Skip to main content

Featured

ಕಾಸ್ಟಲ್ ಕರ್ನಾಟಕದ ಮುಸ್ಲಿಂ ಸಮುದಾಯದಲ್ಲಿನ ಆತ್ಮಹತ್ಯೆ: ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನ

ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಒಂದು ತೀವ್ರ ಸಾರ್ವಜನಿಕ ಆರೋಗ್ಯದ ಸಮಸ್ಯೆಯಾಗಿಬಿಟ್ಟಿದೆ, ದೈನಂದಿನ ಘಟನಗಳನ್ನು ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ವರದಿ ಮಾಡಲಾಗುತ್ತಿದೆ. ಈ ಸಮಸ್ಯೆ ಬೇರೆ ಬೇರೆ ಸಮುದಾಯಗಳ  ಮೇಲೆ ಪರಿಣಾಮ ಬೀರುತ್ತಿದ್ದರೂ, ಮುಸ್ಲಿಂ ಸಮುದಾಯದ ಒಳಗಿನ ಪರಿಣಾಮವನ್ನು ಅರ್ಥಮಾಡಿಕೊಳ್ಳಲು, ಈ ಪ್ರದೇಶದ ವಿಶಿಷ್ಟ ಸಾಮಾಜಿಕ ವಿನ್ಯಾಸ, ಆರ್ಥಿಕ ಒತ್ತಡಗಳು ಮತ್ತು ಸಾಂಸ್ಕೃತಿಕ ಗುಣಲಕ್ಷಣಗಳನ್ನು ಪರಿಶೀಲಿಸಬೇಕು. ಲಭ್ಯವಿರುವ ವರದಿ  ಪ್ರಕಾರ ಆತ್ಮಹತ್ಯೆ ಡೇಟಾವನ್ನು ವಿಭಜಿಸುತ್ತಿಲ್ಲ, ಆದರೆ ವಿಸ್ತೃತ ಪ್ರದೇಶೀಯ ಪ್ರವೃತ್ತಿಗಳು ಅಡಗಿರುವ ಕಾರಣಗಳನ್ನು ಬೆಳಕಿಗೆಡಿಸುತ್ತವೆ. ಪ್ರದೇಶೀಯ ಸ್ಥಿತಿ: ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣದ ಏರಿಕೆ ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ, ಪ್ರತಿದಿನ ಹಲವು ಘಟನಗಳನ್ನು ಜಿಲ್ಲೆಗಳಾದ್ಯಂತ ವರದಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹಣಕಾಸು ಚಿಂತೆ, ಕುಟುಂಬ ಕಲಹ, ಮಾನಸಿಕ ಆರೋಗ್ಯ ಹೋರಾಟಗಳು ಮತ್ತು ಸಾಮಾಜಿಕ ಕಲಹ ಎದುರಿಸುತ್ತಿರುವ ವ್ಯಕ್ತಿಗಳು ಸೇರಿದ್ದಾರೆ. ಹೆಚ್ಚಿನ ವಿವರಗಳಲ್ಲಿ ಧಾರ್ಮಿಕ ಗುರುತನ್ನು ಅಂದಾಜಿಸಲು ವರದಿಗಳು ನಿರ್ದೇಶಿಸುತ್ತಿಲ್ಲದಿದ್ದರೂ, ಈ ಪ್ರದೇಶದ ಮುಸ್ಲಿಂ ಕುಟುಂಬಗಳು ಒಂದು ಸಮಾನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಹಂಚಿಕೊಂಡಿವೆ—ಮೀನುಧಾನ್ಯ, ಚಿ...

ಕೆಲವರಿಗೆ ವಿವಾದಗಳೇ ಬೇಕು.ವಿವಾದಗಳಿಲ್ಲದೆ ಅವರಿಗೆ ಜೀವನವೇ ಇಲ್ಲ.

ವಿವಾದಗಳ ನಿರ್ಮಾಪಕರಾಗದೆ ನಿವಾರಕರಾಗೋಣ

✍️ *ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ*

ಕೆಲವರಿಗೆ ವಿವಾದಗಳೇ ಬೇಕು.ವಿವಾದಗಳಿಲ್ಲದೆ ಅವರಿಗೆ ಜೀವನವೇ ಇಲ್ಲ.


ಊಟದಲ್ಲಿ ಕಲ್ಲು ಸಿಕ್ಕರೆ ಕಲ್ಲನ್ನು ಬೀಸಾಡಿ ಊಟ ಮುಂದುವರಿಸ ಬೇಕು.ಇದು ಬುದ್ಧಿ ವಂತಿಕೆ.

ಅಲ್ಲದೆ ಊಟದ ಮುಂದೆ ಕುಳಿತು ಕಲ್ಲನ್ನೇ ಹುಡುಕುವವನಿಗೆ ಊಟ ಮಾಡಲು ಸಾಧ್ಯವಿಲ್ಲ.

ಅವನ ಸಮಯಗಳನ್ನೆಲ್ಲಾ 

ಕಲ್ಲು ಹುಡುಕುವುದರಲ್ಲೇ ಕಳೆಯಬೇಕಾಗುತ್ತದೆ.

