Skip to main content

Featured

ದಶಮಾನೋತ್ಸವ ಸಂಭ್ರಮದಲ್ಲಿ

  ಗುರು ಹಾಗೂ ತಮ್ಮ ಶಿಷ್ಯಂದಿರ ಸಂಘಟನೆ ಸಿರಾಜುಸುನ್ನ ಫೌಂಡೇಶನ್ ಕಣ್ಣಂಗಾರ್ ಹೆಜಮಾಡಿ..ಇದನ್ನು ಹಗಲು ರಾತ್ರಿ ಎಂದಲ್ಲದೆ ಕಟ್ಟಿ ಬೆಳೆಸಿದ ಇದಕ್ಕಾಗಿ ಶ್ರಮ ಪಟ್ಟ  P. P Ahmad saqafi kashipatna ಹಾಗೂ ಅವರ ಶಿಷ್ಯಂದಿರು ಇವರಿಗೆ ಹೃದಯ ಪೂರ್ವಕ ಶುಭಾಷಯ ಗಳು ಈ ಸಂಘಟನೆ ಇಂದಿಗೆ ಇದೇ ಬರುವ 9 November ರಂದು ಕಣ್ಣಂಗಾರ್ ನಲ್ಲಿ ದಶಮಾನೋತ್ಸವ ಆಚರಿಸುತ್ತಿದೆ ಇಂಥಹ ಘಟನೆಗಳು ಕರ್ನಾಟಕದಲ್ಲಿ ಬಹಳ ತೀರ ಕಂಡು ಬರುವಂತಹದ್ದು ಆಕಾಶದಲ್ಲಿ ಮೋಡಗಳು ಉತ್ತರದಿಂದ ಪಕ್ಷಿಮಕ್ಕೆ ಚಲಿಸುವಾಗ ಯಾವಾ ಅಡಚಣೆ ಇಲ್ಲದೆ ಮಿಂಚಿನ ವೇಗದಲ್ಲಿ ಚಲಿಸುವ ಹಾಗೆ ಈ ಸಂಘಟನೆ ಅಂತ್ಯ ದಿವಸದ ವರೆಗೆ ಚಲಿಸಲು ಎಂದು ಶುಭ ಕೋರುವ ... MUSTHAFA HASAN ALI KHAN ALQADRI.

ಸಂಬಾಲ್ ಜಿಲ್ಲೆಯ ಹಿಂಸಾಚಾರ

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಪೊಲೀಸರು ಹಾಗೂ ಅಧಿಕಾರಿಗಳು ಮೊಘಲರ ಕಾಲದಲ್ಲಿ ನಿರ್ಮಿಸಿದ ಮಸೀದಿಯೊಂದರ ಸಮೀಕ್ಷೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ  25 ಮುಸ್ಲಿಮರನ್ನು  ಹಾಗೂ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದ ಜಿಯಾ-ಉರ್-ರೆಹಮಾನ್ ಬಾರ್ಕ್ ಸೇರಿದಂತೆ ಸುಮಾರು 2,500 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.  .





ನಮ್ಮ ಭಾರತ ಎತ್ತ ಸಾಗುತ್ತಿದೆ ನಾಲ್ವರು ಮುಸ್ಲಿಂ ಪುರುಷರು ಮೃತಪಟ್ಟಿರುವುದು ದೃಢಪಟ್ಟಿದೆ ಆದರೆ ಅವರು ಜನಸಮೂಹದ ವಿರುದ್ಧ ಯಾವುದೇ ಮಾರಕ ಆಯುಧಗಳಾಗಲಿ ಅಥವಾ ಯಾವುದೇ ಶಸ್ತ್ರ ಬಳಸಿಲ್ಲ ಎಂದು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ    ಇದು ನಮ್ಮ ಭಾರತ ಧಲ್ಲಿ ನಡೆಯುವ ಮೊದಲ ಹಿಂಸಾಚಾರ ಏನು ಅಲ್ಲ.   ಇದಕ್ಕಿಂತಲೂ ಮುಂಚೆ ಮುಸಲ್ಮಾನರ ಅನೇಕ ವಿಷಯ ಗಳನ್ನು ಮುಂದಿಟ್ಟು ಮುಸಲ್ಮಾನರನ್ನು ಕೆಣಕಿಸುವ ಹುನ್ನಾರ ಆದಿ ಕಾಲದಿಂದಲೂ ನಡೆಯುತಾ ಬಂದಿದೆ ಕಲ್ಲು ತೂರಾಟದಲ್ಲಿ ತೊಡಗಿದ್ದ

ಕೆಲವು ಯುವಕರು  ಜನಸಮೂಹದ ಮೇಲೆ ಪೊಲೀಸ್ ಅಧಿಕಾರಿಗಳು ಮತ್ತು ಕಾನ್‌ಸ್ಟೇಬಲ್‌ಗಳು ಗುಂಡು ಹಾರಿಸುತ್ತಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿರುವ ವೀಡಿಯೊಗಳು ಕಂಡುಬಂದಿದೆ   ವೀಡಿಯೊದಲ್ಲಿ ಕಂಡುಬರುವ ಆಯುಧವು ಪೆಲೆಟ್ ಗನ್ ಎಂದು ಹಿರಿಯ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡರು.

ಅವರು ಮಾರಕಾಸ್ತ್ರಗಳಿಂದ ಗುಂಡು ಹಾರಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ, ಭಾನುವಾರದ ಘಟನೆಯ ಒಂದು ದಿನದ ನಂತರ ಸಂಸತ್ತಿನ ಹೊರಗೆ ಮಾತನಾಡಿದ ಬಾರ್ಕ್, ಕೆಲವು ಅಧಿಕಾರಿಗಳು ತಮ್ಮ ಸೇವಾ ಶಸ್ತ್ರಾಸ್ತ್ರಗಳ ಜೊತೆಗೆ ತಮ್ಮ ಖಾಸಗಿ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದಾರೆ ಮತ್ತು ಅವರ ಸ್ವಂತ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದರು.  ಆತನ ಆರೋಪಗಳಿಗೆ ಸಂಭಾಲ್ ಪೊಲೀಸರು ಇನ್ನೂ ಪ್ರತಿಕ್ರಿಯಿಸಿಲ್ಲ. ಇನ್ನು ಈ ದೇಶದಲ್ಲಿ ಏನೆಲ್ಲಾ ನಡೆಯುತ್ತದೆ ಕಾದು ನೋಡಬೇಕಾಗಿದೆ

MUSTHAFA HASAN ALI  ALQADRI 

Comments

Popular Posts