Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ಸುಪ್ತಾವಸ್ತೆಯ ಶಿಕ್ಷೆಯಿಂದ ಜಾಗ್ರತರಾಗಿರು


 ಸುಪ್ತಾವಸ್ತೆಯ ಶಿಕ್ಷೆಯಿಂದ ಜಾಗ್ರತರಾಗಿರು

ಒಮ್ಮೆ ಒಬ್ಬ ಬಾಲಕ ಹಸನುಲ್ ಬಸ್ರೀ (ರ.ಅ)ರವರ ಬಳಿ ಬಂದು ಹೀಗೆ ಕೇಳಿದನು 

ಓ ಶೈಖರೇ ನಾನು ಹಲವರಿಂದ ಕೇಳಿದೆ ಅಲ್ಲಾಹು ಎಲ್ಲಾ ಪಾಪಗಳಿಗೆ ಶಿಕ್ಷೆ ನೀಡಲಿದ್ದಾನೆ. ಆದರೆ ನಾನು ತುಂಬಾ ಪಾಪ  ಮಾಡಿದವನಾಗಿದ್ದೇನೆ ನನಗೇಕೆ ಶಿಕ್ಷೆ ಆಗಲಿಲ್ಲ. ಎಂದು ಕೇಳಿದ ತಕ್ಷಣವೇ ಹಸನುಲ್ ಬಸ್ರಿ ಹೇಳಿದರು. ಓ ಬಾಲಕ ಅಲ್ಲಾಹನು ಅನೇಕ ಸಲ ನಿನ್ನನ್ನು ಶಿಕ್ಷಿಸಿದ್ದಾನೆ ನಿನಗೆ ತಿಳಿಯಲಿಲ್ಲವೇ. 

ಬಾಲಕ ಕೇಳಿದ ಹೇಗೆ ಶೈಖರೇ ವಿವರಿಸಿ ಆವಾಗ ಹಸನುಲ್ ಬಸ್ರಿ ರ.ಅ ಹೇಳಿದರು. 

ನೀನು ಅಲ್ಲಾಹನನ್ನು ಶ್ರದ್ಧೆಯಿಂದ ಕೂಗಿ ಪ್ರಾರ್ಥಿಸುವ ಭಾಗ್ಯ ಇಲ್ಲವಾಗಿಸಲಿಲ್ಲವೇ. ಕುರ್ಆನ್ ಪಾರಾಯಣ ಮಾಡದೆ ಎಷ್ಟೋ ದಿವಸ ನೀನು ಕಳೆಯಲಿಲ್ಲವೇ. ರಾತ್ರಿಯಲ್ಲಿ ಎದ್ದು ಪ್ರಾರ್ಥಿಸುವುದರಿಂದ ವಂಚಿತನಾಗಲಿಲ್ಲವೇ. ಕಾಮ ಹಣದ ಆಸೆ ಎಂಬ ದುರಬ್ಯಾಸದ ಸಂಕೋಲೆಯಲ್ಲಿ ಸಿಲುಕಿ ಕೊಳ್ಳಲಿಲ್ಲವೇ. ನಿನ್ನ ಹ್ರದಯದಲ್ಲಿ ಅಲ್ಲಾಹನ ಸ್ಮರಣೆಯ ಅನುಗ್ರಹ ಬಾರವೆಂದು ಭಾವಿಸಿ ಅವನ ಸ್ಮರಣೆಯಿಂದ ವಂಚಿತನಾಗಲಿಲ್ಲವೇ.. ಸುಳ್ಳು ಫಿತ್ನ ಫಸಾದ್ ಪರದೂಷಣ ಗಳಿಂದ ನಿನ್ನ ನಾಲಿಗೆ ಕಾರ್ಯನಿರತ ಆಗಲಿಲ್ಲವೇ. ಪರಲೋಕ ವನ್ನು ಮರೆತು ಇಹ ಲೋಕದ ಆಡಂಬರದ ಜೀವನವನ್ನು ಮೈಗೂಡಿಸಿ ಕೋಳ್ಳಲಿಲ್ಲವೇ. ರಂಝಾನ್ ಶವ್ವಾಲ್ ಹಜ್ ಗಳಂತಹ ತಿಂಗಳು ಗಳ ಗೌರವವನ್ನು ಕಡೆಗಣಿಸಿ ನಡೆಯಲಿಲ್ಲವೇ. 

ನೆನಪಿಡು ಅಲ್ಲಾಹನ ಶಿಕ್ಷೆ ಅತೀ ಕಠೋರವಾದದ್ದು. 

ನೀನು ಊಹಿಸುವುದಕ್ಕಿಂತ  ಅದೇನಂದರೆ 

ನಿನಗೆ ಪರ ಲೋಕ ವನ್ನು ಮರೆತು ಬಿಡುವಂತಹ ಇಹಲೋಕ ದ ಸರ್ವ ಸಂಪತ್ತು ಗಳನ್ನು ಒದಗಿಸಿ ಕೊಡುವುದು. ಧಾರ್ಮಿಕ ವಿದ್ಯೆಗೆ ಬದಲಾಗಿ ಲೌಕಿಕ ವಿಧ್ಯೆ ಒದಗಿಸಿ ಕೊಡುವುದು. ನಿನಗೆ ಅಧಿಕ ಸಂಪತ್ತು ನೀಡುವುದು. ಆದರೆ ಅಲ್ಲಾಹನ ಅನುಸರಣೆ ಹಾಗು ಪ್ರಾರ್ಥನೆ ಯಿಂದ ವಂಚಿತನಾಗುವೆ. ಇದಾಗಿದೆ ಅಲ್ಲಾಹನ ಇಹ ಲೋಕದ ಅತೀ ಕಠೋರ ವಾದ ಶಿಕ್ಷೆ. ನಿನಗೆ ಅರಿವಿಲ್ಲದೆ ಹೇಗಲ್ಲ ಶಿಕ್ಷಿಸಿದ ಮಾನವ. ಎಚ್ಚೆತ್ತುಕೋ ನಿನ್ನ ಮರಣ ಸಮೀಪಿಸುವ ಮುನ್ನ...

Comments

Popular Posts