Skip to main content

Featured

ಹಜ್ಜ್ ಅಂದರೆ ಏನು ತಪ್ಪದೇ ಓದಿ

ಹಜ್ ಕರ್ಮ ಎಂಬುವುದು ಇಸ್ಲಾಮಿನ ಐದು ಆಧಾರ ಸ್ತಂಭ ಗಳಲ್ಲಿ ಒಂದಾಗಿದೆ  ಅದನ್ನು ತನು ಮನ ಧನ ಗಳಿಂದ ಸಾಮರ್ಥ್ಯವಿರುವವರಿಗೆ ಮಾತ್ರ  ನಿರ್ವಹಿಸುವುದು ಅನಿವಾರ್ಯವಾಗಿದೆ,  ನಬಿ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಒಮ್ಮೆ ಮಾತ್ರ ಹಜ್ ಮಾಡಿದ್ದು ಎಂಬ ವಿಷಯ ಸತ್ಯವಲ್ಲದಿರುವುದು ದೃಢವಾಗಿದೆ, ಹಜ್ ಬಗ್ಗೆ ನಬಿಯನ್ನು ಕುರಿತು ಹಲವು ಸರಿಯಾದ ಹದೀಥ್‌ಗಳನ್ನು ದಾಖಲಿಸಲಾಗಿದೆ, ಈ ಲೇಖನದಲ್ಲಿ ನಾವು ನಬಿಯವರಿಂದ ಸತ್ಯವೆಂದು ಹೇಳಲ್ಪಟ್ಟ ಹಜ್ ಕುರಿತು ಕೆಲವು ಹದೀಥ್‌ಗಳನ್ನು ಉಲ್ಲೇಖಿಸುತ್ತೇವೆ. ಹಜ್ ಎಂಬುವದು ಭಾಷೆಯಲ್ಲಿಚ್ಛೆಯನ್ನು ಸೂಚಿಸುವದ್ದಾಗಿ ವ್ಯಾಖ್ಯಾನಿಸಲಾಗಿದೆ, ಹಜ್ಜು, ಹಜ್ಜು ಮಾಡುವುದೇ ಎಂದರೆ ಅದನ್ನು ಆಶಿಸುವುದು, ಮತ್ತು ಯಾರನ್ನಾದರೂ ಹಜ್ಜು ಮಾಡಿದೆ ಎಂದರೆ ಅವನನ್ನು ಆಶಿಸಲಾಗಿದೆ ಎಂದು ಅರ್ಥ. ಮಹಜ್ಜೂಜ್ ವ್ಯಕ್ತಿ' ಎಂದರೆ  ಆಶಿಸಿದ ವ್ಯಕ್ತಿ, ಹಾಗೂ ಹಜ್ ಎಂದರೆ ಮಹತ್ತಾದ ಆಶೆ ಎಂದು ಹೇಳಲಾಗಿದೆ. ಶರಿಯಾ ದಲ್ಲಿ ಹಜ್ ಅನ್ನು ಹೀಗೆ ವ್ಯಾಖ್ಯಾನಿಸಲಾಗಿದೆ: ಮುಸ್ಲಿಂನು ಬೇರೆ ಬೇರೆ ಸ್ಥಳಗಳಿಗೆ, ವಿಶೇಷವಾಗಿ  (ಹರಾಮ್) ಮತ್ತು ಆರಫಾ ಕಡೆಗೆ, ನಿರ್ದಿಷ್ಟ ಸಮಯದಲ್ಲಿ ಹೋಗಿ ನಿರ್ದಿಷ್ಟ ಕೆಲಸಗಳನ್ನು ಮಾಡುವುದು; ಉದಾಹರಣೆಗೆ ಆರಫಾರಲ್ಲಿ ನಿಲ್ಲುವುದು, ತವಾಫ್ ಮತ್ತು ಸಾಮಾನ್ಯವಾಗಿ ಉಲಮಾ ಗಳ ಅಭಿಪ್ರಾಯದ ಪ್ರಕಾರ ಸೈ ಎಂಬ ಕ್ರಿಯೆಗಳನ್ನು(ಅಂದರೆ ಸಫಾ ಮತ್ತು ಮರ್ವಾ ಎಂಬ ಎರಡು ಪರ್ವತ ಗಳ ಮಧ್ಯೆ ನಡೆಯುವುದು)...

