Skip to main content

Featured

ಹಜ್ಜ್ ಅಂದರೆ ಏನು ತಪ್ಪದೇ ಓದಿ

ಹಜ್ ಕರ್ಮ ಎಂಬುವುದು ಇಸ್ಲಾಮಿನ ಐದು ಆಧಾರ ಸ್ತಂಭ ಗಳಲ್ಲಿ ಒಂದಾಗಿದೆ  ಅದನ್ನು ತನು ಮನ ಧನ ಗಳಿಂದ ಸಾಮರ್ಥ್ಯವಿರುವವರಿಗೆ ಮಾತ್ರ  ನಿರ್ವಹಿಸುವುದು ಅನಿವಾರ್ಯವಾಗಿದೆ,  ನಬಿ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಒಮ್ಮೆ ಮಾತ್ರ ಹಜ್ ಮಾಡಿದ್ದು ಎಂಬ ವಿಷಯ ಸತ್ಯವಲ್ಲದಿರುವುದು ದೃಢವಾಗಿದೆ, ಹಜ್ ಬಗ್ಗೆ ನಬಿಯನ್ನು ಕುರಿತು ಹಲವು ಸರಿಯಾದ ಹದೀಥ್‌ಗಳನ್ನು ದಾಖಲಿಸಲಾಗಿದೆ, ಈ ಲೇಖನದಲ್ಲಿ ನಾವು ನಬಿಯವರಿಂದ ಸತ್ಯವೆಂದು ಹೇಳಲ್ಪಟ್ಟ ಹಜ್ ಕುರಿತು ಕೆಲವು ಹದೀಥ್‌ಗಳನ್ನು ಉಲ್ಲೇಖಿಸುತ್ತೇವೆ. ಹಜ್ ಎಂಬುವದು ಭಾಷೆಯಲ್ಲಿಚ್ಛೆಯನ್ನು ಸೂಚಿಸುವದ್ದಾಗಿ ವ್ಯಾಖ್ಯಾನಿಸಲಾಗಿದೆ, ಹಜ್ಜು, ಹಜ್ಜು ಮಾಡುವುದೇ ಎಂದರೆ ಅದನ್ನು ಆಶಿಸುವುದು, ಮತ್ತು ಯಾರನ್ನಾದರೂ ಹಜ್ಜು ಮಾಡಿದೆ ಎಂದರೆ ಅವನನ್ನು ಆಶಿಸಲಾಗಿದೆ ಎಂದು ಅರ್ಥ. ಮಹಜ್ಜೂಜ್ ವ್ಯಕ್ತಿ' ಎಂದರೆ  ಆಶಿಸಿದ ವ್ಯಕ್ತಿ, ಹಾಗೂ ಹಜ್ ಎಂದರೆ ಮಹತ್ತಾದ ಆಶೆ ಎಂದು ಹೇಳಲಾಗಿದೆ. ಶರಿಯಾ ದಲ್ಲಿ ಹಜ್ ಅನ್ನು ಹೀಗೆ ವ್ಯಾಖ್ಯಾನಿಸಲಾಗಿದೆ: ಮುಸ್ಲಿಂನು ಬೇರೆ ಬೇರೆ ಸ್ಥಳಗಳಿಗೆ, ವಿಶೇಷವಾಗಿ  (ಹರಾಮ್) ಮತ್ತು ಆರಫಾ ಕಡೆಗೆ, ನಿರ್ದಿಷ್ಟ ಸಮಯದಲ್ಲಿ ಹೋಗಿ ನಿರ್ದಿಷ್ಟ ಕೆಲಸಗಳನ್ನು ಮಾಡುವುದು; ಉದಾಹರಣೆಗೆ ಆರಫಾರಲ್ಲಿ ನಿಲ್ಲುವುದು, ತವಾಫ್ ಮತ್ತು ಸಾಮಾನ್ಯವಾಗಿ ಉಲಮಾ ಗಳ ಅಭಿಪ್ರಾಯದ ಪ್ರಕಾರ ಸೈ ಎಂಬ ಕ್ರಿಯೆಗಳನ್ನು(ಅಂದರೆ ಸಫಾ ಮತ್ತು ಮರ್ವಾ ಎಂಬ ಎರಡು ಪರ್ವತ ಗಳ ಮಧ್ಯೆ ನಡೆಯುವುದು)...

