MUSTHAFA HASAN ALQADRI OFFICIAL : May 2021

Translate

Friday, May 21, 2021

ಫೆಲಸ್ತೀನ್ ಬಿಕ್ಕಟ್ಟು; ಅರಬ್ ದೊರೆಗಳೇಕೆ ಮೌನ..?


 ಫೆಲಸ್ತೀನ್ ಬಿಕ್ಕಟ್ಟು; ಅರಬ್ ದೊರೆಗಳೇಕೆ ಮೌನ..?


~ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ

-------------------------

ಫೆಲೆಸ್ತೀನ್ ಬಿಕ್ಕಟ್ಟು ಮತ್ತೆ ಮುನ್ನಲೆಗೆ ಬಂದಿದೆ. ಕ್ರೌರ್ಯ ಮೆರೆದ ಇಸ್ರೇಲ್ ಈಗ ಕದನ ವಿರಾಮ ಘೋಷಿಸಿದೆ. ಭಾರತ ಸಮೇತ ಜಗತ್ತಿನ ಹಲವು ರಾಷ್ಟ್ರಗಳು ಫೆಲೆಸ್ತೀನ್ ಪರ ದನಿಯೆತ್ತಿದರೆ ಕೆಲವು ಹಿಂಸಾತ್ಮಕ ಸಿದ್ದಾಂತಿಗಳು ಇಸ್ರೇಲ್ ರಕ್ಕಸರಿಗೆ ಬೆಂಬಲ ಸೂಚಿಸಿದೆ. ಹಾಗೆ ನೋಡುವುದಾದರೆ ಈ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ನಮಗೆ ಹೊಸತಲ್ಲ. ಇಸ್ರೇಲ್ ಎಂಬ ಲಂಪಟ ದೇಶ ಜನ್ಮತಾಳಿದಾಗಲೇ ಜಗತ್ತಿನಲ್ಲಿ ನೆತ್ತರ ಭೂಪಟವೊಂದು ಅರಳಿ ನಿಂತಿತ್ತು. ಮಧ್ಯಪ್ರಾಚ್ಯದ ಸುದ್ದಿಗಳಲ್ಲಿ ಪ್ರಮುಖವಾಗಿ ತುಂಬಿ ನಿಲ್ಲುವುದೂ ಇದೇ ಭೂಪಟ‌. 


ಇಸ್ರೇಲ್-ಫೆಲಸ್ತೀನ್ ಸಂಘರ್ಷ ತಾರಕಕ್ಕೇರಿದಾಗಲೆಲ್ಲಾ ಸಾಮಾನ್ಯವಾಗಿಯೇ ಜಗತ್ತು ಅರಬ್ ರಾಷ್ಟ್ರಗಳತ್ತ ನೋಡುತ್ತದೆ. ಸೌದಿ ಪ್ರಭುಗಳೇ ಮೌನ ಮುರಿಯಿರಿ ಎಂದು ಫೆಲೆಸ್ತೀನ್‌ನ ಕಂದಮ್ಮಗಳು ಮೊರೆಯಿಡುತ್ತಿದ್ದಾರೆ. ಜಗತ್ತಿನ ಅತಿ ಸಾಮಾನ್ಯ ದೇಶಗಳು ಸಂಕಷ್ಟಗಳಿಗೆ ಸಿಲುಕಿದಾಗಲೂ ಅರಬ್ ಜಗತ್ತು ಸ್ಪಂದಿಸುತ್ತದೆ, ಮೊನ್ನೆಯಷ್ಟೇ ಆಮ್ಲಜನಕದ ಕೊರತೆಯಿಂದ ಭಾರತ ಬಳಲಿದಾಗ ಟನ್ ಗಟ್ಟಲೇ ಆಕ್ಷಿಜನ್‌ನ್ನು ಸರಬರಾಜು ಮಾಡಿದ್ದು ಇದೇ ಅರಬ್ ರಾಷ್ಟ್ರಗಳು. ಯುದ್ಧ, ಪ್ರಕೃತಿ ವಿಕೋಪಗಳಿಗೆ ತುತ್ತಾಗಿ ಅನೇಕ ರಾಷ್ಟ್ರಗಳು ಬಸವಳಿದಾಗ ಅಲ್ಲಿನ ಹಸಿವು, ದಣಿವನ್ನು ಅರಬ್ ರಾಷ್ಟ್ರಗಳು ತಣಿಸಿದ ಅನೇಕ ಉದಾಹರಣೆಗಳು ನಮ್ಮ ಮುಂದಿದೆ. ಅಂತಹಾ ಅರಬ್ ಪ್ರಭುಗಳು ಫೆಲೆಸ್ತೀನ್ ವಿಚಾರದಲ್ಲಿ ಮಾತ್ರ ಅಲಿಪ್ತ ನೀತಿಯನ್ನು ತಾಳುತ್ತಾರೆ. ಮೊನ್ನೆಯಷ್ಟೇ ಸುಡಾನ್ ಆಫ್ರಿಕಾ ಶೃಂಗಸಭೆಯಲ್ಲಿ ಮಾತನಾಡಿದ್ದ ಸೌದಿ ಅರೇಬಿಯಾದ ವಿದೇಶ ಸಚಿವ ಫೈಝಲ್ ಬಿನ್ ಫರ್ಹಾನ್, ಫೆಲೆಸ್ತೀನ್- ಸಂಘರ್ಷ ಮಧ್ಯಪ್ರಾಚ್ಯವನ್ನು ತಪ್ಪು ದಿಕ್ಕಿನತ್ತ ಕೊಂಡೊಯ್ಯುತ್ತದೆ ಎಂಬ ಉಢಾಫೆಯ ಮಾತನ್ನಾಡಿದ್ದರು. 


ಅಷ್ಟಕ್ಕೂ ಇವರ ತಟಸ್ಥ ನಿಲುವಿಗೆ ಕಾರಣವಾದರೂ ಏನು..?ಅಲ್ಲಿನ ನೋವು, ನರಳಾಟಗಳಿಗೆ ಅರಬ್ ಜಗತ್ತು ನೀಡಿದ ಕನಿಷ್ಟ ಸಾಂತ್ವನವಾದರೂ ಯಾವುದು..? ಅಲ್ಲಿನ ಆಕ್ರಂಧನ, ರೋಧನೆಗಳು ಇನ್ನೂ ಯಾಕೆ ಅರಬ್ ಪ್ರಭುಗಳನ್ನು ಎಚ್ಚರಿಸುತ್ತಿಲ್ಲ.?  ಈ ಪ್ರಶ್ನೆಗಳ ಜಾಡು ಹಿಡಿದು ಹೊರಟರೆ ಎರಡು ರೀತಿಯಲ್ಲಿ‌ ಉತ್ತರ ಲಭಿಸುತ್ತದೆ. ಒಂದು ಮಹಾಯುದ್ಧದ ಸಂಧರ್ಭದಲ್ಲಿ ತುರ್ಕಿಯ ಪತನಕ್ಕಾಗಿ ಬ್ರಿಟನ್‌ನೊಂದಿಗೆ ಮಾಡಿಕೊಂಡ ಒಪ್ಪಂದ ಮತ್ತು ಎರಡನೇಯದ್ದು ಇರಾನ್ ವಿರುದ್ದವಾಗಿ ಇಸ್ರೇಲ್‌ನೊಂದಿಗೆ ಯು‌ಎಇ ಮಾಡಿಕೊಂಡ ಒಪ್ಪಂದ.

* * *

ಅದು ಹತ್ತೊಂಬತ್ತನೇ ಶತಮಾನ. ಅರಬ್ ದೊರೆಗಳು ಅಧಿಕಾರದ ಲಾಲಸೆಗೆ ಜೋತು ಬಿದ್ದ ಸಮಯ. ಉಸ್ಮಾನಿಗಳ ಕೈಯ್ಯಲ್ಲಿದ್ದ ಅಧಿಕಾರವನ್ನು ಕಿತ್ತುಕೊಳ್ಳಲು ಹವಣಿಸಿದ ಈ ದೊರೆಗಳು ನಂಟು ಸ್ಥಾಪಿಸಿಕೊಂಡದ್ದು ಮಾತ್ರ ಬ್ರಿಟನ್‌ನಂಥ ಅಪಾಯಕಾರಿ ರಾಷ್ಟ್ರಗಳೊಂದಿಗೆ. ಫೆಲೆಸ್ತೀನ್ ಮತ್ತು ಬೈತುಲ್ ಮುಖದ್ದಸ್ ಮುಸ್ಲಿಮರ ಕೈ ತಪ್ಪಲು, ಕೃತಘ್ನ ಜೂದರು ಫೆಲೆಸ್ತೀನ್‌ ಸೇರಲು ಸೌದಿ ದೊರೆಗಳು ಪ್ರಮುಖ ಕಾರಣಕರ್ತರಾದರು. ಬ್ರಿಟನ್‌ ಜತೆಗಿನ ನಿರಂತರ ಸಂಬಂಧ, ಸ್ವಾಮಿನಿಷ್ಠೆ, ದೂರಗಾಮಿ ಪರಿಣಾಮವನ್ನು ಅರಿಯದೇ ಮಾಡಿಕೊಂಡ ಒಪ್ಪಂದ, ಇವೆಲ್ಲದರ ನಿಮಿತ್ತ ಫೆಲೆಸ್ತೀನ್, ಲೆಬನಾನ್ ಸಮೇತ ಹಲವು ಮುಸ್ಲಿಂ ರಾಷ್ಟ್ರಗಳು ದಿನಬೆಳಗಾಗುವುದರೊಳಗೆ ಬ್ರಿಟನ್ ಪಾಲಾದವು. ಇಲ್ಲದಿದ್ದರೆ ಈ ಪವಿತ್ರ ಭೂಮಿ ಇನ್ನೂ ಮುಸ್ಲಿಮರ ಕೈಯ್ಯಲ್ಲಿ ಭಧ್ರವಾಗಿರುತ್ತಿತ್ತು. 


ಮುಸ್ಲಿಂ ರಾಷ್ಟ್ರಗಳ ಮೇಲೆ ಪಾರುಪತ್ಯ ಸ್ಥಾಪಿಸಲು ಹವಣಿಸಿದ್ದ ಬ್ರಿಟನ್‌ಗೆ ಅಲ್ಲಿನ ತುರ್ಕೀ ಕೇಂದ್ರೀಕೃತ ಪ್ರಾಂತೀಯ ಆಡಳಿತವನ್ನು ಬುಡಮೇಲುಗೊಳಿಸುವುದು ಅನಿವಾರ್ಯವಾಗಿತ್ತು. ಅದಕ್ಕಾಗಿ ಸೌದೀ ದೊರೆಗಳನ್ನು ಬಗಲಿಗೆ ಹಾಕಿಕೊಂಡ ಬ್ರಿಟನ್ ಅರಬ್ ನಾಡಿನೆಲ್ಲೆಡೆ ಹಿಂಸಾಚಾರ ನಡೆಸಲು ಕುಮ್ಮಕ್ಕು ನೀಡಿತು. ಅಷ್ಟರಲ್ಲಿ ಅರಬರಲ್ಲಿ ದೇಶೀಯವಾದವೂ ಬೀಜಾಂಕುರವಾದವು. ದೂರದ ತುರ್ಕಿಗಳಿಂದ ಆಳಿಸಿಕೊಳ್ಳುವುದು ತಮ್ಮ ಪ್ರತಿಷ್ಟೆಗೆ ಭಂಗ ಎಂಬ ಮನೋಭಾವವನ್ನೂ ಬ್ರಿಟನ್ ಅರಬರಲ್ಲಿ ಮೂಡಿಸಿತು. ಭಾಷೆ, ಪ್ರಾದೇಶಿಕತೆ, ಸಂಸ್ಕೃತಿ, ಮತ್ತು ರಾಷ್ಟ್ರೀಯತೆಯ ಹೆಸರಲ್ಲಿ ಕಲಹಗಳು ಬುಗಿಲೆದ್ದವು. ತುರ್ಕಿಗಳ ವಿರುದ್ದ ದಂಗೆಯೇಳಲು ಮತ್ತು ಹಿಜಾಝ್‌ನಲ್ಲಿ ನರಮೇಧ ನಡೆಸಲೂ ಕೊನೆಯದಾಗಿ ಸ್ವತಂತ್ರವಾದ ಆಡಳಿತ ಸ್ಥಾಪಿಸಲು ಸರ್ವ ನೆರವನ್ನೂ ನೀಡಲಾಗುವುದೆಂದು ಬ್ರಿಟನ್‌ನ ಈಸ್ಟ್ ಇಂಡಿಯಾ ಕಂಪೆನಿ ಸೌದಿ ದೊರೆಗಳಿಗೆ ಆಶ್ವಾಸನೆಯನ್ನು ನೀಡಿತು. ತುರ್ಕಿಗಳ ವಿರುದ್ದ ನಡೆದ ದಂಗೆಯಲ್ಲಿ ಅರಬ್ ನಾಡಿನಾದ್ಯಂತ ಅಸ್ತಿತ್ವದಲ್ಲಿದ್ದ ಮುಹಮ್ಮದ್ ಪಾಶಾ ಸಾರಥ್ಯದ ಆಡಳಿತ ಕ್ಷಯಿಸತೊಡಗಿತು. ನಜ್ದ್, ಹಸ್ಸಾ ಮುಂತಾದ  ಪ್ರದೇಶಗಳನ್ನು ವಶಪಡಿಸಿಕೊಂಡ ಸೇನಾ ಮುಖ್ಯಸ್ಥನಾಗಿದ್ದ ಅಬ್ದುಲ್ ಅಝೀಝ್ ಬಿನ್ ಸುಊದ್ ಬಳಿಕ ಸೌದಿ ಅರೇಬ್ಯಾದ ಪ್ರಭುತ್ವಗಾದಿಗೆ ಹತ್ತಿದ.


