Translate

Friday, April 30, 2021

ಆ ಜ್ಯೋತಿ ಎಂದೂ ನಂದದು ನಂದಿಸಲೂ ಆಗದು

 


*ಆ ಜ್ಯೋತಿ ಎಂದೂ ನಂದದು ನಂದಿಸಲೂ ಆಗದು*


✍️ *ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ*

************************************


ಇತ್ತೀಚೆಗೆ ಸಾಮಾಜಿಕ  ಜಾಲ ತಾಣಗಳಲ್ಲಿ ಕೆಲವು ಬೆಳವಣಿಗೆಗಳನ್ನು ಕಂಡು ಆಶ್ಚರ್ಯವಾಯಿತು ಮತ್ತು ನಂಬಲೂ ಕಷ್ಟವಾದಂತೆ ಅನಿಸಿತು.

ಯಾಕೆಂದರೆ ಯಾವಾಗಲೂ ಕಟ್ಟಾ ಮುಸ್ಲಿಂ ವಿರೋಧವನ್ನೇ ಮೈಗೂಡಿಸಿಕೊಂಡು ಕಿಡಿಕಾರುತ್ತಿದ್ದ ಕೆಲವು ಶಕ್ತಿಗಳು ಸಂಪೂರ್ಣವಾಗಿ ಬದಲಾದ ವರ್ತಮಾನಗಳು.

ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಇಲ್ಲಿಯವರೆಗೆ ತಾವು ತಾಳಿದ್ದ ಕುರುಡು ನಿಲುವುಗಳ ಬಗ್ಗೆ ಪಶ್ಚಾತಾಪ ಪಡುತ್ತಿದ್ದವು.


ಕಾರಣವೇನೆಂದು ಪರಾಮರ್ಶಿಸಿ ನೋಡಿದಾಗ ಜಗತ್ತು ಇಂದು ಎದುರಿಸುವ ಸಂಕೀರ್ಣ ಸಂಕಷ್ಟ ಸಮಯದಲ್ಲಿ ಮುಸ್ಲಿಮರು, ಮುಸ್ಲಿಂ ರಾಷ್ಟ್ರಗಳು ಹಾಗೂ ಮುಸ್ಲಿಂ ಸಂಘಟನೆಗಳು ಕೈಗೊಂಡ ಕಾರ್ಯಕ್ರಮಗಳು ಎಂತಹ ಕಲ್ಲು ಮನಸ್ಸುಗಳನ್ನು ಕೂಡಾ ಕರಗಿಸುವಂತಿತ್ತು.


ಹಣ್ಣು ತುಂಬಿದ ಮಾವಿನ ಮರಕ್ಕೆ ಎಲ್ಲರೂ ಸೇರಿ ಎಷ್ಟೇ ಬಲಪ್ರಯೋಗಿಸಿ ಕಲ್ಲು ತೂರಿದರೂ ಕರುಣಾಮಯಿ  ಮಾವಿನ ಮರವು ಎಲ್ಲಾ ಏಟುಗಳನ್ನು ಶಾಂತಚಿತ್ತವಾಗಿ ಸಹಿಸುತ್ತಲೇ ರುಚಿಯಾದ ಹಣ್ಣುಗಳನ್ನು 

ಕಲ್ಲು ತೂರಿದವರಿಗೇ ತುರುತುರಾ ಸುರಿಯುತ್ತಲೇ ಇರುತ್ತದೆ.


ಇದೇ ರೀತಿ ಇಸ್ಲಾಮ್ ಎಂಬ ಕರುಣಾಮಯಿ ಧರ್ಮದ ಆಶಯ ಆದರ್ಶಗಳನ್ನು ನೇರಾನೇರ ಎದುರಿಸಲು ಸಾಮರ್ಥ್ಯವಿಲ್ಲದ ಕೆಲವು ಶಕ್ತಿಗಳು ಅಥವಾ ಇಸ್ಲಾಮಿನ ಮತ್ತು ಮುಸ್ಲಿಮರ ಬಗ್ಗೆ ತಪ್ಪು ಗ್ರಹಿಕೆಗಳಿಗೊಳಗಾದವರು ಎಲ್ಲರೂ ಒಗ್ಗೂಡಿ ತಮ್ಮ ಜೀವನದುದ್ದಕ್ಕೂ ಇಲ್ಲಸಲ್ಲದ ಅಪಪ್ರಚಾರ ಹಾಗೂ ಆರೋಪಗಳ ಮೂಲಕ ಕಸರೆರಚಿ ಇಸ್ಲಾಮ್ ಎಂಬ ಜ್ಯೋತಿಯನ್ನು ನಂದಿಸಲು ವಿಫಲ ಪ್ರಯತ್ನ ಪಟ್ಟರೂ ಕರುಣಾಮಯಿ ಇಸ್ಲಾಮ್ ಮಾತ್ರ ತನ್ನ ಕಾರುಣ್ಯದ ಕೈಗಳನ್ನು ಚಾಚುತ್ತಾ ಇರುತ್ತದೆಯೇ ಹೊರತು ಯಾವುದೇ ಪ್ರತೀಕಾರದ ಗೋಜಿಗೇ ಹೋಗುವುದಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರು ಗೊಂಡಿದೆ.


