MUSTHAFA HASAN ALQADRI OFFICIAL : March 2021

Translate

Tuesday, March 16, 2021

ಕೆಲವರಿಗೆ ವಿವಾದಗಳೇ ಬೇಕು.ವಿವಾದಗಳಿಲ್ಲದೆ ಅವರಿಗೆ ಜೀವನವೇ ಇಲ್ಲ.

ವಿವಾದಗಳ ನಿರ್ಮಾಪಕರಾಗದೆ ನಿವಾರಕರಾಗೋಣ

✍️ *ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ*

ಕೆಲವರಿಗೆ ವಿವಾದಗಳೇ ಬೇಕು.ವಿವಾದಗಳಿಲ್ಲದೆ ಅವರಿಗೆ ಜೀವನವೇ ಇಲ್ಲ.


ಊಟದಲ್ಲಿ ಕಲ್ಲು ಸಿಕ್ಕರೆ ಕಲ್ಲನ್ನು ಬೀಸಾಡಿ ಊಟ ಮುಂದುವರಿಸ ಬೇಕು.ಇದು ಬುದ್ಧಿ ವಂತಿಕೆ.

ಅಲ್ಲದೆ ಊಟದ ಮುಂದೆ ಕುಳಿತು ಕಲ್ಲನ್ನೇ ಹುಡುಕುವವನಿಗೆ ಊಟ ಮಾಡಲು ಸಾಧ್ಯವಿಲ್ಲ.

ಅವನ ಸಮಯಗಳನ್ನೆಲ್ಲಾ 

ಕಲ್ಲು ಹುಡುಕುವುದರಲ್ಲೇ ಕಳೆಯಬೇಕಾಗುತ್ತದೆ.

ಇದೇ ರೀತಿ ಇಂದು 

ಮುಸ್ಲಿಂ ಸಮುದಾಯದ ಹೆಸರಿನಲ್ಲಿ  ಕೆಲವರು ವಿವಾದಗಳನ್ನೇ ಹುಡುಕಿ

ಸಣ್ಣ ಪುಟ್ಟ ಕಾರ್ಯಗಳನ್ನು ವೈಭವೀಕರಿಸಿ ಇಲ್ಲಸಲ್ಲದ ಅಂತೆಕಂತೆಗಳನ್ನು ಸೃಷ್ಟಿಸಿ ಅನಗತ್ಯ ವಿವಾದಗಳನ್ನು ಹುಟ್ಟು ಹಾಕಿ ಬಿಡುತ್ತಾರೆ. ಇದರಿಂದ ಮುಸ್ಲಿಮರ ವಿರುದ್ಧ ಸದಾ ಸಂಘರ್ಷವನ್ನೇ ಬಯಸುವ ವಿಚಿದ್ರಕಾರಿ ಮನೋಭಾವದವರಿಗೆ ಆಹಾರವನ್ನು ನೀಡುತ್ತಾರೆ.

ಸಾವಿರಾರು ವರ್ಷಗಳಲ್ಲಿ ಈ ಭಾರತದಲ್ಲಿ ಮುಸ್ಲಿಮರು ವಾಸಿಸುತ್ತಿದ್ದಾರೆ.

ಈ ಸುದೀರ್ಘ ಅವಧಿಯಲ್ಲಿ ಅನೇಕ ಸಮಸ್ಯೆಗಳನ್ನು ಅವರು ಎದುರಿಸಿದ್ದಾರೆ.

ಆದರೆ ಯಾವತ್ತೂ ಅನಾವಶ್ಯಕ ವಿಚಾರವಿವಾದಗಳಲ್ಲಿ ಏರ್ಪಡುತ್ತಿರಲಿಲ್ಲ.

ಯಾಕೆಂದರೆ ಇಲ್ಲಿ ಎಷ್ಟು ವಿವಾದಗಳು ಸೃಷ್ಟಿಯಾಗುತ್ತಿದೆಯೋ ಅಷ್ಟೇ ಲಾಭವನ್ನು ಇಲ್ಲಿನ ಕೋಮುವಾದಿ ಶಕ್ತಿಗಳು  ಪಡೆಯುತ್ತವೆ.