 1915ರಲ್ಲಿ ಬ್ರಿಟನ್‌ನ ಪೊಲಿಟಿಕಲ್ ರಾಯಭಾರಿಯಾಗಿದ್ದ ಸರ್ ಫೆರ್ಸಿ ಮತ್ತು ಇಬ್ನು ಸುಊದ್ ನಡುವೆ ಒಂದು ಮಹತ್ವದ ಮಾತುಕತೆ ನಡೆಯುತ್ತದೆ. ಈ ಮಾತುಕತೆ ಪ್ರಕಾರ ಮೊದಲ ಮಹಾಯುದ್ದದ ಸಂದರ್ಭದಲ್ಲಿ ಉಸ್ಮಾನಿಗಳ ವಿರುದ್ದ ಬ್ರಿಟಿಷರಿಗೆ ನೆರವಾಗಬೇಕು ಮತ್ತು ಫೆಲೆಸ್ತೀನ್‌ನಲ್ಲಿ ಜೂದರಿಗೆ ನೆಲೆಸಲು ಒಂದಷ್ಟು ನೆಲ ನೀಡಬೇಕೆಂಬುದಾಗಿತ್ತು. ಇದಕ್ಕೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ ಸುಊದ್ ಫೆಲೆಸ್ತೀನ್ ತನ್ನ ಆಡಳಿತ ವ್ಯಾಪ್ತಿಗೊಳಪಡದ ಸ್ಥಳವೆಂದೂ, ಅಲ್ಲಿ ಜೂದರಿಗೆ ನೆಲೆ ಒದಗಿಸುವುದರಲ್ಲಿ ತನಗೆ ಯಾವುದೇ ಅಭ್ಯಂತರವಿಲ್ಲವೆಂದೂ ಲಿಖಿತ ರೂಪದಲ್ಲಿ ಧೃಢಪಡಿಸಿದ. (ಚಿತ್ರದಲ್ಲಿ ಪತ್ರವನ್ನು ಕಾಣಬಹುದು) ಅದೇ ರೀತಿ ಮಹಾ ಯುದ್ದ ಸಮಯದಲ್ಲಿ ತಟಸ್ಥ ನಿಲುವನ್ನು ತಾಳುವುದಾಗಿಯೂ ಬ್ರಿಟನ್‌ಗೆ ಮಾತು ಕೊಟ್ಟ. 


ಹತ್ತೊಂಬತ್ತನೇ ಶತಮಾನದವರೆಗೆ ಯುರೋಪ್‌ನಾದ್ಯಂತ ಹರಡಿ ಹೋದ ಜೂದನ್ನರು ಸಮಾಜದ ಆಯಕಟ್ಟಿನ ರಂಗಗಳಲ್ಲಿ ಗುರುತಿಸಿಕೊಳ್ಳತೊಡಗಿದರು. ವಿಜ್ಞಾನ ತಂತ್ರಜ್ಞಾನದ ಕ್ಷೇತ್ರದಲ್ಲೂ ಮೇಲುಗೈ ಸಾಧಿಸತೊಡಗಿದರು. ಇದು ಐರೋಪ್ಯನ್ನರ ಕಣ್ಣು ಕೆಂಪಾಗಿಸಿತು. ಜೂದ ವಿರೋಧಿ ಅಲೆಗಳು ಏಳತೊಡಗಿದವು. ಇದಕ್ಕೆ ಪ್ರತಿರೋಧ ಎಂಬಂತೆ ಜೂದ ಪತ್ರಕರ್ತನಾಗಿದ್ದ ಥಿಯೋಡರ್ ಹೆರ್ಸಲ್, ಯಹೂದ್ಯರ ಅಸ್ಮಿತೆಯನ್ನು ಎತ್ತಿ ಹಿಡಿಯಲು ಝಿಯೋನಿಸಂ ಎಂಬ ಹೊಸ ಪಂಥಕ್ಕೆ ರೂಪ ನೀಡುತ್ತಾನೆ. ಯಹೂದ್ಯರ ಮೇಲೆ ಶತಮಾನಗಳಿಂದ ನಡೆಯುತ್ತಿರುವ ದಬ್ಬಾಳಿಕೆ, ಶೋಷಣೆಯನ್ನು ಕೊನೆಗಾಣಿಸಬೇಕಾದರೆ ಒಂದು ಸ್ವತಂತ್ರ ರಾಷ್ಟ್ರ ಸ್ಥಾಪಿಸುವುದು ಅನಿವಾರ್ಯ ಎಂದು ಹೆರ್ಸೆಲ್ ಪ್ರತಿಪಾದಿಸುತ್ತಾನೆ. ಅದಕ್ಕೆಂದೇ ಆತ ಫೆಲೆಸ್ತೀನ್‌ನಲ್ಲಿ ಯಹೂದ್ಯನ್ನರಿಗೆ (ತೌರಾತ್‌ನಲ್ಲಿ) ವಾಗ್ದಾನ ಮಾಡಲ್ಪಟ್ಟ ಭೂಮಿಯೊಂದಿದೆ ಎಂಬ ವಿಚಿತ್ರ ಸುಳ್ಳೊಂದನ್ನು ಸೃಷ್ಟಿಸಿದ. ಒಂದು ಕಾಲಕ್ಕೆ ಧಿಕ್ಕಾರಿಗಳಾಗಿ ಫೆಲೆಸ್ತೀನ್‌ನಿಂದ ಹೊರದಬ್ಬಲ್ಪಟ್ಟ ಜೂದನ್ನರಿಗೆ ಮತ್ತೊಮ್ಮೆ ಆ ಪ್ರದೇಶವನ್ನು ಸೇರುವುದು ಕನಸಿನ ಮಾತಾಗಿತ್ತು. ಅವರಿಗೆ ಅಲ್ಲಿ ಯಾವುದೇ ಹಕ್ಕೂ ಇಲ್ಲವೆಂಬುದು ಅವರಿಗೆ ಖಾತರಿಯಿತ್ತು. ಆದರೆ ಬ್ರಿಟನ್‌ನ ಬೆಂಬಲದಿಂದಾಗಿ ಹೆರ್ಝಲ್‌ನ ಈ ವಾದಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಲಭಿಸಿದವು‌. 


ಕೆಲವೇ ಸಮಯದ ಅಂತರದಲ್ಲಿ ವಿಶ್ವ ಮಹಾ ಯುದ್ದ ಆಸ್ಪೋಟಗೊಂಡಿತು. ಸೌದಿದೊರೆಗಳು ಬ್ರಿಟನ್ ಪರವಾಗಿ ನಿಂತುಕೊಂಡರು. ಅಸ್ಥಿರಗೊಂಡ ತುರ್ಕಿ ಆಡಳಿತವನ್ನು ಕಿತ್ತೆಸೆದ ಬ್ರಿಟನ್ ಖಲೀಫಾರನ್ನು ಪದಚ್ಯುತಗೊಳಿಸಿ ಫೆಲೆಸ್ತೀನ್ ಸಮೇತ ಹಲವು ಮುಸ್ಲಿಂ ಪ್ರಾಂತ್ಯಗಳ‌ ಮೇಲೆ‌‌ ಆಧಿಪತ್ಯ ಸ್ಥಾಪಿಸಿಕೊಂಡಿತು. ಫೆಲೆಸ್ತೀನ್‌ನಲ್ಲಿ ಒಂದು ಸ್ವತಂತ್ರ ಜೂದ ರಾಷ್ಟ್ರ ನಿರ್ಮಿಸುವುದಾಗಿ ಬ್ರಿಟಿಷ್ ವಿದೇಶ ಕಾರ್ಯಾಂಗ ಕಾರ್ಯದರ್ಶಿ ಬಾಲ್ಫರ್ ಘೋಷಿಸಿದ. 1930ರಲ್ಲಿ ಸರ್ ಪೆರ್ಸಿ ಕೊಕ್ಸ್‌ನೊಂದಿಗೆ ಕಥಾಕಥಿತ 'ವಾಗ್ದಾನ ಭೂಮಿ'ಯನ್ನು ಸೌದಿ ದೊರೆ ಅಬ್ದುಲ್ ಅಝೀಝ್ ಸಂದರ್ಶಿಸಿದ. (ಎರಡನೇ‌ ಚಿತ್ರದಲ್ಲಿದೆ) ಅಷ್ಟರಲ್ಲಿ ಯಹೂದ್ಯರ ವಲಸೆ ಆರಂಭವಾಯಿತು ನೋಡಿ. 1927ರಿಂದ 1945ರ ಅವಧಿಯಲ್ಲಿ ಫೆಲೆಸ್ತೀನ್‌ಗೆ ಠಳಾಯಿಸಿದ್ದು ಬರೋಬ್ಬರಿ 2,50,000 ಯಹೂದ್ಯರಾಗಿದ್ದರು.  ಬ್ರಿಟನ್‌ನ ಈ ಎಲ್ಲಾ ಹರಕತ್ತನ್ನು ಸೌದಿ‌ ಸರಕಾರ ಕೈಕಟ್ಟಿ ಬೆಂಬಲಿಸಿತು. ಇತಿಹಾಸದ ನಿರಾಕರಣೆ ಎಂಬಂತೆ ಇಸ್ರೇಲ್‌ ಫೆಲೆಸ್ತೀನನ್ನರ ಎದೆ ಮೇಲೆ ಅಕ್ರಮವಾಗಿ ರಾಷ್ಟ್ರವೊಂದನ್ನು ನಿರ್ಮಿಸಿಯೇ ಬಿಟ್ಟಿತು. ಇದರೊಂದಿಗೆ ಅಲ್ಲಿನ ಮೂಲ ನಿವಾಸಿಗಳ ಬದುಕಿಗೆ ಬೆಂಕಿ ಬಿತ್ತು. ಫೆಲೆಸ್ತೀನ್‌ ಜಗತ್ತಿನ ರಕ್ತ ರಂಜಿತ ಅಧ್ಯಾಯವಾಗಿ ಮಾರ್ಪಟ್ಟಿತು. ಇಡೀ ಜಗತ್ತೇ ಈ ಪುಟ್ಟ ದೇಶಕ್ಕಾಗಿ ಮಮ್ಮಲ ಮರುಗಿದರೆ ಅರಬ್ ದೊರೆಗಳ ಕನಿಷ್ಠ ಕನಿಕರವೂ ಫೆಲೆಸ್ತೀನ್‌ಗೆ ಸಿಗದೇ ಹೋದವು. 


ಇಸ್ರೇಲ್ ವಿರುದ್ದ ಅರಬ್ ಜಗತ್ತು ನಿರ್ಲಿಪ್ತವಾಗಿರಲು ಇನ್ನೊಂದು ಕಾರಣ ಸೆಮೆಟಿಕ್ ವಂಶೀಯ ನಂಟು. ಈ ವಿಕ್ಷಿಪ್ತ ವಂಶೀಯತೆ ಮುನ್ನಲೆಗೆ ಬಂದದ್ದೇ ಇರಾನ್ ಅರಬ್ ನಡುವೆ ಶೀತಲ ಸಮರ ಭುಗಿಲೆದ್ದಾಗ. ಈ ಸಮಯಕ್ಕೆ ಇರಾನ್ ವಿರುದ್ಧವಾಗಿ ಇಸ್ರೇಲ್‌ನೊಂದಿಗೆ ಯು‌.ಎ.ಇ ಅಬ್ರಹಾಂ ಎಂಬ ಹೆಸರಲ್ಲಿ ಒಪ್ಪಂದವೊಂದನ್ನು ಮಾಡುತ್ತದೆ. ಇರಾನನ್ನರು ಮುಸ್ಲಿಮರಾದರೂ ಜನಾಂಗೀಯವಾಗಿ ಆರ್ಯನ್ನರು.  ಅರಬರು ಮತ್ತು ಜೂದನ್ನರು ಮೂಲತಃ ಇಬ್ರಾಹಿಂ ನಬಿಯವರ ವಂಶಕ್ಕೆ ಸೇರಿದವರಾಗಿದ್ದರಿಂದ ಅವರಿಗೆ ಸೆಮೆಟಿಕ್ ಪರಂಪರೆಯಿತ್ತು.