ಇಸ್ಲಾಂ ಪ್ರತಿಪಾದಿಸುವ ಏಕ ದೇವನಾದ ಅಲ್ಲಾಹು (ಅರ್ಹಮುರ್ರಾಹಿಮೀನ್) ಕರುಣಾಮಯಿಗಳಲ್ಲಿ 

ಅತ್ಯಂತ ದೊಡ್ಡ ಕರುಣಾಮಯಿಯಾಗಿರುತ್ತಾನೆ.

ಅದರ ಅಂತ್ಯ ಪ್ರವಾದಿ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು (ರಹ್ಮತುನ್ ಲಿಲ್ ಆಲಮೀನ್) ಇಡೀ ಪ್ರಪಂಚಕ್ಕೇ ಕಾರುಣ್ಯರಾಗಿರುತ್ತಾರೆ.


ಅಲ್ಲದೆ ಇಸ್ಲಾಮಿನ ಪ್ರತಿಯೊಂದು ತತ್ವಾದರ್ಶಗಳು ಮಾನವನ ಒಳಿತಿಗೆ ಹಾಗೂ ಮನುಷ್ಯ ಸ್ನೇಹಿಯಾಗಿರುತ್ತದೆ.

ಮಾನವ ಸಮೂಹದ ಇಹ ಪರ ವಿಜಯವನ್ನು ಗುರಿಯಾಗಿಟ್ಟು ಕೊಂಡು ಮಾತ್ರವಾಗಿದೆ ಸಾವಿರಾರು ವರ್ಷಗಳಿಂದ ಇಸ್ಲಾಂ ಈ ಭೂಮಿಯಲ್ಲಿ ಕಾರ್ಯಾಚರಿಸುವುದು.

ಅದರಲ್ಲಿ ಪರಸ್ಪರ ವೈರಾಗ್ಯ,ಹಗೆತನ, ಸಂಘರ್ಷ,ಕಚ್ಚಾಟ ಮುಂತಾದ ಮನುಷ್ಯನ ಸುಗಮ ಜೀವನಕ್ಕೆ ಮಾರಕವಾದ ಗುಣಗಳಿಗೆ ಅವಕಾಶವೇ ಇಲ್ಲ ಎಂದು ಅದನ್ನು ನಿಷ್ಪಕ್ಷಪಾತ ಪರಾಮರ್ಶೆ ಮಾಡುವವರಿಗೆ ಮನದಟ್ಟಾಗದಿರಲು ಸಾದ್ಯವೇ ಇಲ್ಲ.


ಆದ್ದರಿಂದಲೇ ಇಸ್ಲಾಮನ್ನು ಮತ್ತು ಮುಸ್ಲಿಮರನ್ನು ಜಗತ್ತಿನಿಂದಲೇ ಕಿತ್ತೊಗೆಯ ಹೊರಟವರು,

ದೇಶಗಳಿಂದ ಗಡೀಪಾರು ಮಾಡಬೇಕೆಂದವರು, ಮುಸ್ಲಿಮರನ್ನು ದೇಶದ್ರೋಹಿಗಳೆಂದು ಭಾಷಣ ಬಿಗಿದು ಮುಗ್ಧ ಮನಸ್ಸುಗಳನ್ನು  ಮುಸ್ಲಿಮರ ವಿರುದ್ಧ ಎತ್ತಿಕಟ್ಟಿ ಪರಸ್ಪರ ಕಚ್ಚಾಡಿಸಿ ಆನಂದ ಪಟ್ಟವರು, ನಡುರಸ್ತೆಯಲ್ಲಿ ಮುಸ್ಲಿಮರನ್ನು ಅತ್ಯಂತ ಹೀನವಾಗಿ ಹಿಂಸಿಸಿ ಮಾರಣಹೋಮ ನಡೆಸಿ ಕ್ರೂರತೆ ಮೆರೆದವರು ಎಲ್ಲರೂ ನಿಬ್ಬೆರಗಾಗ ಬೇಕಾಯ್ತು. 


