Skip to main content

Featured

ದಶಮಾನೋತ್ಸವ ಸಂಭ್ರಮದಲ್ಲಿ

  ಗುರು ಹಾಗೂ ತಮ್ಮ ಶಿಷ್ಯಂದಿರ ಸಂಘಟನೆ ಸಿರಾಜುಸುನ್ನ ಫೌಂಡೇಶನ್ ಕಣ್ಣಂಗಾರ್ ಹೆಜಮಾಡಿ..ಇದನ್ನು ಹಗಲು ರಾತ್ರಿ ಎಂದಲ್ಲದೆ ಕಟ್ಟಿ ಬೆಳೆಸಿದ ಇದಕ್ಕಾಗಿ ಶ್ರಮ ಪಟ್ಟ  P. P Ahmad saqafi kashipatna ಹಾಗೂ ಅವರ ಶಿಷ್ಯಂದಿರು ಇವರಿಗೆ ಹೃದಯ ಪೂರ್ವಕ ಶುಭಾಷಯ ಗಳು ಈ ಸಂಘಟನೆ ಇಂದಿಗೆ ಇದೇ ಬರುವ 9 November ರಂದು ಕಣ್ಣಂಗಾರ್ ನಲ್ಲಿ ದಶಮಾನೋತ್ಸವ ಆಚರಿಸುತ್ತಿದೆ ಇಂಥಹ ಘಟನೆಗಳು ಕರ್ನಾಟಕದಲ್ಲಿ ಬಹಳ ತೀರ ಕಂಡು ಬರುವಂತಹದ್ದು ಆಕಾಶದಲ್ಲಿ ಮೋಡಗಳು ಉತ್ತರದಿಂದ ಪಕ್ಷಿಮಕ್ಕೆ ಚಲಿಸುವಾಗ ಯಾವಾ ಅಡಚಣೆ ಇಲ್ಲದೆ ಮಿಂಚಿನ ವೇಗದಲ್ಲಿ ಚಲಿಸುವ ಹಾಗೆ ಈ ಸಂಘಟನೆ ಅಂತ್ಯ ದಿವಸದ ವರೆಗೆ ಚಲಿಸಲು ಎಂದು ಶುಭ ಕೋರುವ ... MUSTHAFA HASAN ALI KHAN ALQADRI.