ಬೆಂಕಿಯಲ್ಲಿ ಅರಳಿದ ಹೂವು-A flower that bloomed in fire

ಪ್ರವಾದಿ ಗಳ ಪಟ್ಟಿಯಲ್ಲಿ ಇಬ್ರಾಹಿಮ್ عليه السلام ಅತ್ಯಂತ ಪ್ರಮುಖ ಪ್ರವಾದಿ ಯಾಗಿದ್ದರು ಏಕೆಂದರೆ ಅವರ ದ್ರಷ್ಟಾಂತ ಗಳು ಎಲ್ಲಾ ಪ್ರವಾದಿ ಗಳಿಗೆ ಆಧಾರ ವಾಗಿದೆ ಪವಿತ್ರ ಕುರ್ಆನ್ ತೀಳಿಸಿದ ಹಾಗೆ ಬುಡಕಟ್ಟು ಜನಾಂಗ ಪ್ರವಾದಿ ಇಬ್ರಾಹಿಮ್ ಅ.ಸ.ರವರ ಜನಾಂಗ ದಿಂದ ಬಂದವರಾಗಿದ್ದಾರೆ    ಅಲ್ಲಾಹನು ಹಲವಾರು ಪರೀಕ್ಷೆಗೆ ಒಳಪಡಿಸಿದ್ದಾನೆ ಅದರಲ್ಲಿ ಒಂದು ಬೆಂಕಿಯ ಜ್ವಾಲೆ.  ಗದಗದಿಸುವ ಬೆಂಕಿಯಲ್ಲಿ ಪ್ರವೇಶಿಸುವ ಮುನ್ನ ಇಬ್ರಾಹಿಮ್ عليه السلام 
ರವರ ಮುಖದಲ್ಲಿ ಮಂದಹಾಸ ವಿತ್ತು ನನ್ನನ್ನು ಬೆಂಕಿಯಲ್ಲಿ ಎಸೆದು ಬಸ್ಮವಾಗಿರಿಸುವರು ಎಂಬ ಯಾವ ಭಯವೂ ಇರಲಿಲ್ಲ  ಇವೆಲ್ಲವೂ ನನ್ನ ಪರಮಾತ್ಮನ ಬಯಕೆ ಯಂತೆ ನಡೆಯುತ್ತಿದೆ ಎಂಬ ಮನೋಭಾವ ವಿತ್ತು ಒಂದೊಮ್ಮೆ ಬೆಂಕಿ ನನ್ನ ಅಸ್ತಿತ್ವವನ್ನು ಬಸ್ಮ ಮಾಡಿದರೂ ಇದು ನನ್ನ ವಿಜಯ ವಾಗಿರುತ್ತದೆ ಎಂದು ಯೋಚಿಸುತ್ತಾ  ಮುಗುಳ್ನಗುತ್ತ ಬೆಂಕಿಯತ್ತ ಧಾವಿಸಿದರು  ಕ್ಷಣಾರ್ಧದಲ್ಲಿ ಜಿಬ್ರೀಲ್ عليه السلام ಪ್ರತ್ಯಕ್ಷ ಗೊಂಡು ಹೇಳಿದರು ಓ ಪ್ರವಾದಿ ಯವರೇ ತಾವು ಸಮ್ಮತಿಸಿದರೆ ನಾನು ಅಲ್ಲಾಹನ ಸಾನಿದ್ಯ ದಲ್ಲಿ ನಿಮ್ಮ ಅಹವಾಲು ಗಳನ್ನು ಹೇಳುವೆನು ಎಂದಾಗ ಇಬ್ರಾಹಿಮ್ عليه السلام ಹೇಳಿದರು ನಾನು ಏನೂ ಹೇಳಲಾರೆ ತಾವು ಅಲ್ಲಾಹನಲ್ಲಿ ಹೇಳಿ ಈ ಅವಿಶ್ವಾಸಿಗಳ ಮನಸ್ಸಿನಲ್ಲಿ ಇಂತಹಾ ಕ್ರತ್ಯಗಳನ್ನು  ಎಸೆಯಲು  ಉದ್ಬವಿಸಿದವರು ಯಾರು ಅಲ್ಲಾಹನು ಎಂದಾದರೆ ಅವನ ದಾಸನ ಇಚ್ಚೆಯೂ ಅದೇ ಆಗಿದೆ ಎಂದರು ಅಲ್ಲಾಹನ ಇಚ್ಛೆಗಳಲ್ಲಿ ಹಲವಾರು ತಂತ್ರ ಗಳು ಅಡಗಿದೆ ಮಾನವನ ಕಲ್ಯಾಣ ಕ್ಕಾಗಿ ಅಲ್ಲಾಹನು ನಮ್ಮನ್ನು ಪರೀಕ್ಷಿಸುತ್ತಾ ಇರುತ್ತಾನೆ.
islamic kannada

Comments

Popular Posts