Skip to main content

Featured

ಕಾಸ್ಟಲ್ ಕರ್ನಾಟಕದ ಮುಸ್ಲಿಂ ಸಮುದಾಯದಲ್ಲಿನ ಆತ್ಮಹತ್ಯೆ: ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನ

ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಒಂದು ತೀವ್ರ ಸಾರ್ವಜನಿಕ ಆರೋಗ್ಯದ ಸಮಸ್ಯೆಯಾಗಿಬಿಟ್ಟಿದೆ, ದೈನಂದಿನ ಘಟನಗಳನ್ನು ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ವರದಿ ಮಾಡಲಾಗುತ್ತಿದೆ. ಈ ಸಮಸ್ಯೆ ಬೇರೆ ಬೇರೆ ಸಮುದಾಯಗಳ  ಮೇಲೆ ಪರಿಣಾಮ ಬೀರುತ್ತಿದ್ದರೂ, ಮುಸ್ಲಿಂ ಸಮುದಾಯದ ಒಳಗಿನ ಪರಿಣಾಮವನ್ನು ಅರ್ಥಮಾಡಿಕೊಳ್ಳಲು, ಈ ಪ್ರದೇಶದ ವಿಶಿಷ್ಟ ಸಾಮಾಜಿಕ ವಿನ್ಯಾಸ, ಆರ್ಥಿಕ ಒತ್ತಡಗಳು ಮತ್ತು ಸಾಂಸ್ಕೃತಿಕ ಗುಣಲಕ್ಷಣಗಳನ್ನು ಪರಿಶೀಲಿಸಬೇಕು. ಲಭ್ಯವಿರುವ ವರದಿ  ಪ್ರಕಾರ ಆತ್ಮಹತ್ಯೆ ಡೇಟಾವನ್ನು ವಿಭಜಿಸುತ್ತಿಲ್ಲ, ಆದರೆ ವಿಸ್ತೃತ ಪ್ರದೇಶೀಯ ಪ್ರವೃತ್ತಿಗಳು ಅಡಗಿರುವ ಕಾರಣಗಳನ್ನು ಬೆಳಕಿಗೆಡಿಸುತ್ತವೆ. ಪ್ರದೇಶೀಯ ಸ್ಥಿತಿ: ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣದ ಏರಿಕೆ ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ, ಪ್ರತಿದಿನ ಹಲವು ಘಟನಗಳನ್ನು ಜಿಲ್ಲೆಗಳಾದ್ಯಂತ ವರದಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹಣಕಾಸು ಚಿಂತೆ, ಕುಟುಂಬ ಕಲಹ, ಮಾನಸಿಕ ಆರೋಗ್ಯ ಹೋರಾಟಗಳು ಮತ್ತು ಸಾಮಾಜಿಕ ಕಲಹ ಎದುರಿಸುತ್ತಿರುವ ವ್ಯಕ್ತಿಗಳು ಸೇರಿದ್ದಾರೆ. ಹೆಚ್ಚಿನ ವಿವರಗಳಲ್ಲಿ ಧಾರ್ಮಿಕ ಗುರುತನ್ನು ಅಂದಾಜಿಸಲು ವರದಿಗಳು ನಿರ್ದೇಶಿಸುತ್ತಿಲ್ಲದಿದ್ದರೂ, ಈ ಪ್ರದೇಶದ ಮುಸ್ಲಿಂ ಕುಟುಂಬಗಳು ಒಂದು ಸಮಾನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಹಂಚಿಕೊಂಡಿವೆ—ಮೀನುಧಾನ್ಯ, ಚಿ...

ಸುಪ್ತಾವಸ್ತೆಯ ಶಿಕ್ಷೆಯಿಂದ ಜಾಗ್ರತರಾಗಿರು


 ಸುಪ್ತಾವಸ್ತೆಯ ಶಿಕ್ಷೆಯಿಂದ ಜಾಗ್ರತರಾಗಿರು

ಒಮ್ಮೆ ಒಬ್ಬ ಬಾಲಕ ಹಸನುಲ್ ಬಸ್ರೀ (ರ.ಅ)ರವರ ಬಳಿ ಬಂದು ಹೀಗೆ ಕೇಳಿದನು 

ಓ ಶೈಖರೇ ನಾನು ಹಲವರಿಂದ ಕೇಳಿದೆ ಅಲ್ಲಾಹು ಎಲ್ಲಾ ಪಾಪಗಳಿಗೆ ಶಿಕ್ಷೆ ನೀಡಲಿದ್ದಾನೆ. ಆದರೆ ನಾನು ತುಂಬಾ ಪಾಪ  ಮಾಡಿದವನಾಗಿದ್ದೇನೆ ನನಗೇಕೆ ಶಿಕ್ಷೆ ಆಗಲಿಲ್ಲ. ಎಂದು ಕೇಳಿದ ತಕ್ಷಣವೇ ಹಸನುಲ್ ಬಸ್ರಿ ಹೇಳಿದರು. ಓ ಬಾಲಕ ಅಲ್ಲಾಹನು ಅನೇಕ ಸಲ ನಿನ್ನನ್ನು ಶಿಕ್ಷಿಸಿದ್ದಾನೆ ನಿನಗೆ ತಿಳಿಯಲಿಲ್ಲವೇ. 