ಜಗತ್ತಿನ ಸುಮಾರು 40 ರಷ್ಟು ಮುಸ್ಲಿಂ ರಾಷ್ಟ್ರಗಳು ಜಾತಿ,ಧರ್ಮ,ಭಾಷೆ,ಬಣ್ಣ,

ವರ್ಣ ವರ್ಗ ಯಾವುದೂ ನೋಡದೆ ಕೇವಲ ಮಾನವೀಯ ದೃಷ್ಟಿಯಲ್ಲಿ ಮಾತ್ರ ಭಾರತಕ್ಕೆ ತಮ್ಮ ಉದಾರ ಸಹಾಯ ಹಸ್ತ ಚಾಚಿದೆ.


ಅಲ್ಲದೆ ಭಾರತೀಯ ಮುಸ್ಲಿಮರು, ಮುಸ್ಲಿಂ ಸಂಘಟನೆಗಳು ಹಿಂದೆ ತಮಗುಂಟಾದ ಎಲ್ಲಾ ಕಹಿ ಅನುಭವಗಳನ್ನು ಮರೆತು ಬಿಟ್ಟು ತಮ್ಮ ಅಸಾಮಾನ್ಯ ಮಾನವೀಯತೆಯ ಮೂಲಕ ತಮ್ಮ ಮಸ್ಜಿದ್ಗಳನ್ನು, ಮದ್ರಸಗಳನ್ನು ಕಾರಂಟೈನ್ ಮತ್ತು ಆಸ್ಪತ್ರೆಗಳಾಗಿ ಪರಿವರ್ತಿಸಿಕೊಟ್ಟರು.

ರಕ್ತ ಬೇಕಾದವರಿಗೆ ರಕ್ತ ಅನ್ನಪಾನೀಯ ಬೇಕಾದವರಿಗೆ ಅನ್ನಪಾನೀಯ ಶಿಸ್ರೂಶೆ ಬೇಕಾದವರಿಗೆ ಶಿಸ್ರೂಶೆ ಆಕ್ಸಿಜನ್ ಬೇಕಾದವರಿಗೆ ಆಕ್ಸಿಜನ್ ನೀಡಿ ಸಮಾನತೆಯಿಲ್ಲದ ಮಾದರಿಯಾದರು.

ಎಲ್ಲಿಯ ತನಕ ವೆಂದರೆ ಸತ್ತ ಹೆಣಗಳ ಅಂತ್ಯ ಸಂಸ್ಕಾರ ನಡೆಸಲು ತಮ್ಮವರು,ತಮ್ಮ ಜಾತಿಯವರು,ಕುಟುಂಬಸ್ಥರು ಹತ್ತಿರ ಸುಳಿಯದೆ ದೂರ ಸರಿದು ಅನಾಥವಾದ ಶವಶರೀರಗಳಿಗೆ ಹೆಗಲು ಕೊಟ್ಟು ಶವಸಂಸ್ಕಾರ ವನ್ನು ಅವರವರ ರೀತಿ ರಿವಾಜುಗಳಂತೆ ನಡೆಸಿ ಕೊಟ್ಟು ಅಚ್ಚರಿ ಮೂಡಿಸಿದರು.


ಇದೆಲ್ಲಾ ನೋಡುವಾಗ ನೆನಪುಗಳು ಹದಿನಾಲ್ಕು ಶತಮಾನಗಳ ಹಿಂದೆ ಪ್ರವಾದಿ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲದ ಘಟನೆಗಳಿಗೆ ಕೊಂಡೊಯ್ಯುತ್ತದೆ.


ಪ್ರವಾದಿ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಈ ಭೂಮಿಗೆ ಹುಟ್ಟಿ ಬರುವಾಗ ತನ್ನ ತಂದೆಯ ಮುಖವನ್ನು ನೋಡುವ ಭಾಗ್ಯ ಲಭಿಸಿರಲಿಲ್ಲ. 