ಒಂದು ಕಡೆ ಬಲಿಷ್ಠ ಅಮೇರಿಕಾವನ್ನೇ ಕೊಡವಿ ಹಾಕುವ ಮಟ್ಟಿಗೆ ಇರಾನ್ ಬೆಳೆದು ನಿಂತಿದೆ. ಮುಂದೊಂದು ದಿನ ಅರಬ್ ರಾಷ್ಟ್ರಗಳೂ ಫೆಲೆಸ್ತೀನ್‌ ಪರವಾಗಿ ನಿಲ್ಲುವ ಸಾಧ್ಯತೆಯಿದೆ. ಇಂಥದ್ದೊಂದು ಪ್ರಕ್ರಿಯೆ ನಡೆದೇ ಹೋದರೆ ಇಸ್ರೇಲ್ ಏಕಾಂಗಿಯಾಗುವ ಭೀತಿ ಅವರನ್ನು ಕಾಡತೊಡಗಿದವು. ಈ ಕಾರಣಕ್ಕೆ ಇಸ್ರೇಲ್, ನಾವು ಒಂದೇ ಜನಾಂಗಕ್ಕೆ ಸೇರಿದವರಾಗಿದ್ದು ಜಾಗತಿಕವಾಗಿ ಒಂದು ಶಕ್ತಿಯಾಗಿ ನಿಲ್ಲಬೇಕೆಂದು ಯು‌ಎಇಯ ಕಿವಿಯೂದಿತು. ಪರಿಣಾಮ ನಡೆದ ಒಪ್ಪಂದವೇ ಅಬ್ರಹಾಂ ಒಪ್ಪಂದ. ಜನಾಂಗೀಯ ಅಸ್ಮಿತೆಯನ್ನು ಬಡಿದೆಬ್ಬಿಸಿದ ಈ ಒಪ್ಪಂದ ಅರಬ್ ಜೂದರ ನಡುವೆ ಮತ್ತೆ ಮೈತ್ರಿ ಸ್ಥಾಪನೆಯಾಗಲು ಪ್ರೇರಣೆಯಾದವು. ಬಳಿಕ ನಡೆದ ವಿದ್ಯಾಮಾನಗಳೆಲ್ಲಾ ಇಸ್ರೇಲ್ ವಿರುದ್ಧ ಕಠಿಣ ನಿರ್ಣಯವನ್ನು ತೆಗೆದುಕೊಳ್ಳಲು ಯು‌ಎಇಗೆ ತೊಡಕಾಯಿತು. ಫೆಲೆಸ್ತೀನ್ ವಿಚಾರದಲ್ಲಿ ಅರಬ್ ದೊರೆಗಳು ತಟಸ್ಥ ನಿಲುವು ತಾಳಲು ಈ ಎರಡು ಒಪ್ಪಂದಗಳೇ ಪ್ರಮುಖ ಕಾರಣ ಎಂದರೆ ತಪ್ಪಿಲ್ಲ.

ಹದಿನಾಲ್ಕು ಶತಮಾನಗಳ ಹಿಂದಿನ ಅನ್ಸಾರ್ ಗಳನ್ನು ನೆನಪಿಸುವ ಸಹಾಯ್ ತಂಡ


 ಹದಿನಾಲ್ಕು ಶತಮಾನಗಳ ಹಿಂದಿನ ಅನ್ಸಾರ್ ಗಳನ್ನು ನೆನಪಿಸುವ ಸಹಾಯ್ ತಂಡ

✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ

ಮುಹಮ್ಮದುರ್ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಸಹಾಬಿಗಳ ಪದವಿಗೆ ಯಾರನ್ನೂ ಹೋಲಿಕೆ ಮಾಡುವಂತಿಲ್ಲ.

ಅದು ಪ್ರವಾದಿಗಳ ನಂತರದ ಪರಮೋನ್ನತ ಪದವಿ ಯಾಗಿರುತ್ತದೆ.

لو أن أحدكم أنفق مثل أحد ذهبا ما أدرك مُدّ أحدهم ولا نصيفه

ನಿಮ್ಮಲ್ಲಿ ಯಾರಾದರೊಬ್ಬರು ಒಬ್ಬರು ಉಹ್ದು ಎಂಬ ಪರ್ವತ ಸಮಾನವಾದ ಚಿನ್ನವನ್ನು ದಾನ ಮಾಡಿದರೆ ನನ್ನ ಸ್ವಹಾಬಿಗಳಲ್ಲಿ ಒಬ್ಬರು ಮಾಡುವ ಒಂದು ಹಿಡಿ ಅಥವಾ ಅರ್ಧ ಹಿಡಿ ದಾನಕ್ಕೆ ಸಮಾನವಾಗಲು ಸಾಧ್ಯವಿಲ್ಲ.


ಸತ್ಯವಿಶ್ವಾಸಿಯಾಗಿ ಒಂದು ಸೆಕೆಂಡು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಸನ್ನಿಧಿಯಲ್ಲಿ ಭಾಗವಹಿಸುವ ಮೂಲಕ ಪ್ರಾಪ್ತವಾಗುವ ಸ್ವಹಾಬಿ ಎಂಬ ಮಹೋನ್ನತ ಪದವಿಯನ್ನು ತಲುಪಲು ಸ್ವಹಾಬಿಯಲ್ಲದವರು ತಮ್ಮ ಜೀವನಪೂರ್ತಿ ಹಿಮಾಲಯ ಸಮಾನವಾದ ಸತ್ಕರ್ಮಗಳನ್ನು ಮಾಡಿದರೂ ಸಾಧ್ಯವಿಲ್ಲ ಎಂದಾಗಿದೆ ಇದರ ತಾತ್ಪರ್ಯ.


ಅದರಲ್ಲೂ ಸ್ವಹಾಬಿಗಳಲ್ಲಿ ಅನ್ಸಾರುಗಳು ಎಂಬ ಹೆಸರಿನಲ್ಲಿ ಗುರುತಿಸಲ್ಪಡುವ ಮದೀನಾ ನಿವಾಸಿಗಳಾದ ಸ್ವಹಾಬಿಗಳು ಸ್ವಹಾಬಿಗಳಲ್ಲಿ ವಿಶೇಷ ಸ್ಥಾನಮಾನ ವನ್ನು ನೀಡಲ್ಪಟ್ಟವರೂ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಅತ್ಯಂತ ಪ್ರೀತಿಯಿರುವವರೂ ಆಗಿದ್ದರು.

ಇದಕ್ಕೆ ಕಾರಣ ಅವರ ಅಸಾಮಾನ್ಯ ಕಾರುಣ್ಯ ಸೇವೆ ಹಾಗೂ  ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗಿನ ಅಪಾರ ಪ್ರೀತಿಯಾಗಿತ್ತು.

ಮಕ್ಕಾದಿಂದ ಸತ್ಯಪ್ರಚಾರಕ್ಕಾಗಿ ತಮ್ಮದೆಲ್ಲವನ್ನು, ತಮ್ಮವರೆಲ್ಲರನ್ನು ಉಪೇಕ್ಷಿಸಿ ಮದೀನಾಕ್ಕೆ ಹಿಜ್ರಾ ಬಂದಿದ್ದ ನಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಮತ್ತು ಮುಹಾಜಿರ್ ಗಳಾದ ಸಹಾಬಿಗಳನ್ನು ಮದೀನಾ ನಿವಾಸಿಗಳಾದ ಈ ಅನ್ಸಾರ್ ಗಳು ಉಪಚರಿಸಿದ ರೀತಿ ಮಾತ್ರ ಚರಿತ್ರೆಯಲ್ಲಿ ಸರಿಸಾಟಿಯಿಲ್ಲದ್ದಾಗಿತ್ತು.

ತಮಗಿಂತಲೂ ತಮ್ಮ ಕುಟುಂಬದ ಸದಸ್ಯರಿಗಿಂತಲೂ ಪ್ರಾಧಾನ್ಯತೆ ಹಾಗೂ ಮಹತ್ವವನ್ನು ಎಲ್ಲಾ ವಿಷಯಗಳಲ್ಲಿ ಇವರಿಗೆ ನೀಡುತ್ತಿದ್ದರು.ಮಾತ್ರವಲ್ಲ ತಮ್ಮ ಪತ್ನಿಯರನ್ನು ತ್ವಲಾಖ್ ಹೇಳಿ ಪತ್ನಿಯರಿಲ್ಲದ ಮುಹಾಜಿರ್ ಗಳಾದ ಸಹಾಬಿಗಳಿಗೆ ವಿವಾಹ ಮಾಡಿಕೊಡಲೂ ಸಿದ್ಧರಾಗುತ್ತಿದ್ದರು ಎಂದು ಚರಿತ್ರೆಯಿಂದ ಯಾರಿಗೂ ತಿಳಿಯಬಹುದಾದ ಸತ್ಯ ಸಂಗತಿ ಯಾಗಿದೆ. 

ಇವರ ಇಂತಹ ಅಸಾಮಾನ್ಯ ಕಾರುಣ್ಯ ಸೇವೆಯ ಕಾರಣದಿಂದಲೇ ಇವರಿಗೆ ಈ ಸಹಾಯಿಗಳು (ಅನ್ಸಾರ್ ಗಳು) ಎಂಬ ವಿಶೇಷ ನಾಮ ಲಭಿಸುವಂತಾಯ್ತು.


ಇದಿಷ್ಟು ಬರೆಯಲು ಕಾರಣ ಮೊನ್ನೆ ನಮ್ಮ ಮನೆಯ ಪಕ್ಕದಲ್ಲಿ ಒಂದು ಹೆಂಗಸಿಗೆ ಅನಾರೋಗ್ಯ ಕಾರಣ ಮನೆಯಲ್ಲೇ ಚಿಕಿತ್ಸೆ ನಡೆಯುತ್ತಿತ್ತು.ನಂತರ ವಿಷದವಾಗಿ ಅರಿತಾಗ ಅವರಿಗೆ ಆರೋಗ್ಯ ಸ್ವಲ್ಪ ಹದಗೆಟ್ಟಿದ್ದು

ಎರಡು ದಿನಗಳ ಹಿಂದೆ ಬಹಳ ಸೀರಿಯೆಸ್ ಆಗಿತ್ತು. 

ಆ ಸಮಯದಲ್ಲಿ ರಾತ್ರೋ ರಾತ್ರಿ ಅವರಿಗೆ ಬೇಕಾದ ಚಿಕಿತ್ಸೆಯ ಎಲ್ಲಾ ತುರ್ತು ವ್ಯವಸ್ಥೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಿದ್ದು ಮೂಡುಬಿದಿರೆ,ಕೈಕಂಬ ಸರ್ಕಲ್ ಕರ್ನಾಟಕ ಮುಸ್ಲಿಂ ಜಮಾಅತ್ ನ ಸಹಾಯಿ ತಂಡದ ಎಸ್ಸೆಸ್ಸೆಫ್ ಮತ್ತು ಎಸ್.ವೈ.ಎಸ್  ಸಂಘಟನೆಯ ಕಾರ್ಯಕರ್ತರು ಎಂದು ತಿಳಿದಾಗ ನನಗೆ ಬಹಳ ಅಚ್ಚರಿಯಾಯಿತು.

ಯಾಕೆಂದರೆ ನಮ್ಮ ಅಕ್ಕ ಪಕ್ಕದಲ್ಲೇ ನಡೆದ ಈ ಘಟನೆಯಲ್ಲಿ ನಾನೂ ಸೇರಿದಂತೆ ಯಾರಿಗೂ ತಿಳಿಯದ ರೀತಿಯಲ್ಲಿ ಬಹಳ ಆತ್ಮಾರ್ಪಣೆ ಯಿಂದ ಇಂತಹ ಸೇವೆ ಮಾಡುವುದೆಂದರೆ ಅದು ಹಿಂದಿನ ಮದೀನಾದ ಅನ್ಸಾರ್ ಗಳ ಸೇವೆಯನ್ನು ಸ್ವಲ್ಪ ಮಟ್ಟಿಗೆ ನೆನಪಿಸುತ್ತದೆ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು.

ಇದು ಒಂದು ಎರಡು ಉದಾಹರಣೆಗಳಲ್ಲ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈ ಸೇವೆಯು ಸದ್ದಿಲ್ಲದೆ ಮುಂದುವರಿಯುತ್ತಲೇ ಇದೆ.