ಬಾಲಕ ಕೇಳಿದ ಹೇಗೆ ಶೈಖರೇ ವಿವರಿಸಿ ಆವಾಗ ಹಸನುಲ್ ಬಸ್ರಿ ರ.ಅ ಹೇಳಿದರು. 

ನೀನು ಅಲ್ಲಾಹನನ್ನು ಶ್ರದ್ಧೆಯಿಂದ ಕೂಗಿ ಪ್ರಾರ್ಥಿಸುವ ಭಾಗ್ಯ ಇಲ್ಲವಾಗಿಸಲಿಲ್ಲವೇ. ಕುರ್ಆನ್ ಪಾರಾಯಣ ಮಾಡದೆ ಎಷ್ಟೋ ದಿವಸ ನೀನು ಕಳೆಯಲಿಲ್ಲವೇ. ರಾತ್ರಿಯಲ್ಲಿ ಎದ್ದು ಪ್ರಾರ್ಥಿಸುವುದರಿಂದ ವಂಚಿತನಾಗಲಿಲ್ಲವೇ. ಕಾಮ ಹಣದ ಆಸೆ ಎಂಬ ದುರಬ್ಯಾಸದ ಸಂಕೋಲೆಯಲ್ಲಿ ಸಿಲುಕಿ ಕೊಳ್ಳಲಿಲ್ಲವೇ. ನಿನ್ನ ಹ್ರದಯದಲ್ಲಿ ಅಲ್ಲಾಹನ ಸ್ಮರಣೆಯ ಅನುಗ್ರಹ ಬಾರವೆಂದು ಭಾವಿಸಿ ಅವನ ಸ್ಮರಣೆಯಿಂದ ವಂಚಿತನಾಗಲಿಲ್ಲವೇ.. ಸುಳ್ಳು ಫಿತ್ನ ಫಸಾದ್ ಪರದೂಷಣ ಗಳಿಂದ ನಿನ್ನ ನಾಲಿಗೆ ಕಾರ್ಯನಿರತ ಆಗಲಿಲ್ಲವೇ. ಪರಲೋಕ ವನ್ನು ಮರೆತು ಇಹ ಲೋಕದ ಆಡಂಬರದ ಜೀವನವನ್ನು ಮೈಗೂಡಿಸಿ ಕೋಳ್ಳಲಿಲ್ಲವೇ. ರಂಝಾನ್ ಶವ್ವಾಲ್ ಹಜ್ ಗಳಂತಹ ತಿಂಗಳು ಗಳ ಗೌರವವನ್ನು ಕಡೆಗಣಿಸಿ ನಡೆಯಲಿಲ್ಲವೇ. 

ನೆನಪಿಡು ಅಲ್ಲಾಹನ ಶಿಕ್ಷೆ ಅತೀ ಕಠೋರವಾದದ್ದು. 

ನೀನು ಊಹಿಸುವುದಕ್ಕಿಂತ  ಅದೇನಂದರೆ 

ನಿನಗೆ ಪರ ಲೋಕ ವನ್ನು ಮರೆತು ಬಿಡುವಂತಹ ಇಹಲೋಕ ದ ಸರ್ವ ಸಂಪತ್ತು ಗಳನ್ನು ಒದಗಿಸಿ ಕೊಡುವುದು. ಧಾರ್ಮಿಕ ವಿದ್ಯೆಗೆ ಬದಲಾಗಿ ಲೌಕಿಕ ವಿಧ್ಯೆ ಒದಗಿಸಿ ಕೊಡುವುದು. ನಿನಗೆ ಅಧಿಕ ಸಂಪತ್ತು ನೀಡುವುದು. ಆದರೆ ಅಲ್ಲಾಹನ ಅನುಸರಣೆ ಹಾಗು ಪ್ರಾರ್ಥನೆ ಯಿಂದ ವಂಚಿತನಾಗುವೆ. ಇದಾಗಿದೆ ಅಲ್ಲಾಹನ ಇಹ ಲೋಕದ ಅತೀ ಕಠೋರ ವಾದ ಶಿಕ್ಷೆ. ನಿನಗೆ ಅರಿವಿಲ್ಲದೆ ಹೇಗಲ್ಲ ಶಿಕ್ಷಿಸಿದ ಮಾನವ. ಎಚ್ಚೆತ್ತುಕೋ ನಿನ್ನ ಮರಣ ಸಮೀಪಿಸುವ ಮುನ್ನ...

Comments

Popular Posts