ತಾಯಿಯ ಗರ್ಭದಲ್ಲಿರುವಾಗಲೇ ತಂದೆ ಅಬ್ದುಲ್ಲಾ ರವರು ಮರಣ ಹೊಂದಿದ್ದರು.

ತಾತ,ದೊಡ್ಡಪ್ಪ,ಚಿಕ್ಕಪ್ಪಂದಿರನ್ನು ಮಾತ್ರವಾಗಿತ್ತು ನೋಡಿರುವುದು.

ಆದ್ದರಿಂದಲೇ ಪ್ರವಾದಿಯವರಿಗೆ ಅವರೊಂದಿಗೆ ಅತಿಯಾದ ಪ್ರೀತಿ ಮತ್ತು ಸ್ನೇಹ ಇದ್ದಿದ್ದು.


ಅವರಲ್ಲೊಬ್ಬ ಚಿಕ್ಕಪ್ಪ ರಾಗಿದ್ದರು ಬಹು ಹಂಝತಿಬಿನ್ ಅಬ್ದುಲ್ ಮುತ್ತಲಿಬ್ ರವರು.

ತನ್ನ ಚಿಕ್ಕಪ್ಪ ರಾಗಿದ್ದು ಕೊಂಡೇ ಹತ್ತಿರದ ಒಡನಾಡಿಯಾಗಿ ತನ್ನೆಲ್ಲಾ ಕಷ್ಟಕಾಲದಲ್ಲಿ ತನ್ನ ಬೆನ್ನೆಲುಬಾಗಿ ಜೀವಿಸಿದ್ದ ಹಂಝ ರಳಿಯಲ್ಲಾಹು ಅನ್ಹುರವರು ಉಹ್ದು ಯುದ್ಧದಲ್ಲಿ ಅತ್ಯಂತ ನಿಕೃಷ್ಟವಾಗಿ ನಿಷ್ಟೂರವಾಗಿ ಶತ್ರುಗಳಿಂದ ವದಿಸಲ್ಪಟ್ಟಿದ್ದರು.


ವಹ್ಶೀ ಎಂಬ ವ್ಯಕ್ತಿಯ ಮೂಲಕ ಹಿಂದ್ ಎಂಬ ಮಹಿಳೆಯ ಆಜ್ಞೆಯಂತೆ ಕೊಲೆಮಾಡಲ್ಪಟ್ಟಿದ್ದರು.

ಆದರೆ ಅತ್ಯಂತ ವಿಕೃತವಾಗಿ ಕೊಲೆ ಮಾಡಲ್ಪಟ್ಟು ಚಿತ್ರ ಹಿಂಸೆ ನೀಡಲ್ಪಟ್ಟ ತನ್ನ ಚಿಕ್ಕಪ್ಪರ ಮೃತ ಶರೀರವನ್ನು ಕಂಡ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಜೀವನದಲ್ಲಿ ಅತ್ಯಂತ ನೋವನುಭವಿಸಿದ ದಿನವಾಗಿತ್ತದು.


ಆದರೆ ಸ್ವಲ್ಪ ಸಮಯಗಳ ನಂತರ ತನ್ನ ಚಿಕ್ಕಪ್ಪರನ್ನು ಅತ್ಯಂತ ನಿಕೃಷ್ಟವಾಗಿ ಕೊಲೆ ಮಾಡಿದ ಅದೇ ವಹ್ಶೀ ಎಂಬ ವ್ಯಕ್ತಿಯು ಪಶ್ಚಾತಾಪ ಪಟ್ಟು ಪ್ರವಾದಿಯವರ ಸನ್ನಿಧಿಗೆ ಬಂದಾಗ ಕಾರುಣ್ಯದ ಸಾಗರವಾದ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಅವರನ್ನು ಕ್ಷಮಿಸಿ ಇಸ್ಲಾಮಿನ ಸದಸ್ಯರಾಗಿ 

ಸ್ವೀಕರಿಸಿ

ವಹ್ಶೀರವರಲ್ಲಿ ಹೇಳಿದರು. ಸ್ವಲ್ಪ ಸಮಯ ನೀನು ನನ್ನ ಹತ್ತಿರ ಬರಬೇಡ.ಯಾಕೆಂದರೆ ನಿನ್ನನ್ನು ನೋಡುವಾಗ ಯುದ್ಧ ಭೂಮಿಯಲ್ಲಿ ಅತ್ಯಂತ ವಿಕೃತಗೊಳಿಸಲ್ಪಟ್ಟ ನನ್ನ ಚಿಕ್ಕಪ್ಪ ಹಂಝರವರ ಮೃತಶರೀರವು ನನ್ನ ಕಣ್ಣಮುಂದೆ ತೇಲಿ ಬರುತ್ತದೆ. 

ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಈ ಮಾತಿನಿಂದ ಈ ವಿಷಯದಲ್ಲಿ ಅವರ ಮನಸ್ಸಿನಲ್ಲಿ ಅದೆಷ್ಚು ನೋವು ಅನುಭವಿಸಿದ್ದರೆಂದು ಅರ್ಥ ಮಾಡಿಕೊಳ್ಳಬಹುದು.


ಹೀಗಿದ್ದೂ ಪಶ್ಚಾತಾಪ ಪಟ್ಟು ಬಂದ ವಹ್ಶೀರವರನ್ನು ಕ್ಷಮಿಸಿದ ಚರಿತ್ರೆಯಲ್ಲಿ ಸರಿಸಾಟಿಯಿಲ್ಲದ ಘಟನೆಯು ಇಲ್ಲಿ ಸ್ಮರಣೀಯ ವಾಗಿದೆ.

ಈ ಮಾದರಿಯಾಗಿದೆ ಮುಸ್ಲಿಮರಿಗಿರುವುದು.

ಇದು ಜಗತ್ತಿನಲ್ಲಿ ಪುಣರಾವರ್ತನೆಯಾಗಿದೆ ಆಗುತ್ತಲೇ ಇದೆ.


*يُرِيدُونَ لِيُطْفِئُوا نُورَ اللَّهِ بِأَفْوَاهِهِمْ وَاللَّهُ مُتِمُّ نُورِهِ وَلَوْ كَرِهَ الْكَافِرُونَ*


ಮಾನವೀಯತೆ ಉಳಿಯಲಿ ಅಮಾನವೀಯತೆ ಅಳಿಯಲಿ

Tuesday, April 27, 2021

ಆರಾಧನಾ ಲಯಗಳನ್ನು ಮುಚ್ಚಿಸಲು ಪೈಪೋಟಿ ನಡೆಸುವವರೊಂದಿಗೆ ಒಂದು ನಿಮಿಷ

ಆರಾಧನಾ ಲಯಗಳನ್ನು ಮುಚ್ಚಿಸಲು ಪೈಪೋಟಿ ನಡೆಸುವವರೊಂದಿಗೆ ಒಂದು ನಿಮಿಷ

************************************


✍️ *ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ*

******************************

ಮೊನ್ನೆ ಎರಡನೇ ಹಂತದ ಕೊವಿಡ್ ಪ್ರತಿರೋದಕ್ಕೆ ಸರ್ಕಾರ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿತ್ತು.ಆರಾಧನಾಲಯಗಳನ್ನು ಸಂಪೂರ್ಣವಾಗಿ ಮುಚ್ಚಿಸು ತಯಾರಿ ನಡೆಸುತ್ತಿತ್ತು.ಸರಕಾರೀ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದವು ಅಷ್ಟೆ.

ಆದರೆ ನಿಷ್ಕಳಂಕ ಮನುಷ್ಯ ಮನಸ್ಸುಗಳು ಒಳಗಿಂದೊಳಗೇ ಆರಾಧನಾ ಲಯಗಳು ಮುಚ್ಚಲ್ಪಡದಿರಲಿ ಎಂದು ಪ್ರಾರ್ಥಿಸುತ್ತಲೇ ಇದ್ದವು.

ಇತ್ತ ಬೆಂಗಳೂರಿನಲ್ಲಿ ನಮ್ಮ ಸುನ್ನೀ ವಿದ್ವಾಂಸರು,ನಾಯಕರು ಆರಾಧನಾಲಯಗಳು ಮುಚ್ಚದಂತೆ ಕೋವಿಡ್ ನ ಎಲ್ಲಾ ಪ್ರೋಟೋಕಾಲ್ ಪಾಲಿಸಿ ಕೊಂಡೇ ಆರಾಧನಾಲಗಳು ಸುಗಮವಾಗಿ ಕಾರ್ಯಾಚರಿಸಲು ಅವಕಾಶ ನೀಡುವಂತೆ ಸರಕಾರದ ಮನವೊಲಿಸುವ ಶತಪ್ರಯತ್ನ ಲ್ಲಿದ್ದರು.

