Skip to main content

Featured

ದಶಮಾನೋತ್ಸವ ಸಂಭ್ರಮದಲ್ಲಿ

  ಗುರು ಹಾಗೂ ತಮ್ಮ ಶಿಷ್ಯಂದಿರ ಸಂಘಟನೆ ಸಿರಾಜುಸುನ್ನ ಫೌಂಡೇಶನ್ ಕಣ್ಣಂಗಾರ್ ಹೆಜಮಾಡಿ..ಇದನ್ನು ಹಗಲು ರಾತ್ರಿ ಎಂದಲ್ಲದೆ ಕಟ್ಟಿ ಬೆಳೆಸಿದ ಇದಕ್ಕಾಗಿ ಶ್ರಮ ಪಟ್ಟ  P. P Ahmad saqafi kashipatna ಹಾಗೂ ಅವರ ಶಿಷ್ಯಂದಿರು ಇವರಿಗೆ ಹೃದಯ ಪೂರ್ವಕ ಶುಭಾಷಯ ಗಳು ಈ ಸಂಘಟನೆ ಇಂದಿಗೆ ಇದೇ ಬರುವ 9 November ರಂದು ಕಣ್ಣಂಗಾರ್ ನಲ್ಲಿ ದಶಮಾನೋತ್ಸವ ಆಚರಿಸುತ್ತಿದೆ ಇಂಥಹ ಘಟನೆಗಳು ಕರ್ನಾಟಕದಲ್ಲಿ ಬಹಳ ತೀರ ಕಂಡು ಬರುವಂತಹದ್ದು ಆಕಾಶದಲ್ಲಿ ಮೋಡಗಳು ಉತ್ತರದಿಂದ ಪಕ್ಷಿಮಕ್ಕೆ ಚಲಿಸುವಾಗ ಯಾವಾ ಅಡಚಣೆ ಇಲ್ಲದೆ ಮಿಂಚಿನ ವೇಗದಲ್ಲಿ ಚಲಿಸುವ ಹಾಗೆ ಈ ಸಂಘಟನೆ ಅಂತ್ಯ ದಿವಸದ ವರೆಗೆ ಚಲಿಸಲು ಎಂದು ಶುಭ ಕೋರುವ ... MUSTHAFA HASAN ALI KHAN ALQADRI.

ಆರಾಧನಾ ಲಯಗಳನ್ನು ಮುಚ್ಚಿಸಲು ಪೈಪೋಟಿ ನಡೆಸುವವರೊಂದಿಗೆ ಒಂದು ನಿಮಿಷ

ಆರಾಧನಾ ಲಯಗಳನ್ನು ಮುಚ್ಚಿಸಲು ಪೈಪೋಟಿ ನಡೆಸುವವರೊಂದಿಗೆ ಒಂದು ನಿಮಿಷ

************************************


✍️ *ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ*

******************************

ಮೊನ್ನೆ ಎರಡನೇ ಹಂತದ ಕೊವಿಡ್ ಪ್ರತಿರೋದಕ್ಕೆ ಸರ್ಕಾರ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿತ್ತು.ಆರಾಧನಾಲಯಗಳನ್ನು ಸಂಪೂರ್ಣವಾಗಿ ಮುಚ್ಚಿಸು ತಯಾರಿ ನಡೆಸುತ್ತಿತ್ತು.ಸರಕಾರೀ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದವು ಅಷ್ಟೆ.

ಆದರೆ ನಿಷ್ಕಳಂಕ ಮನುಷ್ಯ ಮನಸ್ಸುಗಳು ಒಳಗಿಂದೊಳಗೇ ಆರಾಧನಾ ಲಯಗಳು ಮುಚ್ಚಲ್ಪಡದಿರಲಿ ಎಂದು ಪ್ರಾರ್ಥಿಸುತ್ತಲೇ ಇದ್ದವು.

ಇತ್ತ ಬೆಂಗಳೂರಿನಲ್ಲಿ ನಮ್ಮ ಸುನ್ನೀ ವಿದ್ವಾಂಸರು,ನಾಯಕರು ಆರಾಧನಾಲಯಗಳು ಮುಚ್ಚದಂತೆ ಕೋವಿಡ್ ನ ಎಲ್ಲಾ ಪ್ರೋಟೋಕಾಲ್ ಪಾಲಿಸಿ ಕೊಂಡೇ ಆರಾಧನಾಲಗಳು ಸುಗಮವಾಗಿ ಕಾರ್ಯಾಚರಿಸಲು ಅವಕಾಶ ನೀಡುವಂತೆ ಸರಕಾರದ ಮನವೊಲಿಸುವ ಶತಪ್ರಯತ್ನ ಲ್ಲಿದ್ದರು.