ಇದೇ ರೀತಿ ಇಂದು 

ಮುಸ್ಲಿಂ ಸಮುದಾಯದ ಹೆಸರಿನಲ್ಲಿ  ಕೆಲವರು ವಿವಾದಗಳನ್ನೇ ಹುಡುಕಿ

ಸಣ್ಣ ಪುಟ್ಟ ಕಾರ್ಯಗಳನ್ನು ವೈಭವೀಕರಿಸಿ ಇಲ್ಲಸಲ್ಲದ ಅಂತೆಕಂತೆಗಳನ್ನು ಸೃಷ್ಟಿಸಿ ಅನಗತ್ಯ ವಿವಾದಗಳನ್ನು ಹುಟ್ಟು ಹಾಕಿ ಬಿಡುತ್ತಾರೆ. ಇದರಿಂದ ಮುಸ್ಲಿಮರ ವಿರುದ್ಧ ಸದಾ ಸಂಘರ್ಷವನ್ನೇ ಬಯಸುವ ವಿಚಿದ್ರಕಾರಿ ಮನೋಭಾವದವರಿಗೆ ಆಹಾರವನ್ನು ನೀಡುತ್ತಾರೆ.

ಸಾವಿರಾರು ವರ್ಷಗಳಲ್ಲಿ ಈ ಭಾರತದಲ್ಲಿ ಮುಸ್ಲಿಮರು ವಾಸಿಸುತ್ತಿದ್ದಾರೆ.

ಈ ಸುದೀರ್ಘ ಅವಧಿಯಲ್ಲಿ ಅನೇಕ ಸಮಸ್ಯೆಗಳನ್ನು ಅವರು ಎದುರಿಸಿದ್ದಾರೆ.

ಆದರೆ ಯಾವತ್ತೂ ಅನಾವಶ್ಯಕ ವಿಚಾರವಿವಾದಗಳಲ್ಲಿ ಏರ್ಪಡುತ್ತಿರಲಿಲ್ಲ.

ಯಾಕೆಂದರೆ ಇಲ್ಲಿ ಎಷ್ಟು ವಿವಾದಗಳು ಸೃಷ್ಟಿಯಾಗುತ್ತಿದೆಯೋ ಅಷ್ಟೇ ಲಾಭವನ್ನು ಇಲ್ಲಿನ ಕೋಮುವಾದಿ ಶಕ್ತಿಗಳು  ಪಡೆಯುತ್ತವೆ.

ಆದರೂ ಈ ದೇವಾಸಿಗಳಲ್ಲಿ ಬಹುತೇಕರು ಅವರು ಯಾವುದೇ ಜಾತಿ ಧರ್ಮ ವರ್ಗ ವರ್ಣ ಗಳಿಗೆ ಸೇರಿದವರಾದರೂ ಅವರೆಲ್ಲರೂ ನೆಮ್ಮದಿಯ ವಾತಾವರಣ ವನ್ನು ಬಯಸುತ್ತಾರೆ ಯೇ ಹೊರತು ಸಂಘರ್ಷವನ್ನು ಇಷ್ಟ ಪಡುವುದೇ ಇಲ್ಲ.

ಹೀಗಿರುವಾಗ ಸಣ್ಣ ಪುಟ್ಟ ಕಾರ್ಯಗಳನ್ನು ವೈಭವೀಕರಿಸಿ ವಿವಾದಗಳನ್ನು ಸೃಷ್ಟಿಸುವುದರಿಂದ ಮುಸಲ್ಮಾನರು ಇಲ್ಲಿ ಎಲ್ಲರಿಗೂ ಎಲ್ಲದರಲ್ಲೂ ಸಮಸ್ಯೆ ಎಂಬ ವಿರೋಧಿಗಳ ಅಪಪ್ರಚಾರ ಕ್ಕೆ ಪುಷ್ಠಿ ದೊರೆತಂತಾಗುತ್ತದೆ.

ಇದರಿಂದ ಮತ್ತಷ್ಟು ಉತ್ತಮ ಮನಸ್ಸುಗಳು ಮುಸ್ಲಿಮರಿಂದ ದೂರವಾಗುವ ಸಾಧ್ಯತೆ ಇದೆ.

ಇದು ಮುಸ್ಲಿಂ ವಿರೋಧಿಗಳಿಗೆ ರೋಗಿ ಬಯಸಿದ್ದು ಹಾಲು ವೈದ್ಯ ಹೇಳಿದ್ದೂ ಹಾಲು ಎಂಬ ಗಾದೆಯಂತಾಗುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಇದರಿಂದಾಗಿ ಮುಸ್ಲಿಮರು ಇಲ್ಲಿ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡ ಬೇಕಾಗಿದೆ.

ಅನೇಕ ವರ್ಷಗಳಿಂದ ಮುಸ್ಲಿಮರ ವಿರುದ್ಧ ನಡೆಯುವ ಯಾವುದೇ ಷಡ್ಯಂತ್ರಗಳಿಗೆ ಸೊಪ್ಪು ಹಾಕದ ಉದಾತ್ತ ಮನಸ್ಸಿನ ವಕ್ತಾರರ ಒಂದು ದೊಡ್ಡ ವಿಭಾಗ ಇವತ್ತೂ ಸಹ ಈ ಭಾರತದ ಮಣ್ಣಿನಲ್ಲಿ ಇದೆ ಎಂಬುದನ್ನು ಯಾರೂ ಮರೆಯಬಾರದು.

ಮೊನ್ನೆ ಪಡುಬಿದ್ರಿ ಬೀಚಿನಲ್ಲಿ ನಡೆದ ಒಂದು ನಮಾಝಿನ ವಿವಾದದ ವೀಡಿಯೋ ನೋಡಿದಾಗ ಹೀಗೆ ಗೀಚಬೇಕೆಂದನಿಸಿತು.

Comments