ಆದರೆ ಇದರ ಮದ್ಯೆ ಕೆಲವು ಸ್ವಯಂಘೋಷಿತ ಮರಿ ಪುಡಾರಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಅಧಿಕಪ್ರಸಂಗದ ಭಾಗವಾಗಿ ಆರಾಧನಾ ಲಯಗಳನ್ನು ಮುಚ್ಚುವ ತೀರ್ಮಾನಗಳನ್ನು ಪ್ರಕಟಿಸಲು ತಾಮುಂದು ನಾಮುಂದು ಎಂದು ಪೈಪೋಟಿ ನಡೆಸುತ್ತಿದ್ದಂತೆ ಭಾಸವಾಯಿತು.

ಮಾತ್ರವಲ್ಲ ಅವರಿಗೆ ಅದರಲ್ಲಿ 

ಒಂದು ರೀತಿಯ ಸಂತೋಷವಿದ್ದಂತೆಯೂ ಅನಿಸಿತು.

ಮಾತ್ರವಲ್ಲ ನಿಸ್ವಾರ್ಥ ಮನಸ್ಸುಗಳಿಗೆ ಇದರಿಂದ ಇವರ ಈ ಅಧಿಕಪ್ರಸಂಗದಲ್ಲಿ ಒಂದು ರೀತಿಯ ಮರುಕವೂ ಉಂಟಾಗಿತ್ತು.

ಯಾಕೆಂದರೆ  

ಇವರೆಂದೂ ಆರಾಧನಾಲಗಳಿಗೆ   ಹೋಗುವವರೋ ಆರಾಧನೆ ಮಾಡುವವರೋ ಇಲ್ಲಿನ ಅಸ್ತವ್ಯಸ್ತಗಳ ಬಗ್ಗೆ ಮಾತೆತ್ತುವವರೋ ಸಮುದಾಯದ ಬಗ್ಗೆ ಕಾಳಜಿ ಇರುವವರು ಖಂಡಿತ ಅಲ್ಲ.

ವಾಸ್ತವದಲ್ಲಿ ಇವರು ಒಂದು ರೀತಿಯ ಪ್ರಚಾರ ಪ್ರಿಯರು ಮಾತ್ರ. 

ಯಾರದೋ ಶಿಫಾರಸ್ಸಿನಿಂದ ಯಾವುದೋ ಒಂದು ಇಲಾಖೆ ಅಥವಾ ಪಕ್ಷದ 

ಆಯಾಕಟ್ಟಿನ ಜಾಗಗಳಲ್ಲಿ ಪ್ರತಿಸ್ಟಾಪಿಸಲ್ಪಟ್ಟಿರುತ್ತಾರೆ.

ಇವರಿಗೆ ಒಟ್ಟಾರೆಯಾಗಿ ತಮ್ಮ ಅಸ್ತಿತ್ವ ಹಾಗೂ ನಾವು ಸಮುದಾಯದ ನಾಯಕರೆಂದು ಬಿಂಬಿಸಬೇಕು.ಅದಕ್ಕೆ ಇಂತಹ ಸಮಯಗಳನ್ನು ಕಾಯುತ್ತಾ ಇರುತ್ತಾರೆ.

ಕೆಲಸವಿಲ್ಲದ..........ಮಗುವಿನ.......ಎಂಬ ಗಾದೆ ಮಾತಿನಂತೆ ಇವರ ಪಕ್ಷದ ಅಥವಾ ಇವರಿಗೆ ನೀಡಲ್ಪಟ್ಟ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಿ ಸುಮ್ಮನಿರಬೇಕೇ ಹೊರತು ಇಂತಹ ಅಧಿಕಪ್ರಸಂಗ ಗಳಿಗೆ ಬರಬಾರದು.

ಆರಾಧನಾಲಯಗಳ ಬಗ್ಗೆ ಹಾಗೂ ಸರಕಾರ ಮತ್ತು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲನೆ ಮಾಡುವ ಬಗ್ಗೆ ಸಮುದಾಯಕ್ಕೆಎಲ್ಲಾ ರೀತಿಯ ಮಾರ್ಗದರ್ಶನ ನೀಡಲು ಧಾರ್ಮಿಕ ವಿದ್ವಾಂಸರು,ಖಾಝಿಗಳು ಧಾರಾಳವಾಗಿ ಇದ್ದಾರೆ.