ಕೋವಿಡ್ ರೋಗಿಗಳ ಶಿಸ್ರೂಸೆ ಮಾತ್ರವಲ್ಲದೆ ಈ ಲಾಕ್ ಡೌನ್ ಅವಧಿ ಯಲ್ಲಿ ಕರ್ನಾಟಕದ ಉದ್ದಗಲಕ್ಕೂ ಕಷ್ಟ ಅನುಭವಿಸುತ್ತಿರುವ ಸಾವಿರಾರು ಕುಟುಂಬಗಳಿಗೆ ಮುಸ್ಲಿಂ ಜಮಾಅತ್ ನ ಸಹಾಯ್,ಎಸ್ವೈಎಸ್ ನಾ ಇಸಾಬ, ಎಸ್ಸೆಸ್ಸೆಫ್ ಗಳ ಮುಖಾಂತರ ಆಹಾರ ಕಿಟ್ ಗಳನ್ನು ಸದ್ದಿಲ್ಲದೆ ವಿತರಿಸಲಾಗಿದೆ. 

ವಿವರಿಸುತ್ತಾ ಹೋದರೆ ಇದರ ಪಟ್ಟಿ ದೀರ್ಘವಾಗಿ ಬಿಡಬಹುದು


ಇದರಲ್ಲಿರುವ ವಿಶೇಷತೆ ಏನೆಂದರೆ ಈ ಕಾರ್ಯಕರ್ತರಲ್ಲಿರುವ ನಿಷ್ಕಳಂಕತೆಯಾಗಿದೆ.

ಸೇವೆಗಳು ಇವತ್ತು ಅನೇಕ ಸಂಘಟನೆಗಳು, ರಾಜಕೀಯ ಪಕ್ಷಗಳು ಹಾಗೂ ವ್ಯಕ್ತಿಗಳು ಮಾಡುತ್ತವೆ.

ಆದರೆ ಆ ಸೇವೆಗಳು ಆಕಾಂಕ್ಷಿ ಗಳಿಗೆ ತಲುಪುವ ಮೊದಲೇ ಅದರ ಫೋಟೋಗಳು ಅಥವಾ ಅದರ ನಾಯಕರ ಫೋಟೋಗಳು ಪತ್ರಿಕೆಗಳಲ್ಲಿ,ಜಾಲತಾಣ ಗಳಲ್ಲಿ ವೈರಲಾಗಿ ಬಿಡುತ್ತವೆ.

ಇದರಿಂದಾಗಿ ಇವರ ಉದ್ದೇಶದಲ್ಲಿ ಸಂಶಯ ಮೂಡುತ್ತದೆ.

ಇವರ ಉದ್ದೇಶ ಕೇವಲ ಸೇವೆಯಾಗಿರದೆ ಗ್ರಾಮ,ಜಿಲ್ಲಾ ಪಂಚಾಯತ್ ಗಳೋ ಅಥವಾ ಅಸಂಬ್ಲಿ,ಪಾರ್ಲಿಮೆಂಟ್ ಗಳೋ ಅಥವಾ ಇತರ ಐಹಿಕ ಲಾಭಗಳು ಆಗಿರಲಿಕ್ಕೆ ಸಾಧ್ಯತೆ ಹೆಚ್ಚು.


ಆದರೆ ಇದು ಹಾಗಲ್ಲ.ಇದರಲ್ಲಿ ಯಾವುದೇ ರಾಜಕೀಯ ಪದವಿಗಳೋ ಐಹಿಕ ಲಾಭಗಳೋ ಉದ್ದೇಶವಾಗಲು ಸಾದ್ಯವೇ ಇಲ್ಲ.

ಈ ಸಂಘಟನೆಗಳ ರೂಪೀಕರಣದ ಉದ್ದೇಶವೇ ಐಹಿಕ ಸೇವೆಯ ಮೂಲಕ ಪಾರತ್ರಿಕ ಮೋಕ್ಷ ಪಡೆಯುವುದು ಮಾತ್ರವಾಗಿದೆ.

ಅದರಿಂದಾಗಿಯೇ ಇದು ಮದೀನಾ ಅನ್ಸಾರ್ ಗಳ ಸೇವೆಯನ್ನು ಸ್ವಲ್ಪ ಮಟ್ಟಿಗೆ ನೆನಪಿಸುವಂತಿದೆ ಎಂದು ಹೇಳಲು ಕಾರಣ. 

ಇವರ ಮಾದರೀ ನಾಯಕರು ಆ ಮದೀನಾದ ಅನ್ಸಾರ್ ಗಳೆಂಬ ಸಹಾಯಿಗಳಾಗಿರುತ್ತಾರೆ.


ಇದರಲ್ಲಿ ತನ್ನೆಲ್ಲಾ ಸಮಯವನ್ನು ತೊಡಗಿಸಿ ಕೊಂಡಿರುವ ಸುನ್ನೀ ಸಂಘ ಕುಟುಂಬದ ಸಕ್ರಿಯ ನಾಯಕ ಮಂಗಳೂರು ಅಶ್ರಫ್ ಕಿನಾರ ರವರು ಈದ್ ಶುಭಾಶಯ ಹೇಳಲು ಫೋನ್ ಮಾಡಿದ್ದರು.


ಸೇವೆಯ ಬರದಲ್ಲಿ ರೋಗಿಗಳ ಮಧ್ಯೆ ಓಡಾಡುವಾಗ ನಿಮ್ಮ ಸ್ವಶರೀರಗಳನ್ನು ಸಂಪೂರ್ಣ ಕಡೆಗಣಿಸದೆ ಸ್ವಲ್ಪ ಎಚ್ಚರಿಕೆಯಿಂದ ಇರಿ ಎಂದು ಹೇಳಿದಾಗ ಅವರು ಕೊಟ್ಟ ಉತ್ತರ  'ಹೆದರಬೇಕಾಗಿಲ್ಲ ನಾವು ನಿಸ್ವಾರ್ಥ ಸೇವೆ ಮಾಡುವಾಗ ನಮಗೆ ಅಲ್ಲಾಹನ ಪ್ರತ್ಯೇಕ ಸಹಾಯ ಇದ್ದೇ ಇರುತ್ತದೆ' ಎಂದಾಗಿತ್ತು


ಇದರಿಂದೆಲ್ಲಾ ಇವರ ಉದ್ದೇಶ ಶುದ್ಧಿ ಯಾರಿಗೂ ಸ್ಪಷ್ಟವಾಗುವತಂದ್ದೇ ಆಗಿರುತ್ತದೆ.


ಕರ್ನಾಟಕದ ಮುಸ್ಲಿಂ ಜಮಾಅತ್ ರೂಪೀಕರಿಸುವಾಗ ಹಲವರು ಹಲವಾರು ಸಂಶಯಗಳನ್ನು ವ್ಯಕ್ತಪಡಿಸಿದ್ದರು.

ಇದೇನು ರಾಜಕೀಯ ಪಕ್ಷವೋ ಅಥವಾ ಬೇರೇನಾದರೂ ಐಹಿಕ ಗುರಿಯಿದೆಯೇ...

ಎಂದೆಲ್ಲಾ.

ಅವರಿಗೆಲ್ಲಾ ಈಗ ಉತ್ತರ ಸಿಕ್ಕಿರ ಬಹುದು ತಾನೇ.


ಅಲ್ಲಾಹು ಈ ಸಹಾಯಿ ತಂಡ ಮತ್ತು ನಮ್ಮೆಲ್ಲಾ ಸಂಘಟೆನೆಗಳ ಕಾರ್ಯಕರ್ತರು,ನಾಯಕರ ಸೇವೆಗಳನ್ನು ಸ್ವೀಕರಿಸಿ ದೀರ್ಘಾಯುಷ್ಯ ಆಫಿಯತ್ತನ್ನು ಕರುಣಿಸಲಿ. ಅಮೀನ್

Monday, May 17, 2021

ಮರೆಯಾಗುತ್ತಿರುವ ಸ್ಫೂರ್ತಿದಾಯಕ ನಾಯಕರು


ಮರೆಯಾಗುತ್ತಿರುವ ಸ್ಫೂರ್ತಿದಾಯಕ ನಾಯಕರು

✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ

1990-92ನೇ ಇಸವಿಯ ಆಸುಪಾಸು.

ವಿನೀತನಾದ ನಾನು ವಿದ್ಯಾರ್ಥಿ ಜೀವನಕ್ಕೆ ವಿದಾಯ ಹೇಳಿ ಸೇವಾ ರಂಗಕ್ಕೆ ಪ್ರವೇಶಿಸಿ ಕನ್ನಂಗಾರಿನಲ್ಲಿ ಸೇವೆಯನ್ನು ಪ್ರಾರಂಭಿಸಿದ ಆರಂಭದ ದಿನಗಳದು.

ಅಂದಿನ ಯುವ ವಿದ್ವಾಂಸರಲ್ಲಿ ಹೊಸ ಚಳುವಳಿಯ ಮನೋಭಾವ ಹುಟ್ಟಿಕೊಂಡು

ಕನ್ನಡ ಮಣ್ಣಿನಲ್ಲಿ ಏನಾದರೂ ಸಂಘಟನಾ ಚಾಲನೆ ಸೃಷ್ಟಿ ಮಾಡಬೇಕೆಂಬ ಆವೇಶ ಗರಿಗೆದರಿದ ಕಾಲವದು.


ವರ್ಷಗಟ್ಟಲೆ ಕೇರಳದ ವಿವಿಧ ವಿದ್ಯಾಲಯಗಳಲ್ಲಿ ಕಲಿತು ಅಲ್ಲಿನ ಸಂಘಟನಾ ಚೈತನ್ಯವನ್ನು ಕಂಡು ಪ್ರಚೋದನೆಗೊಂಡು ಈ ಚಳುವಳಿಯ ಮನೋಭಾವ ಅವರಲ್ಲಿ ಹುಟ್ಟಿಕೊಂಡಿತ್ತು. 

ನಮ್ಮ ನೆಲದಲ್ಲಿ ಏನಾದರೂ ಮಾಡಲೇಬೇಕು ಎಂಬ ಹಂಬಲ ಒಂದು ಕಡೆಯಾದರೆ ಏನು,ಹೇಗೆ ಎಲ್ಲಿಂದ ಪ್ರಾರಂಭಿಸುವುದು ಎಂಬಿತ್ಯಾದಿ ಕುತೂಹಲಗಳು ಮತ್ತೊಂದೆಡೆಯಾಗಿತ್ತು.

ಆದರೆ ಮೊದಲ ಆಯ್ಕೆ ಮದ್ರಸಾ ಸುಧಾರಣಾ ಚಳುವಳಿಯಾಗಿತ್ತು. 


ಇದರ ಭಾಗವೆಂಬಂತೆ 

ಸಮಸ್ತ ಕೇರಳ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಇದರ ಮದ್ರಸಾ ಹಾಗೂ ರೇಂಜ್ ಗಳು ಮಂಗಳೂರಿನ ಆಸುಪಾಸಿನಲ್ಲಿ ಅನೇಕ ಕಡೆಗಳಲ್ಲಿ ಆಗಲೇ ಕಾರ್ಯಾಚರಿಸುತ್ತಿತ್ತು.

ಆದರೆ ಅದು ಕರಾವಳಿಯ ಭಾಗದಲ್ಲಿ ಮಾತ್ರ ಸುರತ್ಕಲ್ ನಲ್ಲಿ ಕೊನೆಗೊಂಡಿತ್ತು.

ಅಂದು ಉಡುಪಿ ಜಿಲ್ಲೆಯಾಗಿರಲಿಲ್ಲ.

ಕುಂದಾಪುರ, ಕಾರ್ಕಳ,ಉಡುಪಿ ಈ ಮೂರು ತಾಲೂಕುಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಸೇರಿತ್ತು.


ನೂತನ ಕಾರ್ಯಾಚರಣೆಯನ್ನು ಇಲ್ಲಿಂದಲೇ ಪ್ರಾರಂಭಿಸುವ ಉದ್ದೇಶದಿಂದ ಮದ್ರಸಾ ಸುಧಾರಣೆ ಎಂಬ ಪದ್ದತಿಯನ್ನು ಕೈಗೆತ್ತಿಕೊಂಡು ಹಿರಿಯ ಮುತ್ಸದ್ದಿಯಾಗಿದ್ದ ಕನ್ನಂಗಾರು ಮುಕ್ರಿ ಹಾಜಿ ಯವರೊಂದಿಗೆ ಮಾತನಾಡಿ ಒಂದು ಗಾಡಿ ಹಿಡಿದು ಉಡುಪಿ, ಕುಂದಾಪುರ ಕಾರ್ಕಳ ತಾಲೂಕುಗಳಲ್ಲಿನ ವಿವಿಧ ಮೊಹಲ್ಲಾಗಳಲ್ಲಿ ಸಂಚರಿಸಿ ಎಲ್ಲಾ ಮದರಸಗಳನ್ನು ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ ಅಂಗೀಕರಿಸಿ ಕನ್ನಂಗಾರ್ ರೇಂಜ್ ರೂಪೀಕರಿಸಲಾಯ್ತು.