ಆದರೂ ಈ ದೇವಾಸಿಗಳಲ್ಲಿ ಬಹುತೇಕರು ಅವರು ಯಾವುದೇ ಜಾತಿ ಧರ್ಮ ವರ್ಗ ವರ್ಣ ಗಳಿಗೆ ಸೇರಿದವರಾದರೂ ಅವರೆಲ್ಲರೂ ನೆಮ್ಮದಿಯ ವಾತಾವರಣ ವನ್ನು ಬಯಸುತ್ತಾರೆ ಯೇ ಹೊರತು ಸಂಘರ್ಷವನ್ನು ಇಷ್ಟ ಪಡುವುದೇ ಇಲ್ಲ.

ಹೀಗಿರುವಾಗ ಸಣ್ಣ ಪುಟ್ಟ ಕಾರ್ಯಗಳನ್ನು ವೈಭವೀಕರಿಸಿ ವಿವಾದಗಳನ್ನು ಸೃಷ್ಟಿಸುವುದರಿಂದ ಮುಸಲ್ಮಾನರು ಇಲ್ಲಿ ಎಲ್ಲರಿಗೂ ಎಲ್ಲದರಲ್ಲೂ ಸಮಸ್ಯೆ ಎಂಬ ವಿರೋಧಿಗಳ ಅಪಪ್ರಚಾರ ಕ್ಕೆ ಪುಷ್ಠಿ ದೊರೆತಂತಾಗುತ್ತದೆ.

ಇದರಿಂದ ಮತ್ತಷ್ಟು ಉತ್ತಮ ಮನಸ್ಸುಗಳು ಮುಸ್ಲಿಮರಿಂದ ದೂರವಾಗುವ ಸಾಧ್ಯತೆ ಇದೆ.

ಇದು ಮುಸ್ಲಿಂ ವಿರೋಧಿಗಳಿಗೆ ರೋಗಿ ಬಯಸಿದ್ದು ಹಾಲು ವೈದ್ಯ ಹೇಳಿದ್ದೂ ಹಾಲು ಎಂಬ ಗಾದೆಯಂತಾಗುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಇದರಿಂದಾಗಿ ಮುಸ್ಲಿಮರು ಇಲ್ಲಿ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡ ಬೇಕಾಗಿದೆ.

ಅನೇಕ ವರ್ಷಗಳಿಂದ ಮುಸ್ಲಿಮರ ವಿರುದ್ಧ ನಡೆಯುವ ಯಾವುದೇ ಷಡ್ಯಂತ್ರಗಳಿಗೆ ಸೊಪ್ಪು ಹಾಕದ ಉದಾತ್ತ ಮನಸ್ಸಿನ ವಕ್ತಾರರ ಒಂದು ದೊಡ್ಡ ವಿಭಾಗ ಇವತ್ತೂ ಸಹ ಈ ಭಾರತದ ಮಣ್ಣಿನಲ್ಲಿ ಇದೆ ಎಂಬುದನ್ನು ಯಾರೂ ಮರೆಯಬಾರದು.

ಮೊನ್ನೆ ಪಡುಬಿದ್ರಿ ಬೀಚಿನಲ್ಲಿ ನಡೆದ ಒಂದು ನಮಾಝಿನ ವಿವಾದದ ವೀಡಿಯೋ ನೋಡಿದಾಗ ಹೀಗೆ ಗೀಚಬೇಕೆಂದನಿಸಿತು.

