಾಗಿಸುತ್ತದೆ  ಶೈಖ್ ಸಹ ದಿ 
رضي الله عنه 
ಹೇಳುತ್ತಾರೆ ನಾನು ಮೂತ್ರ ವಿಸರ್ಜನೆ ಗೆಂದು ಶೌಚಾಲಯಕ್ಕೆ ಹೋದೆ ಅಲ್ಲಿ ಯಾರೋ ಇಟ್ಟ ಮಣ್ಣನ್ನು ನೋಡಿದೆ ಎತ್ತಿ ನೋಡಿದಾಗ ಅದರಿಂದ ಸುಗಂದ ಪರಿಮಳ ಬೀಸುತ್ತಿತ್ತು ಆ ಮಣ್ಣಿನಲ್ಲಿ ಕೇಳಿದರು ನೀನು ಮಣ್ಣೋ  ಅಥವಾ ಸುಗಂದ ವಸ್ತು ಆಗಿದಿಯೋ ಯಾರು ನೀನು ಎಂದು ಕೇಳಿದಾಗ ಆ ಮಣ್ಣು ಉತ್ತರ ನೀಡಿತು ನಾನು ಮಣ್ಣಾಗಿದ್ದೇನೆ ಆದರೆ ಕೆಲವು ದಿನಗಳಿಂದ ನಾನು ಹೂವಿನ ಗೆಳೆತನದಲ್ಲಿ   ಕಾಲ ಕಳೆದೆ  ಗುಲಾಬಿ ಹೂವಿನ ಕಾಲಡಿಯಲ್ಲಿ ಕಾಲ ಕಳೆದೆ ಆದರಿಂದ ನನ್ನ ಗೆಳೆಯನ  ಸೌಂದರ್ಯ ನನ್ನಲ್ಲಿ ಪ್ರತ್ಯಕ್ಷ ವಾಯಿತು ಎಂದು ಹೇಳಿತು ಹೂವಿನೊಂದಿಗೆ ಗೆಳೆತನ ಬೆಳೆಸಿದ ಮಣ್ಣಿಗೆ ಪರಿಮಳ ಇದ್ದರೆ ಸಜ್ಜನರ ಸಹವಾಸದಲ್ಲಿ ಎಷ್ಟು ಸಾಮರ್ಥ್ಯ ಇದೆ ಎಂದು ಯೋಚಿಸಿ!
ISLAMIC KANNADA

Comments

Popular Posts