Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ಸೋಷಿಯಲ್ ಮೀಡಿಯಾ ಬಳಸುವವರೇ ಜಾಗ್ರತೆ-Social media users are careful

 


ನೀವ್ಸ್ ಡೆಸ್ಕ್ ರಿಯಾದ್.

ಸೋಷಿಯಲ್ ಮೀಡಿಯಾ ಬಳಸುವವರೇ ಜಾಗ್ರತೆ

ಫೇಸ್ಬುಕ್  ಟ್ವೀಟರ್ ಇಂಸ್ಟಾಗ್ರಾಮ್ ಯೂಟುಬ್ ಎಂಬ ಸಾಮಾಜಿಕ ಜಾಲತಾಣಗಳನ್ಶು ಬಳಸುವವರಿಗೆ ಕಾದಿದೆ ಎಚ್ಚರಿಕೆಯ ಗಂಟೆ .ಇದಾಗಲೇ ಕೇಂದ್ರ ಸರಕಾರ ಒಂದು ಹೊಸ ಕಾನೂನು ಜಾರಿಗೊಳಿಸುವ ಸಿದ್ಧತೆ ಯಲ್ಲಿದೆ ಹೊಸ ನಿಯಮ ಅನುಸಾರವಾಗಿ ಸರಕಾರದ ವಿರುದ್ಧ ವಾಗಿ ನಿಮ್ಮ ಕಮೆಂಟ್ ಅಥವಾ ಪೋಸ್ಟ್ ಗಳಾದರೆ ನಿಮಗೆ ಅದನ್ನು 24 ಗಂಟೆಯ ಒಳಗಾಗಿ ಡಿಲೀಟ್ ಮಾಡಬೇಕು ಇಲ್ಲವಾದರೆ ಐದು ವರ್ಷಗಳ ಕಾಲ ಜೈಲು ಆಗುವ ಸಾಧ್ಯತೆ ಇವೆ ನೀವು ಸೋಷಿಯಲ್ ಮೀಡಿಯಾ ಗಳಲ್ಲಿ ಏನನ್ನು ಪೋಸ್ಟ್ ಮಾಡಿದ್ದೀರಿ ಇನ್ನು ಮುಂದಿನ ಮೂರು ತಿಂಗಳೊಳಗೆ ಪರಿಶೀಲಿಸಲಾಗುವುದು ಎಂದು ಕೇಂದ್ರ ಮಂತ್ರಿಗಳಾದ 

ಪ್ರಕಾಶ್ ಜಾವ್ಡೇಕರ್ ಹಾಗೂ ರವಿ ಶಂಕರ್ ಪ್ರಸಾದ್ ಪ್ರೆಸ್ ಕಾಂಪ್ರೆಸ್ ಕರೆದು ತಿಳಿಸಿದರು.  ನೆಟ್ಫ್ಲಿಕ್ಸ್. ಟ್ವೀಟರ್. ಅಮೇಝಾನ್ ತರಹದ ಫ್ಲಾಟ್ ಫಾರಂ ಗಳಿಂದ ಹಲವಾರು ದೂರುಗಳನ್ನು ಸ್ವೀಕರಿಸಿದ ನಂತರ ತೆಗೆದು ಕೊಂಡ ನಿರ್ಧಾರ ವಾಗಿದೆ

ಎಸ್. ಎಮ್. ಮುಸ್ತಫ ಸಾಸ್ತಾನ 




Comments

Popular Posts