ಇದರಲ್ಲಿ ಕನ್ನಂಗಾರು ಮುಕ್ತಿ ಹಾಜಿಯವರ ಪ್ರಭಾವ ಹಾಗೂ ಶ್ರಮ ತುಂಬಾ ಕೆಲಸ ಮಾಡಿದೆ ಎಂಬುದನ್ನು ಮರೆಯಲು ಸಾಧ್ಯವೇ ಇಲ್ಲ.


ಯಾಕೆಂದರೆ ಅವರು ಅಂದು ಆ ಭಾಗದಲ್ಲಿ ಅಷ್ಟು ಪ್ರಭಾವೀ ವ್ಯಕ್ತಿ ಮಾತ್ರವಲ್ಲದೆ ಬಹಳ ಹಿಂದಿನಿಂದಲೇ ಬಹು ತಾಜುಲ್ ಉಲಮಾ (ನ.ಮ) ಸೇರಿ ಕೇರಳದ ಬಹುತೇಕ ವಿದ್ವಾಂಸರೊಂದಿಗೆ ಅತಿಯಾದ ಗೌರವ ಹಾಗೂ ನಿಕಟ ಸಂಪರ್ಕ ಹೊಂದಿದವರಾಗಿದ್ದರು.


ಹೀಗೆ ಸುರತ್ಕಲ್ ನಲ್ಲಿ ಕೊನೆಗೊಂಡಿದ್ದ ಸುನ್ನೀ ರೇಂಜ್ ಕಾರ್ಯಾಚರಣೆಯನ್ನು ಕನ್ನಂಗಾರ್ ರೇಂಜ್ ನ ಮೂಲಕ ಮತ್ತೆ ತನ್ನ  ಜೈತ್ರಯಾತ್ರೆ ಯನ್ನು ಮುಂದುವರಿಸಲಾಯಿತು.


ಅಂದಿನ ಕನ್ನಂಗಾರ್ ರೇಂಜ್ ಅಂದರೆ ಹೊನ್ನಾವರ,ಸಾಗರ,ತೀರ್ಥಹಳ್ಳಿ,ಕಾರ್ಕಳ, ಮೂಡಬಿದ್ರೆ ಮುಂತಾದ ಪ್ರದೇಶಗಳಿಗೆಲ್ಲಾ ಇದೇ ಒಂದು ರೇಂಜಾಗಿತ್ತು.

ಅಂದು ಆ ಭಾಗದ ಬಹುತೇಕ ಮದ್ರಸಗಳೆಲ್ಲಾ ಈ ರೇಂಜಿನಲ್ಲಿ ಸೇರಿದ್ದವು.

ಆದರೆ ಆ ಎಲ್ಲಾ ಮದ್ರಸಗಳು ಅದುವರೆಗೆ ಯಾವುದೇ ಬೋರ್ಡಿನಲ್ಲಿ ಅಂಗೀಕಾರ ಪಡೆದ ಮದ್ರಸಗಳಾಗಿರಲಿಲ್ಲ.

ಸ್ವತಂತ್ರವಾಗಿ ಕಾರ್ಯಾಚರಿಸುತ್ತಿದ್ದ ಮದ್ರಸಗಳಾಗಿದ್ದವು.


ಆದರೆ ಇವತ್ತು ಆ ಒಂದು ರೇಂಜಿನ ಕಾರಣದಿಂದ ಅದೆಷ್ಟೋ ರೇಂಜ್ ಗಳು ಹುಟ್ಟಿ ಅದೆಷ್ಟೋ ಮದ್ರಸಗಳಾಗಿ ಪರಿವರ್ತನೆ ಗೊಂಡು ಸಕ್ರಿಯವಾಗಿ ಮುಂದುವರಿಯುತ್ತಿವೆ.

ಅಲ್ಹಮ್ದುಲಿಲ್ಲಾಹ್ ಸುಮ್ಮ ಅಲ್ಹಮ್ದುಲಿಲ್ಲಾಹ್.


ಇನ್ನು ಸಂಘಟನಾ ಚಳುವಳಿಯ ವಿಷಯಕ್ಕೆ ಬರುವುದಾದರೆ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ಸೀಮಿತಗೊಂಡಿದ್ದ ಎಸ್ಸೆಸ್ಸೆಫ್ ಎಸ್ವೈಎಸ್ ಸಹಿತವಿರುವ ನಮ್ಮೆಲ್ಲಾ ಸಂಘಟನೆಗಳನ್ನು ಕರ್ನಾಟಕದ ಇತರ ಪ್ರದೇಶಗಳಿಗೆ ವ್ಯಾಪಿಸುವುದರಲ್ಲಿ ಅಂದಿನ ಸಂಘಟನಾ ಚಳುವಳಿಯೇ ಮುಖ್ಯ ಪಾತ್ರ ವಹಿಸಿತ್ತು.


ನಾನಿದಿಷ್ಟು ಬರೆಯಲು ಕಾರಣ ಅಂದಿನ ಯುವ ವಿದ್ವಾಂಸರಿಗೆ ಹಾಗೂ ಯುವ ನಾಯಕರಿಗೆ ಈ ಚಳುವಳಿಯಲ್ಲಿ ಸ್ಫೂರ್ತಿ ನೀಡುತ್ತಿದ್ದ ಅನೇಕ ಉಲಮಾ ಉಮರಾ ನಾಯಕರು ಇಂದು ನಮ್ಮೊಂದಿಗಿಲ್ಲ.

ಅವರೆಲ್ಲಾ ಜೀವನ ಪಯಣ ಮುಗಿಸಿ

ಇನ್ನೊಂದು ಲೋಕದ ಖಬ್ರಿನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ.


ಅವರಲ್ಲಿ ಪ್ರಮುಖರಾಗಿದ್ದ ಹಿರಿಯ ವಿದ್ವಾಂಸರೂ ಸುನ್ನೀ ಜಗತ್ತಿನ ಅಭಿಮಾನವೂ ಆಗಿದ್ದ  ತಾಜುಲ್ ಫುಖಹಾ,ಶರಫುಲ್ ಉಲಮಾ,ಬಹು ಟಿ.ಹೆಚ್ ಉಸ್ತಾದ್ ಮುಂತಾದ ಅಗ್ರಗಣ್ಯ ಉಲಮಾಗಳು ನಾಯಕತ್ವ ನೀಡುತ್ತಿದ್ದರು.

ಅದೇ ರೀತಿ ಇದಕ್ಕಾಗಿ ಬಿಡುವಿಲ್ಲದೆ ಓಡಾಡುತ್ತಿದ್ದ ಬಹು ಆತೂರು ಸಅದ್ ಮುಸ್ಲಿಯಾರ್,ನೆಕ್ಕಿಲಾಡಿ ಇಸ್ಮಾಈಲ್ ಮದನಿ,ಸೂರಿಂಜೆ ಅಬ್ದುರ್ರಹ್ಮಾನ್ ಮುಸ್ಲಿಯಾರ್,ಇಂಜಿನಿಯರ್ ಎಸ್.ಅಬ್ದುರ್ರಹ್ಮಾನ್ ಸರ್,ಕಾಬೆಟ್ಟು ಆಹ್ಮದ್ ಮುಸ್ಲಿಯಾರ್.

ಅತ್ತ ಕೇರಳದಿಂದ ಈ ಚಳುವಳಿಯಲ್ಲಿ ಭಾಗಿಯಾಗಿದ್ದ ಶಾಹುಲ್ ಹಮೀದ್ ಬಾಖವಿ ಶಾಂತಪುರಂ,ಪಿ,ಪಿ, ಉಸ್ತಾದ್ ಪಾರನ್ನೂರು,ಪಡಿಞಾರತ್ತರ ಉಸ್ತಾದ್, ಮುಂತಾದವರಾಗಿದ್ದರು.

ಇಲ್ಲಿನ ಮದ್ರಸಾ ಚಳುವಳಿಯಲ್ಲಿ ನೆಕ್ಕಿಲಾಡಿ ಮತ್ತು ಆತೂರು ಉಸ್ತಾದರು ಗಳ ಹೆಸರು ಪ್ರಸ್ತಾಪಿಸದೆ ಪೂರ್ಣವಾಗಲು ಸಾಧ್ಯವಿಲ್ಲ.


ಅವರೆಲ್ಲಾ ಇಂದು ಒಬ್ಬರ ಹಿಂದೆ ಒಬ್ಬರಾಗಿ ಮರೆಯಾಗಿ ನಮ್ಮ ಸಂಘಟನಾ ವಲಯದಲ್ಲಿ ಶೂನ್ಯತಾ ಮನೋಭಾವಕ್ಕೆ ಕಾರಣರಾಗಿದ್ದಾರೆ. 


ಕೊನೆಯದಾಗಿ ಇದೀಗ ಮಂಗಳೂರು ಬಹು ಇಬ್ರಾಹಿಮ್ ಬಾವಾ ಹಾಜಿಯವರು.(ನವರಲ್ಲಾಹು ಮರಾಖಿದಹುಮ್),


ಇಲ್ಲಿ ಚಿಂತೆಗೀಡು ಮಾಡುವ ವಿಷಯವೇನೆಂದರೆ ಇವರೆಲ್ಲರ ನಿರ್ಗಮನವು ಶೂನ್ಯತೆಯನ್ನು ಸೃಷ್ಟಿ ಮಾಡುತ್ತದೆಯೇ ಹೊರತು ಅವರ ಜಾಗವನ್ನು ತುಂಬುವ ಮತ್ತೊಬ್ಬರ ಸೃಷ್ಟಯಾಗುವುದಿಲ್ಲ ಎಂಬುದಾಗಿದೆ.


ಬಹು ಬಾವಾ ಹಾಜಿಯವರು ಮಂಗಳೂರಿನಲ್ಲಿ ಅಜಾತ ಶತ್ರುವಾಗಿ ಜೀವಿಸಿ ಎಲ್ಲರ,ಎಲ್ಲಾ ವಿಭಾಗದ ಜನರ ಅಚ್ಚು ಮೆಚ್ಚಿನ ಉಮರಾ ನಾಯಕರಾಗಿದ್ದರು. 


ಆದರೆ ಸುನ್ನಿಯತ್ತಿನ ವಿಚಾರದಲ್ಲಿ ಯಾವುದೇ ರೀತಿಯ ರಾಜಿಗೆ ಸಿದ್ದರಿಲ್ಲದ ಅಪ್ರತಿಮ ನಾಯಕರಾಗಿದ್ದರು.

ಅದೂ ಅಲ್ಲದೆ ಇಲ್ಲಿನ ಎಲ್ಲಾ ಸುನ್ನೀ ಸಾಹಿತ್ಯ,ಸಂಘಟನೆ,

ಸಂಸ್ಥೆಗಳ ಬೆಳವಣಿಗೆಗಳಲ್ಲಿ ಅವರ ಕೊಡುಗೆ ಅಪಾರವಾಗಿತ್ತು ಎಂಬುದು ಅವರನ್ನು ಹತ್ತಿರದಿಂದ ಬಲ್ಲವರಿಗಲ್ಲದೆ ತಿಳಿದಿರಲು ಸಾಧ್ಯವಿಲ್ಲ.


ಅದೂ ಅಲ್ಲದೆ ಸುನ್ನಿಯತ್ತಿಗೆ ಎಲ್ಲಿಯಾದರೂ ಏನಾದರೂ ಯಾರಿಂದಲಾದರೂ ಒಂದು ನ್ಯೂನತೆ ಸಂಭವಿಸುವುದನ್ನು ಅವರು ಸಹಿಸುತ್ತಿರಲಿಲ್ಲ. ಅಂತಹ ಅಪಾಯ ಕಂಡು ಬಂದರೆ ತಕ್ಷಣ ಅದರ ಬಗ್ಗೆ ಎಚ್ಚೆತ್ತು ಕೊಂಡು ಬೇಕಾದುದನ್ನು ಮಾಡುತ್ತಿದ್ದರು ಸಂಬಂಧ ಪಟ್ಟವರಿಂದ ಮಾಡಿಸುತ್ತಿದ್ದರು.