Wednesday, March 3, 2021

ಮರಣ ಹೊಂದಿದ ಪತ್ನಿಗಾಗಿ ತಾಜ್ ಮಹಲ್ ಕಟ್ಟಿಸಿದ


ಪ್ರೀತಿಗೆ ರೇಖೆಗಳಿಲ್ಲ   ಅದೊಂದು ರೋಮಾಂಚಕ ಸತ್ಯ ಘಟಣೆ ದುರಂತಗಳು ಯಾವ ರೂಪದಲ್ಲೆಲ್ಲ ನಮ್ಮನ್ನು ಹಿಂಬಾಲಿಸುತ್ತಾ ಇದೆ ನಮ್ಮ ಊಹೆಗೂ ತಿಳಿಯದೇ ಇರುವ ವಿಷಯ ವಾಗಿದೆ  ಪ್ರೀತಿ ಪ್ರೇಮ ಮನುಷ್ಯನಿಗೆ ಎಲ್ಲವನ್ನೂ ಕಲಿಸುತ್ತವೆ ನಾವು ಜೀವನದಲ್ಲಿ ಪ್ರತಿಯೊಬ್ಬರನ್ನೂ ಷ್ರೀತಿಸುತ್ತೇವೆ ತಂದೆ ತಾಯಿ ಅಣ್ಣ ತಂಮ್ಮಂದಿರ ಪ್ರೀತಿ ಅದು ಯಾವ ದಿಕ್ಕಿನಲ್ಲಿ ನೋಡಿದರೂ ನಿಭಾಯಿಸಲೇ ಬೇಕು ಆದರೆ ನಿಮ್ಮ ಒಡ ಹುಟ್ಟದ ಎಲ್ಲಿಂದಲೋ ತಂದೆ ತಾಯಿಯನ್ನು ಬಿಟ್ಟು ಒಬ್ಬಾಕೆ ತನ್ನ ಪತಿಯ ಸಹಬಾಗಿತ್ವದಲ್ಲಿ ಜೀವಿಸುತ್ತಾಳೆ ಎಂದರೆ ಅದು ಯಾರಿಂದಲೂ ವರ್ಣಿಸಲು ಸಾಧ್ಯವಾಗದ ಮಾತು ಪತ್ನಿಯನ್ನು ಪ್ರೀತಿಸಿದ  ಅನೇಕ ಗಂಡಂದಿರ ಇತಿಹಾಸಗಳು ನಮ್ಮ ಮುಂದೆ ಸಾಕಷ್ಟು ಕಾಣ ಸಿಗುವುದು ಭಾರತದಲ್ಲಿ ಶಾಜಹಾನ್ ರವರು ತನ್ನ ಪತ್ನಿ ಮುಂತಾಝ್ ಗಾಗಿ ತಾಜ್ ಮಹಲ್ ಎಂಬ ಪ್ರೀತಿಯ ಗೋಪುರವನ್ನು ಕಟ್ಟಿ ಲೋಕದಲ್ಲಿ ಪ್ರತಿಯೊಬ್ಬರಿಗೂ ಆ ಪ್ರೇಮ ಸ್ಮಾರಕ ನೋಡಬೇಕೆಂಬ ಹಂಬಲ ಮೂಡಿಸಿದರು   ಆದರೆ ಇದೊಂದು ಅದೇ ತರಹದ ಸತ್ಯ ಘಟಣೆ ನಮ್ಮ ನೆರೆಯ ದೇಶ ಪಾಕಿಸ್ತಾನದ ಉಮರ್ ಕೋಟ್ ನ  ಒಬ್ಬ ಪ್ರಜೆ ತನ್ನ ಮರಣ ಹೊಂದಿದ ಪತ್ನಿಗಾಗಿ ತಾಜ್ ಮಹಲ್ ಕಟ್ಟಿಸಿದನು ಅವರ ಪತ್ನಿ ಮರ್ಯಮ್ ಅವರ ಮದುವೆ ಮನೆಯವರ ಸಮ್ಮತದಲ್ಲಿ ನಡೆದ ಮದುವೆ ಹದಿನೆಂಟನೇ ವಯಸ್ಸಿನ ಹದಿ ಹರೆಯದ ಹುಡುಗ ಮದುವೆ ಆಗಿದ್ದು ನಲವತ್ತು ವರ್ಷ ಪ್ರಾಯದ ಹೆಂಗಸು ನಲವತ್ತು ವರ್ಷಗಳ ಕಾಲ ಪ್ರೀತಿ ಪ್ರೇಮದಿಂದ ಜೀವನ ನಡೆಸಿ ಒಂದಾಗಿ ಬಾಳಿದ ಆ ದಂಪತಿಯ ದಾಂಪತ್ಯ ಜೀವನ ಅದ್ಭುತ ವಾದದ್ದು  ಸರಳವಾದ ಜೀವನ ಜೀವಿಸಿದ ಉಮರ್ ರಾತ್ರಿ ತಡವಾಗಿ ಮನೆಗೆ ಬಂದರೆ ಯಾವತ್ತೂ ಆಹಾರದ ನೆಪದಲ್ಲಿ