ಆದರೆ ಇದರ ಮದ್ಯೆ ಕೆಲವು ಸ್ವಯಂಘೋಷಿತ ಮರಿ ಪುಡಾರಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಅಧಿಕಪ್ರಸಂಗದ ಭಾಗವಾಗಿ ಆರಾಧನಾ ಲಯಗಳನ್ನು ಮುಚ್ಚುವ ತೀರ್ಮಾನಗಳನ್ನು ಪ್ರಕಟಿಸಲು ತಾಮುಂದು ನಾಮುಂದು ಎಂದು ಪೈಪೋಟಿ ನಡೆಸುತ್ತಿದ್ದಂತೆ ಭಾಸವಾಯಿತು.

ಮಾತ್ರವಲ್ಲ ಅವರಿಗೆ ಅದರಲ್ಲಿ 

ಒಂದು ರೀತಿಯ ಸಂತೋಷವಿದ್ದಂತೆಯೂ ಅನಿಸಿತು.

ಮಾತ್ರವಲ್ಲ ನಿಸ್ವಾರ್ಥ ಮನಸ್ಸುಗಳಿಗೆ ಇದರಿಂದ ಇವರ ಈ ಅಧಿಕಪ್ರಸಂಗದಲ್ಲಿ ಒಂದು ರೀತಿಯ ಮರುಕವೂ ಉಂಟಾಗಿತ್ತು.

ಯಾಕೆಂದರೆ  

ಇವರೆಂದೂ ಆರಾಧನಾಲಗಳಿಗೆ   ಹೋಗುವವರೋ ಆರಾಧನೆ ಮಾಡುವವರೋ ಇಲ್ಲಿನ ಅಸ್ತವ್ಯಸ್ತಗಳ ಬಗ್ಗೆ ಮಾತೆತ್ತುವವರೋ ಸಮುದಾಯದ ಬಗ್ಗೆ ಕಾಳಜಿ ಇರುವವರು ಖಂಡಿತ ಅಲ್ಲ.

ವಾಸ್ತವದಲ್ಲಿ ಇವರು ಒಂದು ರೀತಿಯ ಪ್ರಚಾರ ಪ್ರಿಯರು ಮಾತ್ರ. 

ಯಾರದೋ ಶಿಫಾರಸ್ಸಿನಿಂದ ಯಾವುದೋ ಒಂದು ಇಲಾಖೆ ಅಥವಾ ಪಕ್ಷದ 

ಆಯಾಕಟ್ಟಿನ ಜಾಗಗಳಲ್ಲಿ ಪ್ರತಿಸ್ಟಾಪಿಸಲ್ಪಟ್ಟಿರುತ್ತಾರೆ.

ಇವರಿಗೆ ಒಟ್ಟಾರೆಯಾಗಿ ತಮ್ಮ ಅಸ್ತಿತ್ವ ಹಾಗೂ ನಾವು ಸಮುದಾಯದ ನಾಯಕರೆಂದು ಬಿಂಬಿಸಬೇಕು.ಅದಕ್ಕೆ ಇಂತಹ ಸಮಯಗಳನ್ನು ಕಾಯುತ್ತಾ ಇರುತ್ತಾರೆ.

ಕೆಲಸವಿಲ್ಲದ..........ಮಗುವಿನ.......ಎಂಬ ಗಾದೆ ಮಾತಿನಂತೆ ಇವರ ಪಕ್ಷದ ಅಥವಾ ಇವರಿಗೆ ನೀಡಲ್ಪಟ್ಟ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಿ ಸುಮ್ಮನಿರಬೇಕೇ ಹೊರತು ಇಂತಹ ಅಧಿಕಪ್ರಸಂಗ ಗಳಿಗೆ ಬರಬಾರದು.