ಮಾತ್ರವಲ್ಲ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಲೂ ಇದ್ದಾರೆ.

ಆರಾಧನೆಗಳ ಮುಚ್ಚುವಿಕೆ ಅನಿವಾರ್ಯವಾದರೆ ಅದರಲ್ಲೂ ಸರಕಾರದೊಂದಿಗೆ ಸಂಪೂರ್ಣವಾಗಿ ಕೈಜೋಡಿಸಲೂ ಸಿದ್ಧರಿದ್ದಾರೆ.

ಇದರಲ್ಲಿ ಈ ಮರಿ ಪುಡಾರಿಗಳು ಮಧ್ಯಪ್ರವೇಶ ಅನಗತ್ಯ ಮಾತ್ರವಾಗಿದೆ.   

ಅಲ್ಲದೆ ಆರಾಧನಾಲಯಗಳನ್ನು ಮುಚ್ಚುವುದು ಅಷ್ಟೊಂದು ಹಿತಕರವಾದ ವಿಷಯವೆಂದು ಯಾರೂ ಭಾವಿಸಬೇಕಾಗಿಲ್ಲ.

ಆರಾಧನೆ ಎಂಬುದು ಪ್ರಪಂಚದ ಸೃಷ್ಟಿ ಕರ್ತನಿಗೆ ಸಂಬಂಧಿಸಿದ್ದಾಗಿದೆ.

ಆದ್ದರಿಂದ ವಿಪತ್ತುಗಳು ಮತ್ತು ಮಹಾಮಾರಿ ಗಳು ವಿಪರೀತ ಗೊಂಡು ಸರಕಾರ, ಇಲಾಖೆ, ಅಧಿಕಾರಸ್ಥರೆಲ್ಲರ ಕೈಮೀರತ್ತಿರುವ ಹಾಗೂ ಅವರು ಕೈಚೆಲ್ಲುತ್ತಿರುವ ಇಂತಹ ಸಂದಿಗ್ಧ ಸಂದರ್ಭಗಳಲ್ಲಿ ವಿಪತ್ತುಗಳನ್ನು ನೀಡುವ ಹಾಗೂ ನಿಯಂತ್ರಿಸುವ

ಸೃಷ್ಟಿ ಕರ್ತನಲ್ಲಿ ಅಭಯ ಪಡೆಯುವುದು ಮಾತ್ರ ಪರಿಹಾರ ಮಾರ್ಗವಾಗಿ ಉಳಿಯುತ್ತದೆ. 

ಆದ್ದರಿಂದ ಇಂತಹ ಸಮಯಗಳಲ್ಲಿ ಆರಾಧನೆಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ನಡೆಯಬೇಕು.

ಅನಿವಾರ್ಯ ಸಂದರ್ಭಗಳಲ್ಲಿ ಆರಾಧನಾ ಲಯಗಳ ಮುಚ್ಚುವಿಕೆ ಕೊನೆಯ ಅಸ್ತ್ರವಾಗಬೇಕೇ ಹೊರತು ಮೊದಲ ಅಸ್ತ್ರವಾಗಬಾರದು. 

ಅಲ್ಲದೆ ವಿಪತ್ತುಗಳು ಹರಡಲು ಹೆಚ್ಚು ಸಾಧ್ಯತೆಯಿರುವ ಎಲ್ಲಾ ವಲಯಗಳನ್ನು ಮುಕ್ತಗೊಳಿಸಿ ಸಾಂಕ್ರಾಮಿಕ ರೋಗಗಳು ಕೇವಲ ಆರಾಧನಾಲಯಗಳಲ್ಲಿ ಮಾತ್ರ ತಂಗಿ ನೆಲೆಯೂರಿದೆ ಎಂದು ಬಿಂಬಿಸುವುದು ಅಪಾಯಕಾರಿ ಬೆಳವಣಿಗೆಯಾಗಿದೆ.

ಅಲ್ಲದೆ ಜಗತ್ತಿನ ಅತ್ಯಂತ ದೊಡ್ಡ ಆರಾಧನಾ ಕೇಂದ್ರವಾದ ಪವಿತ್ರ ಮಕ್ಕಾದಲ್ಲಿಹಾಗೂ ಮದೀನಾದಲ್ಲಿರುವ ಹರಂ ಶರೀಫ್ ಗಳು ಪ್ರೋಟೋಕಾಲ್ ಗಳನ್ನು ಸರಿಯಾಗಿ ಪಾಲಿಸಿಕೊಂಡೇ ಆರಾಧನಾಲಯಗಳಲ್ಲಿ ಆರಾಧನೆಗಳನ್ನು ಹೇಗೆ ನಡೆಸಬಹುದು ಎಂಬುದಕ್ಕೆ ದೊಡ್ಡ ಉದಾಹರಣೆಯಾಗಿ ಕಾಣುತ್ತದೆ.