ಪತ್ನಿಯನ್ನು ಪೀಡಿಸುತ್ತಿರಲಿಲ್ಲ   ನಮ್ಮ ಮಧ್ಯೆ ಜಗಳವಾಗಿಲ್ಲ ನಾನು ಅವಳನ್ನು ತುಂಬಾ ಪ್ರೀತಿಸುತ್ತಿದ್ದೆ ಎನ್ನುತ್ತಾರೆ ಅವಳಿಗೆ ಬಳೆ ಇಷ್ಟ ಇರುವುದರಿಂದ ನಾನು ಅದನ್ನು ಖರೀದಿಸುತ್ತಿದೆ ಒಮ್ಮೊಮ್ಮೆ ಅವಳನ್ನು ವರ್ಣಿಸುತ್ತಾ ಕವನ ಗಳನ್ನು ಹೇಳುತ್ತಿದ್ದೆ .1980  ರಲ್ಲಿ ಭಾರತ ಸಂದರ್ಶಿಸಿದೆ ಅಲ್ಲಿನ ತಾಜ್ ಮಹಲ್ ನೋಡಿದೆ ಅಲ್ಲಿಂದ ಹಿಂತಿರುಗಿ ಮನೆಗೆ ಬಂದೆ ರಾತ್ರಿ ಕನಸಿನಲ್ಲಿ ನೋಡಿದೆ ನಮ್ಮ ಖಬರ್ಸ್ತಾನದಲ್ಲಿ ಒಂದು ತಾಜ್ ಮಹಲ್ ನೆಲೆ ನಿಂತಿದೆ    ನಾನು ನನ್ನ ಪತ್ನಿಯ ಮರಣದ ನಂತರ  ಅವಳ  ಸಮಾದಿಯಲ್ಲಿ ಒಂದು ಅದ್ಭುತ ತಾಜ್ ಮಹಲ್ ನಿರ್ಮಿಸಿದೆ ಅವಳು ಇಂದಿಗೂ ನನಗೆ ನೆನಪಾಗುತ್ತಾಳೆ   

ದಂಪತಿಗಳು ತನ್ನ ದಾಂಪತ್ಯ ಜೀವನದಲ್ಲಿ ಹಲವು ಅಡೆ ತಡೆ ಗಳು ಬಂದರೂ ಯಾವತ್ತೂ ಒಂದಾಗಿ ಬಾಳುವ ಪ್ರತಿಜ್ಞೆ ಮಾಡಬೇಕು...

Monday, March 1, 2021

ವೈವಾಹಿಕ ಜೀವನದ ರಹಸ್ಯ ಗಳು

 ವೈವಾಹಿಕ ಜೀವನದ  ರಹಸ್ಯ ಗಳು 


ಮದುವೆಯ ರಾತ್ರಿಯ  ಪ್ರಾರ್ಥನೆ ಗಳು 

ನಮಾಝ್  ಮತ್ತು ಸ್ವಲಾತ್ ಗಳನ್ನು     ಮದುಮಗ  ಹಾಗೂ ಮದುಮಗಳು  ಮದುವೆಯ ರಾತ್ರಿಯಲ್ಲಿ  ಮಾಡುವುದು ಅಪೇಕ್ಷಣೀಯವಾಗಿದೆ, ಅವುಗಳೆಂದರೆ: ಎರಡು ರಕ್ಅತ್  ನಮಾಝ್ ಮಾಡುವುದು  


ಮದುವೆಯ ರಾತ್ರಿ ಪ್ರಾರ್ಥಿಸುವುದು   ಕೆಲವು ವಿದ್ವಾಂಸರ  ಅಭಿಪ್ರಾಯ ಪ್ರಕಾರ  ಅಪೇಕ್ಷಣೀಯ  ವಾಗಿದೆ  ಮತ್ತು ಹೆಂಡತಿಯೊಂದಿಗೆ ಸಂಬೋಗ     ನಡೆಸುವ   ಮೊದಲು ಈ ಪ್ರಾರ್ಥನೆಯನ್ನು ನಡೆಸಲಾಗುತ್ತದೆ, ಮತ್ತು ಇದನ್ನು ಕೆಲವು ಸಹಾಬಿಗಳೂ ಮಾಡಿದ ವರದಿಗಳು ಹದೀಸ್ ಗಳಲ್ಲಿ ಕಾಣಬಹುದು   