ಮಾತ್ರವಲ್ಲ ಇಲ್ಲಿನ ಸುನ್ನೀ ಚಳುವಳಿಗೆ ಬೇಕಾದ ಆರ್ಥಿಕ ನೆರವು ನೀಡುವುದರಲ್ಲಿ ಮತ್ತು ಮಂಗಳೂರು ಮರ್ಹೂಮ್ ಹಸನ್ ಹಾಜಿ ಫ್ಯಾಮಿಲಿ ಸೇರಿ ಅನೇಕ ಶ್ರೀಮಂತರಿಂದ ಆರ್ಥಿಕ ನೆರವು ದೊರಕಿಸಿಕೊಡುವುದರಲ್ಲಿ ಮುಖ್ಯ ಪಾತ್ರ ವಹಿಸಿ ಇಂದಿನ ಎಲ್ಲಾ ಬೆಳವಣಿಗೆಗಳಲ್ಲಿ ಅವರೂ ಕಾರಣ ಕರ್ತರಾಗಿದ್ದಾರೆ.


ಆದ್ದರಿಂದ ಇಂದಿನ ಸಂಪತ್ಬರಿತ ತಲೆಮಾರಿನ ಯುವ ವಿದ್ವಾಂಸರು, ಲೇಖಕರು, ಭಾಷಣ ಗಾರರು,ಸಂಘಟನಾ ನಾಯಕರು, ಕಾರ್ಯಕರ್ತರೆಲ್ಲರೂ ಇವರು ನಡೆದು ಹೋದ ಹೆಜ್ಜೆ ಗುರುತುಗಳಲ್ಲಿ ನಿಸ್ವಾರ್ಥತೆಯಿಂದ ಹೆಜ್ಜೆಯಿಟ್ಟು ಮುಂದುವರಿಯ ಬೇಕಾಗಿದೆ.

ಅಲ್ಲದೆ ಈ ಕಳೆದು ಹೋಗುತ್ತಿರುವ ತಲೆಮಾರಿನ ಕುರುಹುಗಳನ್ನು ನಂತರದ ತಲೆಮಾರಿಗೆ ತಿಳಿಸಿ ಕೊಡುವ ಪ್ರಯತ್ನವನ್ನೂ ಮಾಡಬೇಕಾಗಿದೆ.


ಮರೆಯಾದ ನಮ್ಮ ಪೂರ್ವಿಕರ ಪದವಿಗಳನ್ನು ಅಲ್ಲಾಹು ಉನ್ನತಿಗೇರಿಸಲಿ.

ಅವರನ್ನೂ ನಮ್ಮನ್ನೂ ಸ್ವರ್ಗದಲ್ಲಿ ಒಟ್ಟು ಸೇರಿಸಲಿ.ಅವರ ಮಾರ್ಗದಲ್ಲಿ ಸಂಚರಿಸಲು ತೌಫೀಖ್ ನೀಡಲಿ. ಅಮೀನ್.

Wednesday, May 12, 2021

ಬಾವಾ ಹಾಜಾರ್ ಎಂಬ ಕ್ರಾಂತಿ ಪುರುಷ


ಬಾವಾ ಹಾಜಾರ್ ಎಂಬ ಕ್ರಾಂತಿ ಪುರುಷ


ಪಿ.ಪಿ.ಅಹ್ಮದ್ ಸಖಾಫಿ, ಕಾಶಿಪಟ್ಣ

********************

ಅಂದು 1990 ಇಸವಿ. ಕನ್ನಡ ಮಣ್ಣಿನಲ್ಲಿ ಯಾವುದೇ ಸಂಘಟನೆ ಸಕ್ರಿಯವಾಗಿಲ್ಲ.

ಒಂದೇ ಒಂದು ವಿದ್ಯಾ ಸಂಸ್ಥೆ ಜನ್ಮ ತಾಳಿರಲಿಲ್ಲ.

ಸುನ್ನೀ ಸಾಹಿತ್ಯ ರಂಗದಲ್ಲಿ ಹುಟ್ಟಿದ  ಪತ್ರಿಕೆಗಳು ಹೆಚ್ಚು ಕಾಲ ಬಾಳಿಕೆ ಬಂದಿಲ್ಲ.


ಕೇರಳದ ಸಂಘಟನಾ ಸಕ್ರಿಯತೆಯಿಂದ ಪ್ರಚೋದನೆಗೊಂಡ 

ನವ ಬಿರುದುದಾರಿ ಯುವ ವಿದ್ವಾಂಸರು ಕನ್ನಡ ಮಣ್ಣಿನಲ್ಲಿ ಸಂಘಟನೆಯನ್ನು 

ಕಟ್ಟಿ ಬೆಳೆಸಲೇ ಬೇಕೆಂದು  ಪಣ ತೊಟ್ಟು ಕಾರ್ಯರಂಗಕ್ಕಿಳಿದಿದ್ದರು.


ಆದರೆ , ಅಂದು ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ.

ಏಕೆಂದರೆ, ಸಂಘಟನೆಯ ಪರಿಜ್ಞಾನದ ಕೊರತೆ, ಕಾರ್ಯಕರ್ತರ ಅಭಾವ, ಆರ್ಥಿಕ ಮುಗ್ಗಟ್ಟು ಇವೆಲ್ಲವೂ ಬಹಳವಾಗಿ ಕಾಡುತ್ತಿದ್ದ ಕಾಲವಾಗಿತ್ತದು. 

ಆದ್ದರಿಂದಲೇ ಹಲವು ಯುವ ವಿದ್ವಾಂಸರು ಮತ್ತು ನಾಯಕರು ಈ ಶೂನ್ಯತೆಯನ್ನು ತುಂಬುವ ಪ್ರಯತ್ನಕ್ಕೆ ಕೈ ಹಾಕಿ ವಿಫಲತೆಯನ್ನು ಕಂಡ ಅನುಭವಗಳೂ ಇವೆ. 


ಇಂತಹ ಸಂದರ್ಭದಲ್ಲಿ ಇಲ್ಲಿನ ಯುವ ವಿದ್ವಾಂಸರಲ್ಲಿ ದೈರ್ಯ ತುಂಬಿ ಪ್ರಥಮ ವಿದ್ಯಾಸಂಸ್ಥೆ ಎಂಬ ನೆಲೆಯಲ್ಲಿ ಝೀನತ್ ಬಕ್ಷ್ ಯತೀಂಕಾನ,ಅಲ್ ಅನ್ಸಾರ್ ವಾರಪತ್ರಿಕೆ ಹಾಗೂ ಎಸ್ಸೆಸ್ಸೆಫ್, SYS ಸಂಘಟನೆಗಳಿಗೆ ಅಡಿಪಾಯ ಹಾಕಿಸಿ ಕೊಟ್ಟವರಲ್ಲಿ ಬಾವ ಹಾಜಿಯೂ ಒಬ್ಬರು. ಯುವ ವಿದ್ವಾಂಸರು ಮುನ್ನುಗ್ಗಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದುದರ ಹಿಂದೆ ಮರ್ಹೂಮ್ ಬಾವಾ ಹಾಜಾರ್ ರವರ ಪಾತ್ರವೂ ಇತ್ತು. ಆ ಬೆಂಬಲ ಸಣ್ಣದೇನೂ ಆಗಿರಲಿಲ್ಲ.    


ಅಲ್ ಅನ್ಸಾರ್ ಪತ್ರಿಕೆ ತನ್ನ ಈ ಸುದೀರ್ಘವಾದ ಜೈತ್ರ ಯಾತ್ರೆಯನ್ನು ಮುಂದುವರಿಸಿದ್ದರೆ ಅದು ಅನೇಕಾರು ಏಳು ಬೀಳುಗಳನ್ನು ಕಂಡಿದೆ ಎಂಬುದು ಅದರಲ್ಲಿ ದುಡಿದವರಿಗೆ ಮಾತ್ರ ಗೊತ್ತು. 

 

 ಆದರೆ, ಈ ಎಲ್ಲಾ ಏಳು ಬೀಳುಗಳನ್ನು ಸಮರ್ಥವಾಗಿ ಎದುರಿಸಿ ಪತ್ರಿಕೆ ಯನ್ನು ಉಳಿಸಿ ಬೆಳಿಸಿದ ವ್ಯಕ್ತಿಯಾಗಿದ್ದರು ಬಾವಾ ಹಾಜಾರ್.


ಎಸ್ಸೆಸ್ಸೆಫ್ ಸಂಘಟನೆಯ ಆದಿಯಿಂದ ಇಂದಿನವರೆಗೂ ಸಂಪೂರ್ಣ ಬೆನ್ನೆಲುಬಾಗಿ ನಿಂತ ಮಾದರೀ ಉಮರಾ ನಾಯಕರಾಗಿದ್ದರು.

ಅನೇಕ ಸಂದರ್ಭಗಳಲ್ಲಿ ಅವರು ನೀಡಬೇಕಾದ ಎಲ್ಲಾ ಸಹಾಯಗಳ ಹೊರತಾಗಿಯೂ ಅಗತ್ಯ ಬಿದ್ದಾಗ ಸಾವಿರಾರು ರೂಪಾಯಿ ಸಾಲದ ರೂಪದಲ್ಲಿ ನೀಡಿ ಸಹಕರಿಸಿದ್ದರು. ಎಸ್ಸೆಸ್ಸೆಫ್ ಸಂಘಟನೆಯನ್ನು  ಕಟ್ಟಿ ಬೆಳೆಸುವುದಲ್ಲಿ ಅವರ ಶ್ರವ ಇದೆ ಎಂಬ ಸತ್ಯವು ಇಂದಿನ ತಲೆಮಾರಿನ ಅನೇಕರಿಗೆ ತಿಳಿದಿರಬೇಕೆಂದಿಲ್ಲ.

ಅವರ ಶೈಲಿ ಹಾಗಾಗಿತ್ತು.

ಯಾವು ವೇದಿಕೆ, ಪ್ರಚಾರ, ಪ್ರಶಸ್ತಿ ಬಯಸದೆ ಅತ್ಯಂತ ನಿಸ್ವಾರ್ಥ ಸೇವೆ ಗೈದಿದ್ದರು. ನಿಸ್ವಾರ್ಥ ಸೇವೆಯ  ಇನ್ನೊಂದು ಹೆಸರೇ ಬಾವಾ ಹಾಜಿ ಎಂದರೆ ಅತಿಶಯೋಕ್ತಿಯಾಗಲಾರದು.


ಅನೇಕ ಸಂದರ್ಭಗಳಲ್ಲಿ ಅವರಿಂದ ಎಸ್ಸೆಸ್ಸೆಫ್ ಸಂಘಟನೆಯ ಕಾರ್ಯಾಚರಣೆಯ ಅಗತ್ಯಕ್ಕೆ ಬೇಕಾಗಿ ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಹಿಂತಿರುಗಿಸಲು ಅಂದಿನ ಪರಿಸ್ಥಿತಿಯ ಒತ್ತಡಗಳಿಂದ ಸಾಧ್ಯವಾಗದೇ ಅವರನ್ನು ಬೇಟಿಯಾಗಲು ಮುಜುಗುರ ಪಟ್ಟಿದ್ದ ಸಂದರ್ಭಗಳೂ ಉಂಟಾಗಿತ್ತು. 

ಅದನ್ನು ಅರ್ಥಮಾಡಿಕೊಂಡು ಕೆಲವೊಮ್ಮೆ ಅವರೇ ನಮ್ಮನ್ನು ಸಂಪರ್ಕಿಸಿ ಸಮಾಧಾನ ಪಡಿಸುತ್ತಿದ್ದರು.


ಒಂದು ಸಂದರ್ಭದಲ್ಲಿ ಸಂಘಟನೆಗೆ ಬೇಕಾಗಿ ಅವರಿಂದ ಪಡೆದ ಸಾಲದ ಒಂದು ಮೊತ್ತವನ್ನು ಒಂದು ಅವಧಿಗೆ ನೀಡಬೇಕಾಗಿತ್ತು.


ಕೊಟ್ಟ ಮಾತನ್ನು ಪಾಲಿಸಬೇಕೆಂಬ ಏಕೈಕ ಉದ್ದೇಶದಿಂದ ಬಹಳ ಕಷ್ಟಪಟ್ಟು ಎಲ್ಲಿಂದೆಲ್ಲಾ ಹಣವನ್ನು ಸರಿಹೊಂದಿಸಿ ಆ ಅವಧಿಗೆ  ಅವರಿಗೆ ನೀಡಿದೆವು.


ನೀಡಿದ ನಂತರ ಹಣ ಹೊಂದಿಸಿದ ಕಷ್ಟಪಾಡುಗಳ ಬಗ್ಗೆ ಅವರು ಅರಿತಾಗ ಅವರೇ ಆ ಹಣದ ಕಟ್ಟನ್ನು ಹಿಂತಿರುಗಿಸಿ ನೀವು ಸರಿಯಾಗಿ ಅನುಕೂಲವಾದ ನಂತರ ಕೊಟ್ಟರೆ ಸಾಕೆಂದು ಹೇಳಿ ಕಳುಹಿಸಿದರು.

ಇಂತಹ ಅದೆಷ್ಟೋ ಅವರ ಉದಾರತೆಯ ಉದಾಹರಣೆಗಳಿವೆ.