ಮದೀನದ ಮಣ್ಣಿನಲ್ಲಿಯೂ ಶಿಫಾ ಅಡಗಿದೆ-Shifa also lies in the soil of Medina

ತುಂಬಾ ದೂರದ ಪ್ರಯಾಣ  ತಭೂಕ್ ನಿಂದ ಪ್ರವಾದಿ ಮುಹಮ್ಮದ್ ಮುಸ್ತಫ 
ضلي الله عليه وسلم 
ರವರು ವಾಪಸ್ ಮದೀನ ಪಟ್ಟಣಕ್ಕೆ  ತಲುಪುವ ಸಂದರ್ಭ  ಅದು     ಪ್ರವಾದಿ ಯವರ ಅನುಯಾಯಿಗಳು ಪ್ರವಾದಿ ಯವರ   ಆಗಮನದ ದಾರಿ ಕಾಯುತ್ತಿದ್ದರು   ಜನರು ಪ್ರವಾದಿ ಯವರನ್ನು ನೋಡಲು ಚಡಪಡಿಸುತ್ತಿದ್ದರು ಪ್ರವಾದಿ ಯವರ ಮುತ್ತಿನಂತ ಮಾತುಗಳನ್ನು ಆಲಿಸಲು ಕಾಯತ್ತಿದ್ದರು ಅನುಯಾಯಿಗಳು ಪ್ರತೀ ದಿವಸ ಪ್ರವಾದಿ  ಅವರನ್ನು ಆಲಿಸುವವರಾಗಿದ್ದರು ಮನಸ್ಸಿನಲ್ಲಿ ಅಶಾಂತಿ ಉಂಟಾದರೆ ಪ್ರವಾದಿ ಯವರ ಸನ್ನಿದಿಯಲ್ಲಿ ಕಾಲ ಕಳೆಯುತ್ತಿದ್ದರು  ಪ್ರವಾದಿ ಯವರ ತಬೂಕ್ ಪ್ರಯಾಣ ದಿಂದ ಮದೀನ ದಲ್ಲಿ ಅಸಮಾಧಾನದ ಕಾರ್ಮೋಡಗಳು ತಲೆ ಎತ್ತಿ ನಿಂತಿದ್ದವು ಪ್ರವಾದಿ  ಯವರು ಇಲ್ಲದ ಮದೀನ ನೀರಿಲ್ಲದ ಬಾವಿಯ ಹಾಗೆ  ಸುಗಂಧ ವಿಲ್ಲದ ಪುಷ್ಪ ಗಳ ಹಾಗೆ   ಅಲೆಗಳಿಲ್ಲದ ಸಮುದ್ರದ ಹಾಗೆ ನಕ್ಷತ್ರ ಗಳಿಲ್ಲದ ಆಕಾಶ      ಆಗಿಧ್ಧವು  ಉಪ್ಪಿಲ್ಲದ ಊಟದ ಹಾಗೆ ದಿವಸ ಗಳು ಉರುಳುತ್ತಿದ್ದವು  ಎಷ್ಟೋ ದಿವಸ ಗಳಿಂದ ಪ್ರವಾದಿ ಯವರನ್ನು ನೋಡಿರಲಿಲ್ಲಾ ಪ್ರವಾದಿ ಯವರು ವಾಪಸ್ ಮದೀನಕ್ಕೆ ತೆರೆಳಿದಾಗ ಅಲ್ಲಿನ ಜನರು ಅವರ ಸ್ವಾಗತಕ್ಕಾಗಿ ಸಜ್ಜಾಗಿ ನಿಂತರು ಮದೀನದ ಬೋಂಡರಿಯಲ್ಲಿ ಜನರು ಕಾಯುತ್ತಿದ್ದರು ಪ್ರವಾದಿ ಯವರು ಆ ಕಡೆಯಿಂದ ತೆರಳುತ್ತಿದ್ದರು ಗಾಳಿ ಮದೀನದ ದಿಕ್ಕಿನಿಂದ ಪ್ರವಾದಿ ಯವರ ಕಡೆಗೆ ಬೀಸಲು ಆರಂಬಿಸಿತು ಮದೀನದ ಜನರ ಕುದುರೆಯ ಕಾಲಿನ ಮಣ್ಣು ಪ್ರವಾದಿ ಯವರ ಕಡೆಗೆ ಬೀಸುತ್ತಿತ್ತು  ಗಾಳಿಯು   ತನ್ನ ದಿಕ್ಕು ಬದಲಿಸುತ್ತಾ   ಪ್ರವಾದಿ ಯವರ ಬರುವಿಕೆಯ  ಕಡೆ ಹಾರುತ್ತಿತ್ತು ಪ್ರವಾದಿಯವರೊಂದಿಗೆ ಇದ್ದ ಸಹಾಬಿಗಳು ದೂಳಿನ ಕಾರಣ ಮುಖಕ್ಕೆ ಬಟ್ಟೆ ಗಳಿಂದ ಮರೆಮಾಚಿದರು ಆವಾಗ  ಪ್ರವಾದಿ ಯವರು ಹೇಳುತ್ತಾರೆ ನಿಮ್ಮ ಮುಖದಿಂದ ಬಟ್ಟೆ ಗಳನ್ನು ತೆಗೆಯಿರಿ ನಿಮಗೆ ಗೊತ್ತಿಲ್ಲವೆ ಮದೀನದ ಮಣ್ಣಿನಲ್ಲಿಯೂ ಶಿಫಾ ಇದೆ ಎಂದು  ಆ ಮಣ್ಣಿನಲ್ಲಿ ಯಾಕಾಗಿ ಶಿಫಾ ಬಂತು ಅದು ಪ್ರವಾದಿ ಯವರ ಕಾಲು ಆ ಮಣ್ಣಿನಲ್ಲಿ ನಡೆದಾಡಿದ್ದವು ಎಂದು ಉಲ್ಲೇಖ ಗಳಲ್ಲಿ ಕಾಣಲು ಸಿಗುತ್ತದೆ ಪ್ರವಾದಿ ಯವರ ವಾಸ ಸ್ಥಳ   ಮದೀನ ಆಗಿದ್ದರಿಂದ ಅಲ್ಲಿ ಬರ್ಕತ್ ನೀಡಲಾಗಿದೆ ಮದೀನದ ಮಸೀದಿಯಲ್ಲಿ ನಮಾಝ್ ನಿರ್ವಹಿಸಿ ಪ್ರವಾದಿ ಯವರ ಝಿಯಾರತ್ ಮಾಡದಿದ್ದರೆ ಅವನಿಗಿಂತ ಅಬಾಗ್ಯವಂತ ಬೇರೆ ಯಾರೂ ಇರಲಾರನು  ಪ್ರವಾದಿ ಯವರ ಕಬರ್ ಸಂದರ್ಶಿಸುವವನು ನಾನು ಪ್ರವಾದಿ ಯವರನ್ನು ಸಂದರ್ಶಿಸಿದೆ ಎಂದು ಹೇಳಲಿ ಜ್ನಾನದ ಸಾಗರ ವಿರುವ ದಿಕ್ಕಿನಲ್ಲಿ ಅನುಗ್ರಹ ಗಳ ಮಳೆ ಸುರಿಯುತದೆ ಒಬ್ಬ ಸತ್ಯ ವಿಶ್ಶಾಸಿಗೆ ಮಾತ್ರ    ಮದೀನ ತಲುಪಲು ಸಾಧ್ಯ ವಾಗುತ್ತದೆ ಪ್ರತಿಯೊಬ್ಬರೂ ಮದೀನದ ಮಣ್ಣಿನಲ್ಲಿ ಧಫನ್ ಆಗಲು ಆಗ್ರಹಿಸುತ್ತಾನೆ ಹಬೀಬರ ಬಳಿ ಕಾಲ ಕಳೆಯಲು ಆಗ್ರಹಿಸುತ್ತಾನೆ ಓ ಅಲ್ಲಾಹುವೆ  ಈ ಪಾಪಿಯಾದ ನಮಗೆಲ್ಲರಿಗೆ ಹಬೀಬರ  ಶಫಾಅತ್ ನೀಡಿ ಅನುಗ್ರಹಿಸು ರಬ್ಬೇ  ಆಮೀನ್.
islamic kannada

Comments

Popular Posts