ಈ ಕಾರ್ಯ ಮಾಡುವುದರಲ್ಲಿ     ಯಾವುದೇ ತಪ್ಪಿಲ್ಲ, 

ಮತ್ತು ಅದನ್ನು ನಿರ್ವಹಿಸದವನ  ಮೇಲೆ ಯಾವುದೇ ದೋಷ ಖಂಡಿತ ಇಲ್ಲ 

ಎಂದು ಅಬು ಸಯೀದ್(ರ)   ಮಾಡಿದ ವರದಿಗಳಲ್ಲಿ    ಕಾಣಬಹುದು 

  (تزوَّجتُ وأَنا مَملوكٌ فدعوتُ نفرًا مِن أصحابِ النَّبيِّ صلَّى اللَّهُ علَيهِ وسلَّمَ فيهمُ ابنُ مسعودٍ، وأبو ذرٍّ وحُذَيْفةُ قال: وأقيمتِ الصَّلاةُ قالَ: فذَهَبَ أبو ذرٍّ ليتقدَّمَ فقالوا: إليكَ، قالَ: أوَ كذلِكَ؟ قالوا: نعَم، قالَ: فتقدَّمتُ بِهِم وأَنا عبدٌ مملوكٌ وعلَّموني فقالوا: إذا دخلَ عليكَ أَهْلُكَ فصلِّ رَكْعتينِ ثمَّ سلَ اللَّهَ مِن خيرِ ما دخلَ عليكَ وتعوَّذ بهِ من شرِّهِ، ثمَّ شأنَكَ وشأنَ أَهْلِكَ


ಈ ಪ್ರಾರ್ಥನೆಯು ಜಮಾತ್  ಆಗಿ ಮಾಡಲಾಗುತ್ತದೆ  . ಹೆಂಡತಿ ತನ್ನ ಗಂಡನ ಹಿಂದೆ ನಿಲ್ಲಬೇಕು 

ಮತ್ತು ಇದು ಎರಡು ರಕಾತ್  ಒಳಗೊಂಡಿರುತ್ತದೆ, ಇದನ್ನು ಇತರ ಎಲ್ಲ ಪ್ರಾರ್ಥನೆಗಳ ರಕಾತ್ ಗಳಂತೆ  ನಿರ್ವಹಿಸಲಾಗುತ್ತದೆ, 


 ರಾತ್ರಿಯ ಸಮಯದಲ್ಲಿ ಜೋರಾಗಿಯೂ    ಹಗಲಿನ ವೇಳೆಯಲ್ಲಿ ಕಾರ್ಯಕ್ಷಮತೆ ಸ್ಥಿತಿಯಲ್ಲಿ ನಿರ್ವಹಿಸತಕ್ಕದ್ದು 


ನ್ಯೂನತೆಗಳಿಲ್ಲದೆ ತಮ್ಮ ಮದುವೆ ಯಶಸ್ವಿಯಾಗಲು,  ಇಸ್ಲಾಮಿಕ್ ಕಾನೂನಿನ ಪ್ರಕಾರ  ಹಲವಾರು ಕೌಶಲ್ಯ  ಕಾರ್ಯಗಳನ್ನು ಮಾಡಬಹುದು.ಈ ಕೆಲವು ಮಾಡಬಹುದಾದ ಕಾರ್ಯ   ಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ:


ವಾತ್ಸಲ್ಯ, ಗೌರವದ ಅಭಿವ್ಯಕ್ತಿಗಳು,ಪ್ರೀತಿ ಪ್ರೇಮ  ಮತ್ತು ಪತಿ ಪತ್ನಿಯರು ಪರಸ್ಪರ  ಕರೆಯಲು  ಇಷ್ಟಪಡುವ ಹೆಸರುಗಳನ್ನು ಚಾಲ್ತಿಗೆ ತರುವುದು 

ಇಬ್ಬರ  ನಡುವಿನ ವೈವಾಹಿಕ ಸಂಬಂಧವನ್ನು ಕಾಪಾಡುತ್ತದೆ ಮತ್ತು ಅದನ್ನು ಸ್ಥಿರಗೊಳಿಸಲು ಕೆಲಸ ಮಾಡುತ್ತದೆ. ಯಾವಾಗಲೂ ಮುಖದ ಮೇಲೆ ನಗು ಇಟ್ಟುಕೊಳ್ಳುವುದು, ದಯೆ ತೋರಿಸುವುದು ಮತ್ತು ಕೆಲವೊಮ್ಮೆ ಹಾಸ್ಯವನ್ನು ಬಳಸುವುದು. ಏಕೆಂದರೆ ಇವೆಲ್ಲವೂ ಜೀವನಕ್ಕೆ ಸಂತೋಷದ ವೈಭವವನ್ನು ನೀಡುತ್ತದೆ, ಬದಲಾವಣೆ ಮತ್ತು ಚಿಂತೆ, ದುಃಖ ಮತ್ತು ಒತ್ತಡಗಳನ್ನು ತೆಗೆದುಹಾಕುತ್ತದೆ. ಪ್ರತಿಯೊಬ್ಬರೂ    ಇನ್ನೊಬ್ಬರ ಬಗ್ಗೆ ಹೊಂದಿರುವ ಪ್ರೀತಿ ಮತ್ತು ಹಂಬಲವನ್ನು ವ್ಯಕ್ತಪಡಿಸುತ್ತಾ, ವಿಶೇಷವಾಗಿ ಮಹಿಳೆಯರು ತಮ್ಮ ಭಾವನೆಗಳನ್ನು ಹೆಚ್ಚಿಸುವ ಮತ್ತು ಬಲಪಡಿಸುವ ಈ ಅಭಿವ್ಯಕ್ತಿಗಳನ್ನು ಇಷ್ಟ ಪಡುತ್ತಾರೆ .