ಬರೆಯುತ್ತಾ ಹೋದರೆ ಮುಗಿಯದು.


ತನ್ನ ಖಾಸಗಿ ಜೀವನದಲ್ಲಿ ಶರೀಅತ್‌ನ ನಿಯಮಗಳನ್ನು ಬಹಳ ಎಚ್ಚರಿಕೆಯಿಂದ ಪಾಲಿಸುವುದರಲ್ಲಿ ಸಾಮಾನ್ಯ ವಿದ್ವಾಂಸರನ್ನೂ ನಾಚಿಸುವ ರೀತಿಯಲ್ಲಿ ಅತಿ ದೊಡ್ಡ ಮಾದರೀ ಜೀವನದ ವಕ್ತಾರರಾಗಿ ಎಲ್ಲಾ ಉಮರಾಗಳಿಗೂ ಅದ್ಬುತ ಮಾದರಿಯಾಗಿ ಜೀವಿಸಿದ ವರಾಗಿದ್ದರು ಬಾವಾ ಹಾಜಿಯವರು.


ಅವರ ಅಗಲಿಕೆಯು ನಮ್ಮನ್ನು ಅತ್ಯಂತ ದುಃಖ ತಪ್ತ ರನ್ನಾಗಿ ಮಾಡಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಆದರೆ , ಅಲ್ಲಾಹು ಅವರ ರೂಹನ್ನು ಹಿಡಿಯಲು ಆಯ್ಕೆ ಮಾಡಿದ ತಿಂಗಳು ಮತ್ತು ದಿನದ ಬಗ್ಗೆ ಚಿಂತಿಸುವಾಗ ನಮಗೆ ಸಮಾಧಾನವಾಗುತ್ತದೆ.ರಂಝಾನಿನ ಪವಿತ್ರ ಮುಸ್ಸಂಜೆಯ ಹೊತ್ತು ಅವರ ಪ್ರಾಣ ಪಕ್ಷಿ ಹೊರಟು ಹೋದ ಸಮಯ.


ಯಾ ಅಲ್ಲಾಹ್ ! ನಮ್ಮನ್ನೂ ,ನಮ್ಮ ಬಾವ ಹಾಜಿಯವರನ್ನು ಶೈಖುನಾ ತಾಜುಲ್ ಉಲಮಾರೊಂದಿಗೆ  ಸ್ವರ್ಗದಲ್ಲಿ ಒಟ್ಟು ಸೇರಿಸು.ಆಮೀನ್.

Thursday, May 6, 2021

ವಿಷ ಕಾರುವ ತೇಜಸ್ವಿ ಸೂರ್ಯ


ವಿಷ ಕಾರುವ  ತೇಜಸ್ವಿ ಸೂರ್ಯ

ತನ್ನನ್ನು ತಾನು ಸತ್ಯ  ಹರಿಶ್ಚಂದ್ರ ವೆಂಬಂತೆ ಬಿಂಬಿಸಿ

ಅನ್ಯ ದರ್ಮೀಯರನ್ನು ಅವಹೇಳನ ಮಾಡುವ ಕ್ರತ್ಯ ಸುಲಭವಾಗಿ ಕಲಿತ  ಯುವ ಸಂಸದ! ತನ್ನವರು ಮಾಡಿದ ಕ್ರತ್ಯವನ್ನು ಮರೆಮಾಚಿ ಇನ್ನೊಬ್ಬರ ತಲೆಯ ಮೇಲೆ ಗೂಬೆ ಕೂರಿಸುವ ಕ್ರತ್ಯ ಹೊಸದೇನಲ್ಲ ಜನರ ಕಷ್ಟ ಸುಖಗಳಿಗೆ ಸ್ಪಂದಿಸಬೇಕಾದವನು ಜನರ ಆಯ್ಕೆಯಿಂದ ಚುನಾಯಿತನಾಗಿ ಆರಿಸಲ್ಪಟ್ಟವನು ಮಾರಣ ಹೋಮ ಕ್ರತ್ಯಕ್ಕೆ ಉತ್ತರಿಸಲಾಗದೆ ಚಡಪಡಿಸುವ ಚೇಳಿನ ಹಾಗೆ ಪ್ರೆಸ್ ಕಾಂಫ್ರೆನ್ಸ್ ನಡೆಸಿದ ಮಾತ್ರಕ್ಕೆ 

ಈ ರಾಜ್ಯದ ಜನರು ಯಾವತ್ತೂ ನೀ ಮಾಡಿದ ಕ್ರತ್ಯ  ಮರೆಯಲಾರರು

ಒಬ್ಬ ಸಂಸದನ  ಕರ್ತವ್ಯ ಏನು ಯಾವ ತರಹ ಜನರ ಅವಶ್ಯಕತೆ ಗಳನ್ನು ಪೂರೈಸಬೇಕು ಎಂಬ ಪ್ರಧಾನ ಜ್ನಾನ ಇರಬೇಕು ಎಲುಬಿಲ್ಲದ ನಾಲಿಗೆಯನ್ನು ಹರಿಯ ಬಿಡುವ ಮುನ್ನ ಚಿಂತಿಸಬೇಕು ಮಾನವನು ಯಾರೇ ಆಗಿರಲಿ ಮಾನವನನ್ನು ಗೌರವಿಸುವುದು ಒಬ್ಬ ಉತ್ತಮ ಪುರುಷನ ಗುರುತು ಸುಮಾರು ಇನ್ನೂರು ಕಾರ್ಮಿಕರಲ್ಲಿ ಬರೇ ಹದಿನೈದು ಜನರು ಮುಸಲ್ಮಾನರು ಎಂಬ ಕಾರಣಕ್ಕೆ ಭಯೋತ್ಪಾದಕರ ಹಾಗೆ ಬಿಂಬಿಸಿದ ದ್ರಷ್ಯ ನೋಡಿದರೆ ಉಪ್ಪಿನಲ್ಲಿ ಕಲ್ಲು ಹುಡುಕಿದವನ ಹಾಗೆ ಈ ರಾಜ್ಯದ ಜನರ        ಮನಸ್ಸಿನಲ್ಲಿ   ನೀನು  ಕಪ್ಪು ಚುಕ್ಕೆ ಸ್ರಷ್ಟಿಸಿದೆ   ಇನ್ನಾದರು ಜನರ   ಅವಶ್ಯಕತೆ ಗಳಿಗೆ ಸ್ಪಂದಿಸಲು ಪ್ರಯತ್ನದಲ್ಲಿ  ತೊಡಗಿ ಕೊಂಡರೆ ಉತ್ತಮ!

Tuesday, May 4, 2021

ಕಂಗನಾ ರನೌತ್ ಅವರ ಟ್ವಿಟ್ಟರ್ ಖಾತೆಯನ್ನು ಮಂಗಳವಾರ ಅಮಾನತುಗೊಳಿಸಲಾಗಿದೆ.

 


ದ್ವೇಷಭರಿತ ಚಾಳಿ ನೀತಿ  ನಿಯಮಗಳನ್ನು ಉಲ್ಲಂಘಿಸಿದ  ಅನಾಗರಿಕತೆಯ ಟ್ವೀಟ್‌ಗಳ ನಂತರ ಕಂಗನಾ ರನೌತ್ ಅವರ ಟ್ವಿಟ್ಟರ್ ಖಾತೆಯನ್ನು 'ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ'


ಇತ್ತೀಚಿನ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶಗಳಿಗೆ ಪ್ರತಿಕ್ರಿಯೆಯಾಗಿ ಸರಣಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ ನಂತರ ನಟಿ ಕಂಗನಾ ರನೌತ್ ಅವರ ಟ್ವಿಟ್ಟರ್ ಖಾತೆಯನ್ನು ಮಂಗಳವಾರ ಅಮಾನತುಗೊಳಿಸಲಾಗಿದೆ.  ಖಾತೆಯ  ನಿಯಮಗಳನ್ನು ಅವಳು ಪದೇ ಪದೇ ಉಲ್ಲಂಘಿಸುತ್ತಿರುವುದು ಕಂಡುಬಂದಿದೆ ಎಂದು ಟ್ವಿಟರ್ ಹೇಳಿದೆ

ಭಯದ ವಾತಾವರಣ ದಲ್ಲಿ ನಾವೆಲ್ಲರು


ಈ ಭೂಮಿಯ ಮೇಲೆ ಹುಟ್ಟಿ ಬಂದ ಪ್ರತಿಯೊಬ್ಬ  ಮನುಷ್ಯನು ಸಾವಿನ ರುಚಿ ನೊಡಲೇ ಬೇಕು. ಇದು ನೂರಕ್ಕೆ  ನೂರು ಸತ್ಯ.

ಆದರೆ ಇಂದಿನ ನಮ್ಮ ರಾಜ್ಯದ ಭಯ ಭೀತಿ ವಾತಾವರಣ ವನ್ನು ಎದುರಿಸುವ ಶಕ್ತಿ ನಮ್ಮಲ್ಲಿ ಯಾರಿಗೂ ಇಲ್ಲ ವೆಂದು ಹೇಳಬಹುದು. ಇಂದು  ಅಸ್ತಿತ್ವ ದಲ್ಲಿರುವ ಸರ್ಕಾರ ಪ್ರಜೆಗಳ ಕಷ್ಟ ಸುಖ ಗಳಿಗೆ ಎಷ್ಟು ಸ್ಪಂದಿಸುತ್ತಿದೆ. ಬಡವರ ಪಾಡೇನು . ಸಾಧಾರಣ ಕೆಮ್ಮು  ಜ್ವರ ಬಂದವರು ಆಸ್ಪತ್ರೆ ಗಳಿಗೆ ಬೇಟಿ ಕೊಡಲು ನೂರು ಸಲ ಯೋಚಿಸಬೇಕಾಗಿದೆ. ಹೋಗಬೇಕಾ ಬೇಡವೆ  ಎಂಬ ಭ್ರಮೆ   ಹೋದರೆ ನಮ್ಮನು ಕೊರೊನ ಎಂಬ ಸಾಂಕ್ರಾಮಿಕ   ರೋಗ  ಬೆನ್ನು ಹಿಡಿಯುವುದೇ ಅಥವಾ  ಹರಡುವ  ಭಯ ಇದಕ್ಕೆಲ್ಲ ಕಾರಣ ಕರ್ತ ರು ಯಾರು ಇಂತಹ ಪರಿಸ್ಥಿತಿ ಯನ್ನು  ಶ್ರಷ್ಟಿಸಿದವರು   ಯಾರು ಪ್ರಸ್ತುತ  ಸರಕಾರ ಉತ್ತರಿಸುವರೇ ನಾನು    ಮೂರು ದಿವಸ ಸರಕಾರಿ ಆಸ್ಪತ್ರೆ ಹೊರವಲಯದಲ್ಲಿ  ತೇಲಾಡಿದೆ ಅಲ್ಲಿನ ವಾತಾವರಣ ನಿಜಕ್ಕೂ ಭಯಭೀತ ಇಂದು ನಮ್ಮ ದಕ್ಷಿಣ ಕನ್ನಡ ಒಂದು ಲೆಕ್ಕದ ಮಟ್ಟಿಗೆ  ಸರಿ ಇದೆ ಎಂದು ಹೇಳಬಹುದು ಆದರೆ ಮುಂದಿನ ದಿನಗಳಲ್ಲಿ ರೋಗಿಗಳಿಗೆ ಈ ಸರಕಾರ ಎಷ್ಟು ಸಂದಿಸಬಹುದು ಯಾವ ಮುಂಜಾಗ್ರತೆ ಯಾವ ಅನೂಕೂಲತೆಯನ್ನು ಈಗಾಗಲೆ ತಯಾರಿಸಿ ಇಟ್ಟಿವೆ ಎಂಬ ಪ್ರಶ್ನೆ   ಕಾಡುತ್ತಿದೆ  ಭಯ ಭೀತದಲ್ಲಿ ನಮ್ಮ ದಕ್ಷಿಣ ಕನ್ನಡ ಕೂಡ ಸೇರಿದೆ. ಈಗಾಗಲೇ ಆಸ್ಪತ್ರೆ ಗಳಲ್ಲಿ  ಬೆಡ್ಡಿನ  ಕೊರತೆ,ಆಕ್ಷಿಜನ್  ಕೊರತೆ ವೈದ್ಯ ರುಗಳ ಕೊರತೆ ಇದಕ್ಕೆಲ್ಲ   ಹೊಣೆ ಯರು ನಾವು ಓಟು ಹಾಕಿ ಆರಿಸಿದ ಜನ ಪ್ರತಿ ನಿದಿಗಳು ಏನು ಮಾಡುತಿದ್ದಾರೆ ಜನರ ಕಷ್ಟ ಸುಖಕ್ಕೆ ಸ್ಪಂದಿಸುವ ಜವಾಬ್ದಾರಿ ಅವರದ್ದಲ್ಲವೆ  ? ಇಲ್ಲಿ ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ

ಈ ವ್ಯತ್ಯಾಸ    ಯಾವಾಗ ಸಮಾನತೆಯ ಮೆಟ್ಟಿಲೇರಬಹುದು   ಇಂದೇ ಪೃತಿಯೊಬ್ಬ. ನಾಗರಿಕರು  ಚಿಂತಿಸ ಬೇಕು ಇನ್ನು ಮುಂದಿನ ದಿನಗಳಲ್ಲಿ

ನಾವು ಯಾರನ್ನು  ನಮ್ಮ ಪತಿನಿಧಿ ಯಾಗಿ ಆರಿಸಬೇಕು ನಮ್ಮ  ಜೀವ ದೊಂದಿಗೆ ಆಟ ಆಡುವವರು ನಮಗೆ ಬೇಕೆ ಅಥವಾ ನಮ್ಮ ಕಷ್ಟಗಳಿಗೆ ಸ್ಪಂದಿಸುವ ನಾಯಕರು ಬೇಕೆ ಎಂದು ಚಿಂತಿಸ ಬೇಕು ಸಮಯ  ಸಂದರ್ಬ ಮಿತಿ ಮೀರುವ ಮುನ್ನ ಎಚ್ಚೆತ್ತು ಗೊಳ್ಳಬೇಕು  ಪ್ರತಿಯೊಂದು ಮನೆಯಲ್ಲಿ  ಮುದುಕರಿದ್ದಾರೆ ಪತಿಯೊಂದು ಮನೆಯ ಪ್ರತಿಯೊಬ್ಬ ಪಜೆಯು ಚಿಂತಿಸಬೇಕು ನಮ್ಮ ಮಕ್ಕಳ ಮುಂದಿನ ಭವಿಷ್ಯ ಏನು ನಾವು ನಮ್ಮ ಮುಂದಿನ ಜನಾಂಗವನು ನರಕ ವನ್ನಾಗಿಸಿ ಬಿಟ್ಟುಹೊಗುವುದೇ .ಉತ್ತಮ ಭಾರತ ಕಟ್ಟಲು ಯಾವ ಪ್ರತಿನಿದಿ ಬೇಕಾಗಿದೆ ಎಂದು ಚಿಂತಿಸಬೇಕು .

ಎಸ್ |ಎಮ್ ಮುಸ್ತಫಾ ಸಾಸ್ತಾನ 

Saturday, May 1, 2021

ಶೋಷಣೆಗಳಿಂದ ಮುಕ್ತಿ ಹೇಗೆ ?.*

 *ಶೋಷಣೆಗಳಿಂದ ಮುಕ್ತಿ ಹೇಗೆ ?.*

 ✍️ *ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ*

*


***************"****

*ಭಾಗ 1*

ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ 

ವಸಲ್ಲಮರ ಕಾಲದಲ್ಲಿ 

ಒಂದು ದಿನ ಸೂರ್ಯ 

ಗ್ರಹಣ ಸಂಭವಿಸಿತ್ತು.

ಅದೇ ದಿನ ನಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಪುಟ್ಟ ಮಗು ಇಬ್ರಾಹೀಮ್ ಕೂಡಾ ವಫಾತಾಗಿದ್ದರು.

ಕೆಲವು ಮುಗ್ದ ಮನಸ್ಸುಗಳು ನಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗಿನ ಅತಿಯಾದ ಗೌರವದ ಕಾರಣದಿಂದ ಈ ಗೃಹಣ ಸಂಭವಿಸಿರುವುದು ಅವರ ಮಗು ವಫಾತಾಗಿರುವುದಕ್ಕೆ ಎಂದು ಭಾವಿಸಿ ಬಿಟ್ಟವು.


ಇದನ್ನರಿತ ನಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ತಕ್ಷಣ ಈ ಭಾವನೆಯನ್ನು ತಿದ್ದಿ ನಿಜಾಂಶವನ್ನು ತಿಳಿಸಿ ಕೊಡುವ ಪ್ರಯತ್ನ ಮಾಡಿದರು.

ಗೃಹಣದ ನೈಜತೆ ಬಗ್ಗೆ ತನ್ನ ಸುದೀರ್ಘವಾದ ಉಪದೇಶದಲ್ಲಿ ಈ ರೀತಿ ಹೇಳಿದರು.


*إِنَّ الشَّمْسَ وَالْقَمَرَ آيَتَانِ مِنْ آيَاتِ اللهِ، لَا يَخْسِفَانِ لِمَوْتِ أَحَدٍ، وَلَا لِحَيَاتِهِ*


ನಿಶ್ಚಯವಾಗಿಯೂ ಸೂರ್ಯ ಚಂದ್ರ ರು ಅಲ್ಲಾಹನ ದೃಷ್ಟಾಂತಗಳಲ್ಲಿ ಸೇರಿದ ಎರಡು ದೃಷ್ಟಾಂತಗಳಾಗಿವೆ.

ಯಾವ ವ್ಯಕ್ತಿಯ ಮರಣ ಅಥವಾ ಜೀವನಕ್ಕೆ ಬೇಕಾಗಿ ಅವುಗಳಿಗೆ ಗೃಹಣ ವುಂಟಾಗುವುದಿಲ್ಲ ಎಂದು ಸವಿಸ್ತಾರವಾಗಿ ವಿವರಿಸಿ 

ಮುಗ್ಧ ಮನಸ್ಸುಗಳ ತಪ್ಪು ಭಾವನೆಗಳನ್ನು ತಿದ್ದುವ 

ಪ್ರಯತ್ನ ಮಾಡಿದರು.


ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಅನೇಕ ವಿಚಾರಗಳಿವೆ.  


ಅದೇನೆಂದರೆ ತನ್ನ ಪ್ರವಾದಿತ್ವವನ್ನು ನಖಶಿಖಾಂತ ವಿರೋಧಿಸುವ ಒಂದು ದೊಡ್ಡ ಸಮೂಹದ ಮುಂದೆ ತಾನೊಬ್ಬ ಸಾಮಾನ್ಯನಲ್ಲ ಎಂದು 

ತೋರಿಸಿ ಕೊಡಬೇಕಾದ ಅನಿವಾರ್ಯತೆಯ ಈ ಕಠಿಣ ಸವಾಲಿನ ಸಮಯದಲ್ಲೂ ಈ ಸುಸಂದರ್ಭವನ್ನು ಬಳಸಿ ಕೊಳ್ಳಬಹುದಾದ ಎಲ್ಲಾ ಅವಕಾಶಗಳಿದ್ದರೂ 

ಕೂಡಾ ಪ್ರವಾದಿಯವರು ಅದನ್ನು ಬಳಸಿಕೊಳ್ಳದೇ ಅಲ್ಲಿ ನೈಜತೆಯನ್ನು ಮಾತ್ರ ಅನಾವರಣ ಮಾಡಿದರು.


ಮುಗ್ಧ ಜನರಲ್ಲಿ ತಪ್ಪು ಭಾವನೆಗಳನ್ನು ತುಂಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ದೊಡ್ಡ ಶೋಷಣೆಯಾಗಿದ್ದು ಇಂತಹ ಪ್ರಯತ್ನ ಯಾವತ್ತೂ ಯಾರಿಂದಲೂ ಸಲ್ಲದು ಎಂಬ ಉದಾತ್ತ ತತ್ವವನ್ನು ಸಾರಲಿಕ್ಕೆ ಮಾತ್ರವಾಗಿತ್ತು ನಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಇಲ್ಲಿ ಪ್ರಯತ್ನ ಪಟ್ಟಿರುವುದು.


ಆದರೆ ಇವತ್ತಿನ ಪರಿಸ್ಥಿತಿ ಏನಾಗಿದೆ ಅಂದರೆ ಅವಕಾಶಗಳು,ಸಂದರ್ಭಗಳು ಸಿಗಬೇಕಾಗಿಲ್ಲ. 

ಇಲ್ಲಸಲ್ಲದ ಯೋಗ್ಯತೆಗಳ ಅಂತೆಕಂತೆಗಳನ್ನು ಸೃಷ್ಟಿಸಿ ಅದನ್ನು ವೈಭವೀಕರಿಸಿ ಜನರನ್ನು ಮೂಡ ನಂಬಿಕೆಗಳ ಗುಲಾಮರನ್ನಾಗಿ ಮಾಡಲು ಸಾಧ್ಯವಾದ ಎಲ್ಲಾ ಪ್ರಯತ್ನಗಳು ಎಗ್ಗಿಲ್ಲದೆ ನಡೆಯುತ್ತಿದೆ.


ಇದು ಇಂದು ಮನುಷ್ಯ ಜೀವನದ ಎಲ್ಲಾ ವಲಯಗಳಲ್ಲೂ ದಾರಾಳವಾಗಿ ಕಾಣಬಹುದು.

ಇದಕ್ಕೆಲ್ಲಾ ಕಡಿವಾಣ ಹಾಕದೇ ಹೋದಲ್ಲಿ ಇಸ್ಲಾಮಿನ ಪೂರ್ವ ಕಾಲದ ಎಲ್ಲಾ ಅನಾಚಾರಗಳು ಮತ್ತೆ ಮರಳುವುದರಲ್ಲಿ ಯಾವ ಅನುಮಾನವೂ ಇಲ್ಲ.

ಆದ್ದರಿಂದಲೇ ಶೋಷಣೆ ಬಗ್ಗೆ ಚರ್ಚಿಸುವಾಗ ಅದರ ಹತ್ತು ಹಲವು ಮುಖಗಳು ಕಣ್ಮುಂದೆ ಅನಾವರಣ ಗೊಳ್ಳುತ್ತದೆ.

ಆದ್ದರಿಂದ ಎಲ್ಲಿಂದ ಪ್ರಾರಂಭಿಸಬೇಕು ಎಂದು ಅರ್ಥವಾಗುವುದೇ ಇಲ್ಲ.

ಮುಗ್ಧ ಮನುಷ್ಯ ಮನಸ್ಸುಗಳ ನಿಸ್ವಾರ್ಥತೆಯನ್ನು ದುರುಪಯೋಗ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ಅನೇಕರು ಅಂತ್ಯ ದಿನ ಹತ್ತಿರವಾಗುವಾಗ ಪ್ರತ್ಯಕ್ಷ ಗೊಳ್ಳಲಿದ್ದಾರೆ ಎಂದು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮುನ್ನೆಚ್ಚರಿಕೆಯೂ ನೀಡಿರುತ್ತಾರೆ.

*يَكُونُ فِي آخِرِ الزَّمَانِ دَجَّالُونَ كَذَّابُونَ، يَأْتُونَكُمْ مِنَ الْأَحَادِيثِ بِمَا لَمْ تَسْمَعُوا أَنْتُمْ، وَلَا آبَاؤُكُمْ، فَإِيَّاكُمْ وَإِيَّاهُمْ، لَا يُضِلُّونَكُمْ، وَلَا يَفْتِنُونَكُمْ*

ಇಲ್ಲಿ ಈ ಹದೀಸಿನಲ್ಲಿ ಉಪಯೋಗಿಸಲ್ಪಟ್ಟ"ದಜ್ಜಾಲೂನ" ಎಂಬ ಪದ ಗಮನಾರ್ಹ.

ಯಾಕೆಂದರೆ ಅದರ ಅರ್ಥವೇ ಸತ್ಯ ಮತ್ತು ಮಿತ್ಯೆಗಳ ಬಗ್ಗೆ ಮುಗ್ಧ ಮನಸ್ಸುಗಳಲ್ಲಿ ಗೊಂದಲಗಳನ್ನು ಸೃಷ್ಟಿ ಮಾಡುವವರು ಎಂದಾಗಿದೆ ಅರ್ಥ.

ಇನ್ನು ಶೋಷಣೆಯು ತೌಹೀದ್, ಧಾರ್ಮಿಕ ವಿದ್ಯೆ,ಧಾರ್ಮಿಕ ಮಜ್ಲಿಸ್,ಮಂತ್ರವಾದ, ವೈದ್ಯಕೀಯ ಚಿಕಿತ್ಸೆ,ಆರಾಧನಾ ಕಾರ್ಯಗಳು ಹೀಗೆ ವಿಭಿನ್ನ ಮುಖಗಳಿವೆ.


ಒಂದೊಂದೇ ಚರ್ಚಿಸುತ್ತಾ ಹೋಗುವ.

ಮೊದಲು ತೌಹೀದ್ ನಲ್ಲಿರುವ ಶೋಷಣೆ ತೆಗೆದು ಕೊಳ್ಳೋಣ.


*1)* 

*ತೌಹೀದ್ ನಲ್ಲಿರುವ ಶೋಷಣೆ*


*ಮುಂದುವರಿಯುವುದು*

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...