ಆರಾಧನಾಲಯಗಳ ಬಗ್ಗೆ ಹಾಗೂ ಸರಕಾರ ಮತ್ತು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲನೆ ಮಾಡುವ ಬಗ್ಗೆ ಸಮುದಾಯಕ್ಕೆಎಲ್ಲಾ ರೀತಿಯ ಮಾರ್ಗದರ್ಶನ ನೀಡಲು ಧಾರ್ಮಿಕ ವಿದ್ವಾಂಸರು,ಖಾಝಿಗಳು ಧಾರಾಳವಾಗಿ ಇದ್ದಾರೆ.

ಮಾತ್ರವಲ್ಲ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಲೂ ಇದ್ದಾರೆ.

ಆರಾಧನೆಗಳ ಮುಚ್ಚುವಿಕೆ ಅನಿವಾರ್ಯವಾದರೆ ಅದರಲ್ಲೂ ಸರಕಾರದೊಂದಿಗೆ ಸಂಪೂರ್ಣವಾಗಿ ಕೈಜೋಡಿಸಲೂ ಸಿದ್ಧರಿದ್ದಾರೆ.

ಇದರಲ್ಲಿ ಈ ಮರಿ ಪುಡಾರಿಗಳು ಮಧ್ಯಪ್ರವೇಶ ಅನಗತ್ಯ ಮಾತ್ರವಾಗಿದೆ.   

ಅಲ್ಲದೆ ಆರಾಧನಾಲಯಗಳನ್ನು ಮುಚ್ಚುವುದು ಅಷ್ಟೊಂದು ಹಿತಕರವಾದ ವಿಷಯವೆಂದು ಯಾರೂ ಭಾವಿಸಬೇಕಾಗಿಲ್ಲ.

ಆರಾಧನೆ ಎಂಬುದು ಪ್ರಪಂಚದ ಸೃಷ್ಟಿ ಕರ್ತನಿಗೆ ಸಂಬಂಧಿಸಿದ್ದಾಗಿದೆ.

ಆದ್ದರಿಂದ ವಿಪತ್ತುಗಳು ಮತ್ತು ಮಹಾಮಾರಿ ಗಳು ವಿಪರೀತ ಗೊಂಡು ಸರಕಾರ, ಇಲಾಖೆ, ಅಧಿಕಾರಸ್ಥರೆಲ್ಲರ ಕೈಮೀರತ್ತಿರುವ ಹಾಗೂ ಅವರು ಕೈಚೆಲ್ಲುತ್ತಿರುವ ಇಂತಹ ಸಂದಿಗ್ಧ ಸಂದರ್ಭಗಳಲ್ಲಿ ವಿಪತ್ತುಗಳನ್ನು ನೀಡುವ ಹಾಗೂ ನಿಯಂತ್ರಿಸುವ

ಸೃಷ್ಟಿ ಕರ್ತನಲ್ಲಿ ಅಭಯ ಪಡೆಯುವುದು ಮಾತ್ರ ಪರಿಹಾರ ಮಾರ್ಗವಾಗಿ ಉಳಿಯುತ್ತದೆ. 

ಆದ್ದರಿಂದ ಇಂತಹ ಸಮಯಗಳಲ್ಲಿ ಆರಾಧನೆಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ನಡೆಯಬೇಕು.

ಅನಿವಾರ್ಯ ಸಂದರ್ಭಗಳಲ್ಲಿ ಆರಾಧನಾ ಲಯಗಳ ಮುಚ್ಚುವಿಕೆ ಕೊನೆಯ ಅಸ್ತ್ರವಾಗಬೇಕೇ ಹೊರತು ಮೊದಲ ಅಸ್ತ್ರವಾಗಬಾರದು. 

ಅಲ್ಲದೆ ವಿಪತ್ತುಗಳು ಹರಡಲು ಹೆಚ್ಚು ಸಾಧ್ಯತೆಯಿರುವ ಎಲ್ಲಾ ವಲಯಗಳನ್ನು ಮುಕ್ತಗೊಳಿಸಿ ಸಾಂಕ್ರಾಮಿಕ ರೋಗಗಳು ಕೇವಲ ಆರಾಧನಾಲಯಗಳಲ್ಲಿ ಮಾತ್ರ ತಂಗಿ ನೆಲೆಯೂರಿದೆ ಎಂದು ಬಿಂಬಿಸುವುದು ಅಪಾಯಕಾರಿ ಬೆಳವಣಿಗೆಯಾಗಿದೆ.