ದಿನನಿತ್ಯ ಲಕ್ಷಾಂತರ ಜನರು ಅಲ್ಲಿ ಆರಾಧನೆ ನಡೆಸುವ ಆ ಸುಂದರ ದೃಶ್ಯವೇ ಒಂದು ವಿಸ್ಮಯ.ಇದರಿಂದ ಯಾವುದೇ ರೀತಿಯ ರೋಗ ಹರಡಿದ ಅನುಭವವೇ ಇಲ್ಲ.

ಎಲ್ಲದಕ್ಕೂ ಇಚ್ಚಾಶಕ್ತಿ ಬಹಳ ಮುಖ್ಯವೆನಿಸುತ್ತದೆ.

ಅದೂ ಅಲ್ಲದೆ ಎಷ್ಟರ ವರೆಗೆ ಈ ಪ್ರಪಂಚದಲ್ಲಿ ಸೃಷ್ಟಿಕರ್ತನ ಆರಾಧನೆಗಳು ಮುಕ್ತವಾಗಿ ನಡೆಯುತ್ತದೋ ಅಲ್ಲಿಯವರೆಗೆ ಈ ಪ್ರಪಂಚ ಸುಗಮವಾಗಿ ಸುಸೂತ್ರವಾಗಿ ಮುಂದುವರಿಯಬಹುದೇ ಹೊರತು

ಆರಾಧನೆಗಳು,ಆರಾಧನಾ ಲಯಗಳು ಯಾವಾಗ ಸ್ತಬ್ಧ ವಾಗುತ್ತದೋ ಅವಾಗ ಪ್ರಪಂಚವೂ ನಾಶವಾಗಿಬಿಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ. 

ಕೇವಲ ವ್ಯಭಿಚಾರಿಗಳು, ಭ್ರಷ್ಟಾಚಾರಿಗಳು,ಮಧ್ಯಪಾನಿಗಳು,ದರೋಡೆಕೋರರು ಮುಂತಾದ ಕೆಟ್ಟ ಜನರು ಮಾತ್ರ ಉಳಿಯುವ ಸಮಯದಲ್ಲಾಗಿದೆ ಈ ಪ್ರಪಂಚದ ಅಂತ್ಯ ಎಂದು ಪ್ರವಾದಿ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹದಿನಾಲ್ಕು ಶತಮಾನಗಳ ಹಿಂದೆಯೇ ಮುನ್ನೆಚ್ಚರಿಕೆ ನೀಡಿರುತ್ತಾರೆ.

*لا تقوم الساعة إلا على شرار الخلق*

ಆದ್ದರಿಂದ ಯಾವುದೇ ಸಂದಿಗ್ಧ ಸಂದರ್ಭಗಳಲ್ಲಿಯೂ ಸಾಧ್ಯವಾದ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಆರಾಧನಾಲಯಗಳು ಮೊಟಕು ಗಳ್ಳದಂತೆ ಎಚ್ಚರಿಕೆ ವಹಿಸುವುದು ಪ್ರಜೆಗಳಿಗೂ ಸರ್ಕಾರಗಳಿಗೂ ಒಳಿತು ಎಂದು ಅರಿತಿರಬೇಕು.

ಈ ವರ್ಷದ ಹಬ್ಬ ಹೇಗೆ ಆಚರಿಸುತ್ತೀರ

  ಸರ್ವಶಕ್ತನಾದ ಅಲ್ಲಹನು ವರ್ಷದ ನಿರ್ದಿಷ್ಟ ದಿನಗಳನ್ನು ದಾಸರಿಗಾಗಿ ನಿಶ್ಚಯಿಸಿದ್ದಾನೆ; ಜೀವನದಲ್ಲಿ ಸಂತೋಷ ಮತ್ತು ಇಸ್ಲಾಮಿಕ್ ಆಚರಣೆಗಳನ್ನು ತೋರಿಸಲು ಆಗಿದೆ  ಇಸ್ಲಾಂ...