ಇಬ್ಬರೂ ಪರಸ್ಪರ  ಪ್ರತಿಪಾದಿಸಿದ ಭಾವನೆಗಳು ಮತ್ತು ಆಲೋಚನೆಗಳನ್ನು ಗೌರವಿಸುವುದು ಸೇರಿದಂತೆ ಇಬ್ಬರ  ನಡುವೆ ಗೌರವವನ್ನು ಕಾಪಾಡಿಕೊಳ್ಳುವುದು, ಅವುಗಳು ವಿರೋಧಾಭಾಸದಲ್ಲಿದ್ದರೂ ಸಹ ಅವರನ್ನು ಗೌರವಿಸಬೇಕು ಮತ್ತು ತೃಪ್ತಿದಾಯಕ ಫಲಿತಾಂಶವನ್ನು ತಲುಪುವವರೆಗೆ ಉತ್ತಮ ಸಂಭಾಷಣೆ ಇರಬೇಕು. ಉಡುಗೊರೆಗಳನ್ನು ಕೊಡುವುದು ಮತ್ತು ಅವುಗಳನ್ನು ಇಬ್ಬರ  ನಡುವೆ ವಿನಿಮಯ ಮಾಡಿಕೊಳ್ಳುವುದು, ಏಕೆಂದರೆ ಉಡುಗೊರೆಗಳು ಹೃದಯಗಳನ್ನು ತಲುಪುವ ಕೀಲಿಗಳಲ್ಲಿ ಒಂದಾಗಿದೆ, ವಾತ್ಸಲ್ಯವನ್ನು ಹೆಚ್ಚಿಸುತ್ತದೆ ಮತ್ತು ದ್ವೇಷವನ್ನು ಕಡಿಮೆ ಮಾಡುತ್ತದೆ, ಏಕೆಂದರೆ ಅವುಗಳು ಪ್ರತಿಯೊಬ್ಬರ  ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ,     ಉಡುಗೊರೆ ಹೂವುಗಳ ಪುಷ್ಪಗೊಂಚಲು    ಅಥವಾ ಗಿಫ್ಟ್  ಕಾರ್ಡ್ ಕೊಡಬಹುದು  ಅದರ     ಒಳಗೆ ಒಂದು ಸುಂದರವಾದ ಸಂದೇಶವನ್ನು  ಬರೆಯುವುದು ಸಹ ಸುಖ ದಾಂಪತ್ಯದ  ರಹಸ್ಯ ಗಳು     ಹೆಂಡತಿ ತನ್ನ ಗಂಡನ ಕುಟುಂಬವನ್ನು ಗೌರವಿಸುತ್ತಾಳೆ ಮತ್ತು ಪತಿ ತನ್ನ ಹೆಂಡತಿಯ ಕುಟುಂಬವನ್ನು ಗೌರವಿಸುತ್ತಾನೆ ಎಂದು ಖಚಿತಪಡಿಸಿಕೊಳ್ಳಿ 