ಅಲ್ಲದೆ ಜಗತ್ತಿನ ಅತ್ಯಂತ ದೊಡ್ಡ ಆರಾಧನಾ ಕೇಂದ್ರವಾದ ಪವಿತ್ರ ಮಕ್ಕಾದಲ್ಲಿಹಾಗೂ ಮದೀನಾದಲ್ಲಿರುವ ಹರಂ ಶರೀಫ್ ಗಳು ಪ್ರೋಟೋಕಾಲ್ ಗಳನ್ನು ಸರಿಯಾಗಿ ಪಾಲಿಸಿಕೊಂಡೇ ಆರಾಧನಾಲಯಗಳಲ್ಲಿ ಆರಾಧನೆಗಳನ್ನು ಹೇಗೆ ನಡೆಸಬಹುದು ಎಂಬುದಕ್ಕೆ ದೊಡ್ಡ ಉದಾಹರಣೆಯಾಗಿ ಕಾಣುತ್ತದೆ.

ದಿನನಿತ್ಯ ಲಕ್ಷಾಂತರ ಜನರು ಅಲ್ಲಿ ಆರಾಧನೆ ನಡೆಸುವ ಆ ಸುಂದರ ದೃಶ್ಯವೇ ಒಂದು ವಿಸ್ಮಯ.ಇದರಿಂದ ಯಾವುದೇ ರೀತಿಯ ರೋಗ ಹರಡಿದ ಅನುಭವವೇ ಇಲ್ಲ.

ಎಲ್ಲದಕ್ಕೂ ಇಚ್ಚಾಶಕ್ತಿ ಬಹಳ ಮುಖ್ಯವೆನಿಸುತ್ತದೆ.

ಅದೂ ಅಲ್ಲದೆ ಎಷ್ಟರ ವರೆಗೆ ಈ ಪ್ರಪಂಚದಲ್ಲಿ ಸೃಷ್ಟಿಕರ್ತನ ಆರಾಧನೆಗಳು ಮುಕ್ತವಾಗಿ ನಡೆಯುತ್ತದೋ ಅಲ್ಲಿಯವರೆಗೆ ಈ ಪ್ರಪಂಚ ಸುಗಮವಾಗಿ ಸುಸೂತ್ರವಾಗಿ ಮುಂದುವರಿಯಬಹುದೇ ಹೊರತು

ಆರಾಧನೆಗಳು,ಆರಾಧನಾ ಲಯಗಳು ಯಾವಾಗ ಸ್ತಬ್ಧ ವಾಗುತ್ತದೋ ಅವಾಗ ಪ್ರಪಂಚವೂ ನಾಶವಾಗಿಬಿಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ. 

ಕೇವಲ ವ್ಯಭಿಚಾರಿಗಳು, ಭ್ರಷ್ಟಾಚಾರಿಗಳು,ಮಧ್ಯಪಾನಿಗಳು,ದರೋಡೆಕೋರರು ಮುಂತಾದ ಕೆಟ್ಟ ಜನರು ಮಾತ್ರ ಉಳಿಯುವ ಸಮಯದಲ್ಲಾಗಿದೆ ಈ ಪ್ರಪಂಚದ ಅಂತ್ಯ ಎಂದು ಪ್ರವಾದಿ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹದಿನಾಲ್ಕು ಶತಮಾನಗಳ ಹಿಂದೆಯೇ ಮುನ್ನೆಚ್ಚರಿಕೆ ನೀಡಿರುತ್ತಾರೆ.

*لا تقوم الساعة إلا على شرار الخلق*

ಆದ್ದರಿಂದ ಯಾವುದೇ ಸಂದಿಗ್ಧ ಸಂದರ್ಭಗಳಲ್ಲಿಯೂ ಸಾಧ್ಯವಾದ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಆರಾಧನಾಲಯಗಳು ಮೊಟಕು ಗಳ್ಳದಂತೆ ಎಚ್ಚರಿಕೆ ವಹಿಸುವುದು ಪ್ರಜೆಗಳಿಗೂ ಸರ್ಕಾರಗಳಿಗೂ ಒಳಿತು ಎಂದು ಅರಿತಿರಬೇಕು.

Comments

Popular Posts