ಭಯದ ವಾತಾವರಣ ದಲ್ಲಿ ನಾವೆಲ್ಲರು


ಈ ಭೂಮಿಯ ಮೇಲೆ ಹುಟ್ಟಿ ಬಂದ ಪ್ರತಿಯೊಬ್ಬ  ಮನುಷ್ಯನು ಸಾವಿನ ರುಚಿ ನೊಡಲೇ ಬೇಕು. ಇದು ನೂರಕ್ಕೆ  ನೂರು ಸತ್ಯ.

ಆದರೆ ಇಂದಿನ ನಮ್ಮ ರಾಜ್ಯದ ಭಯ ಭೀತಿ ವಾತಾವರಣ ವನ್ನು ಎದುರಿಸುವ ಶಕ್ತಿ ನಮ್ಮಲ್ಲಿ ಯಾರಿಗೂ ಇಲ್ಲ ವೆಂದು ಹೇಳಬಹುದು. ಇಂದು  ಅಸ್ತಿತ್ವ ದಲ್ಲಿರುವ ಸರ್ಕಾರ ಪ್ರಜೆಗಳ ಕಷ್ಟ ಸುಖ ಗಳಿಗೆ ಎಷ್ಟು ಸ್ಪಂದಿಸುತ್ತಿದೆ. ಬಡವರ ಪಾಡೇನು . ಸಾಧಾರಣ ಕೆಮ್ಮು  ಜ್ವರ ಬಂದವರು ಆಸ್ಪತ್ರೆ ಗಳಿಗೆ ಬೇಟಿ ಕೊಡಲು ನೂರು ಸಲ ಯೋಚಿಸಬೇಕಾಗಿದೆ. ಹೋಗಬೇಕಾ ಬೇಡವೆ  ಎಂಬ ಭ್ರಮೆ   ಹೋದರೆ ನಮ್ಮನು ಕೊರೊನ ಎಂಬ ಸಾಂಕ್ರಾಮಿಕ   ರೋಗ  ಬೆನ್ನು ಹಿಡಿಯುವುದೇ ಅಥವಾ  ಹರಡುವ  ಭಯ ಇದಕ್ಕೆಲ್ಲ ಕಾರಣ ಕರ್ತ ರು ಯಾರು ಇಂತಹ ಪರಿಸ್ಥಿತಿ ಯನ್ನು  ಶ್ರಷ್ಟಿಸಿದವರು   ಯಾರು ಪ್ರಸ್ತುತ  ಸರಕಾರ ಉತ್ತರಿಸುವರೇ ನಾನು    ಮೂರು ದಿವಸ ಸರಕಾರಿ ಆಸ್ಪತ್ರೆ ಹೊರವಲಯದಲ್ಲಿ  ತೇಲಾಡಿದೆ ಅಲ್ಲಿನ ವಾತಾವರಣ ನಿಜಕ್ಕೂ ಭಯಭೀತ ಇಂದು ನಮ್ಮ ದಕ್ಷಿಣ ಕನ್ನಡ ಒಂದು ಲೆಕ್ಕದ ಮಟ್ಟಿಗೆ  ಸರಿ ಇದೆ ಎಂದು ಹೇಳಬಹುದು ಆದರೆ ಮುಂದಿನ ದಿನಗಳಲ್ಲಿ ರೋಗಿಗಳಿಗೆ ಈ ಸರಕಾರ ಎಷ್ಟು ಸಂದಿಸಬಹುದು ಯಾವ ಮುಂಜಾಗ್ರತೆ ಯಾವ ಅನೂಕೂಲತೆಯನ್ನು ಈಗಾಗಲೆ ತಯಾರಿಸಿ ಇಟ್ಟಿವೆ ಎಂಬ ಪ್ರಶ್ನೆ   ಕಾಡುತ್ತಿದೆ  ಭಯ ಭೀತದಲ್ಲಿ ನಮ್ಮ ದಕ್ಷಿಣ ಕನ್ನಡ ಕೂಡ ಸೇರಿದೆ. ಈಗಾಗಲೇ ಆಸ್ಪತ್ರೆ ಗಳಲ್ಲಿ  ಬೆಡ್ಡಿನ  ಕೊರತೆ,ಆಕ್ಷಿಜನ್  ಕೊರತೆ ವೈದ್ಯ ರುಗಳ ಕೊರತೆ ಇದಕ್ಕೆಲ್ಲ   ಹೊಣೆ ಯರು ನಾವು ಓಟು ಹಾಕಿ ಆರಿಸಿದ ಜನ ಪ್ರತಿ ನಿದಿಗಳು ಏನು ಮಾಡುತಿದ್ದಾರೆ ಜನರ ಕಷ್ಟ ಸುಖಕ್ಕೆ ಸ್ಪಂದಿಸುವ ಜವಾಬ್ದಾರಿ ಅವರದ್ದಲ್ಲವೆ  ? ಇಲ್ಲಿ ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ

ಈ ವ್ಯತ್ಯಾಸ    ಯಾವಾಗ ಸಮಾನತೆಯ ಮೆಟ್ಟಿಲೇರಬಹುದು   ಇಂದೇ ಪೃತಿಯೊಬ್ಬ. ನಾಗರಿಕರು  ಚಿಂತಿಸ ಬೇಕು ಇನ್ನು ಮುಂದಿನ ದಿನಗಳಲ್ಲಿ

ನಾವು ಯಾರನ್ನು  ನಮ್ಮ ಪತಿನಿಧಿ ಯಾಗಿ ಆರಿಸಬೇಕು ನಮ್ಮ  ಜೀವ ದೊಂದಿಗೆ ಆಟ ಆಡುವವರು ನಮಗೆ ಬೇಕೆ ಅಥವಾ ನಮ್ಮ ಕಷ್ಟಗಳಿಗೆ ಸ್ಪಂದಿಸುವ ನಾಯಕರು ಬೇಕೆ ಎಂದು ಚಿಂತಿಸ ಬೇಕು ಸಮಯ  ಸಂದರ್ಬ ಮಿತಿ ಮೀರುವ ಮುನ್ನ ಎಚ್ಚೆತ್ತು ಗೊಳ್ಳಬೇಕು  ಪ್ರತಿಯೊಂದು ಮನೆಯಲ್ಲಿ  ಮುದುಕರಿದ್ದಾರೆ ಪತಿಯೊಂದು ಮನೆಯ ಪ್ರತಿಯೊಬ್ಬ ಪಜೆಯು ಚಿಂತಿಸಬೇಕು ನಮ್ಮ ಮಕ್ಕಳ ಮುಂದಿನ ಭವಿಷ್ಯ ಏನು ನಾವು ನಮ್ಮ ಮುಂದಿನ ಜನಾಂಗವನು ನರಕ ವನ್ನಾಗಿಸಿ ಬಿಟ್ಟುಹೊಗುವುದೇ .ಉತ್ತಮ ಭಾರತ ಕಟ್ಟಲು ಯಾವ ಪ್ರತಿನಿದಿ ಬೇಕಾಗಿದೆ ಎಂದು ಚಿಂತಿಸಬೇಕು .

ಎಸ್ |ಎಮ್ ಮುಸ್ತಫಾ ಸಾಸ್ತಾನ 

Comments

Popular Posts