ಅವರೊಂದಿಗೆ ಮಾತು ಸದಾ  ಮುಂದುವರಿಸುವುದು, ಅವರೊಂದಿಗೆ ಕುಳಿತುಕೊಳ್ಳುವಾಗ ಅಥವಾ ಮಾತನಾಡುವಾಗ ಸಂತೋಷ ಮತ್ತು ಹಿತಕರ ಭಾವನೆ, ಮತ್ತು ಯಾರ ಮುಂದೆ ಕೆಟ್ಟದಾಗಿ ಪ್ರಸ್ತಾಪಿಸಬಾರದು. ಹೆಚ್ಚಿನ ಸಮಯ ಆಕರ್ಷಕವಾಗಿ ಮತ್ತು ಸುಂದರವಾಗಿ ಕಾಣಿಸಿಕೊಳ್ಳಲು, ಮತ್ತು ವೈಯಕ್ತಿಕ ನೈರ್ಮಲ್ಯದ ಬಗ್ಗೆ ಉತ್ಸುಕರಾಗಿರಬೇಕು ಮತ್ತು ಸುಗಂಧ  ಪರಿಮಳ . ಸಾಧ್ಯವಾದಷ್ಟು ಹಚ್ಚಲು  ಪ್ರಯತ್ನಿಸಿ ಕೆಲವೊಮ್ಮೆ ತಪ್ಪಾಗಿ ಮಾಡುವ ಸ್ವಯಂಪ್ರೇರಿತ ತಪ್ಪುಗಳನ್ನು ನಿರ್ಲಕ್ಷಿಸಿ.  ವೈವಾಹಿಕ ಜೀವನವು ಯಶಸ್ವಿಯಾಗಲು ಎರಡು ಪಕ್ಷಗಳು   ಪರಸ್ಪರ ಸಮಾನತೆ  ಹೊಂದಿರಬೇಕು. ಇಸ್ಲಾಂನಲ್ಲಿ ವಿವಾಹದ ಉದ್ದೇಶಗಳು, ಸರ್ವಶಕ್ತ ನಾದ ಅಲ್ಲಾಹು  ಹಲವಾರು ಉದ್ದೇಶಗಳನ್ನು ಸಾಧಿಸುವ ಸಲುವಾಗಿ ಮದುವೆಯನ್ನು ಸೂಚಿಸಿದ್ದಾನೆ, ಮತ್ತು ಅವುಗಳಲ್ಲಿ ಕೆಲವು ಕೆಳಗೆ ಉಲ್ಲೇಖಿಸಲಾಗಿದೆ: 


ಮಾನವ ಸಂತತಿಯ ನಿರಂತರತೆಯನ್ನು ಕಾಪಾಡಿಕೊಳ್ಳುವುದು. ಪತಿ ಪತ್ನಿಯರಿಗೆ  ಸಂತೋಷದ ಸಂಭವ, ಮತ್ತು ಈ ಆನಂದವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: ಮೊದಲ ಭಾಗ: ನೆಮ್ಮದಿ, ವಿಶ್ರಾಂತಿ ಮತ್ತು ಮಾನಸಿಕ ಧೈರ್ಯವನ್ನು ಸಾಧಿಸುವುದು, ಮತ್ತು ಎರಡನೇ ಭಾಗ: ಲೈಂಗಿಕ ಪ್ರವೃತ್ತಿಯನ್ನು ತೃಪ್ತಿಪಡಿಸುವುದು. ಸಂಗಾತಿಯ ನಡುವೆ ವಾತ್ಸಲ್ಯ ಮತ್ತು ಸಹಾನುಭೂತಿ ಮತ್ತು ಅವರ ನಡುವೆ ನೆಮ್ಮದಿ ಉಂಟಾಗುತ್ತದೆ. ಸಮಾಜವನ್ನು ನಿರ್ಮಿಸಲು ಕುಟುಂಬವು ಆಧಾರವಾಗಿರುವುದರಿಂದ ಮತ್ತು ಅದರ ಒಳ್ಳೆಯತನದಿಂದ ಸಮಾಜಗಳು ಸುಧಾರಣೆಯಾಗುತ್ತವೆ,  ಅನೈತಿಕತೆಯನ್ನು ಅಭ್ಯಾಸ ಮಾಡುವುದರ ಪರಿಣಾಮವಾಗಿ ಹರಡುವ ರೋಗಗಳಿಂದ ಸಮಾಜವನ್ನು ರಕ್ಷಿಸಿ. ಸಮಾಜದಲ್ಲಿ ಸುರಕ್ಷತೆಯನ್ನು ಸಾಧಿಸುವುದು. ವ್ಯಕ್ತಿಗಳ ನಡುವೆ ಸಹಯೋಗ ಸಂಭವಿಸುತ್ತದೆ

ABUYAMIN ALQADRI

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...